Author: admin

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕಯ್ಯಾರರ ಕುಟುಂಬ ಜಂಟಿ ಆಶ್ರಯದಲ್ಲಿ ಕಯ್ಯಾರರ ಇಂಜ್ಜಕ್ಕ ನಿವಾಸದಲ್ಲಿ ಕಯ್ಯಾರರ 109 ನೇ ಜನ್ಮ ದಿನಾಚರಣೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾದ ಸುಕುಮಾರ್ ಕುದ್ರೆಪಾಡಿ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಯವರ ಬದುಕು ಹಾಗೂ ಬರಹ ಅನುಸ್ಮರಣೀಯ. ರಾಜಕೀಯ, ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ತೋರಿದ ಅಸಾಮಾನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವಜನರಿಗೆ ಮಾದರಿಯಾಗಬೇಕು. ಕಯ್ಯಾರರ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡಿಗರು ಕನ್ನಡಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವವನ್ನು ಸದಾ ಸ್ಮರಿಸಬೇಕು. ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ ಮುಚ್ಚಿರುವ ಕಯ್ಯಾರರ ಹೆಸರಲ್ಲಿರುವ ಬದಿಯಡ್ಕ ಪಂಚಾಯತು ಪುಸ್ತಕಾಲಯವನ್ನು ತೆರೆದು, ಇನ್ನಷ್ಟು ಸುಸಜ್ಜಿತಗೊಳಿಸಿ ಅದರ…

Read More

ಭಾರತೀಯ ವಿಕಾಸ್ ಟ್ರಸ್ಟ್ ಸಹಯೋಗದೊಂದಿಗೆ ಪಡುಬಿದ್ರಿಯ ವಿಶೇಷ ಆರ್ಥಿಕ ವಲಯದಲ್ಲಿನ ಆಸ್ಪೆನ್ ಇನ್ಫ್ರಾ ಕಂಪೆನಿಯ ಮೂಲಕ 2023-24 ನೇ ಸಾಲಿನ ಸಿಎಸ್ ಆರ್ ನಿಧಿಯಿಂದ ಅನುಷ್ಠಾನಿಸಲಾದ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆಯು ಜೂನ್ 8 ರಂದು ಸಂಜೆ 3 ಕ್ಕೆ ಪಡುಬಿದ್ರಿ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಪಲಿಮಾರು ಹಾಗೂ ಪಡುಬಿದ್ರಿ ಗ್ರಾ. ಪಂ ವ್ಯಾಪ್ತಿಗಳ ವಿವಿಧ ಗ್ರಾಮೀಣ ಶಾಲೆ, ಅಂಗನವಾಡಿಗಳಲ್ಲಿ ಸೋಲಾರ್ ಅಳವಡಿಕೆ, ಇ ಶಾಲಾ ವ್ಯವಸ್ಥೆಗಳೊಂದಿಗೆ ನವೀಕರಣ, ಮಹಿಳಾ ಸಬಲೀಕರಣದ ಮೂಲಕ ಅವರಿಗಾಗಿ ವಿವಿಧ ಸ್ವೋದ್ಯೋಗ ಯೋಜನೆಗಳೇ ಮುಂತಾದ ವಿವಿಧ ಸಂಯೋಜಿತ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆ, ಡಾ. ದೇವಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಜೆ.ಶೆಟ್ಟಿ, ವೈ. ಶಶಿಧರ ಶೆಟ್ಟಿ, ವೈ. ಸುಧೀರ್…

Read More

ಪಡುಬಿದ್ರಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೆ ಒಳಪಟ್ಟ, ಎಸ್.ಬಿ.ವಿ.ಪಿ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢ ಶಾಲೆಯಲ್ಲಿ 2024-2025 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ಮತ್ತು ಎಂಟನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಾಂಡ್ ನೀಡಲು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ, ಶಾಲಾ ಹಳೆ ವಿದ್ಯಾರ್ಥಿ ಮುಂಬಯಿ ಉದ್ಯಮಿ ಪೃಥ್ವಿರಾಜ್ ಹೆಗ್ಡೆ ನಿರ್ಧರಿಸಿದ್ದಾರೆ. ಇದರಂತೆ 1 ನೇ ತರಗತಿಗೆ ಸೇರ್ಪಡೆಗೊಳ್ಳುವ ಪುಟಾಣಿಗಳ ಹೆಸರಲ್ಲೇ 3000 ರೂ. ಮತ್ತು 8 ನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ 2000 ರೂ ಗಳ ಶೈಕ್ಷಣಿಕ ಬಾಂಡ್ ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಶಾಲಾ ವಿದ್ಯಾಭ್ಯಾಸದ ಬಳಿಕ ಅವರಿಗೆ ಮರಳಿ ದೊರೆಯಲಿದೆ. ಹಾಗೆಯೇ ಪ್ರಾಥಮಿಕ ಶಾಲೆ (1-7) ಯ ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸ್ಪೀಕಿಂಗ್ ತರಗತಿಯನ್ನು ಪರಿಣಿತ ಶಿಕ್ಷಕರು ನಡೆಸಲಿದ್ದು, ಇದಕ್ಕೆ ಅವಶ್ಯಕವಿರುವ 350ರೂ. ಮೌಲ್ಯದ ಸ್ಪೀಕಿಂಗ್ ಕೋರ್ಸ್…

Read More

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜತೆಗೆ ಜೀವನಾನುಭವವನ್ನು ಕೂಡಾ ಕಲಿಯಿರಿ. ಆಗ ಬದುಕು ಏನೆಂಬುದು ಅರ್ಥವಾಗುತ್ತದೆ. ನನ್ನ ಬೆಳವಣಿಗೆಗೆ ಭುವನೇಂದ್ರ ಕಾಲೇಜು ಬಹಳ ದೊಡ್ಡ ಮೈಲುಗಲ್ಲು, ಅದರ ಉನ್ನತಿಗಾಗಿ ನನ್ನ ಕಡೆಯಿಂದ ಯಾವತ್ತೂ ನೆರವು ಇರುತ್ತದೆ ಎಂದು ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಹೇಳಿದರು.ಅವರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾಂಶುಪಾಲ ಮಂಜುನಾಥ ಎ. ಕೋಟ್ಯಾನ್, ಕಾಲೇಜಿನ ಏಳಿಗೆಗೆ ಕಾರಣಕರ್ತರಾದ ಹಳೆ ವಿದ್ಯಾರ್ಥಿಗಳ ಪಾತ್ರ ಮತ್ತವರ ಕೊಡುಗೆಯನ್ನು ಸ್ಮರಿಸಿ ದಾನಿಗಳು, ಪ್ರಬುದ್ಧರಿರುವ ಹಳೆ ವಿದ್ಯಾರ್ಥಿ ಸಂಘವಿರುವುದು ನಮ್ಮ ಕಾಲೇಜಿನ ಅದೃಷ್ಟ ಹಾಗೂ ಹೆಮ್ಮೆಯ ವಿಚಾರವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ ಎ. ಶಿವಾನಂದ ಪೈ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ರೀತಿಯಿಂದ ಬೆನ್ನೆಲುಬಾಗಿ ನಿಲ್ಲುವವರು ಹಳೆ ವಿದ್ಯಾರ್ಥಿಗಳು. ದೇಣಿಗೆಯ ಹೊರತಾಗಿಯೂ ಅವರ ಅನುಭವ, ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ. ಕಾಲೇಜಿನ ಬೆಳವಣಿಗೆಗೆ ಕಾರಣರಾದವರನ್ನು ಶ್ಲಾಘಸಿದರು. ಪಿಯುಸಿಯಲ್ಲಿ ಅತೀ…

Read More

ಕಾಟುಕಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಪರಿಸರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಲಸು, ಮಾವು, ಚಿಕ್ಕು, ನಿಂಬೆ ಸಸಿಗಳನ್ನು ನೆಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಾರಾನಾಥ ರೈ ಪಡ್ಡಂಬೈಲುಗುತ್ತು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ವಕೀಲ ಚಂದ್ರಮೋಹನ್, ಎಣ್ಮಕಜೆ ಗ್ರಾ.ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ, ವಾರ್ಡ್ ಸದಸ್ಯ ಬಿ.ಎಸ್. ಗಾಂಭೀರ್ ಅತಿಥಿಗಳಾಗಿದ್ದರು.ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ಕಲ್ಲಗದ್ದೆ , ಚನಿಯಪ್ಪ ಪರಗದ್ದೆ, ರಿತೇಶ್ ಕಿರಣ್ ಕಾಟುಕಕ್ಕೆ, ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಟ್ಟತ್ತಾಡೆ, ಯಶವಂತ ಅರೆಕ್ಕಾಡಿ, ಹಿರಿಯರಾದ ನಾರಾಯಣ ರೈ ಪಡ್ಡಂಬೈಲು, ರಾಧಾಕೃಷ್ಣ ಭಂಡಾರದ ಮನೆ, ನಾರಾಯಣ ಕಲ್ಲಗದ್ದೆ, ಹರೀಶ್ ಪಿಲಿಂಗಲ್ಲು, ಕೃಷ್ಣ ಪೆರ್ಲತಡ್ಕ, ವಿನೋದ್ ಅರೆಕ್ಕಾಡಿ ಮತ್ತು ಧ್ರುವ ಕಾರ್ತಿಕೇಯ ಭಾಗವಹಿಸಿದ್ದರು.

Read More

ಮೂಡುಬಿದಿರೆ: ಜೀವನದಲ್ಲಿ ಅದೃಷ್ಟದ ಜೊತೆಗೆ ಪ್ರಯತ್ನವಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಕಾಣಲು ಸಾಧ್ಯ ಎಂದು ಎಂ ಆರ್ ಜಿ ಗ್ರೂಪ್‍ನ ಸ್ಥಾಪಕಾಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು. ಆಳ್ವಾಸ್ ಪ್ರಗತಿಯ 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಂಸ್ಕೃತಿಕ, ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗದ ಸದಾವಕಾಶವನ್ನು ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯೆ ಬೇಕು ಆದರೆ, ಅದರ ಜೊತೆಗೆ ಸಾಮಾನ್ಯ ಜ್ಞಾನವು ಹೆಚ್ಚು ಅವಶ್ಯಕ. ಯೋಜನೆ, ಆಡಳಿತ, ವ್ಯವಹಾರದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು. ಪ್ರತಿ ಉದ್ಯೋಗಾಕಾಂಕ್ಷಿ ಕಾರ್ಯಪ್ರವೃತ್ತಿ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಇದು ಸಂಪೂರ್ಣವಾಗಿ ಉಚಿತವಾಗಿ ನಡೆಯುವಂತಹ ಬೃಹತ್ ಉದ್ಯೋಗ ಮೇಳ. ಈ ಬಾರಿಯೂ ದೇಶ ವಿದೇಶಗಳಿಂದ…

Read More

ಸಮಾಜದಲ್ಲಿ ನೊಂದವರ ಮತ್ತು ಬಡವರ ಸೇವೆಯೇ ನಮ್ಮ ಟ್ರಸ್ಟ್ ಮೂಲ ಧ್ಯೇಯವಾಗಿದೆ ಎಂದು ರೈ ಎಸ್ಟೇಟ್ಸ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.ಅವರು ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಅರ್ಕ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಇಬ್ರಾಹಿಂ, ಖಾದರ್ ಕಲ್ಲಂದಡ್ಕ ಮತ್ತು ಬಾಲಕೃಷ್ಣ ಇವರು ಕೊಡುಗೆಯಾಗಿ ನೀಡಿದ ಕೊಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೊಡಿಪ್ಪಾಡಿ ಗ್ರಾ.ಪಂ ಅಧ್ಯಕ್ಷ ಸೋಮಪ್ಪ ಪೂಜಾರಿ, ಕೇಶವ ಪೆಲತ್ತಡಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುರೇಖಾ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಸುರೇಖಾ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಚಿತ್ರಕಲಾ ಸ್ವಾಗತಿಸಿ, ಸಹ ಶಿಕ್ಷಕಿ ಅಶ್ವಿನಿ ವಂದಿಸಿದರು.

Read More

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ 2022-23ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಕಾಲೇಜು ಪಾರಮ್ಯ ಮೆರೆದಿದೆ. ಪದವಿ, ಸ್ನಾತಕೋತ್ತರ, ಶಿಕ್ಷಣ (ಬಿಇಡಿ) ಹಾಗೂ ದೈಹಿಕ ಶಿಕ್ಷಣ (ಬಿಪಿಇಡಿ) ವಿಭಾಗಗಳಲ್ಲಿ ಕಾಲೇಜಿಗೆ ಒಟ್ಟು 24 ರ‍್ಯಾಂಕ್ ಲಭಿಸಿವೆ. ಪದವಿ ರ‍್ಯಾಂಕ್ ಗಳು: ಬಿಎಸ್ಸಿ ಫುಡ್, ನ್ಯೂಟ್ರಿಷನ್‍ಆ್ಯಂಡ್ ಡಯಟಿಕ್ಸ್ ವಿಭಾಗದಲ್ಲಿ ದ್ಯುತಿರಾವ್ (1ನೇ ರ‍್ಯಾಂಕ್), ರಚನಾ (3ನೇ ರ‍್ಯಾಂಕ್), ಅರ್ಪಿತಾ (7ನೇ ರ‍್ಯಾಂಕ್), ಬಿಎಸ್ಸಿ ವಿಭಾಗದಲ್ಲಿ ನಿರೀಕ್ಷಾ (8ನೇ ರ‍್ಯಾಂಕ್), ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ವಿಭಾಗದಲ್ಲಿ ರಮ್ಯಾ (2ನೇರ‍್ಯಾಂಕ್), ಬಿಕಾಂ. ವಿಭಾಗದಲ್ಲಿ ಗ್ರೀಷ್ಮಾ (1ನೇ ರ‍್ಯಾಂಕ್), ಬಿಎ – ಎಚ್‍ಆರ್‍ಡಿ ವಿಭಾಗದಲ್ಲಿ ಸ್ವಾತಿ ನಾಯಕ್ (2ನೇ ರ‍್ಯಾಂಕ್) ಪಡೆದಿದ್ದಾರೆ.ಬಿಬಿಎ ವಿಭಾಗದಲ್ಲಿ ಸಂಪಾ ದಾಸ್ (6ನೇ ರ‍್ಯಾಂಕ್), ಎಂ. ಸೌಮ್ಯ (7ನೇ ರ‍್ಯಾಂಕ್), ಭೂಮಿಕಾ ಬಿಎಚ್ (8ನೇ ರ‍್ಯಾಂಕ್), ಬಿಎಸ್‍ಡಬ್ಲೂ ವಿಭಾಗದಲ್ಲಿ ಐಶ್ವರ್ಯಎಸ್ (3ನೇರ‍್ಯಾಂಕ್), ಬಿಸಿಎ ವಿಭಾಗದಲ್ಲಿ ಪೃಥ್ವಿ (5ನೇ ರ‍್ಯಾಂಕ್) ಬಿಎ ವಿಭಾಗದಲ್ಲಿ ಶ್ರೀಲಕ್ಷೀ (4ನೇ ರ‍್ಯಾಂಕ್) ಸ್ನಾತಕೋತ್ತರ ರ‍್ಯಾಂಕ್: ಎಂಎ ಇಂಗ್ಲಿಷ್ ವಿಭಾಗದಲ್ಲಿ ಅಫ್ರಾ…

Read More

ಭೂಮಿಯನ್ನು‌ ತಂಪಾಗಿಸಿ, ಮಾತಾವರಣವನ್ನು ಸಮತೋಲನದಲ್ಲಿರಿಸುವ ಮ್ಯಾಂಗ್ರೋವ್ ಜಾಗತಿಕ ಹವಾಮಾನ ಸ್ಥಿರತೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಸಂಗ್ರಹಿಸಿ ಜಾಗತಿಕ ಮಟ್ಟದಲ್ಲಿ ಇಂಗಾಲದ ಚಕ್ರವನ್ನು ನಿಯಂತ್ರಿಸಲು ಮ್ಯಾಂಗ್ರೋವ್ ಅತೀ ಅಗತ್ಯ. ಭೂಮಿ ‌ಮತ್ತು ಸಮುದ್ರವನ್ನು ಸುತ್ತುವರಿದ ಈ ಕಾಡು ಆರೋಗ್ಯಕರ ಪರಿಸರ ವ್ಯವಸ್ಥೆಯ ಭದ್ರಕೋಟೆ. ಎಲ್ಲಿಯಾದರೂ ಈ ಕಾಡುಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಾ ಹೋದರೆ ಮಾನವ ಕುಲಕ್ಕೆ ಅಪಾಯ ಕಟ್ಟಿಟ್ಟ ‌ಬುತ್ತಿ‌. ಮ್ಯಾಂಗ್ರೋವ್ ಮರಗಳು ನೈಸರ್ಗಿದತ್ತ ವರವಾಗಿದ್ದು, ಪ್ರಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪರಿಸರದ ಉಷ್ಣಾಂಶ ತಗ್ಗಿಸಲು, ಭೂಮಿಯಲ್ಲಿನ ಅಂತರ್ಜಲವನ್ನು ಕಾಪಾಡುವಲ್ಲಿ ನಿಸರ್ಗದತ್ತವಾದ ಈ ಮರಗಳು ಒಮ್ಮೆ ಭೂಮಿಯಿಂದ ಕಣ್ಮರೆಯಾದರೆ ಮತ್ತೆ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇದೇ ರೀತಿಯಾಗಿ ಹಲವಾರು ವಿಧದ ಮರಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ.ಹೆಚ್ಚಾಗಿ ಜೌಗು ಪ್ರದೇಶಗಳಲ್ಲಿ ಕಾಣಸಿಗುವ ಕಡಲ ಬಾಚುಗಳು, ಅಳಿವೆ ಮತ್ತು ಸಮುದ್ರ ಕಿನಾರೆಯಲ್ಲಿ ಉದ್ದಕ್ಕೂ ಹರಡಿ ಬೆಳೆದ ವಿಶೇಷ ಮರಗಳು. ಇವುಗಳ ಸಮೂಹವನ್ನು ಕಾಂಡ್ಲ ಕಾಡು ಎಂತಲೂ ಕರೆಯುವುದುಂಟು.…

Read More

ಪಾಂಗಾಳ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಉಚಿತ ಬರವಣಿಗೆ ಪುಸ್ತಕವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಗೋವಿಂದ ಶೆಟ್ಟಿ, ಮುಖ್ಯ ಶಿಕ್ಷಕರಾದ ಫ್ರಾನ್ಸಿಸ್ ಮೆನೇಜಸ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಭೋಜರಾಜ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಯಶೋಧ ಹಾಗೂ ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More