Author: admin

ಸುಮಾರು ಐನೂರು ವರ್ಷಗಳ ಇತಿಹಾಸವುಳ್ಳ ಸೌಡ ಅಗ್ರಹಾರ ಮಟ್ಕಲ್ ಮಹಾಗಣಪತಿ ದೇವಸ್ಥಾನ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವೆಂದು ಪ್ರಸಿದ್ಧಿಯಲ್ಲಿರುವ ಈ ಕ್ಷೇತ್ರ ಶಿಥಿಲಾವಸ್ಥೆ ತಲುಪಿದ್ದು ವೇದಜ್ಞ ವಿದ್ವಜ್ಜನರ ಸಲಹೆಯಂತೆ ಶೀಘ್ರಾತಿ ಶೀಘ್ರ ಜೀರ್ಣೋದ್ಧಾರ ಕಾರ್ಯ ಸಂಪನ್ನಗೊಳಿಸಬೇಕೆಂಬ ನಿರ್ಧಾರದೊಂದಿಗೆ ಕಾರ್ಯಪ್ರವರ್ತವಾಗಿತ್ತು. 2022 ರ ಸಮಯಕ್ಕೆ ಭಕ್ತರ ಸರ್ವ ವಿಧದ ಸಹಕಾರದೊಂದಿಗೆ ಪುನರಾಭಿವೃದ್ಧಿ ಕಾರ್ಯ ಸಂಪನ್ನಗೊಂಡಿದ್ದು, ಜೀರ್ಣೋದ್ಧಾರ ಸಮಿತಿ ಹಾಗೂ ಸಾರ್ವಜನಿಕರ ಸತತ ಶ್ರಮದ ಫಲಶ್ರುತಿಯಾಗಿ ಸುಸಜ್ಜಿತ ಶಿಲಾಮಯ ದೇಗುಲ ನಿರ್ಮಾಣ ಅಂತಿಮ ಹಂತ ಕಾಣುವುದರೊಂದಿಗೆ 2022 ಫೆಬ್ರವರಿಯಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಪ್ರತಿಷ್ಠಾನ ಕಾರ್ಯ, ಬ್ರಹ್ಮಕಲಶಾದಿ ಧಾರ್ಮಿಕ ವಿಧಿಗಳು ಸುಸೂತ್ರವಾಗಿ ಸಂಪನ್ನಗೊಂಡಿತು. ಇದೀಗ ದೇವಸ್ಥಾನದ ಆಕರ್ಷಣೆ ಹಾಗೂ ದೈವಿಕ ಸೊಬಗನ್ನು ವೃದ್ಧಿಗೊಳಿಸುವ ಸಲುವಾಗಿ ದೇವಳದ ಹೊರ ಪೌಳಿಯ ಬಾವಿ ಮೆಟ್ಟಿಲುಗಳ ಜೀರ್ಣೋದ್ಧಾರ ಪ್ರಕ್ರಿಯೆಗೆ ತೊಡಗಿದ್ದು ಭಕ್ತ ಬಾಂಧವರಿಂದ ಉದಾರ ಹೃದಯದ ಸಹಕಾರ ದಾನ ದೇಣಿಗೆಗಳನ್ನು ನಿರೀಕ್ಷಿಸಲಾಗಿದ್ದು ದಾನಿಗಳನ್ನು ಸಾರ್ವಜನಿಕ ಧಾರ್ಮಿಕ ಸಮಾರಂಭದಲ್ಲಿ ಸಂಮಾನಿಸಿ ಭಕ್ತ ಜನರ ಸಕಲ ವಿಘ್ನಗಳನ್ನು ನಿವಾರಿಸುವ ಕಾರಣಿಕದ…

Read More

ಮೂಡುಬಿದಿರೆ: ಮಂಗಳೂರು ವಿವಿಯಅಂತರಕಾಲೇಜುಅಥ್ಲೇಟಿಕ್ಸ್‍ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಸಾರ್ವಕಾಲಿಕ ಸಾಧನೆ ಮೆರೆದಿದ್ದಾರೆ. ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಸತತ 22ನೇ ಬಾರಿ ಸಮಗ್ರತಂಡ ಪ್ರಶಸ್ತಿಯನ್ನು ದ್ವಿತೀಯ ಸ್ಥಾನ ಪಡೆದ ತಂಡದಿಂದ 460 ಅಂಕಗಳ ಅಂತರದಲ್ಲಿ ಪಡೆಯುವುದರ ಜೊತೆಗೆ 11 ನೂತನ ಕೂಟದಾಖಲೆಯನ್ನು ಆಳ್ವಾಸ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಸಾಧನೆ ಮೆರೆದ ಭಾರತದ ಏಕೈಕ ಕಾಲೇಜು ಈ ಅಪ್ರತಿಮಾ ಸಾಧನೆಯ ಜೊತೆಯಲ್ಲಿ ಮಂಗಳೂರು ವಿವಿಯ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿರುವ 46 ವಿಭಾಗಗಳಲ್ಲಿ ಈಗಾಗಲೇ ಆಳ್ವಾಸ್ ವಿದ್ಯಾರ್ಥಿಗಳು ನೂತನ ಕೂಟದಾಖಲೆ ನಿರ್ಮಿಸಿದ್ದರೆ, ಬಾಕಿ ಉಳಿದಿದ್ದ ಹೆಪ್ಟಾತ್ಲಾನ್ವಿ ಭಾಗದಲ್ಲೂ ಈ ಬಾರಿ ನೂತನ ಕೂಟದಾಖಲೆ ನಿರ್ಮಿಸುವ ಮೂಲಕ ಅಥ್ಲೇಟಿಕ್ಸ್‍ನಲ್ಲಿರುವ ಒಟ್ಟು 47 ವಿಭಾಗಗಳಲ್ಲೂ ನೂತನ ಕೂಟದಾಖಲೆ ನಿರ್ಮಿಸಿದ ಭಾರತದ ಏಕೈಕ ಕಾಲೇಜು ಎಂಬ ಅಸಾಮಾನ್ಯ ಸಾಧನೆಯನ್ನು ಆಳ್ವಾಸ್ ಮೆರೆದಿದೆ. ಎರಡು ವಿಭಾಗಗಳಲ್ಲಿ 84 ಪದಕಗಳು ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‍ಷಿಪ್‍ನ ಪುರುಷರ ವಿಭಾಗದಲ್ಲಿ 292 ಅಂಕಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 277…

Read More

ವಿದ್ಯಾಗಿರಿ : 2 ಸಾವಿರ ವರ್ಷಗಳ ಇತಿಹಾಸವಿರುವ ಮೈತೇಯಿ ಸಂಸ್ಕೃತಿ ಇಂದಿಗೂ ಶ್ರೀಮಂತವಾಗಿ ಉಳಿದಿರುವುದಕ್ಕಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಥೆಯ ಮಣಿಪುರಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ `ನಿಂಗೋಲ್ ಚಕೊಬಾ’ ಆಚರಣೆಯಲ್ಲಿ ಅವರು ಮಾತನಾಡಿದರು. ಸಹೋದರ ಸಹೋದರಿಯರ ನಡುವೆ ಇರುವ ಭ್ರಾತೃತ್ವ ಮತ್ತು ರಕ್ಷಣಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ‘ನಿಂಗೋಲ್ ಚಕೋಬಾ’ ಎಂದರು. ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಎಲ್ಲಾ ಸಂಪ್ರದಾಯ, ಆಚರಣೆ, ಆಹಾರ ಪದ್ಧತಿ, ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಗೌರವಿಸಿ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಥೆಯ ಹೆಮ್ಮೆಯ ಮಣಿಪುರಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಬಳಿಕ…

Read More

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗವು ಶನಿವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 'ಸವ್ಯಸಾಚಿ' ಅಂತರ್ ಕಾಲೇಜು ಕಾಮಾರ್ಸ್ ಫೆಸ್ಟ್‍ನ್ನು ಶನಿವಾರ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ವಿಭಾಗದ ಹಿರಿಯ ವಿದ್ಯಾರ್ಥಿ, ಲೆಕ್ಕ ಪರಿಶೋಧಕ ಅನ್ವೇಶ್ ಶೆಟ್ಟಿ ಮುಖ್ಯ ಅಥಿತಿಯ ನೆಲೆಯಲ್ಲಿ ಮಾತನಾಡಿ, ಕಾಲೇಜು ಫೆಸ್ಟಗಳು ವಿದ್ಯಾರ್ಥಿಗಳಿಗೆ ತಮ್ಮ ದಿನನಿತ್ಯದ ದಿನಚರಿಯಿಂದ ಹೊರಬಂದು ಸಂತೋಷದ ಕ್ಷಣಗಳನ್ನು ಕಳೆಯಲು ಸಹಕಾರಿಯಾಗಿವೆ. ಆದರೆ ಈ ಹಂತದಲ್ಲಿ ಲಭಿಸುವ ಕಲಿಕೆ ಮಾತ್ರ ಬದುಕಿಗೆ ಸಹಕಾರಿ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ತಮ್ಮ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಲು ಈ ಅವಕಾಶಗಳನ್ನು (ಫೆಸ್ಟ್) ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇಲ್ಲಿ ಕಲಿತ ಪಾಠ ಭವಿಷ್ಯಕ್ಕೆ ಸ್ಪಷ್ಟ ಮಾರ್ಗದರ್ಶನವನ್ನು ನೀಡಬಲ್ಲದು. ‘ನೀವು ಏನು ಮಾಡುತ್ತೀರಿ ಎಂಬುದು ಮುಖ್ಯ ಅಲ್ಲ, ಬದಲಿಗೆ ನೀವು ಮಾಡುವ ಕೆಲಸವನ್ನು ಹೇಗೆ ಮಾಡುತ್ತೀರಿ ಎಂಬುದರ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ ಎಂದರು. ಸಮಾರೋಪ ಸಮಾರಂಭದಲ್ಲಿ…

Read More

ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ( ಐಬಿಸಿಸಿಐ) ದುಬೈ ವ್ಯಾಪಾರ ಪ್ರವಾಸವನ್ನು ಕಳೆದ ಬುಧವಾರ (ನವಂಬರ್ 20 ರಿಂದ ನವಂಬರ್ 25) ಯಶಸ್ವಿಯಾಗಿ ಆಯೋಜಿಸಿದ್ದು, ಅಂತರಾಷ್ಟ್ರೀಯ ವ್ಯಾಪಾರ ಸಹಯೋಗಗಳನ್ನು ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ನಿಯೋಗವು ರಾಸಾಯನಿಕ ಔಷಧ ಶಾಸ್ತ್ರ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ಸ್, ಮೆಕ್ಯಾನಿಕಲ್, ವಜ್ರೋದ್ಯಮ, ಪ್ರವಾಸೋದ್ಯಮ, ಹಣಕಾಸು ತಜ್ಞ ಮತ್ತು ಕಾನೂನು ವೃತ್ತಿಪರ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಭಾರತದ 50 ಉದ್ಯಮಿಗಳನ್ನು ಭಾಗವಹಿಸಿದರು. ವ್ಯಾಪಾರ ಕಂಪನಿಗಳ ಕಾರ್ಯಾಚರಣೆಗಳನ್ನು ಅಲ್ಲದೇ ಪ್ರತಿಷ್ಠಿತ ಉದ್ಯಮಿಗಳ ಭೇಟಿಯನ್ನು ಒಳಗೊಂಡಿತ್ತು. ಪ್ರತಿನಿಧಿಗಳು ಯುಎಇಯಲ್ಲಿನ ವಿವಿಧ ವ್ಯಾಪಾರ ಕಾರ್ಯಾಚರಣೆಗಳ ಸಮಗ್ರ ತಿಳುವಳಿಕೆ ಮತ್ತು ಮಾಹಿತಿಗಳನ್ನು ಪಡೆದುಕೊಂಡರು. ಡಾ. ಬಿಆರ್ ಶೆಟ್ಟಿ ಮತ್ತು ಸೀಮಾ ಶೆಟ್ಟಿ (ನಿಯೋ ಫಾರ್ಮ), ಪ್ರಸನ್ನ ಶೆಟ್ಟಿ ಮತ್ತು ಗುಣಶೀಲ್ ಶೆಟ್ಟಿ (ಏಸ್ ಕ್ರೇನ್ಸ್ ) ಸುಜಾತ್ ಶೆಟ್ಟಿ ಮತ್ತು ಅನ್ವಿತಾ ಶೆಟ್ಟಿ (ಜಿಬಿಎಂಟಿ), ಟಿ. ಡಿ ಪಟೇಲ್ (ಎಮಿರೇಟ್ಸ್ ಟ್ರನ್ಸ್ ಫಾರ್ಮರ್ಸ್ ಮತ್ತು ಸ್ವಿಚ್ ಗೇಯರ್ ಕಂಪನಿ) ಸಂದರ್ಶನ ನೀಡಿ…

Read More

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿಸೆಂಬರ್ 5ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಬಿಡುಗಡೆಗೊಳಿಸಿದರು. ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಮೂಡಾ ಆಯುಕ್ತೆ ನೂರ್ ಜಹರಾ ಖಾನಂ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ .ಬಿ.ಎನ್ ಉಪಸ್ಥಿತರಿದ್ದರು.

Read More

ಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ರವರ ಪ್ರತೀಕ್ ಪೂಜಾರಿ ನಿರ್ಮಾಣದ, ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಕಥಾ ಹಂದರದ, ವಿಭಿನ್ನ ಶೈಲಿಯ ತುಳು ಚಲನಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಯತು. ಮುಡಿಪು, ಹೂಹಾಕುವ ಕಲ್ಲು, ವರ್ಕಾಡಿ, ನರಿಂಗಾನ, ಇರಾ ಮುಂತಾದ ಕಡೆ ಸತತ 25 ದಿನಗಳಿಂದ ಚಿತ್ರೀಕರಣಗೊಂಡಿತ್ತು. ಇದು ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗದೊಂದಿಗೆ ವಿಭಿನ್ನವಾಗಿ ಮೂಡಿ ಬರಲಿದೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಪ್ರವೀಣ್ ಕೊಡಕ್ಕಲ್, ಶಿವಪ್ರಕಾಶ್ ಪೂಂಜ, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರತೀಕ್ ಪೂಜಾರಿ, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ಜಯಶೀಲ ಮಂಗಳೂರು, ವಿಜಯಹರಿ ರೈ, ದಯಾನಂದ ರೈ ಬೆಟ್ಟಂಪಾಡಿ, ರಂಜನ್ ಬೋಳೂರು, ದಿಶಾರಾಣಿ, ಭಾಸ್ಕರ್ ಮಣಿಪಾಲ ಮುಂತಾದವರು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಉದಯ ಬಳ್ಳಾಲ್, ಸಂಗೀತ ಲಾಯ್ ವೆಲಂಟೈನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಾಹಸ ಸುರೇಶ್ ಶೆಟ್ಟಿ,…

Read More

ಕಾರ್ಕಳ : ಸಾಮಾಜಿಕ ಜಾಲತಾಣದಿಂದ ನಮ್ಮ ಕೌಟುಂಬಿಕ ಸಂಬಂಧಗಳು ಇಂದು ಬಿರುಕು ಬಿಟ್ಟಿವೆ. ಹದಿಹರೆಯ, ವ್ಯಕ್ತಿತ್ವ ರೂಪಿಸುವ ಸಂಕ್ರಮಣ ಕಾಲ. ಇಂತಹ ಸಂದರ್ಭದಲ್ಲೆ ಜೀವನ ಮೌಲ್ಯಗಳನ್ನು ಬಿತ್ತುವ ‘ಮೌಲ್ಯಸುಧಾ’ದ ಮೂಲಕ ಕೌಟುಂಬಿಕ, ಬದುಕಿನ ಪ್ರೀತಿಯನ್ನು ತುಂಬುತ್ತಿರುವ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ, ವಿಭಿನ್ನ ರೀತಿಯಲ್ಲಿ ಶಿಕ್ಷಣದ ಪರಂಪರೆಗೆ ಕೊಡುಗೆ ನೀಡುತ್ತಿರುವ ಕಾರ್ಕಳದ ಹೆಮ್ಮೆ ಜ್ಞಾನಸುಧಾವಾಗಿದೆ ಎಂದು ತರಂಗ ವಾರಪತ್ರಿಕೆಯ ಸಂಪಾದಕಿ ಡಾ.ಯು.ಬಿ. ರಾಜಲಕ್ಷ್ಮಿ ನುಡಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ- 2024ರ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ಬಿ. ಶೇಖರ್ ಶೆಟ್ಟಿಯವರು ಮಾತನಾಡಿ, ವ ಕಾರಗಳಾದ ವಟು, ವಸನ, ವಿದ್ಯೆ, ವಿನಯ ಮತ್ತು ವಾಕ್ ವಿ ಕಾರವಾಗದೆ ಸಾಕಾರಾವಾದರೆ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯ. ಯೋಜನೆ ಮತ್ತು ಸ್ವಯಂ ಮೌಲ್ಯಮಾಪನ ನಮ್ಮಲ್ಲಿರ ಬೇಕು. ಯಾರು ರಾತ್ರಿ ಮಲಗುವಾಗ, ಬೆಳಗ್ಗೆ ಏಳುವಾಗ ನಗು ಮುಖದಲ್ಲಿ…

Read More

ಮೂಡುಬಿದಿರೆ: ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆಯು (ಎನ್‌ಎಬಿಎಲ್) ಜಾಗತಿಕವಾಗಿ ಪರಿಗಣಿಸಲ್ಪಡುವ ಮಾನದಂಡವಾಗಿದೆ.  ಈ ಪ್ರಯೋಗಾಲಯದ ಫಲಿತಾಂಶಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹವಾಗಿರುತ್ತದೆ ಎಂದು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ ನಿರ್ದೇಶಕ ಶ್ರೀಕಾಂತ್ ಆರ್ ಹೇಳಿದರು. ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮತ್ತು ಅದರ ಪ್ರಯೋಜನಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. ಎನ್‌ಎಬಿಎಲ್ ಮಾನ್ಯತೆಯ ಪ್ರಯೋಗಾಲಯಗಳು ದೃಢವಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಹಕಾರಿಯಾಗಿವೆ. ಇದು ಪ್ರಯೋಗಾಲಯದ ಕಾರ್ಯಾಚರಣೆಗಳು, ಪರೀಕ್ಷೆಯ ನಿಖರತೆ ಮತ್ತು ಒಟ್ಟಾರೆ ಸೇವೆಯ ಗುಣಮಟ್ಟದಲ್ಲಿ ನಿರಂತರ ಸುಧಾರಣೆಗೆ ಕಾರಣವಾಗುತ್ತದೆ ಎಂದರು. ಮಾಪನಶಾಸ್ತ್ರ ವಿಷಯವು ಇಂದಿನ ಶೈಕ್ಷಣಿಕ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಲು ಮಾತ್ರ ಸೀಮಿತವಾಗಿದೆ. ಆದರೆ ಇದು ದುರದೃಷ್ಟಕರ.  ಮಾಪನಶಾಸ್ತ್ರ  ಅಥವಾ ಮಾಪನ ವಿಜ್ಞಾನವು ಕೈಗಾರಿಕಾ ಉತ್ಪಾದನೆ…

Read More

ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿಪೋಷಕರಿಗೆ ಮಕ್ಕಳ ಪಾಲನೆಯ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲೊರೆಕ್ಸ್ ಗ್ರೂಪ್‍ನ ಎಮ್.ಡಿ, ಸಿ.ಇ.ಒ. ಡಾ. ಮಂಜುಳ ಪೂಜಾ ಶ್ರಾಫ್ ಆಗಮಿಸಿದ್ದರು. ಅವರು ಮಾತನಾಡಿ ಪೋಷಕರು ಮಕ್ಕಳ ಜೊತೆ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಬೇಕು. ಮಕ್ಕಳು ಮೊಬೈಲ್, ಡ್ರಗ್ಸ್ ಮುಂತಾದ ದುಷ್ಟ ಚಟಗಳಿಂದ ದೂರವಿರುವ ಹಾಗೆ ನೋಡಿಕೊಳ್ಳಬೇಕು. ಹಾಗೆಯೇ ಅವರು ತಮ್ಮೆಲ್ಲ ಭಯಗಳಿಂದ ಹೊರಗಡೆ ಬರುವ ಹಾಗೆ ಮಾಡಬೇಕು. ಅದೇ ರೀತಿ ಶಿಕ್ಷಕರು ಸ್ವಗೌರವದ ಜೊತೆಗೆ ಕೃತಜ್ಞತಾ ಮನೋಭಾವ ಹೊಂದಿರಬೇಕೆಂದರು. ಕೆಲೋರೆಕ್ಸ್ ಗ್ರೂಪ್‍ನ ಅನಂತ ಕೃಷ್ಣನ್ ಬಿ ಮಾಹಿತಿಯನ್ನು ನೀಡಿಪೋಷಕರರ ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಪೋಷಕರನ್ನು ಅಭಿನಂದಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಸಂಸ್ಥೆಯ ಪರವಾಗಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಸೈಬರ್ ಬೆದರಿಕೆ, ಇಂಟರ್‍ನೆಟ್ಎ ಡಿಕ್ಷನ್, ಆನ್‍ಲೈನ್ ಸುರಕ್ಷತೆ, ಮಾನಸಿಕ ಆರೋಗ್ಯ, ನೈಜ ಮತ್ತು ವಾಸ್ತವಿಕ ಸಂಪರ್ಕ…

Read More