Author: admin
ಗಣಿತನಗರ : ತುಳುನಾಡಿನ ಅವಳಿವೀರರಾದ ಕೋಟಿ ಚೆನ್ನಯ್ಯರು ಅಧರ್ಮದ ವಿರುದ್ಧ, ನ್ಯಾಯದ ಪರವಾಗಿ ಹೋರಾಡಿದ ವೀರಪುರುಷರು. ಹಿರಿಯರಿಗೆ ಗೌರವವನ್ನು, ಶಿಷ್ಟರ ರಕ್ಷಣೆಯನ್ನು ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯ್ಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್-ಬಾಲಸಂಸ್ಕಾರದ ಕಾರ್ಯದರ್ಶಿ ಶ್ರೀಮತಿ ಸಂಗೀತಾ ಕುಲಾಲ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಈ ಸಂದರ್ಭ ವೃಂದದ ಸದಸ್ಯರಾದ ಶ್ರೀಮತಿ ಉಷಾ ರಾವ್ ಯು, ಶ್ರೀಮತಿ ಗಾಯತ್ರಿ ನಾಗೇಶ್, ಶ್ರೀಮತಿ ಚೇತನಾ ಸಂದೀಪ್, ಶ್ರೀಮತಿ ಅಕ್ಷತಾ ಹಾಗೂ ಶ್ರೀಮತಿ ಲಕ್ಷ್ಮೀ ಉಪಸ್ಥಿತರಿದ್ದರು. ಬಾಲಸಂಸ್ಕಾರದ ಬಾಲಕ ಬ್ರಿಜೇಶ್ ಕಾರ್ಯಕ್ರಮ ನಿರೂಪಿಸಿ, ಆಯುಶ್ ಯು ಶೆಟ್ಟಿ ವಂದಿಸಿದರು. ಆರಾಧ್ಯ ಶ್ರೀ ರಾಮರಕ್ಷಾಸ್ತೋತ್ರವನ್ನು ಹಾಗೂ ಪ್ರೇರಣಾ ಬೋರ್ಕರ್ ಭಗವದ್ಗೀತೆಯ ಮೊದಲ ಹತ್ತು ಶ್ಲೋಕವನ್ನು ವಾಚಿಸಿದರು. ಬಾಲ-ಸಂಸ್ಕಾರಕ್ಕೆ ಸೇರಲಿಚ್ಚಿಸುವ ಕಾರ್ಕಳ ತಾಲೂಕಿನ ಮಕ್ಕಳ ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ ಮಕ್ಕಳ ಹೆಸರನ್ನು…
ವಿದ್ಯಾಗಿರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ಪಡೆದಿರುವ ಸ್ನಾತಕ ಮತ್ತು ಸ್ನಾತಕೋತ್ತರ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಲಬುರಗಿ, ದಾವಣಗೆರೆ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯನ್ನು ಹೊರತು ಪಡಿಸಿದರೆ, ಕರಾವಳಿ ಕರ್ನಾಟಕದಲ್ಲಿ ಆಳ್ವಾಸ್ ಕಾಲೇಜು ಮಾತ್ರ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿ ನಡೆಸಲು ಅವಕಾಶ ಪಡೆದಿರುವ ಕೇಂದ್ರವಾಗಿದೆ.
ಮಿಜಾರು: ‘ಸೂಕ್ತ ಚಿಕಿತ್ಸೆ ಮತ್ತು ಕುಟುಂಬಸ್ಥರ ಸಹಕಾರದಿಂದ ಯಾವುದೇ ವ್ಯಕ್ತಿ ವ್ಯಸನ ಮುಕ್ತರಾಗಲು ಸಾಧ್ಯ’ ಎಂದು ತಜ್ಞ ಮನೋವೈದ್ಯೆ ಡಾ.ಕ್ಯಾರೋಲಿನ್ ಡಿ’ಸೋಜಾ ಹೇಳಿದರು. ಶೋಭಾವನದ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಸಭಾಂಗಣದಲ್ಲಿ ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದ ಐದನೇ ವರ್ಷದ ವಾರ್ಷಿಕೋತ್ಸವ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ, ಮನೋಸಮೃದ್ಧಿ-ಆಳ್ವಾಸ್ ಸೈಕಾಲಜಿ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಸನವು ಕೇವಲ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬಿರುವುದಿಲ್ಲ. ಬದಲಾಗಿಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಅಪರೂಪಕ್ಕೆ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಅಲ್ಲ ಎಂಬುದು ಕೆಲವರ ವಾದ. ಆದರೆ ವ್ಯಸನವು ತನ್ನಿಂದತಾನೆ ಬೆಳೆದುಕೊಳ್ಳುತ್ತದೆ.ಒಮ್ಮೆ ಮದ್ಯಪಾನಕ್ಕೆ ಆಕರ್ಷತಾರಾದರೆ ನಮ್ಮ ಸ್ನೇಹಿತರು, ಸುತ್ತಮುತ್ತಲಿನವರ ಸಂಘದಿAದ ವ್ಯಸನಕ್ಕೆ ಒಳಗಾಗಬಹುದು ಎಂದು ಅವರು ಹೇಳಿದರು. ಸಮಾಜವು ವ್ಯಕ್ತಿಯನ್ನು ಗುಣಕ್ಕಿಂತ ಹೆಚ್ಚಾಗಿ ಚಟದ ಮೂಲಕ ಗುರುತಿಸುತ್ತದೆ. ಹೀಗಾಗಿ ವ್ಯಕ್ತಿ ವ್ಯಸನ ಮುಕ್ತಾರಾದರೂ ಸಾಧಾರಣ ಬದುಕಿಗೆ ಬರಲು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾರೆ ಎಂದರು. ಜನಜಾಗೃತಿ…
ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ರಾಜ್ಯಾದ್ಯಂತ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಯಕ್ಷಗಾನಂ ವಿಶ್ವಗಾನಂ ಯೋಜನೆಯಡಿ 2024-25ನೇ ಸಾಲಿನ ಬಜೆಟ್ ನಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಇವರು ಘೋಷಿಸಿದ ರೂ 10.00 ಲಕ್ಷದ ಪ್ರೋತ್ಸಾಹ ಧನವನ್ನು ಮೇಯರ್ ಮನೋಜ್ ಕುಮಾರ್ ಇವರು ಪಟ್ಲ ಫೌಂಡೇಶನ್ನಿನ ಕೇಂದ್ರೀಯ ಸಮಿತಿಯ ಜತೆಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಇವರ ಮೂಲಕ ಟ್ರಸ್ಟಿಗೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಭಾನುಮತಿ, ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕರಾದ ಅನಿಲ್ ಕುಮಾರ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಮನೋಹರ್ ಶೆಟ್ಟಿ, ಸುಮಿತ್ರ ಕರಿಯ, ಸರಿತಾ ಶಶಿಧರ್, ವೀಣಾ ಮಂಗಳ, ಮಾಜಿ ಮೇಯರ್ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್…
ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ ಕಳೆದ 20 ವರುಷಗಳಿಂದ ಕೊಲ್ಲಿ ರಾಷ್ಟ್ರ ಯುಎಇಯಲ್ಲಿ ಸಹಸ್ರಾರು ಮನೆಗಳ ಹಾಗೂ ಸಂಘ ಸಂಸ್ಥೆಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಪ್ರತಿಫಲ ಆಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಭಜನಾ ಸೇವೆ ಮಾಡುತ್ತಾ ಬಂದಿದ್ದು ಈ ನಿಸ್ವಾರ್ಥ ಭಜನಾ ಸಂಘಟನೆಗೆ ಈಗ ವಿಂಶತಿಯ ಸಂಭ್ರಮ. ಈ ಸಂಭ್ರಮವನ್ನು ಸಧ್ಭಕ್ತ ಬಾಂಧವರ ಜೊತೆ ಹಂಚಿಕೊಳ್ಳಲು, ನಮ್ಮ ಮುಂದಿನ ಪೀಳಿಗೆಗೆ ಭಜನಾ ಸಂಸ್ಕೃತಿಯನ್ನು ಪರಿಚಯಮಾಡಲು ವಿಶೇಷ ಕಾರ್ಯಕ್ರಮವನ್ನು ಫೆ.22 ರಂದು ದುಬಾಯಿಯ ಅಲ ನಾಸರ್ ಲೀಸಲ್ಯಾಂ೯ಡ್ ಅನ್ನೋ ಬೃಹತ್ ಸಭಾಂಗಣದಲ್ಲಿ “ವಿಂಶತಿ ಭಜನಾಟ್ಯ ಸಂಭ್ರಮ-2025“ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖ್ಯಸ್ಥರಾದ ರಾಜೇಶ್ ಕುತ್ತಾರ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಕಾರ್ಯಕ್ರಮದ ವಿಶೇಷತೆಯಾಗಿ ಕುಣಿತ ವಿಂಶತಿ, ಗಾನ ವಿಂಶತಿ, ನೃತ್ಯ ವಿಂಶತಿ, ಕುಣಿತ ವಿಂಶತಿ ಅನ್ನುವ ಭಕ್ತಿಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುಎಇ ಯಲ್ಲಿ ನಮ್ಮಂತೆ ಸೇವೆ ಮಾಡುವ ಹಲವಾರು ಉತ್ತಮ ಭಜನಾ ತಂಡಗಳಿವೆ. ಆ ತಂಡಗಳಲ್ಲಿ…
ಬಂಟರ ಸಂಘ ಹಿರೇಬಂಡಾಡಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಹಿರೇಬಂಡಾಡಿ ದರ್ಬೆ ನಿವಾಸಿ ರವೀಂದ್ರ ಶೆಟ್ಟಿ ದರ್ಬೆ, ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಅಡಕ್ಕಲ್ ಹಾಗೂ ಖಜಾಂಚಿಯಾಗಿ ರಾಕೇಶ್ ರೈ ಬೆರ್ಕೆಜಾಲ್ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರೂ, ಮಾತೃ ಸಂಘ ಮಂಗಳೂರಿನ ಉಪಾಧ್ಯಕ್ಷರೂ ಆದ ಹೇಮನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸದಾನಂದ ಶೆಟ್ಟಿ ಕೆಮ್ಮಾರಗುತ್ತು, ಸದಾನಂದ ಶೆಟ್ಟಿ ಅಡೆಕ್ಕಲ್ ಮಜಲ್, ಹರೀಶ್ ಪೆರಾಬೆ, ಜೊತೆ ಕಾರ್ಯದರ್ಶಿಯಾಗಿ ಯತೀಶ ಶೆಟ್ಟಿ ಪಡ್ಯೋಟ್ಟು ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಲಕ್ಷ್ಮಣ್ ಶೆಟ್ಟಿ ಕೆಮ್ಮಾರಗುತ್ತು, ಪ್ರಸಾದ್ ಶೆಟ್ಟಿ ಪೆರಾಬೆ, ಸತೀಶ್ ಶೆಟ್ಟಿ ಹೆನ್ನಾಳ, ಸದಾಶಿವ ಶೆಟ್ಟಿ ಎರ್ಪೆ, ಸಂತೋಷ್ ಶೆಟ್ಟಿ ಕಜೆ ಅಡಕ್ಕಲ್, ಮಹಿಳಾ ವಿಭಾಗದ ಪ್ರತಿನಿಧಿಗಳಾಗಿ ಅನುರಾಧ ಆರ್ ಶೆಟ್ಟಿ, ವಿನಯ ಎಲ್ ಶೆಟ್ಟಿ, ಗೌರವ ಸಲಹೆಗಾರರಾಗಿ ಪ್ರಕಾಶ್ ಶೆಟ್ಟಿ ಬೆಳ್ಳಿಪಾಡಿ, ದೇವಿದಾಸ ರೈ ಬೆಳ್ಳಿಪಾಡಿ, ನಿತ್ಯಾನಂದ ಶೆಟ್ಟಿ ದರ್ಬೆ ಆಯ್ಕೆಯಾಗಿದ್ದಾರೆ.ಮಾತೃ ಸಂಘ…
ತಪಸ್ಯ ಫೌಂಡೇಶನ್ ಮಂಗಳೂರು : ಕ್ಯಾನ್ಸರ್ ಆಸ್ಪತ್ರೆಯ ನಿಧಿ ಸಹಾಯಾರ್ಥ ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿ ಕರ್ಮ ಭೂಮಿಯಿಂದ ಜನ್ಮ ಭೂಮಿಗೆ ಓಟ
ಮ್ಯಾರಥಾನ್ ಓಟದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ನವಿ ಮುಂಬಯಿ ಪರಿಸರದ ಹೋಟೆಲ್ ಉದ್ಯಮಿ, ಸಮಾಜ ಸೇವಕ ಗಿರೀಶ್ ಶೆಟ್ಟಿ ಹಾಗೂ ರೇಷ್ಮಾಜಿ. ಶೆಟ್ಟಿ ದಂಪತಿ ಕರ್ಮ ಭೂಮಿಯಿಂದ ಜನ್ಮಭೂಮಿಗೆ ಓಟದ ಮೂಲಕ ವಿಶ್ವ ದಾಖಲೆ ರಚನೆಗೆ ಸಜ್ಜಾಗಿ ಫೆಬ್ರವರಿ 14ರಂದು ಶುಕ್ರವಾರ ಬೆಳಗ್ಗೆ 5:30ಕ್ಕೆ ಮುಲುಂಡ್ ನಲ್ಲಿರುವ ಫೋರ್ಟಿಸ್ ಆಸ್ಪತ್ರೆ ಬಳಿಯಿಂದ ಓಟ ಪ್ರಾರಂಭಿಸಿದ್ದಾರೆ . 7:30 ಕ್ಕೆ ನೆರುಲ್ ಹೆದ್ದಾರಿಯಲ್ಲಿ ಸಾರ್ವಜನಿಕರಿಂದ ಅಭಿನಂದನೆಯನ್ನು ಸ್ವೀಕರಿಸಿದ್ದಾರೆ. ಮುಂಬಯಿನಿಂದ ಮಂಗಳೂರಿನವರೆಗೆ ಸುಮಾರು 950 ಕಿಲೋ ಮೀಟರ್ ಓಟವನ್ನು ಪೂರೈಸುವ ಪ್ರಪ್ರಥಮ ದಂಪತಿಗಳೆಂಬ ಹೆಗ್ಗಳಿಕೆಗೆ ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿ ಭಾಜನರಾಗಲಿದ್ದಾರೆ.ತಪಸ್ಯ ಫೌಂಡೇಶನ್ ಮಂಗಳೂರಿನಲ್ಲಿ ನಿರ್ಮಿಸುವ 16 ವರ್ಷದ ಕೆಳಗಿನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಗೆ ನಿಧಿ ಸಂಗ್ರಹದ ಸದುದ್ದೇಶದಿಂದ ಕರ್ಮ ಭೂಮಿಯಿಂದ ಜನ್ಮ ಭೂಮಿಗೆ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಓಡುವ ಈ ಓಟದ ಪ್ರಾಯೋಜಕತ್ವವನ್ನು ಐಡಿಎಫ್ ಸಿ ಫಸ್ಟ್ ಬ್ಯಾಂಕ್ ವಹಿಸಿಕೊಂಡಿದ್ದು, ತುಳು…
ಮುಂಬಯಿ:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಘಟನಾ ಪುರಸ್ಕೃತ ತುಳುಕೂಟ ಫೌಂಡೇಶನ್, ನಾಲಾಸೋಪರ(ರಿ) ಹಾಗೂ ಶ್ರೀದೇವಿ ಯಕ್ಷ ಕಲಾನಿಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರಿಗೆ ತುಳುನಾಡ ಐಸಿರಿ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಪೂಜಾರಿ ಅವರು ಸನ್ಮಾನ ಪತ್ರ ವಾಚಿಸಿದರು. ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಶಿಧರ.ಕೆ ಶೆಟ್ಟಿ ಅವರ ಮುಂದಾಳತ್ವದಲ್ಲಿ ದಿನಪೂರ್ತಿ ನಡೆದ ಪಂಚಕಲಾ ವೈಭವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು. ವೇದಿಕೆಯಲ್ಲಿ ಗಣ್ಯರಾದ ಬಿಲ್ಲವರ ಅಸೋಸಿಯೇಶನ್ನಿನ ಅಧ್ಯಕ್ಷರಾದ ಹರೀಶ್.ಜಿ.ಅಮೀನ್, ಉದ್ಯಮಿ ಪ್ರವೀಣ್ ಶೆಟ್ಟಿ ಬೊಯಿಸರ್, ವಾಸ್ತುತಜ್ಞರಾದ ಅಶೋಕ್ ಪುರೋಹಿತ್, ಹೆಸರಾಂತ ಉದ್ಯಮಿ ಎನ್.ಟಿ.ಪೂಜಾರಿ, ಉದ್ಯಮಿ ರತ್ನಾಕರ ಶೆಟ್ಟಿ, ಅಶೋಕ್ ಇಂಡಸ್ಟ್ರೀಸ್ನ ಆಡಳಿತ ನಿರ್ದೇಶಕರಾದ ಅಶೋಕ್ ಶೆಟ್ಟಿ, ಪೆರ್ಮುದೆ ಮೊದಲಾದವರ ಗಣ್ಯ ಉಪಸ್ಥಿತಿಯಲ್ಲಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು…
ಮೂಡುಬಿದಿರೆ: ಪ್ರಾಮಾಣಿಕತೆ ಎಂಬುದು ನಮ್ಮ ನೈತಿಕ ಮತ್ತು ಸಾಮಾಜಿಕ ಬದುಕಿನ ಬಹುಮುಖ್ಯ ಅಂಶ. ಜೀವನದಲ್ಲಿ ಕಷ್ಟ, ವಿಫಲತೆಗಳು ಹಾಗೂ ಆಕಸ್ಮಿಕ ಸಮಸ್ಯೆಗಳು ಬಂದರೂ, ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದರೆ ಯಶಸ್ಸು ನಮಗೆ ಖಂಡಿತ ಒಲಿಯುತ್ತದೆ ಎಂದು ಮಾಜಿ ಸಚಿವ ಹಾಗೂ ರಾಜ್ ಫಿಶ್ ಮೀಲ್ ಆ್ಯಂಡ್ ಆಯಿಲ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ಪ್ರಮೋದ ಮಧ್ವರಾಜ್ ನುಡಿದರು. ಅವರು ಶನಿವಾರ ಕುವೆಂಪು ಸಭಾಂಗಣದಲ್ಲಿ ನಡೆದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ನೂತನ ವಿದ್ಯಾರ್ಥಿ ಸ್ಟಾರ್ಟ್ಅಫ್ ವೇದಿಕೆ ‘ಟ್ರೆöಬ್ಲೇಜ್’ನ್ನು ಉದ್ಘಾಟಿಸಿ, ‘ಯಶಸ್ವಿ ನಾಯಕತ್ವದ ತಂತ್ರಗಳು’ ವಿಷಯದ ಕುರಿತು ಮಾತನಾಡಿದರು. ನಮ್ಮ ಪರಂಪರೆ, ಸಂಸ್ಕೃತಿ, ಆಚರಣೆ, ಗುರುಹಿರಿಯರು, ಪಾಲಕರು, ಪೋಷಕರನ್ನು ಮರೆತ ದಿನ, ನಮ್ಮ ಅವನತಿ ಪ್ರಾರಂಭವಾಗುತ್ತದೆ. ದುರಾದೃಷ್ಟಾವಷಾತ್ ನಮ್ಮ ಇಂದಿನ ಸಮಾಜ ಭಾರತೀಯ ಭವ್ಯ ಪರಂಪರೆಯನ್ನು ಕಡೆಗಾಣಿಸುತ್ತಾ ಸಾಗಿದೆ.ನಮ್ಮ ಸಂಸ್ಕೃತಿಯ ಭಾಗವಾಗಿದ್ದ ಎರಡು ಕೈಗಳನ್ನು ಜೋಡಿಸಿ ವಂದಿಸುವ ಸಂಸ್ಕೃತಿ ನಮ್ಮಲ್ಲಿ ಮರೆಯಾಗಿ ವಿದೇಶಗಳಲ್ಲಿ ಆಳವಡಿಸಿಕೊಳ್ಳಲಾಗುತ್ತಿದೆ. ಇದು ಸಲ್ಲದು ಎಂದರು. ತನ್ನ ಜೀವನ ವೃತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡ…
ನಮಗೆ ಜೀವನದಲ್ಲಿ ವಿದ್ಯೆ, ಬುದ್ದಿ, ಸಂಸ್ಕಾರ, ಸಂಸ್ಕ್ರತಿಯನ್ನು ತಿಳಿ ಹೇಳಿ ಸುಸಂಸ್ಕ್ರತರನ್ನಾಗಿ ಮಾಡಿದ ಮಾತಾ ಪಿತರ ಸೇವೆ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಹಾಗೆಯೇ ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವುದು ಕೂಡಾ ನಮ್ಮ ಧರ್ಮ ಎಂದು ಅರಿಯಬೇಕು. ನಾವು ನೀಡುವ ಯಾವುದೇ ದಾನ, ಧರ್ಮ, ಸೇವೆ ಯಾವುದೇ ಇರಲಿ ಅದು ನಮ್ಮ ತಂದೆ ತಾಯಿಯವರ ಆಶೀರ್ವಾದ ಮತ್ತು ದೈವ ದೇವರ ಕೃಪೆಯಿಂದ ಸಾಧ್ಯವಾಗಿದೆ. ನಾವು ಮಾಡಿದ ಸೇವೆಯ ಫಲ ನಮ್ಮ ಮಕ್ಕಳಿಗೆ ಸಿಗಬಹುದು. ಬಂಟ ಸಮಾಜಕ್ಕೆ ಸಂಘದ ಮೂಲಕ ಮಾನವೀಯತೆಯ ಸೇವೆ ಸಿಗಲಿ. ತಾವುಗಳು ಸಂಘದ ಮೂಲಕ ಹಾಕಿದ ಮೂರು ಯೋಜನೆಗಳು ಇಂದಿನ ದಿನಕ್ಕೆ ನಮ್ಮ ಸಮಾಜಕ್ಕೆ ಖಂಡಿತವಾಗಿ ಬೇಕಾಗಿದೆ. ದೈವ ದೇವರ ಆಶೀರ್ವಾದ ಹಿಡಿದುಕೊಂಡು ಬಂದಿದ್ದೇವೆ. ಇಲ್ಲಿ ನೆಲೆ ನಿಂತು ಬೆಳೆದಿದ್ದೇವೆ. ಬಂಟ ಸಮಾಜಕ್ಕಾಗಿ ನಮ್ಮ ಸಂಸ್ಕ್ರತಿಯನ್ನು ಬೆಳೆಸಬೇಕು. ಯಾವುದೇ ದ್ವೇಷ ಬೇದ ಭಾವ…