Author: admin

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಯೋಜನೆಗೊಂಡ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಭಾನುವಾರ ಸಂಪನ್ನಗೊಂಡಿತು. ಮಹಾಮೇಳದ ಮೂರನೇ ಹಾಗೂ ಕೊನೆಯ ದಿನದಂದು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಸ್ವಚ್ಛತಾ ಸೇನಾನಿಗಳ ಸೇವೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ  ನೀಡಲಾಗುತ್ತದೆ. ಆಳ್ವಾಸ್ ನುಡಿಸಿರಿ, ಜಂಬೂರಿ , ವಿರಾಸತ್‍ನಂತಹ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ವೈಭವದ ಜೊತೆ ಜೊತೆಯಲ್ಲಿ ಸ್ವಚ್ಛತೆಯೆಡೆಗಿನ ಕಾಳಜಿ ಎಲ್ಲರ ಮನಗೆಲ್ಲುತ್ತದೆ. ಅದೇ ರೀತಿ ಈ ಭಾರಿಯ ಸಮೃದ್ಧಿ ಹಲಸು – ವೈವಿದ್ಯಮಯ ಹಣ್ಣುಗಳ ಆಹಾರೋತ್ಸವ ಹಾಗೂ ಕೃಷಿಪರೀಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದಲ್ಲಿ ಸಾವಿರಾರು ಜನರು ಸೇರಿದ್ದರೂ ಸಂಸ್ಥೆಯ ಸ್ವಚ್ಛತಾ ಸೇನಾನಿಗಳು ಅಹರ್ನಿಶಿ ದುಡಿದಿದ್ದಾರೆ. ಸುಮಾರು 30 ಜನ ಕಾರ್ಮಿಕರು ಬೆಳಿಗ್ಗೆ 7:30…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ನಡೆಯುತ್ತಿರುವ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದ ಎರಡನೇ ದಿನವೂ ಉತ್ತಮ ಜನಸ್ಪಂದನೆ ದೊರೆಯಿತು. ಮೂರು ದಿನಗಳ ಮೇಳದಲ್ಲಿ ಒಟ್ಟು 287 ಸ್ಟಾಲ್‍ಗಳನ್ನು ಪಾಲ್ಗೊಂಡಿದ್ದು, ಮೊದಲ ದಿನ 15000 ದಷ್ಟು ಜನರು ಪಾಲ್ಗೊಂಡರೆ, ಎರಡನೇ ದಿನ ಶನಿವಾರ 20000 ಕ್ಕೂ ಅಧಿಕ ಜನ ಆಗಮಿಸಿದರು. ಕೇರಳದ ಪಾಲಕ್ಕಾಡ್‍ನಿಂದ ಆಗಮಿಸಿದ್ದ, ಜಯಚಂದ್ರ ವಿವಿಧ ಬಗೆಯ ತರಕಾರಿ ಬೀಜಗಳ ಸ್ಟಾಲ್ ತೆರೆದಿದ್ದು, ತರಹೇವಾರಿ ಬೀಜಗಳ ಸಂಗ್ರಹ ಅವರ ಬಳಿಯಲ್ಲಿತ್ತು. ಅಲಸಂಡೆಯ 6 ತರಹದ ಬೀಜ, ಬೆಂಡೆಯ 3 ತರಹದ ಬೀಜ, ಬದನೆಯ 2 ತರಹದ ಬೀಜಗಳು ಲಭ್ಯವಿರುವುದಲ್ಲದೇ, ಒಟ್ಟು 60 ಬಗೆಯ ತರಕಾರಿ, ಹೂವು ಹಣ್ಣುಗಳ ಬೀಜಗಳು ವ್ಯಾಪಾರಕ್ಕೆ ಲಭ್ಯವಿದ್ದವು. ಚಿಕ್ಕ ಪ್ಯಾಕೆಟ್‍ನಲ್ಲಿ ಲಭ್ಯವಿದ್ದ ಬೀಜಗಳಿಗೆ 20ರೂ ಮುಖಬೆಲೆಯಾದರೆ, 3…

Read More

ದೇವರಲ್ಲಿ ಅರ್ಪಣಾ ಭಾವದ ಭಕ್ತಿ, ಸತತ ಪರಿಶ್ರಮ, ಸಮಾಜದ ಸತತ ಸಂಪರ್ಕಗಳಿಂದ ಇಂದು ಬಂಟ ಸಮುದಾಯ ಮಾತ್ರವಲ್ಲ ಸಮಸ್ತ ಮಾನವ ಸಮುದಾಯದ ಮಧ್ಯೆ ಧ್ರುವತಾರೆಯಂತೆ ಪ್ರಕಾಶಮಾನರಾಗಿರುವ ಪ್ರಕಾಶ್ ಶೆಟ್ಟರ ಹೆಸರು ಇಂದು ಅನ್ವರ್ಥವಾಗಿದೆ. ಪ್ರಕಾಶ್ ಶೆಟ್ಟರು ತಾನು ಬೆಳೆಯುತ್ತಿರುವಂತೆಯೇ ತಾನು ಹುಟ್ಟಿದ ಸಮುದಾಯದ ಏಳಿಗೆಗೂ ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬಹು ಎತ್ತರಕ್ಕೇರಿದರೂ ತಮ್ಮ ಸ್ನೇಹ ಸೌಹಾರ್ದ ಆತ್ಮೀಯತೆಗಳಿಂದ ಎಂಥವರನ್ನೂ ತನ್ನ ಮಿತ್ರವಲಯಕ್ಕೆ ಸೇರಿಸಿಕೊಳ್ಳುವ ಅತ್ಯಂತ ಉದಾರಿ ಸಜ್ಜನ. ತನ್ನ ಹೋಟೆಲ್ ಉದ್ಯಮದಲ್ಲಿ ಗ್ರಾಹಕರನ್ನೂ ತನ್ನ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾ ಅವರ ಅವಶ್ಯಕತೆ ಏನೇ ಇರಲಿ, ದೂರುಗಳಿರಲಿ, ಶ್ಲಾಘನೆ ಇರಲಿ ಎಲ್ಲವನ್ನೂ ಸಮಚಿತ್ತದಿಂದ ಆಲಿಸುವ ತಮ್ಮ ವಿಶಿಷ್ಟ ಗುಣ ಇಂದು ಹೋಟೆಲ್ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಕೀರ್ತಿಶಿಖರದ ತುತ್ತ ತುದಿಯಲ್ಲಿದ್ದರೂ ತಮ್ಮ ದೃಷ್ಠಿ ತಾನು ಹುಟ್ಟಿ ಬೆಳೆದ ನೆಲದ ತಳದಲ್ಲಿದೆ. ಇವರ ಸಮಾಜಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಜೂನ್ 15 ರಂದು ಮಂಗಳೂರು ವಿ.ವಿ 42 ನೇಯ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ…

Read More

ಜಿಲ್ಲಾ ಬಂಟರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸುರಭೀಸ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ಲಯನ್ ಸಂಜೀತ್ ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಇವರನ್ನು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಎಲ್ಲಾ ನಿರ್ದೇಶಕರ ಸಹಮತದೊಂದಿಗೆ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಂಜೀತ್ ಶೆಟ್ಟಿ ಅವರು ಹಿಂದೆ ಜಿಲ್ಲಾ ಲಯನ್ಸ್ ರಾಜ್ಯಪಾಲರಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು. ಇವರ ಅಧ್ಯಕ್ಷತೆಯ ಅವಧಿಯಲ್ಲಿ ಹಾಸನ ಜಿಲ್ಲಾ ಬಂಟರ ಸಂಘದಿಂದ ಉತ್ತಮ ಕಾರ್ಯಗಳು ರೂಪುಗೊಳ್ಳಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯು ಶುಭ ಹಾರೈಸುತ್ತದೆ.

Read More

ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕರಾದ ಅನಿತಾ ರವಿಶಂಕರ್ ರಾವ್, ಕೋಶಾಧಿಕಾರಿಯಾಗಿ ಮಾಜಿ ಸೈನಿಕರಾದ ಜೆ.ಪಿ.ರೈ ಮುನ್ನೂರು ಇವರು ಆಯ್ಕೆಯಾಗಿದ್ದಾರೆ. ಸೌಮ್ಯ ಆರ್ ಶೆಟ್ಟಿಯವರು ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ, ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ರವೀಂದ್ರ ಕೆ ಶೆಟ್ಟಿ ಉಳಿದೊಟ್ಟು ಅವರ ಧರ್ಮಪತ್ನಿ.

Read More

ಪೊಳಲಿಯಲ್ಲಿರುವ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ಪಲ್ಲಿಪಾಡಿ ಎಂಬಲ್ಲಿ ಸುಮಾರು 6 ಎಕರೆ ಜಮೀನಿನಲ್ಲಿ ರೂ.75 ಕೋಟಿ ವೆಚ್ಚದಲ್ಲಿ ಆಧುನಿಕ ಮತ್ತು ಗುರುಕುಲ ಮಾದರಿಯ ಹೈಟೆಕ್ ಶಿಕ್ಷಣಕ್ಕೆ ಒತ್ತುನೀಡುವ ನಿಟ್ಟಿನಲ್ಲಿ “ರಾಮಕೃಷ್ಣ ವಿದ್ಯಾದೇಗುಲ” ಎಂಬ ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಕ್ಕೆ ಜೂನ್ 16 ರಂದು ಆದಿತ್ಯವಾರ ಬೆಳಿಗ್ಗೆ 8.30 ಗಂಟೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.

Read More

ವಿದ್ಯಾಗಿರಿ: ಹೊಸ ಆವಿಷ್ಕಾರಗಳಿಗೆ ಎಲ್ಲ ಅವಶ್ಯಕತೆಗಳೇ ಮೂಲ ಕಾರಣ ಎಂದು ಏಸ್ ಪುಡ್ಸ್ ಮಾರಾಟ ಮತ್ತು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಸುಧೀಂದ್ರ ಕಾಮತ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣಲ್ಲಿ ಸ್ನಾತಕೋತ್ತರ ಪದವಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ವತಿಯಿಂದ ನಡೆದ ‘ನ್ಯೂಟ್ರಿಗೇಟ್: ಕ್ಲಿನಿಕಲ್ಒ ಳನೋಟಗಳು ಮತ್ತು ಉತ್ಪನ್ನ ನಾವೀನ್ಯತೆಗಳ ಪ್ರದರ್ಶನ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವಶ್ಯಕತೆ ಮತ್ತು ಅನಿವಾರ್ಯತೆಗೆ ವ್ಯತ್ಯಾಸವಿದೆ. ಇರುವುದರಲ್ಲೇ ನಡೆಸಿಕೊಂಡು ಹೋಗುವುದು ಅನಿವಾರ್ಯತೆ. ಆದರೆ, ಅವಶ್ಯಕತೆ ಎನ್ನುವುದು ಬೇಕಾದದ್ದಕ್ಕೂ ಮೀರಿ ಬಯಸುವುದು. ಉತ್ಪನ್ನಗಳ ಆವಿಷ್ಕಾರ, ಆವಿಷ್ಕಾರಗಳ ಅವಶ್ಯಕತೆ ಏನು ಎನ್ನುವುದು ನಮಗೆಲ್ಲರಿಗೂ ತಿಳಿದಿರಬೇಕು. ಯಾವುದೇ ಉತ್ಪನ್ನಗಳು ಮಾರುಕಟ್ಟೆಗೆ ತಲುಪುವಾಗ ಪ್ರಾಡಕ್ಟ್ (ಉತ್ಪನ್ನ), ಪ್ರೈಸ್(ಬೆಲೆ), ಪ್ರಮೋಷನ್(ಪ್ರಚಾರ), ಪ್ಲೇಸ್(ಸ್ಥಳ) ಇವುಗಳು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಉತ್ಪನ್ನ ಯಾಕೆ ತಯಾರಾಗಬೇಕು, ಉತ್ಪನ್ನ ತಯಾರಾಗಿ ಎಷ್ಟು ಬೆಲೆಯಲ್ಲಿ ಮಾರುಕಟ್ಟೆಗೆ ತಲುಪಬೇಕು, ಅದರ ಪ್ರಚಾರ ಯಾವ ರೀತಿ ಇರಬೇಕು, ಯಾವ ಪ್ರದೇಶದಲ್ಲಿ ಆ ಉತ್ಪನ್ನ ತಲುಪಬೇಕು ಎನ್ನುವುದು ತಿಳಿದಿರುವುದು…

Read More

ವಿದ್ಯಾಗಿರಿ: ‘ಭಾರತೀಯ ಸಂಸ್ಕøತಿಯ ಮೂಲವೇ ಕೃಷಿ. ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ‘ಆಳ್ವಾಸ್’ ನೆಲದ ಸಂಸ್ಕøತಿಯನ್ನು ಪೋಷಿಸುವ ಕೆಲಸ ಮಾಡುತ್ತಿದೆ’ ಎಂದು ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆಯಲಿರುವ ಎರಡನೇ ವರ್ಷದ ‘ಸಮೃದ್ಧಿ’ – ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಆಹಾರೋತ್ಸವ ಮಹಾಮೇಳ ಸಮಿತಿ, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೃಷಿ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಮೇಳ ಹಮ್ಮಿಕೊಳ್ಳಲಾಗಿದ್ದು, ಜೂನ್ 14ರಿಂದ 16ರ ವರೆಗೆ ನಡೆಯಲಿದೆ. ನಮ್ಮದು ಕೃಷಿ ಮತ್ತು ಋಷಿ ಸಂಸ್ಕøತಿಯ ದೇಶ. ಇವೆರಡೂ ತ್ಯಾಗ ಮತ್ತು ಆರಾಧನಾ ಸಂಸ್ಕೃತಿ. ತುಳುನಾಡಿನ ಸಂಸ್ಕøತಿ ಕೃಷಿ ಮೂಲದ್ದು. ಕೃಷಿಯಿಂದ ಇಲ್ಲದೇ ಸಂಸ್ಕøತಿ ಇಲ್ಲ ಎಂದರು. ಮಿಜಾರುಗುತ್ತು ಆನಂದ ಆಳ್ವ…

Read More

ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಬಳಿಕ ಮಾತಾಡಿದ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಛೇರ್ಮನ್ ಗಣೇಶ್ ರಾವ್ ಅವರು, “ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಿನಿಮಾ ತಂಡವನ್ನು ನೋಡಿದರೆ ಖಂಡಿತ ಈ ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಚಿತ್ರ ತಂಡದಿಂದ ಇನ್ನಷ್ಟು ಸದಭಿರುಚಿಯ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ” ಎಂದು ಶುಭ ಹಾರೈಸಿದರು. ಬಳಿಕ ಮಾತಾಡಿದ ಅರವಿಂದ್ ಬೋಳಾರ್, “ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ.…

Read More

ದರ್ಶನ್ ಜನ್ಮತ ದುಷ್ಟ ಖಂಡಿತ ಅಲ್ಲ! ಆತನನ್ನ ಬಲ್ಲವರನ್ನ ಮಾತಾಡಿಸಿದ್ದೇನೆ. ಯಶಸ್ಸು ಮತ್ತು ದುಡ್ಡು ಬರತೊಡಗಿದಾಗ ಅದರ ಜೊತೆಗೇ ಇನ್ನೊಂದೂ ಬಂದೇ ಬಿಡೋತ್ತೆ! ಅದರ ಹೆಸರು “ದುರ್ಮದ”. ಅದು ಬಂದು ಹೆಗಲೇರಿದಾಗ ಭುಜ ಕೊಡವಿಕೊಂಡು ನೀವು ಹೊರಟಿರೋ? ಫೈನ್. ನೀವು ಬಚಾವ್! ಅದನ್ನ ಬಿಟ್ಟು ಆ ದುಷ್ಟ ಮದದ ನೆತ್ತಿ ಸವರಿದರೆ ಅದು ತಲೆ ಏರಿ ಕುಳಿತು ಬಿಡುತ್ತದೆ. ಮನುಷ್ಯನೊಳಗಿನ ಮನುಷ್ಯತ್ವ ನಾಶವಾಗಲು ಅದು ಕಾರಣವಾಗುತ್ತದೆ. ದರ್ಶನ್ ಯಶಸ್ವಿಯಾಗುತ್ತಿದ್ದ ಹಾಗೇ ಆತನ ಸುತ್ತ ನೆರೆದ ಮಿತ್ರಕೂಟವೇ ಒಂದು ದುಷ್ಟಕೂಟ. ಕುಡಿತ, ಅಮಲು, ಹೆಣ್ಣು ಮತ್ತು ಕ್ರೈಮ್ ವ್ಯಸನಿಗಳನ್ನ ನಾನು ಎಂದಿಗೂ ಒಂದು ಅನುಮಾನದಲ್ಲೇ ನೋಡುತ್ತೇನೆ. ಓರ್ವ ಪರಮ ಕುಡುಕ ಮತ್ತು ಕ್ರೈಮ್ ಥ್ರಿಲ್ ಇರುವವ ಎಷ್ಟೇ ಮುಗ್ಧನಾಗಿದ್ದರೂ ಆತನೊಳಗೆ ರಾಕ್ಷಸ ಆರಾಮಾಗಿ ಬಂದು ಕೂಡುತ್ತಾನೆ. ಆತನ ಒಳ ಮನದ ಬಾಗಿಲಿಗೆ ಚಿಲಕವೇ ಇಲ್ಲ! ದರ್ಶನ್ ಮಾಡಿದ ತಪ್ಪೇ ಇದು. ಆತ ಹುಟ್ಟಾ ದುಷ್ಟನಲ್ಲ. ದುಷ್ಟರ ಸಹವಾಸಕ್ಕೆ ಬಿದ್ದವ. ದುಷ್ಟ ಸಾಹಸದ ಹುಚ್ಚು…

Read More