Author: admin

ಕನ್ನಡ ಸಂಘದ ‘ಕನ್ನಡ ಭವನ’ದಲ್ಲಿ ನವಂಬರ್ 16 ರ ಶನಿವಾರದಂದು ಆಚರಿಸಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತಂದು ಅಧ್ಯಕ್ಷೆ ನಿಶಾ ಶೆಟ್ಟಿ, ವಿಶ್ವಸ್ಥ ಮಲ್ಹಾರ ನಿಂಬರಗಿ, ಮಹಿಳಾ ಮುಖ್ಯಸ್ಥೆ ಚಂದ್ರಿಕಾ ಕೋಟ್ಯಾನ್, ಗೌರವ ಕಾರ್ಯದರ್ಶಿ ವಿದ್ಯಾಧರ ಭಟ್ ಮತ್ತು ಸಂಚಾಲಕ ನಾಗರಾಜ್ ಶೆಟ್ಟಿ ಅವರೊಂದಿಗೆ ದೀಪ ಪ್ರಜ್ವಲಿಸಿ ತನಿಷ್ಕಾ ಭಟ್ ಅವರ ಪ್ರಾರ್ಥನೆಯ ನಂತರ ಮುಖ್ಯ ಅತಿಥಿ ಚಂದ್ರಶೇಖರ ಶೆಟ್ಟಿ ಅವರು ಚೆಂಡೆ ಬಾರಿಸಿ ರಾಜ್ಯೋತ್ಸವ ಉದ್ಘೋಷಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಸಂತಿ ಭಟ್, ಪ್ರಪುಲಾ ಶೆಟ್ಟಿ, ಚಂದ್ರಿಕಾ ಕೋಟ್ಯಾನ್ ಮತ್ತು ರಶ್ಮಿ ಭಟ್ ನಾಡಗೀತೆ ಮತ್ತು ಸಂಘ ಗೀತೆ ಪ್ರಸ್ತುತಪಡಿಸಿದರು. ನಿಶಾ ಶೆಟ್ಟಿ ಅವರ ಸ್ವಾಗತ ಮತ್ತು ಸಾಂದರ್ಭಿಕ ನುಡಿಗಳ ನಂತರ ಮುಖ್ಯ ಅತಿಥಿ ಚಂದ್ರಶೇಖರ ಶೆಟ್ಟಿಯವರನ್ನು ಶಾಲು, ಪುಷ್ಪಗುಚ್ಛ, ಫಲ ತಾಂಬೂಲ, ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜೀವ…

Read More

ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024- 26 ನೇ ಸಾಲಿನ ನೂತನ ಅಧ್ಯಕ್ಷರ ಆಡಳಿತಾವಧಿಯ ಕಾರ್ಯಕ್ರಮಗಳ ರೂಪುರೇಷೆಗಳ ಕೈಪಿಡಿಯನ್ನು ನವೆಂಬರ್ 28 ರಂದು ಸಂಜೆ ಬೆಳ್ಳಾಡಿಯಲ್ಲಿ ಮುಂಬಯಿಯ ಖ್ಯಾತ ಯುವ ಉದ್ಯಮಿ, ಯುವ ಬಂಟರ ಸಂಘದ ನಿರ್ದೇಶಕರಾದ ಬೆಳ್ಳಾಡಿ ಅಶೋಕ್ ಶೆಟ್ಟಿಯವರು ಅನಾವರಣಗೊಳಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಂಘ ನಡೆದು ಬಂದ ಹಾದಿ ಅತ್ಯಂತ ಸ್ಮರಣೀಯವಾದದ್ದು. ಕಳೆದ ಎರಡು ವರ್ಷದಲ್ಲಿ ದಶಮ ಸಂಭ್ರಮದ ಕಾಲಘಟ್ಟದಲ್ಲಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಎಲ್ಲಾ ಸಂಘಗಳಿಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದಲ್ಲದೆ, ಜಾಗತಿಕ ಮಟ್ಟದಲ್ಲೂ ಸಹ ಮನ್ನಣೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ವಹಿಸಿದ್ದರು. ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಶುಭ ಹಾರೈಸಿ, ಈ ಹಿಂದೆ ಸಂಘಕ್ಕೆ ಉದಾರ ಮನಸ್ಸಿನಿಂದ ದೇಣಿಗೆಗಳನ್ನು ನೀಡಿದ ದಾನಿಗಳನ್ನು ಸ್ಮರಿಸಿಕೊಂಡರು. ನಿಕಟಪೂರ್ವ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು, ನಿಕಟಪೂರ್ವ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ…

Read More

ತನ್ನ ಭಿನ್ನ ವಿಭಿನ್ನ ಸೇವಾ ಚಟುವಟಿಕೆಗಳ ಮೂಲಕ ಮನೆ ಮಾತಾಗಿರುವ ಶಿವಾಯ ಫೌಂಡೇಶನ್ ಮುಂಬಯಿ ವತಿಯಿಂದ ಡೊಂಬಿವಲಿ ಉಪನಗರದ ಅಂಕುರ್ ಬಾಲ ಸೇವಾ ಗೃಹದಲ್ಲಿರುವ ಹೆತ್ತವರಿಂದ ತಿರಸ್ಕೃತರಾದ, ಪಾಲಕರ ಪ್ರೀತಿಯಿಂದ ವಂಚಿತರಾದ ಮುದ್ದು ಮಕ್ಕಳ ಜೊತೆ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು. ಸುಮಾರು 39 ಮಂದಿ ಮಕ್ಕಳಿಗೆ ಹೊಸ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾಗುವ ಮೈಕ್, ಸ್ಪೀಕರ್, ಮಕ್ಕಳ ಆರೈಕೆಗೆ ಬೇಕಾಗುವ ತಿಂಗಳ ರೇಷನ್ ನೀಡಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನದ ಜೊತೆಗೆ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಮಕ್ಕಳ ಪಾಲನೆ ಮಾಡುತ್ತಿರುವ ಮತ್ತು ಬಾಲಗೃಹದ ಸಂಸ್ಥಾಪಕಿ ಅಕ್ಷತಾ ಭೋಸ್ಲೆ ಮತ್ತು ಅವರ ಪುತ್ರಿಯನ್ನು ಸನ್ಮಾನಿಸಿ, ಉತ್ತಮ ಕಾರ್ಯದ ಜೊತೆ ಸಂಸ್ಥೆ ಸದಾ ಇರಲಿದೆ ಎಂದು ಧೈರ್ಯ ತುಂಬಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಸದಸ್ಯರಾದ ಲೀಲಾಧರ ಶೆಟ್ಟಿಗಾರ್ ಶಕುಂತಳಾ ಲೀಲಾಧರ ದಂಪತಿ, ಸಿಎ ಸಂದೀಪ್ ಶೆಟ್ಟಿ, ಪ್ರಶಾಂತ್…

Read More

ಮಿಜಾರು: ‘ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಕನ್ನಡದ ಬೆಳವಣಿಗೆಗೆ ತಂತ್ರಜ್ಞಾನದ ಕೊಡುಗೆ ಅತ್ಯವಶ್ಯ ಹಾಗೂ ಅನಿವಾರ್ಯ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ಮತ್ತು ತಂತ್ರಜ್ಞಾನ ಕಾಲೇಜು ಕನ್ನಡ ಸಂಘವು ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕನ್ನಡ ಹಬ್ಬ -2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಯ ಅಳಿವು- ಉಳಿವಿಗೆ ತಂತ್ರಜ್ಞಾನದ ಬಳಕೆಯೂ ಮಹತ್ತರವಾಗಿದೆ. ತಂತ್ರಜ್ಞಾನದ ಮೂಲಕ ಕನ್ನಡದ ವ್ಯಾಪ್ತಿ ಮತ್ತು ಸತ್ವವನ್ನು ಹೆಚ್ಚಿಸುವುದು ಹಾಗೂ ಕಂಪನ್ನು ಪಸರಿಸುವುದು ಬಹುಮುಖ್ಯವಾಗಿದೆ. ಭವಿಷ್ಯದ ಪೀಳಿಗೆಗೆ ಕನ್ನಡದ ಪ್ರಸ್ತುತತೆಯನ್ನು ಖಚಿತಪಡಿಸಬಹುದು ಎಂದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿ, ಕನ್ನಡ ಭಾಷೆಯು ಆಳವಾದ ಅರ್ಥಗಳನ್ನು ಹೊಂದಿರುವ ಪದಗಳಿಂದ ಕೂಡಿದ ಸಮೃದ್ಧ ಭಾಷೆಯಾಗಿದೆ.  ದೈನಂದಿನ ಸಂಬಂಧಗಳು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕನ್ನಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕನ್ನಡವು ನಮ್ಮ ಜೀವನದ ಹಾಗೂ ಸಂವಹನದ ಅವಿಭಾಜ್ಯ ಅಂಗ ಎಂದರು.  ಕಾಲೇಜಿನ ಪ್ರಾಂಶುಪಾಲ ಡಾ.…

Read More

ವಿದ್ಯಾಗಿರಿ: ‘ವಿದ್ಯಾರ್ಥಿಗಳ ಪ್ರತೀ ಹೆಜ್ಜೆಯಲ್ಲೂ ಗುರುವಿನ ಸ್ಥಾನ ಇರಬೇಕು’ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾದ (ಐಸಿಎಸ್‌ಐ) ಕೇಂದ್ರ ಸಮಿತಿ ಸದಸ್ಯ ಸಿ.ಎಸ್. ದ್ವಾರಕಾನಂದ್ ಹೇಳಿದರು. ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾ ಸಹಯೋಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ‘ಶಿಕ್ಷಣ ತಜ್ಞರ ಸಶಕ್ತೀಕರಣ- ಶಿಕ್ಷಕರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ಇಷ್ಟಪಟ್ಟು ಓದಬೇಕು. ಕಷ್ಟ ಪಟ್ಟು ಓದುವ ಹಾಗೆ ಆಗಬಾರದು. ವಿದ್ಯಾರ್ಥಿಗಳಿಗೆ ಗುರಿ ಅತಿ ಮುಖ್ಯ. ಯಾವುದಕ್ಕಾಗಿ ಓದುತ್ತಿದ್ದೇವೆ ಎನ್ನುವ ಜ್ಞಾನ ನಿಮ್ಮಲ್ಲಿರಬೇಕು. ನಿಮ್ಮ ಸಮಯವನ್ನು ಓದಿಗೆ ಮೀಸಲಿಡಬೇಕು. ಇಷ್ಟ ಪಟ್ಟು ಕೆಲಸ ಮಾಡಿದಾಗ ಅದು ಕಷ್ಟ ವೆನಿಸುವುದಿಲ್ಲ’ ಎಂದರು. ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರಜ್ವಲ್ ಆಚಾರ್ ಮಾತನಾಡಿ, ಶಿಕ್ಷಕರು ತುಂಬಾ ಸವಾಲುಗಳನ್ನು ಎದುರಿಸಬೇಕಾಗಿದೆ.  ಶಿಕ್ಷಣ ನೀಡುವ ಜೊತೆಗೆ ತಂತ್ರಜ್ಞಾನಕ್ಕೆ ಸ್ಪಂದಿಸಬೇಕು.  ನಾಳೆಯ ಸಮಾಜಕ್ಕೆ ನಾಯಕರನ್ನು ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲೆ ಇದೆ ಎಂದರು.…

Read More

ಯುಎಇ ಬಂಟ್ಸ್ ನ 47 ನೇ ವರ್ಷದ ಬಂಟರ ಕೂಡು ಕಟ್ಟ್ “ಗಲ್ಫ್ ಬಂಟೋತ್ಸವ -2024” ಕಾರ್ಯಕ್ರಮವು ನವೆಂಬರ್ 24 ರಂದು ಅಲ್ ನಸರ್ ಲೆದರ್ ಲ್ಯಾಂಡ್ ನ ಐಸ್ ರಿಂಕ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಯುಎಇ ರಾಜ್ಯದ ಸಾವಿರಾರು ಬಂಟ ಬಾಂಧವರು ಮತ್ತು ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇನ್ನಿತರ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಸಭಾಂಗಣ ತುಂಬಿ ತುಳುಕುತಿದ್ದ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ವ್ಯವಸ್ಥಿತ ರೂಪದಲ್ಲಿ ಜರಗಿ ನೋಡುಗರಿಗೆ ಸಂತೋಷವನ್ನು ಉಂಟು ಮಾಡಿತ್ತು. ಕೇರಳದ ಚೆಂಡೆ ವಾಲಗ, ಹೆಂಗಳೆಯರು ಕುಂಭ ಕಳಶದೊಂದಿಗೆ, ತುಳುನಾಡಿನ ಪುರಾತನ ವಸ್ತುಗಳನ್ನು ಹಿಡಿದುಕೊಂಡು ಹುಲಿ ವೇಷ ಕುಣಿತದೊಂದಿಗೆ ಮೆರವಣಿಗೆಯ ಮೂಲಕ ಗಣ್ಯಾತಿ ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿ ಕೊಳ್ಳಲಾಯಿತು. “ಗಲ್ಫ್ ಬಂಟೋತ್ಸವ -2024” ಕಾರ್ಯಕ್ರಮದ ಉದ್ಘಾಟನೆಯನ್ನು ಯುಎಇ ಬಂಟ್ಸ್ ನ ಮಹಾ ಪೋಷಕ ಡಾ| ಬಿ‌.ಆರ್ ಶೆಟ್ಟಿ…

Read More

ಹೊಸತನಕ್ಕೆ ಇನ್ನೊಂದು ಹೆಸರಾಗಿರುವ ವಿಜಯಕುಮಾರ್‌ ಶೆಟ್ಟಿ ಕೊಡಿಯಾಲ್‌ಬೈಲ್‌ ಅವರಿಂದ ತುಳು ನಾಟಕ ರಂಗಕ್ಕೆ ಮತ್ತೊಂದು ವಿನೂತನ ಅದ್ದೂರಿ ನಾಟಕ ಸದ್ಯವೇ ಸೇರ್ಪಡೆಯಾಗಲಿದೆ. ಆ ಮೂಲಕ ತುಳು ರಂಗಭೂಮಿಯ ಕಲಾಮಾತೆಗೆ ಮತ್ತೊಂದು ಚಿನ್ನದ ಕಿರೀಟ ಸಮರ್ಪಣೆಯಾಗಲಿದೆ. ಈಗಾಗಲೇ “ಶಿವದೂತೆ ಗುಳಿಗೆ” ನಾಟಕದ ಮೂಲಕ ಹೊಸ ದಾಖಲೆ ಬರೆದಿರುವ ಹಾಗೂ ಬೇರೆ ಭಾಷೆಯ ರಂಗಕರ್ಮಿಗಳು ತುಳು ರಂಗಭೂಮಿಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ವಿಜಯ ಕುಮಾರ್‌ ಶೆಟ್ಟಿ ಕೊಡಿಯಾಲ್‌ಬೈಲ್‌ ಅವರು ಈ ಬಾರಿ ಚಾರಿತ್ರಿಕ ನಾಟಕದತ್ತ ದೃಷ್ಟಿ ನೆಟ್ಟಿದ್ದಾರೆ. ಈ ಹಿಂದೆ ಸಾಕಷ್ಟು ಹಿಟ್‌ ಸಾಮಾಜಿಕ ನಾಟಕಗಳನ್ನು ನೀಡಿರುವ ಅವರು, ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಮೂಲಕ ತುಳು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಶಿವದೂತೆ ಗುಳಿಗನ ನಾಟಕ ಮಾಡಿದ ಬಳಿಕ ಹಲವಾರು ದೈವಪ್ರಧಾನ ನಾಟಕಗಳು, ಸಿನಿಮಾಗಳು ಬಿಡುಗಡೆಗೊಂಡು ಪ್ರದರ್ಶನ ಕಂಡವು. ಬಳಿಕ ದೈವಗಳನ್ನು ನಾಟಕ, ಸಿನಿಮಾಗಳನ್ನು ತೋರಿಸುವುದು ಎಷ್ಟು ಸರಿ ಎಂಬ ಬಗ್ಗೆ ಪರ ವಿರೋಧ ಚರ್ಚೆಗಳೂ ಆರಂಭವಾದವು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌…

Read More

ತುಳು ಪರಿಷತ್ ಇದರ ನೂತನ ಅಧ್ಯಕ್ಷರಾಗಿ ಕಂಚಿಲ ಶುಭೋದಯ ಆಳ್ವ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್, ಡಾ. ಮೀನಾಕ್ಷಿ ರಾಮಚಂದ್ರ, ಚಂದ್ರಕಲಾ ರಾವ್, ಸುಮತಿ ಹೆಗ್ಡೆ ಹಾಗೂ ಗಣೇಶ್ ಪೂಜಾರಿ ಅವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬೆನೆಟ್ ಜಿ .ಅಮ್ಮನ್ನ, ಜೊತೆ ಕಾರ್ಯದರ್ಶಿಯಾಗಿ ಜಿನೇಶ್ ಪ್ರಸಾದ್, ರಾಜಶ್ರೀ ಜೆ. ಪೂಜಾರಿ, ಉಮರ್ ಕುಂಞ ಸಾಲೆತ್ತೂರು, ಕೋಶಾಧಿಕಾರಿಯಾಗಿ ಯೋಗೀಶ್ ಕುಮಾರ್, ಕಾರ್ಯಕಾರಿ ಸಮಿತಿಗೆ ಡಾ.ವಾಸುದೇವ ಬೆಳ್ಳೆ, ಭರತೇಶ್ ಅಮೀನ್, ಇಸ್ಮಾಯಿಲ್ ಪೆರಿಂಜೆ, ಶಾಂತಲಾ ಗಟ್ಟಿ, ಕವಿತಾ, ವೀಣಾ ಕಾಮತ್, ವೃಂದಾ ಪ್ರಭು, ಅಲ್ತಾಫ್, ವಿನುತಾ ಶೆಟ್ಟಿ, ಶಾಲಿನಿ ರೈ, ರಮೇಶ್ ಮಂಚಕಲ್, ಡೋನಾಲ್ಡ್ ಪಿರೇರಾ, ಪ್ರೇಮನಾಥ್ ಶೆಟ್ಟಿ ಬಾಳ್ತಿಲ, ಓಸ್ವಾಲ್ಡ್ ಫೆರ್ನಾಂಡೀಸ್ , ರಾಜ ಚಂಡ್ತಿಮಾರ್, ದುರ್ಗಾ ಪ್ರಸಾದ್, ವಿನಯ್ ಟಿ.ಎಸ್, ರಘು ಇಡ್ಕಿದು, ನ್ಯಾನ್ಸಿ ನೋರೋಹ್ನ, ರಾಕೇಶ್ ಕುಂದರ್ ಅವರು ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಡಾ.…

Read More

ತುಳುನಾಡಿನ ಶ್ರೇಷ್ಠ ಕಲೆಯೆಂದು ಪ್ರಖ್ಯಾತವಾದ ಯಕ್ಷಗಾನ ಎಲ್ಲಾ ಜನರು ಜಾತಿ, ಮತ, ಭೇದವೆನಿಸದೆ ನಂಬಿದ ದೈವಿಕ ಕಲೆಯಾಗಿದೆ. ಯಕ್ಷ ಕಲಾಮಾತೆಯ ಸೇವೆಗೈದ ಅದೆಷ್ಟೋ ಶ್ರೇಷ್ಠ ಕಲಾವಿದರಿಗೆ ಜನ್ಮಕೊಟ್ಟ ಪುಣ್ಯಭೂಮಿ ನೆಲ್ಲಿಕುಂಜದ ನಡುಮನೆ ಎಂಬಲ್ಲಿ ಜನಿಸಿದ ಶೀನಪ್ಪ ಭಂಡಾರಿಯವರು ಮಾವನವರಾದ ಜತ್ತಪ್ಪ ರೈಗಳ ಬಳಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿ ಯಕ್ಷರಂಗದ ಸವ್ಯಸಾಚಿ ವೇಷಧಾರಿಯಾಗಿ ಮಿಂಚಿದರು. 25 ವರ್ಷಗಳು ಅದೆಷ್ಟೋ ಮೇಳಗಳಲ್ಲಿ ತಿರುಗಾಟ ಮಾಡಿ, ತಮ್ಮದೇ ಆದ ಬೆಳ್ಳಂಬೆಟ್ಟು ಹಾಗೂ ಆದಿಸುಬ್ರಹ್ಮಣ್ಯ ಎಂಬ ಡೇರೆ ಮೇಳವನ್ನು 50 ವರ್ಷಗಳ ಕಾಲ ನಿರ್ವಹಿಸಿ, ಶ್ರೇಷ್ಠ ಗುರುಸ್ಥಾನದಲ್ಲಿ ನಿಂತು, ಯಕ್ಷಗಾನವನ್ನು ಅದೆಷ್ಟೋ ಶಿಷ್ಯರಿಗೆ ಬೋಧಿಸಿ, ಸಾಮಾಜಿಕ, ಧಾರ್ಮಿಕ ಮತ್ತು ಜಾನಪದ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು 2013ನೇ ಜೂನ್ 6 ರಂದು ದೈವಾಧೀನರಾದರು. ಶೀನಪ್ಪ ಭಂಡಾರಿಯವರ 95 ವರ್ಷಗಳ ಯಕ್ಷ ಪ್ರಯಾಣದ ಘಟ್ಟವನ್ನು ನೆನಪಿನಲ್ಲಿ ಇಟ್ಟುಕೊಂಡು ಅವರ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, ಶಿಷ್ಯವೃಂದ ಮತ್ತು ಕುಟುಂಬ ವರ್ಗದ ನೇತೃತ್ವದಲ್ಲಿ ಡಿಸೆಂಬರ್ 01ನೇ ತಾರೀಕು ರವಿವಾರದಂದು ಪುತ್ತೂರು ಬನ್ನೂರಿನ…

Read More

ಕಲ್ಯಾಣ್ ಪರಿಸರದ ಪ್ರತಿಷ್ಠಿತ ಸಂಸ್ಥೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಆಚರಣೆ ಬಹಳ ಅದ್ಭುತವಾಗಿ ನಡೆದಿದೆ. ಈ ಸಂಭ್ರಮದಲ್ಲಿ ಮಹಿಳೆಯರು ಸಂಖ್ಯೆಯ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದನ್ನು ಕಂಡಾಗ ನಿಜವಾಗಿಯೂ ಅವರು ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕಾರ, ಸಂಸ್ಕೃತಿಯ ಆರಾಧಕರೆಂದು ತಿಳಿಯುತ್ತದೆ. ಜಾತಿ ಮತ ಭೇದವನ್ನೆಲ್ಲಾ ಬದಿಗೆ ಸರಿಸಿ ನಾವೆಲ್ಲಾ ಸನಾತನ ಧರ್ಮದ ಮತ್ತು ಕರ್ನಾಟಕದ ರಾಯಭಾರಿಗಳಂತೆ ಇಲ್ಲಿ ಎಲ್ಲರೊಳಗೊಂದಾಗಿ ಬದುಕುವುದಕ್ಕೆ ಪ್ರಯತ್ನಿಸೋಣ ಎಂದು ಬಿಲ್ಲವರ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರು ಹೇಳಿದರು. ನವೆಂಬರ್ 17ರಂದು ಅಪರಾಹ್ನ ಕಲ್ಯಾಣ್ ಪಶ್ಚಿಮದ ಪಾಟೀದಾರ್ ನಿಯಂತ್ರಿತ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಸಂಭ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ಮತ್ತು ಪರಿಸರದ ಮಹಿಳೆಯರಲ್ಲಿರುವ ಈ ಉತ್ಸಾಹ ಮುಂದಿನ ದಿನಗಳಲ್ಲಿ ಇಮ್ಮಡಿಯಾಗಲಿ. ಶ್ರೀ ಶಕ್ತಿಯ ಕೃಪೆ, ಸಹಕಾರ, ನಾಯಕತ್ವದ ಮಾರ್ಗದರ್ಶನ ನಮ್ಮ…

Read More