Author: admin
ಜನವರಿ 7 ರಂದು ಏಕ ವಿಂಶತಿ ವರ್ಷದ ಮಕ್ಕಳ ವಾರ್ಷಿಕ ಪರ್ವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮಾಚರಣೆಯಲ್ಲಿ ಚಿಣ್ಣರ ಬಿಂಬ
ಮಾನವೀಯ ಮೌಲ್ಯಗಳಿಲ್ಲದ ಮನುಷ್ಯ ಚಿಗುರೊಡೆಯದ ಕೊರಡಿನಂತೆ, ಬರಡಾದ ಬಂಜರು ಭೂಮಿಯಂತೆ, ಘಮವಿಲ್ಲದ ಹೂವಿನಂತೆ, ಎಲೆಗಳಿಲ್ಲದ ಬೋಳು ವೃಕ್ಷದಂತೆ..! ಹೌದು, ಘಮವಿಲ್ಲದ ಹೂವಿನಲ್ಲಿ ಪರಿಮಳವನ್ನು ಆಘ್ರಾಣಿಸಲು ಸಾಧ್ಯವೇ? ಬೋಳು ವೃಕ್ಷದಲ್ಲಿ ನಿಸರ್ಗದ ಸೊಬಗನ್ನು ಆಸ್ವಾದಿಸಬಹುದೇ? ಬಂಜರು ಭೂಮಿಯಲ್ಲಿ ಸೃಷ್ಟಿಯ ಚೆಲುವನ್ನು ಸವಿಯಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ…! ಹಾಗೆಯೇ ಒಬ್ಬ ವಿದ್ಯಾವಂತನಾಗಿದ್ದು ಹಣವಂತನಾಗಿದ್ದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದರೂ ಕೂಡಾ ಆತನಲ್ಲಿ ಉತ್ತಮ ನಡವಳಿಕೆಗಳು, ಸಂಸ್ಕಾರವು ಇಲ್ಲದಿದ್ದರೆ ಆತನು ಮೃಗಗಳಿಗೆ ಸಮಾನ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಒಬ್ಬ ವ್ಯಕ್ತಿಯ ಬದುಕನ್ನು ಸುಂದರವಾಗಿಸುವುದಲ್ಲದೆ ಸಮಾಜದಲ್ಲಿ ಗೌರವ, ಘನತೆ ವೃದ್ಧಿಸಿ ಆತನನ್ನು ಉಚ್ಚ ಮಟ್ಟಕ್ಕೇರಿಸುತ್ತದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಮಿಳಿತವಾದರೆ ಮಾತ್ರ ಅವರು ಸದ್ಗುಣ ಸಂಪನ್ನರಾಗಬಹುದು. ಇವನ್ನೆಲ್ಲಾ ಮನಗಂಡು ಮಕ್ಕಳಿಗಾಗಿ ಸಂಸ್ಕೃತಿ ಸಂಸ್ಕಾರವನ್ನು ತಿಳಿಸಿ ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡಬೇಕೆಂಬ ಹಿತಾಸಕ್ತಿಯಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ಚಿಣ್ಣರ ಬಿಂಬ. ಅಂತಹ ಒಂದು ವಿಶೇಷವಾದ ಶಿಕ್ಷಣವನ್ನು ನೀಡುವ ಗುರುಕುಲದಂತೆ ಕೆಲಸ ಮಾಡಿ ಇದು ಮಾನ್ಯತೆ ಪಡೆಯುತ್ತದೆ. ಚಿಣ್ಣರ ಬಿಂಬವು…
ನಿಟ್ಟೆ ವಿಶ್ವವಿದ್ಯಾಲಯದ ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ
ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಸುಮಾರು 21000 ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘ Wenamitaa ಇದರ 2023-25 ರ ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿ ಶ್ರೀ ಜೀವನ್ ಕೆ. ಶೆಟ್ಟಿಯವರು ದಿನಾಂಕ 30-12-2023 ರಂದು ನಿಟ್ಟೆ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಜೀವನ್ ಕೆ. ಶೆಟ್ಟಿ ಇವರು 1996 ರಲ್ಲಿ Bachelor in Civil Engineer (B.E.) ಹಾಗೂ 2015ರಲ್ಲಿ Master of Construction Technology (M.Tech) ನಲ್ಲಿ ಪದವಿ ಪಡೆದಿರುತ್ತಾರೆ. 1996 ರಿಂದ 1998 ರವರೆಗೆ NRAM ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ (ACEM) ನ ಸ್ಥಾಪಕಾಧ್ಯಕ್ಷರಾಗಿ, ಇಂಡಿಯನ್ ರೋಡ್ ಕಾಂಗ್ರೆಸ್ (IRC) ನವದೆಹಲಿ ಇದರ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಿರಂಜನ್ ಚಿಪ್ಲೋಂಕರ್, ಡೈರೆಕ್ಟರ್ ಗಳಾದ ಯೋಗೀಶ್ ಹೆಗ್ಡೆ, ಪ್ರಸನ್ನ…
ವಿಶ್ವವಿದ್ಯಾನಿಲಯ ಕಾಲೇಜುಡ್ ಅಪ್ಪೆ ಎನ್ನಪ್ಪೆ ತುಳು ನಾಟಕ ಪ್ರದರ್ಶನನ್ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜುದ ಪ್ರಾಂಶುಪಾಲರಾಯಿನ ಡಾ. ಲಕ್ಷ್ಮೀ ದೇವಿ. ಎಲ್ ತುಡರ್ ಪೊತ್ತದ್ ಉದಿಪನ ಮಲ್ದೆರ್. ತುಳು ಎಂ. ಎ ಸ್ನಾತ್ತಕೋತ್ತರ ಅಧ್ಯಯನ ವಿಭಾಗದ ಉಪಾನ್ಯಾಸಕಿ ಶ್ರೀಮತಿ ಮಣಿ. ಎಂ. ರೈ ಪ್ರಾರ್ಥನೆ ಮಂತೆರ್. ತುಳು ಎಂ. ಎ ಉಪನ್ಯಾಸಕಿ ಶ್ರೀಮತಿ ಸಂಧ್ಯಾ ಆಳ್ವ ಕಾರ್ಯಕ್ರಮನ್ ನಿರೂಪಣೆ ಮಂತ್ ದ್ ಸೊಲ್ಮೆಲ್ ಸಂದಿಸಯೆರ್. ಶ್ರೀ ಪ್ರಸಾದ್ ಅಂಚನ್ ಕಾರ್ಯಕ್ರಮಗ್ ಸಹಕಾರ ಕೊರ್ತೆರ್. ಸಭಾ ಕಾರ್ಯಕ್ರಮ ಆಯಿ ಬೊಕ್ಕ ಶ್ರೀ. ಗುರುರಾಜ ಮಾರ್ಪಳ್ಳಿ ನಿರ್ದೇಶನ ಮಂತಿನ ‘ಅಪ್ಪೆ ಎನ್ನಪ್ಪೆ’ ತುಳು ನಾಟಕ ಪ್ರದರ್ಶನ ಆಂಡ್. ಕಾರ್ಯಕ್ರಮಡ್ ಮಾಜಿ ಉಪಮೆಯರ್ ಬಶೀರ್ ಬೈಕಂಪಾಡಿ, ಡಾ. ಮಾಧವ ಎಂ, ಸುಕುಮಾರ್ ಮೋಹನ್, ಡಾ. ರಾಜೇಶ್ ಆಳ್ವ, ಡಾ. ಯತೀಶ್ ಕುಮಾರ್ ಪಾಲ್ ಪಡೆದ್ ಇತ್ತೆರ್.
ಯುವಶಕ್ತಿ ನಿಜವಾದ ರಾಷ್ಟ್ರಶಕ್ತಿ ಎಂಬ ಘೋಷ ವಾಕ್ಯವನ್ನು ಆಗಾಗ ಉಲ್ಲೇಖಿಸುವ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಮೋದೀಜಿಯವರ ಮಹಾದಿಚ್ಛೆಗೆ ಬಲ ತುಂಬುವ ಮಹಾನ್ ಕಾರ್ಯನಿರತ ರಾಕೇಶ್ ಅಜಿಲರ ಸಾಧನೆಯ ಕತೆ ನಿಜಕ್ಕೂ ರೋಚನೀಯ. ಅಜಿಲರು ಆರಿಸಿದ ಕ್ಷೇತ್ರ ಹಣ ಸಂಪಾದನೆಯದಲ್ಲ. ಆದರೆ ಅದೆಷ್ಟೋ ರಾಷ್ಟ್ರಪ್ರೇಮಿ ಯುವಕರಿಗೆ ಯೋಗ್ಯ ತರಬೇತಿ ನೀಡಿ NCC ಮತ್ತು ARMY ಗೆ ಆಯ್ಕೆಯಾಗಲು ಬೇಕಾಗುವ ಶಿಸ್ತು, ಆತ್ಮಸ್ಥೈರ್ಯ, ಕಷ್ಟ ಸಹಿಷ್ಣುತೆ, ದೇಹಬಲ ಹಾಗೂ ರಾಷ್ಟ್ರ ಪ್ರೇಮದ ತೇಜಸ್ಸು ತುಂಬುವ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನೆನೆಸಿಕೊಂಡರೆ ಯಾರಿಗಾದರೂ ಅಭಿಮಾನ ಮೂಡದೇ ಇರದು. ರಾಕೇಶ್ ಅಜಿಲರು ಕವತ್ತಾರು ಬೈಲಗುತ್ತು ರಮೇಶ್ ಅಜಿಲ ಹಾಗೂ ಪಾಂಡ್ಯಾರು ಬರ್ಪಾಣಿ ಪ್ರಮೀಳಾ ಅಜಿಲ ದಂಪತಿಯರಿಗೆ ಹಿರಿಯ ಪುತ್ರನಾಗಿ ಜನಿಸಿದರು. ಹಾಸನದ ಕಡ್ಲೂರು ಎಂಬಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಮುಂದೆ STDP ಕಟೀಲು ಹಾಗೂ ಪೂರ್ಣ ಪ್ರಜ್ಞ ಅದಮಾರು ಇಲ್ಲಿ ಶಿಕ್ಷಣ ಮುಂದುವರಿಸಿದರು. ಪದವಿ ಪೂರ್ವ ತರಗತಿಯ ಹನ್ನೆರಡನೆ ತರಗತಿಯ ಇತಿಹಾಸ ವಿಷಯದಲ್ಲಿ ರಾಜ್ಯಕ್ಕೆ ಮೂರನೇ…
ದಿನಾಂಕ 31-12-2023 ರಂದು ಸುಳ್ಯ ಬಂಟರ ಭವನದಲ್ಲಿ ಬಂಟರ ಯಾನೆ ನಾಡವರ ಸಂಘ (ರಿ.)ಸುಳ್ಯ ಇದರ ವತಿಯಿಂದ ಆಯೋಜಿಸಲಾದ “ಬಂಟರ ಸಮಾವೇಶ” ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು. ಶ್ರೀ ಗುರುದೇವದತ್ತ ಸಂಸ್ಥಾಪನಮ್ ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ. ಎ ಸದಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು. ನಂತರ ಶಾಸಕಿ ಭಾಗೀರತಿ ಮುರುಳ್ಯ, ಶ್ರೀ ಪ್ರದೀಪ್ ಕುಮಾರ್ ರೈ ಐಕಳಬಾವ ಹಾಗೂ ಇತರ ಸಾಧಕ ಗಣ್ಯರಾದ ಧೀರಜ್ ರೈ, ಪ್ರಖ್ಯಾತ ಶೆಟ್ಟಿ, ದೇವಿಪ್ರಸಾದ್ ರೈ, ಸನತ್ ಕುಮಾರ್ ಆಳ್ವ, ಸಂದೇಶ್ ರೈ ಹಾಗೂ ಕುಂಟುಪುಣಿ ಪ್ರಮೋದ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಆರ್ಗುಂಡಿ, ರಾಮಕೃಷ್ಣ ರೈ ಮಾಳೆಂಗ್ರಿ, ರಾಮದಾಸ್ ರೈ ಮೊರಂಗಲ್ಲು, ಉದಯ ಕುಮಾರ್ ರೈ ಬಾಳಿಲ, ಸುವರ್ಣ ರೈ ಕೊಂಕಣಿ ಮೂಲೆ, ಗೀತಾ ಉದಯ್ ಕುಮಾರ್ ರೈ…
ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಜನಪ್ರಿಯತೆಯನ್ನು ಪಡೆದಿರುವ ಫಾರ್ಮ್ ಹೌಸ್ ರೆಸ್ಟೋರೆಂಟ್ ದುಬೈನ ಕನ್ನಡಿಗರಿಗೆ ಸವಿಯನ್ನು ನೀಡಲು ದುಬೈನಲ್ಲಿ ಇತ್ತೀಚೆಗೆ ಇದರ ಬ್ರಾಂಚ್ ಉದ್ಘಾಟನೆಗೊಂಡಿತು. ಮಾಂಸಹಾರಿ ಹಾಗೂ ಸಸ್ಯಹಾರಿ ತಿಂಡಿ ತಿನಿಸುಗಳಲ್ಲಿ ಖ್ಯಾತಿಯನ್ನು ಪಡೆದಿರುವ ಫಾರ್ಮ್ ಹೌಸ್ ದುಬೈಯ ಬರ್ ದುಬೈನಲ್ಲಿ ಬ್ರಾಂಚ್ ನ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮಿ ಗ್ರೂಪ್ ಆಫ್ ಹೋಟೆಲ್ ನ ಆಡಳಿತ ನಿರ್ದೇಶಕ ರಾಜ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಗಣ್ಯತಿ ಗಣ್ಯರು ದೀಪವನ್ನು ಬೆಳಗಿಸಿ ಹೋಟೆಲನ್ನು ಉದ್ಘಾಟಿಸಿ ಫಾರ್ಮ್ ಹೌಸ್ ಹೋಟೆಲ್ ನ ಬಗ್ಗೆ ಕೊಂಡಾಡಿ ಶುಭವನ್ನು ಹಾರೈಸಿದರು. ಹೋಟೆಲ್ ನ ಮಾಲಕರಾದ ಹರೀಶ್ ಪಾಂಡು ಶೆಟ್ಟಿ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರನ್ನೂ ಸ್ವಾಗತಿಸಿದರು. ದುಬೈಯ ಗ್ರಾಹಕರಿಗೆ ಶುಚಿ – ರುಚಿಕರವಾದ ಮೀನು- ಮಾಂಸಗಳ ಸವಿಯನ್ನು ನೀಡಲು ತಯರಾಗಿ ನಿಂತಿರುವ ಈ…
ಚುಕ್ಕಿ ಸಂಕುಲ ಆಯೋಜಿಸಿದ ಡಾ. ಕರುಣಾಕರ ಶೆಟ್ಟಿ ಪಣಿಯೂರು (10 ಕೃತಿಗಳು), ಪಾಂಗಾಳ ವಿಶ್ವನಾಥ್ ಶೆಟ್ಟಿ (3 ಕೃತಿಗಳು) ಹಾಗೂ ಶ್ರುತಿ ಅಭಿಷೇಕ್ ಶೆಟ್ಟಿ (1 ಕೃತಿ) ಇವರ ಒಟ್ಟು14 ಕೃತಿಗಳು ಡಿಸೆಂಬರ್ 30 ರಂದು ಥಾಣೆ ಪೂರ್ವದ ವುಡ್ ಲ್ಯಾಂಡ್ ರೆಟ್ರೀಟ್ ನಲ್ಲಿ ಬಿಡುಗಡೆಗೊಂಡವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಚಂದ್ರಹಾಸ್ ಶೆಟ್ಟಿ ವಹಿಸಿದ್ದರು. ಗೌರವ ಅತಿಥಿಗಳಾಗಿ ಆನಂದ್ ಶೆಟ್ಟಿ ಎಕ್ಕಾರು, ಡಿ. ಜಿ. ಬೋಳಾರ್ ಹಾಗೂ ನ್ಯಾಯವಾದಿ ಪದ್ಮನಾಭ ಶೆಟ್ಟಿ ಭಾಗವಹಿಸಿದ್ದರು. ಮುಂಬಯಿಯಲ್ಲಿ ಒಂದೇ ವೇದಿಕೆಯಲ್ಲಿ 14 ಕೃತಿಗಳು ಬಿಡುಗಡೆಗೊಳ್ಳುತ್ತಿರುವುದು ಮುಂಬಯಿ ಸಾಹಿತ್ಯ ಲೋಕಕ್ಕೆ ಒಂದು ಹೆಮ್ಮೆಯ ಸಂಗತಿ. ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಚಂದ್ರಹಾಸ ಶೆಟ್ಟಿ ಅವರು ಸಾಹಿತ್ಯ ಲೋಕ ಒಂದು ಸುಂದರ ಲೋಕ. ಸಾಹಿತಿ ತನ್ನ ಅನುಭವವನ್ನು ಅಕ್ಷರ ರೂಪದಲ್ಲಿ ಲೋಕಕ್ಕೆ ಉಣಬಡಿಸುತ್ತಾನೆ. ಆಧುನಿಕ ಯುಗದಲ್ಲಿ ಸಾಹಿತಿಗಳ ಜವಾಬ್ದಾರಿ ದೊಡ್ಡದು ಎಂದು ಅಭಿಪ್ರಾಯಪಟ್ಟರು. ಕವಿಗಳು ಸಮಾಜವನ್ನು ಸುಧಾರಿಸುವವರು ಎಂಬ ಅನಿಸಿಕೆಯನ್ನು ಡಿ. ಜಿ. ಬೋಳಾರ್ ಅವರು ಹಂಚಿಕೊಂಡರು.…
ಮಲ್ಪೆ ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ಮಲ್ಪೆ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ – 2023 ಜರುಗಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಮಾತನಾಡಿ, “ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಬಹುಮುಖ್ಯ. ಯುವಕರು ಕ್ರೀಡಾಸ್ಪೂರ್ತಿಯಿಂದ ಆಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಹಿಂದೆ ಮಲ್ಪೆ ಪರಿಸರದ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು ಯುವಕರು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ವೀರ ಮಾರುತಿ ಫ್ರೆಂಡ್ಸ್ ಸಾಧನೆ ಶ್ಲಾಘನೀಯ” ಎಂದರು. ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಜಸೇವಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಭವಾನಿ ಗ್ರೂಪ್ ಆಫ್ ಕಂಪನಿಸ್ ನ ಆಡಳಿತ ನಿರ್ದೇಶಕರಾದ ಶ್ರೀ ಕುಸುಮೋಧರ ಶೆಟ್ಟಿ ಚೆಲ್ಲಡ್ಕ ( ಕೆ ಡಿ ಶೆಟ್ಟಿ ) ಅವರ ಹುಟ್ಟುಹಬ್ಬವನ್ನು ಮಂಗಳೂರಿನ ಕೊಟ್ಟಾರದಲ್ಲಿರುವ ಕಚೇರಿಯಲ್ಲಿ ತನ್ನ ನೌಕರ ವೃಂದದವರೊಂದಿಗೆ ಸರಳವಾಗಿ ಆಚರಿಸಿಕೊಂಡರು. ಮುಂಬಯಿ ಕಚೇರಿಯ ನೌಕರ ವೃಂದದವರು ವಿಡಿಯೋ ಕಾಲ್ ಮೂಲಕ ಶುಭ ಹಾರೈಸಿದರು. ಶುಭ ಹಾರೈಸಿದ ಎಲ್ಲರಿಗೂ ಕೆ ಡಿ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕೆ ಡಿ ಶೆಟ್ಟಿಯವರ ಧರ್ಮಪತ್ನಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಸ್ಥಾಪಕ ರಂಜಿತ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ದೊಡ್ಡಮನೆ ಹಾಗೂ ಭವಾನಿ ಗ್ರೂಪ್ ನ ನೌಕರ ವೃಂದದವರು ಉಪಸ್ಥಿತರಿದ್ದರು.
ಆಳ್ವಾಸ್ನ ವರ್ಧಿತ ಜಲಜನಕ ಇಂಧನ ಕೋಶ’ ಕ್ಕೆ ಪೇಟೆಂಟ್ ಅನುಮೋದನೆ ಸುಸ್ಥಿರ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಇಂಧನ: ಆಳ್ವಾಸ್ಎಂ ಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ‘ವರ್ಧಿತ ಜಲಜನಕ ಇಂಧನ ಕೋಶ’
ಮೂಡುಬಿದಿರೆ: ‘ವರ್ಧಿತ ಜಲಜನಕ ಇಂಧನ ಕೋಶ’ (ಹೈಡ್ರೋಜನ್ ಫ್ಯುಯೆಲ್ ಸೆಲ್- ಎಚ್ಎಫ್ಸಿ) ತಂತ್ರಜ್ಞಾನಕ್ಕಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೊದಲ ಪೇಟೆಂಟ್ ಪಡೆದಿದ್ದು, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಾರಥ್ಯದಲ್ಲಿ ಪ್ರಾಧ್ಯಾಪಕ ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಆವಿಷ್ಕಾರವು ಸಾಕಾರಗೊಂಡಿದೆ. ಪ್ರಾಧ್ಯಾಪಕ ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರಾದ ಪ್ರೀತಮ್ ಕ್ಯಾಸ್ಟೆಲಿನೊ, ಜಯರಾಮ ಅರಸಳಿಕೆ, ಸತ್ಯನಾರಾಯಣ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಸೋಹನ್ ಪೂಜಾರಿ, ಸನ್ನಿ ರಾಮ್ನಿವಾಸ್ ಶರ್ಮಾ, ಪ್ರಶಾಂತ್ ಶೇಖರ್ ಪೂಜಾರಿ ಮತ್ತು ಚಿರಾಗ್ ಸತೀಶ್ ಪೂಜಾರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಪೇಟೆಂಟ್ (ಪೇಟೆಂಟ್ ಸಂಖ್ಯೆ -201941035383) ನಾವಿನ್ಯ ಆವಿಷ್ಕಾರವಾಗಿದ್ದು, ‘ಆಲ್ಟ್ರಾ ವಯಲೆಟ್ ಕಿರಣಗಳಿಗೆ ಅತ್ಯುತ್ತಮವಾಗಿ ತೆರೆದುಕೊಂಡ ನೆಫಿಯಾನ್ ಎಂಬ ಪೊರೆಯ ವರ್ಧಿತ ಕಾರ್ಯಕ್ಷಮತೆ ನೀಡುವ ಜಲಜನಕ ಇಂಧನ ಕೋಶ’ ವಾಗಿದೆ. (ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಹ್ಯಾವಿಂಗ್ ಎನ್ಹ್ಯಾನ್ಸ್ಡ್ ಫರ್ಮಾರೆನ್ಸ್ ವಿದ್ ನಫೀಯಾನ್ ಪ್ರೊಟಾನ್ ಎಕ್ಸ್ಚೇಂಜ್ ಮೆಂಬ್ರೇನ್ ಆಪ್ಟಿಮಲ್ ಎಕ್ಸ್ಪೋಸ್ಡ್ ಟು ಆಲ್ಟ್ರಾವಯಲೆಟ್ ರೇಸ್). ಆಳ್ವಾಸ್ ಎಂಜಿನಿಯರಿಂಗ್ ಮತ್ತು…