Author: admin
ಬೊರಿವಲಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಮುಂಬಯಿ ಬಂಟರ ಸಂಘದ ಜೋಗೇಶ್ವರಿ ದಹಿಸರ್ ಸಮಿತಿಯ ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನೆ
ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯರಿಂದ ಮಾ 8 ರಂದು ಮಹಾ ಶಿವರಾತ್ರಿಯ ಶುಭದಿನ ಬೊರಿವಲಿ ಪಶ್ಚಿಮದ ಜಯರಾಜ್ ನಗರದ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸ್ಮರಣೀಯ ಭಜನಾ ಸಂಕೀರ್ತನೆ ಜರಗಿತು. ಬೆಳಿಗ್ಗೆ ಭಜನೆ ಕಾರ್ಯಕ್ರಮ ಇಂಚರ ತಂಡದ ರಜನಿ ಶೆಟ್ಟಿ ಮತ್ತು ಶೋಭಾ ಶೆಟ್ಟಿಯವರ ನೇತೃತ್ವದಲ್ಲಿ ಜರಗಿತು. ಭಜನೆ ಮಹಿಳಾ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಸೇವೆ ಸಲ್ಲಿಸಿದರು. ಆ ಬಳಿಕ ಮಹಿಳಾ ಸದಸ್ಯರಿಂದ ಆತ್ಮವು ಸೂರೆಗೊಳ್ಳುವ ಭಜನೆಯು ಎಲ್ಲರ ಮನ ತಣಿಸಿತು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಎನ್ ಹೆಗ್ಡೆ ಅವರು ಭಜನೆ ಹಾಡಿದ ಎಲ್ಲಾ ಸದಸ್ಯರಿಗೆ ನಿತ್ಯ ಪ್ರಾರ್ಥನೆಯ ಪುಸ್ತಕವನ್ನು ವಿತರಿಸಿ ಅವರ ಅಧ್ಯಾತ್ಮಿಕ ಸಾಧನೆಗೆ ಸ್ಪೂರ್ತಿ ನೀಡಿದರು. ಮಧ್ಯಾಹ್ನ ಮಹಾ ಮಂಗಳಾರತಿ ಜರಗಿ ದೇವರ ಕೃಪೆಯಿಂದ ವಾತಾವರಣವು ಮಂಗಲಮಯವಾಗಿ ಕಾರ್ಯಕ್ರಮವು ಮುಕ್ತಾಯಗೊಂಡಿತು. ಪಾಲ್ಗೊಂಡ ಭಕ್ತರೆಲ್ಲರಿಗೂ ಪ್ರಸಾದ ರೂಪವಾಗಿ ಅನ್ನ…
ಖ್ಯಾತ ದಾರ್ಶನಿಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಅರವಿಂದ ಘೋಷ್ ಅವರು ತಮ್ಮ ಒಂದು ವೇದಾಂತ ಗ್ರಂಥದಲ್ಲಿ ಸಾರ್ವಕಾಲಿಕ ಸತ್ಯವಾದ ಒಂದು ವಾಕ್ಯವನ್ನು ಉದ್ಗರಿಸಿದ್ದಾರೆ. “ಈ ಪ್ರಪಂಚದಲ್ಲಿ ಒಳ್ಳೆಯವರಿಗಿಂತಲೂ ಒಳ್ಳೆಯವರಂತೆ ನಟಿಸುವವರ ಸಂಖ್ಯೆಯೇ ಅಧಿಕ. ಅಂತಹವರಿಗಿಂತ ಕೆಟ್ಟವರೆಂದು ಪರಿಗಣಿಸಲ್ಪಟ್ಟವರೇ ಕಡಿಮೆ ಅಪಾಯಕಾರಿಗಳು’ ಎಂತಹ ಅದ್ಭುತ ಚಿಂತನೆ. ಇಂದು ಸಮಾಜದಲ್ಲಿ ನಾವು ಕಾಣುತ್ತಿರುವವರಲ್ಲಿ ಪ್ರತಿಶತ 90ರಷ್ಟು ಮಂದಿಗೆ ಮೇಲಿನ ವಾಕ್ಯ ನೇರವಾಗಿ ಅನ್ವಯಿಸುತ್ತದೇನೊ? ಸಮಾಜದ ಸರ್ವಸ್ತರದಲ್ಲೂ ಮುಖವಾಡವಾದಿಗಳೇ ಪ್ರಮುಖವಾಗಿ ಗೋಚರಿಸುತ್ತಾರೆ. ಅಂಥವರ ಕಳಕಳಿಗಳ ಅಂತರಂಗವು ಅಪವಿತ್ರ ಮತ್ತು ಅಪರಿಶುದ್ಧವಾಗಿರುವುದು ಹಾಗೂ ನಾಟಕೀಯತೆಯನ್ನು ಹೊಂದಿರುವುದು ಸರ್ವ ದುರಂತಗಳಿಗೆ ಮೂಲ ಎಂದರೆ ತಪ್ಪಾಗದು. ಘೋಷರ ದಿಟವಾದ ನುಡಿಯು ನೇರವಾಗಿ ಅನ್ವಯಿಸುವುದು ಪ್ರಸ್ತುತದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಎಂದು ಹೇಳಲು ಸಾಧ್ಯವಿದೆ. ಹಿರಿಯ ರಾಜಕೀಯ ಮತ್ತು ಸಾಮಾಜಿಕ ಮುತ್ಸದ್ಧಿ ರಾಮ್ಮನೋಹರ ಲೋಹಿಯಾರ ಸಮಾಜವಾದ ತಣ್ತೀದ ಕಟ್ಟಾಳು ಕಾಗೋಡು ತಿಮ್ಮಪ್ಪ ಅವರು ತಮ್ಮ ಆಪ್ತರಲ್ಲಿ ಯಾವಾಗಲೂ ಒಂದು ಹಿತನುಡಿ ನುಡಿಯುತ್ತಾರೆ. “ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ…
ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಆದರೆ ಬಡ ಸಮಾಜಕ್ಕಾಗಿ ಸೇವಾ ಕಾರ್ಯ ಮಾಡುವಾಗ ಸಂಘ ನನಗಾಗಿ ಅಲ್ಲ ಸಮಾಜಕ್ಕಾಗಿ ಇರುವುದು ಎಂಬ ಆತ್ಮ ಸ್ಮರಣೆ ಇರಲಿ ಹಾಗೂ ಸೇವೆ ಕೂಡಾ ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಸೃಷ್ಟಿಯ ನಿಯಮ. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ಧಿಯನ್ನು ಪಡೆಯಲು ಸಾಧ್ಯ. ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಅಗಲಿ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೇ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಮಗೆ ಬಂದ ಶ್ರೀಮಂತಿಕೆಯಲ್ಲಿ ಮೆರೆಯದೆ ದಾನ ಧರ್ಮದ ಮೂಲಕ ನಾವು ಸಮಾಜದಲ್ಲಿ ಶ್ರೇಷ್ಠರಾಗಬೇಕು ಎಂದು ಹೇರಂಬ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ನುಡಿದರು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ, ಸ್ನೇಹ ಸಮ್ಮಿಲನ ಸಮಾರಂಭವು ಮಾರ್ಚ್…
ದಿನಾಂಕ 10-03-2024 ನೇ ಆದಿತ್ಯವಾರದಂದು ಪರ್ಕಳ ಪ್ರೌಢಶಾಲಾ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಈ ವರ್ಷದ ಬಂಟರ ಸಮ್ಮಿಲನ ಕಾರ್ಯಕ್ರಮವು ಬಂಟರ ಚಾವಡಿಯ ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಕುಮಾರಿ ಮೋನೀಶ ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಾಧ್ಯಕ್ಷ ವಸಂತ ಶೆಟ್ಟಿ ಚೆನ್ನಿಬೆಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು ವರದಿ ವಾಚಿಸಿದರು. ಕೋಶಾಧಿಕಾರಿ ದಿನಕರ್ ಶೆಟ್ಟಿ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಅಧ್ಯಕ್ಷರುಗಳಾದ ಜಯರಾಜ್ ಹೆಗ್ಡೆ ಹಾಗೂ ದಿಲೀಪ್ ರಾಜ್ ಹೆಗ್ಡೆಯವರು ದೀಪ ಪ್ರಜ್ವಲನೆ ಮಾಡಿದರು. ಮುಖ್ಯ ಅತಿಥಿ ಬಂಟರ ಸಮಾಜದ ಹಿರಿಯ ಚೇತನ, ಹಿರಿಯ ರಾಜಕೀಯ ಮುತ್ಸದ್ದಿ ಶ್ರೀಮಾನ್ ಅಪ್ಪಣ್ಣ ಹೆಗ್ಡೆಯವರಿಗೆ ಚಾವಡಿ ವತಿಯಿಂದ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಸಿದ್ದ ನೇತ್ರ ತಜ್ಞರಾದ ಶ್ರೀ ಸುಬ್ಬಣ್ಣ ಶೆಟ್ಟಿಯವರಿಗೆ ಸೇವಾ ವಿಭೂಷಣ ಮತ್ತು ಸಮಾಜ ಸೇವಕರಾದ ಶ್ರೀ ಪ್ರಕಾಶ್ ಶೆಟ್ಟಿ ಮಣಿಪಾಲ ಇವರಿಗೆ ಸೇವಾ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅತಿಥಿಗಳಾದ ಕಾಪು ಶಾಸಕರಾದ…
ಕಟೀಲು ಉಲ್ಲಂಜೆ ಕ್ರಾಸ್ ಬಳಿ ಸುಧಾಕರ ಶೆಟ್ಟಿ ಮೊಗ್ರೋಡಿ ಕನ್ ಸ್ಟ್ರಕ್ಷನ್ ಸೇವಾರೂಪವಾಗಿ ನಿರ್ಮಿಸುತ್ತಿರುವ ನೂತನ ಸ್ವಾಗತ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ನೆರವೇರಿತು. ಧಾರ್ಮಿಕ ವಿಧಿ ವಿಧಾನವನ್ನು ಶಿಬರೂರು ವೇದವ್ಯಾಸ ತಂತ್ರಿಯವರು ನೆರವೇರಿಸಿದರು. ಬಳಿಕ ಮಾತಾಡಿದ ಅವರು, “ಮೊಗ್ರೋಡಿ ಕನ್ ಸ್ಟ್ರಕ್ಷನ್ ಸಂಸ್ಥೆಯು ಕಟೀಲು ಶ್ರೀದೇವಿಯ ಉತ್ಸವ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವದ ಭೇಟಿಗೆ ತೆರಳುವ ದಾರಿಯಲ್ಲಿ ಭವ್ಯವಾದ ಸ್ವಾಗತ ಗೋಪುರ ನಿರ್ಮಿಸಲು ಮುಂದಾಗಿರುವುದು ಸಂತಸದ ವಿಚಾರ. ಸೇವಾಕರ್ತರ ಇಚ್ಛೆಯಂತೆ ಏಪ್ರಿಲ್ 20ರ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗೋಪುರ ಲೋಕಾರ್ಪಣೆಗೊಳ್ಳಲಿ. ಭಗವದ್ಭಕ್ತರ ಆಸೆಯನ್ನು ಕಟೀಲು ದುರ್ಗೆ ಹಾಗೂ ಶಿಬರೂರು ಕೊಡಮಣಿತ್ತಾಯ ದೈವ ಈಡೇರಿಸಲಿ” ಎಂದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ದಾಸ ಅಸ್ರಣ್ಣರು ಸೇವಾಕರ್ತರು ಹಾಗೂ ಇಂಜಿನಿಯರ್ ಗಳಿಗೆ ಪೂಜಾ ಪ್ರಸಾದ ವಿತರಿಸಿ ಶುಭಾಶೀರ್ವಾದಗೈದರು. ಈ ಸಂದರ್ಭದಲ್ಲಿ ಶಿಬರೂರು ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಪ್ರದ್ಯುಮ್ನ ರಾವ್ ಕೈಯೂರುಗುತ್ತು, ತುಕರಾಮ ಶೆಟ್ಟಿ ಪರ್ಲಬೈಲ್ ಗುತ್ತು, ಜಿತೇಂದ್ರ…
ಮೂಡುಬಿದಿರೆ: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ‘ಸ್ಮಾರ್ಟ್ ಶಾಕ್ವೇವ್ ವೆಲಾಸಿಟಿ ಮೆಷರ್ಮೆಂಟ್ ಸಿಸ್ಟಮ್’ (ಸ್ಮಾರ್ಟ್ ಆಘಾತ ತರಂಗಗಳ ವೇಗ ಮಾಪನ ವ್ಯವಸ್ಥೆ) ಪೇಟೆಂಟ್ ಪಡೆದುಕೊಂಡಿದೆ. ಈ ಆವಿಷ್ಕಾರವು ಕೇವಲ ಆಘಾತ ತರಂಗಗಳ ವೇಗ ಮಾಪನ ಮಾತ್ರವಲ್ಲ, ವಿವಿಧ ಅನುಷ್ಠಾನಗಳು ಹಾಗೂ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನದಲ್ಲಿ ವಿಶೇಷವಾಗಿ ಕ್ರಾಂತಿಕಾರಿ ಕೊಡುಗೆ ನೀಡಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸಂಶೋಧನಾ ಡೀನ್ ಡಾ. ರಿಚರ್ಡ್ ಪಿಂಟೊ ಅವರ ನಾಯಕತ್ವದಲ್ಲಿ ಈ ಸಾಧನೆ ನೆರವೇರಿದೆ. ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆವಿಷ್ಕಾರ ಮಾಡಿದ ವಿದ್ಯಾರ್ಥಿಗಳ ಬದ್ಧತೆಯ ಪರಿಶ್ರಮದಿಂದ ಪೇಟೆಂಟ್ ಅರ್ಜಿ ಸಂಖ್ಯೆ 201941024087 ಸಾಧ್ಯವಾಗಿದೆ. ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ಪ್ರಾಧ್ಯಾಪಕರಾದ ಡಾ. ರಾಮಪ್ರಸಾದ್ ಅರಂತಾಡಿ ತಿಮ್ಮಪ್ಪ, ಡಾ. ಜಯರಾಮ ಅರಸಲಿಕೆ ಮತ್ತು ಡಾ. ಅರ್ಜುನ್ ಸುನಿಲ್ ರಾವ್ ಅವರ ತಜ್ಞ…
ಮಹಾರಾಷ್ಟ್ರದ ಥಾಣೆ ನಗರಿಯ ಪ್ರತಿಷ್ಠಿತ ಬಂಟ ಸಮುದಾಯದ ಸಂಘಟನೆ ಥಾಣೆ ಬಂಟ್ಸ್ ಇದರ ಹತ್ತೊಂಬತ್ತನೇಯ ವಾರ್ಷಿಕ ಮಹೋತ್ಸವವು ನಗರದ ಡಾ.ಕಾಶೀನಾಥ್ ಘಾಣೇಕರ್ ನಾಟ್ಯ ಸಭಾಗೃಹದಲ್ಲಿ ಇದೇ ಬರುವ ದಿನಾಂಕ 13 ಬುಧವಾರ ವಿಜೃಂಭಣೆಯಿಂದ ಜರುಗಲಿದೆ. ಅಂದು ಅಪರಾಹ್ನ ಘಂಟೆ 1.30 ರಿಂದ ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಜೆ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಕಾರ್ಯಕ್ರಮ ವೈವಿಧ್ಯಗಳು ಜರುಗಲಿದ್ದು ಆಹ್ವಾನಿತ ಅತಿಥಿಗಳಾಗಿ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಸುಗ್ಗಿ ಸುಧಾಕರ್ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಹುಬ್ಬಳ್ಳಿ ಧಾರವಾಡ, ಡಾ ರವಿ ಶೆಟ್ಟಿ ಮೂಡಂಬೈಲು ಉದ್ಯಮಿ ಕತಾರ್, ಕುಶಲ್ ಭಂಡಾರಿ ಮಾಜಿ ಅಧ್ಯಕ್ಷರು ಥಾಣೆ ಬಂಟ್ಸ್ ಅಸೋಸಿಯೇಷನ್, ಜಯ ಕೆ ಶೆಟ್ಟಿ ಮಾಜಿ ಅಧ್ಯಕ್ಷರು ನವೋದಯ ಕನ್ನಡ ಸಂಘ ಥಾಣೆ ಭಾಗವಹಿಸಲಿರುವರು. ಅಂದು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಜಯಕುಮಾರ್ ಕೊಡಿಯಲ್ ಬೈಲ್ ರಚನೆಯ ಬಾಬಾ ಪ್ರಸಾದ್ ಅರಸ ನಿರ್ದೇಶನದ ಅಜ್ಜೆರ್…
ಹೌದು ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮದ ಪಲ್ಲೆಕುದ್ರು ಎಂಬ ಗ್ರಾಮಾಂತರ ಪ್ರದೇಶದ ಮಹಿಳೆಯೊಬ್ಬರು ಅತ್ಯಂತ ಅಪರೂಪದ ಕಲಾಪ್ರಕಾರದಲ್ಲಿ ಅಭಿರುಚಿ ತೋರಿಸುತ್ತಾ ಕಸದಿಂದ ರಸ ತೆಗೆವ ವಿಚಕ್ಷಣ ಪ್ರತಿಭೆ ಹೊಂದಿದ್ದು ಬಾಲ್ಯದ ದಿನಗಳಿಂದಲೇ ತನ್ನ ಸುತ್ತ ಮುತ್ತಲ ಕಸ ಗುಡಿಸಿ ವಠಾರವನ್ನು ಶುದ್ಧವಾಗಿರಿಸುತ್ತಾ ತನ್ನ ಮನೆ ಪರಿಸರದಲ್ಲೇ ಕಾಣ ಸಿಗುವ ಕೆಲವು ಕಸಗಳನ್ನು ಹೆಕ್ಕಿ ಆಯ್ದು ಅವುಗಳಿಗೆ ತನ್ನ ಕಲ್ಪನೆಯ ಆಕಾರ ನೀಡಿ ವರ್ಣರಂಜಿತ ಆಕರ್ಷಕ ವಸ್ತು ವೈವಿಧ್ಯಗಳನ್ನು ಸೃಜಿಸಿ ಕಂಡ ಜನರು ಮೆಚ್ಚಿ ಈಕೆಯ ಪ್ರತಿಭೆಯನ್ನು ಕೊಂಡಾಡುವಾಗ ಆಗುವ ಅಪರಿಮಿತ ಆನಂದವೇ ಮುಂದೆ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಇಂದು ಸುಮತಿ ಶೆಟ್ಟಿ ಅವರ ಕಲಾ ಪ್ರತಿಭೆಗೆ ವ್ಯಾಪಕ ಪ್ರಶಂಸೆ ದೊರೆಯುತ್ತಿದೆ. ಕಲೆಯೇ ಜೀವಾಳವಾಗಿರುವ ಶ್ರೀಮತಿ ಸುಮತಿ ಶೆಟ್ಟಿ ಅವರ ಕಲಾತ್ಮಕ ವಸ್ತುಗಳ ರಚನೆ ಅವರ ಮನೆ ಸುತ್ತ ಹೂದೋಟಗಳಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತದೆ. ಮದುವೆಯದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗನೊಂದಿಗೆ ವೃದ್ಧಾಪ್ಯದ ಜೀವನ…
ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು. ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಹೈನುಗಾರಿಕೆಯ ಮೂಲಕ ಅತ್ಯಪೂರ್ವ ಸಾಧನೆ ಮಾಡಿರುವ ಮೈಮೂನಾ ಮತ್ತು ಮರ್ಝಿನಾ ಅವರು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ “ಸಮಾಜದಲ್ಲಿ ಮಾಧ್ಯಮ ರಂಗ ಮಹತ್ವದ ಸ್ಥಾನವನ್ನು ಪಡೆದಿದೆ. ಗುರು, ಹಿರಿಯರನ್ನು ಗೌರವಿಸಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ” ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ರವಿ ಪೊಸವಣಿಕೆ, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ, ಕೃಷ್ಣ ಕೋಲ್ಚಾರ್, ರಾಜೇಶ್ ಕಿಣಿ, ಅಶೋಕ್ ಶೆಟ್ಟಿ ಬಿ.ಎನ್., ರವೀಂದ್ರ ಶೆಟ್ಟಿ ಕುತ್ತೆತ್ತೂರು, ಶರತ್…
ಬಾಂಬೆ ಬಂಟ್ಸ್ ಅಸೋಷಿಯೇಶನ್ನಿನ ಮಹಿಳಾ ವಿಭಾಗದ ವತಿಯಿಂದ “ನಾರಿ ಉತ್ಸವ” ಕಾರ್ಯಕ್ರಮವು ಪ್ರತಿಭಾವಂತ ಮಹಿಳೆಯರಿಂದ ಡ್ಯಾನ್ಸ್, ಕಿರು ರೂಪಕ ಹಾಗೂ ಅನೇಕ ವೈವಿದ್ಯಮಯ ಕಾರ್ಯಕ್ರಮಗಳು ಮಾರ್ಚ್ 9 ರಂದು ಶನಿವಾರ ಜುಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಿಎ ಸುರೇಂದ್ರ ಕೆ ಶೆಟ್ಟಿ ಅವರು ಮಾತನಾಡುತ್ತಾ ನಮಗೆ ಜನ್ಮ ನೀಡಿದ ತಾಯಿ, ಜನ್ಮ ತೆತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎನ್ನಲಾಗುತ್ತಿದೆ. ಮಹಿಳೆಯನ್ನು ಗೌರವ, ಪ್ರೀತಿ, ವಾತ್ಸಲ್ಯದಿಂದ ಕಾಣುವ ಅಂತಹ ಸಂಸ್ಥೆ ಮತ್ತು ಮನೆ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಇಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ ಎಲ್ಲಾ ಮೂವರು ಮಹಿಳಾ ಶಕ್ತಿಗಳು ನಮ್ಮ ಸಂಸ್ಥೆಗೆ ವಿಶೇಷ ಶೋಭೆಯನ್ನು ತಂದಿದ್ದಾರೆ.…