Author: admin

ಒಬ್ಬನೇ ವ್ಯಕ್ತಿಯಲ್ಲಿ ಅನೇಕ ಪ್ರತಿಭಾ ಸಾಮರ್ಥ್ಯಗಳು ಮೇಳವಿಸಿದರೆ ಆತ ಸಮಾಜದಲ್ಲಿ ಭಿನ್ನ ಪಂಕ್ತಿಯಲ್ಲಿ ಗೌರವಿಸಲ್ಪಡುತ್ತಾನೆ. ಅಂಥವರಲ್ಲಿ ವಿರಳಾತಿ ವಿರಳ ವ್ಯಕ್ತಿ ವಿಶೇಷ ನಮ್ಮ ಅಶೋಕ ಪಕ್ಕಳರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಸನ್ನಿಧಿ ಗುತ್ತು ಮನೆತನದ ಸಂಜಾತ ಎಂ ಎ ಪಕ್ಕಳ ಮತ್ತು ಶ್ರೀಮತಿ ನಾಗಮ್ಮ ಪಕ್ಕಳ ದಂಪತಿಯರಿಗೆ ಮೂರನೆಯ ಹಾಗೂ ಕಿರಿಯ ಮುದ್ದಿನ ಮುದ್ದು ಮುದ್ದಾದ ಮಗನಾಗಿ ಜನಿಸಿದವರು ಅಶೋಕ್. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿದ ಬಳಿಕ ಜೈನಕಾಶಿ ಎಂಬ ಪ್ರಸಿದ್ಧಿ ಪಡೆದ ಮೂಡಬಿದಿರೆಯ ಧವಳ ಕಾಲೇಜಿನ ಮುಖಾಂತರ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿಕೊಂಡರು. ತನ್ನ ಶಾಲಾ ಕಾಲೇಜು ದಿನಗಳಲ್ಲಿ ದೈನಂದಿನ ಪಾಠ ವಿಷಯಗಳ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದು ಶಿಕ್ಷಕರ ಪ್ರಾಧ್ಯಾಪಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮುಂದೆ ಈ ಕನಸು ಕಂಗಳ ಯುವಕ ಹಿರಿಯಣ್ಣನ ಕರೆಯನ್ನು ಗೌರವಿಸಿ ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬಯಿಗೆ ಆಗಮಿಸಿ ಅಣ್ಣನ ಜೊತೆಗೆ…

Read More

ನಮ್ಮ ದೇಶದ ಭವಿಷ್ಯವಾಗಿರುವ ಯುವ ಸಮುದಾಯವು ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಜೀವನದಲ್ಲಿ ಸೋಲುವುದು ಯಾಕೆ ಎಂಬುದು ಚಿಂತಿಸಬೇಕಾದ ಗಂಭೀರ ವಿಷಯ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ 25 ವರ್ಷದೊಳಗಿನವರು ಮತ್ತು ಶೇ. 65ರಷ್ಟು ಮಂದಿ 35 ವರ್ಷದೊಳಗಿನವರು. ಮುಂದೆ ಭಾರತವು ವಿಶ್ವದ ಉತ್ಪಾದನೆಯ ಕಾರ್ಖಾನೆಯಾಗಲು ಈ ಯುವಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಇನ್ನೂ ಹೆತ್ತವರ ಪ್ರಭಾವ, ಅಭಿಲಾಷೆ ಕಡಿಮೆಯಾಗಿಲ್ಲ. ಹೆತ್ತವರು ನಿರ್ಧರಿಸಿದ ಶಿಕ್ಷಣವನ್ನು ಪಡೆಯುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಿರುವುದು ವಾಸ್ತವ. ಜತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯೂ ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ ಎಂಬ ಆರೋಪವೂ ಇದೆ. ನೀಟ್‌ ಸಹಿತ ಕೆಲವು ಪರೀಕ್ಷೆಗಳಿಗೆ ಆಕ್ಷೇಪ, ವಿರೋಧವೂ ಅಲ್ಲಲ್ಲಿ ಕೇಳಿ ಬರುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವ ಯಂತ್ರವನ್ನಾಗಿ ಮಾರ್ಪಡಿಸುತ್ತಿದೆ. ಇದು ಅವರ ಚಿಂತನೆಯ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬ ಆರೋಪವೂ ಚಾಲ್ತಿಯಲ್ಲಿದೆ. ದುರ್ಬಲವಾಗುತ್ತಿರುವ ಮಾನಸಿಕ ಸ್ಥೈರ್ಯ : ಶಿಕ್ಷಣದಲ್ಲಿ ಸವಾಲು ಎದುರಾಗುವುದು,…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರಿಶ್ ಶೆಟ್ಟಿಯವರ ಮಹತ್ವಕಾಂಕ್ಷೆಯ ಕಾರ್ಯಕ್ರಮವಾದ ವಿಶ್ವ ಬಂಟರ ಸಮ್ಮೇಳನ 2023 ಕಾರ್ಯಕ್ರಮವು ಅಕ್ಟೋಬರ್ ದಿನಾಂಕ 28 ಮತ್ತು 29ರಂದು ಉಡುಪಿಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಕೋರಿಕೆಗೆ ಸ್ಪಂದಿಸಿ ಕರ್ನಾಟಕದ ಮುಖ್ಯ ಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು 28.10.2023ರಂದು ಉಡುಪಿಗೆ ಆಗಮಿಸಿ ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದಿನಾಂಕ 18.10.2023 ರಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಆತ್ಮೀಯ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಹಾಗೂ ಒಕ್ಕೂಟದ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಉಪಸ್ಥಿತರಿದ್ದರು.

Read More

“ಬಂಟರಲ್ಲಿ ನಾಯಕತ್ವದ ಗುಣಗಳಿವೆ. ವೈದ್ಯಕೀಯ ಕ್ಷೇತ್ರ, ಕ್ರೀಡಾ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಹೋಟೆಲ್ ಉದ್ಯಮ ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಇಂದು ಬಂಟರು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಂಟರ ಕೊಡುಗೆ ದೊಡ್ಡದಿದೆ. ಅಂತಹ ನಾಯಕತ್ವ ನಮಗೆ ಅತೀ ಅಗತ್ಯವಾಗಿದೆ. ಬಂಟ ಸಮಾಜದ ಮಹಿಳೆಯರು ಕೂಡ ಸಾಕಷ್ಟು ಪ್ರಬಲರಾಗಿದ್ದಾರೆ. ಇತರರಿಗೆ ಮಾದರಿಯಾಗಿ ಬೆಳೆದಿದ್ದಾರೆ. ಬಂಟರು ಇನ್ನು ಮುಂದೆಯೂ ಸಾಮಾಜಿಕವಾಗಿ ಹೆಚ್ಚೆಚ್ಚು ಪ್ರಬಲರಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜದಲ್ಲಿ ಒಗ್ಗಟ್ಟನ್ನು ಉಳಿಸಿ ಅಭಿವೃದ್ಧಿಗೆ ಕೊಡುಗೆ ಕೊಡಿ. ವಿಘ್ನ ನಿವಾರಕ ಗಣೇಶನ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲಿರಲಿ” ಎಂದು ಅರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ‌ ನಗರದಲ್ಲಿ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ…

Read More

ಇತ್ತೀಚೆಗೆ ಬಹರೈನ್ ದೇಶಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡ ಭಾರತದ ನೂತನ ನಿಯೋಜಿತ ರಾಯಭಾರಿ ಘನತೆವೆತ್ತ ಶ್ರೀ ವಿನೋದ್ ಕೆ. ಜೇಕಬ್ ಅವರನ್ನು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಅಮರನಾಥ್ ರೈ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದಿಸಿದರು. ಅಧ್ಯಕ್ಷ ಶ್ರೀ ಅಮರನಾಥ್ ರೈಯವರು ರಾಯಭಾರಿಯವರಿಗೆ ಹೂಗುಚ್ಛ, ಸ್ಮರಣಸಂಚಿಕೆ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಶ್ರೀ ರೈಯವರು ಕನ್ನಡ ಸಂಘವು ನಡೆದು ಬಂದ ಹಾದಿ, ಕನ್ನಡ ಭವನ ನಿರ್ಮಾಣದ ಕುರಿತು ವಿಸ್ತೃತವಾಗಿ ವಿವರಿಸಿದರು. ಜೊತೆಗೆ ಇದೇ ಸೆಪ್ಟೆಂಬರ್ ನಲ್ಲಿ ನಡೆಯುವ ಪದಗ್ರಹಣ ಸಮಾರಂಭಕ್ಕೆ ಅತಿಥಿಗಳಾಗಿ ಬರುವಂತೆ ಆಹ್ವಾನಿಸಿದರು. ಘನತೆವೆತ್ತ ಶ್ರೀ ವಿನೋದ್ ಕೆ. ಜೇಕಬ್ ರವರು ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದು ಸಂಘಟನೆಯನ್ನು ಶ್ಲಾಘಿಸಿದರು. ತಾವು ಕನ್ನಡ ಭವನವನ್ನು ಸಂದರ್ಶಿಸುವದರೊಂದಿಗೆ ಮುಂದಿನ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ‌ಭಾರತೀಯ ದೂತಾವಾಸದ ಶ್ರೀ ಇಜ಼ಾಸ್ ಅಸ್ಲಂ, ದ್ವಿತೀಯ ಕಾರ್ಯದರ್ಶಿ (ರಾಜಕೀಯ, ಪತ್ರಿಕಾ, ಮಾಹಿತಿ ಮತ್ತು ಸಂಸ್ಕೃತಿ) ಉಪಸ್ಥಿತರಿದ್ದರು.

Read More

ಮುಂಬಯಿಯ ಪ್ರಸಿದ್ಧ ಸಮಾಜ ಸೇವಕ, ಶಿಕ್ಷಣ ತಜ್ಞ, ಬಂಟರ ಸಂಘ ಮೀರಾ- ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಬಿಳಿಯೂರುಗುತ್ತು ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ರೈ ಸುಮತಿ ಎಜುಕೇಶನ್ ಟ್ರಸ್ಟಿನ ಆಡಳಿತದಲ್ಲಿರುವ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಗುರು ಪೂರ್ಣಿಮದ ದಿನದಂದು ವಿದ್ಯಾರ್ಥಿಗಳಿಗೆ ಗುರುವಿನ ಬಗ್ಗೆ ಮತ್ತು ಮಾತಾಪಿತರ ಬಗ್ಗೆ ಜ್ಞಾನ ವೃದ್ಧಿಸುವ ವಿಶೇಷ ಕಾರ್ಯಕ್ರಮ ನಡೆಯಿತು. ಶಾಲೆಯಲ್ಲಿ ಸುಮಾರು 3000 ವಿದ್ಯಾರ್ಥಿಗಳಿದ್ದು ಗುರು ಪೂರ್ಣಿಮೆಯಂದು ಜೂನಿಯರ್ ಸೀನಿಯರ್ ಹಾಗೂ ಒಂದನೇ ತರಗತಿ ಮತ್ತು ಎರಡನೇ ತರಗತಿಯ ಸುಮಾರು 1180 ವಿದ್ಯಾರ್ಥಿಗಳಿಗೆ ಗುರುವಿನ ಮತ್ತು ಮಾತಾಪಿತರ ಮಹತ್ವದ ಅರಿವನ್ನು ಮೂಡಿಸುವುದಕ್ಕಾಗಿ ತಾಯಿಯ ಪಾದ ಪೂಜೆಯನ್ನು ಮಾಡಿಸಿ ವಿದ್ಯಾರ್ಥಿಗಳಿಗೆ ತಾಯಿಯ ಮಹತ್ವವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅರುಣೋದಯ ರೈ ಸಾವಿರಾರು ಮಕ್ಕಳು ಹಾಗೂ ಅವರೊಂದಿಗೆ ಅಷ್ಟೇ ತಾಯಂದಿರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ತಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಈ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಇದೇ…

Read More

ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಲು ಬಂಟರ ಸಂಘಗಳು ಪ್ರಯತ್ನಿಸಬೇಕು. ಜಿಲ್ಲೆಯಲ್ಲಿ ಬಂಟರ ಮೆಡಿಕಲ್ ಕಾಲೇಜುಗಳು ಇವೆ. ಬಂಟರ ಸಂಘಗಳು ಕನಿಷ್ಠ ಐದು ಪರ್ಸಂಟ್ ಸೀಟುಗಳನ್ನು ಬಂಟ ವಿದ್ಯಾರ್ಥಿಗಳಿಗೆ ನೀಡುವಂತೆ ಬಂಟರ ಮಾತೃ ಸಂಘ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಒತ್ತಡ ಹೇರಬೇಕು ಎಂದು ಕಟ್ಲ ಬಾಳಿಕೆ ಅಗೊಳಿ ಮಂಜಣ್ಣ ಜಾಗದ ಧರ್ಮ ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ ತಿಳಿಸಿದರು. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಇಡ್ಯಾ ಗ್ರಾಮದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕನಸು ಹೊತ್ತು ವಿದ್ಯೆ ಕಲಿಯುತ್ತಾರೆ. ಅತ್ಯಧಿಕ ಅಂಕವನ್ನೂ ಗಳಿಸುತ್ತಾರೆ. ಆದರೆ ಅವರ ಇಚ್ಚೆಗೆ ತಕ್ಕಂತೆ ಮೆಡಿಕಲ್, ಇಂಜಿನಿಯರಿಂಗ್ ಸೀಟು ಸಿಗುವುದಿಲ್ಲ. ಹಣ ಕೊಟ್ಟು ಸೀಟು ಪಡೆಯಲು ಅಸಮರ್ಥರಾದಾಗ ಬೇರೆ ಪಠ್ಯದತ್ತ ಆಸಕ್ತಿ ವಹಿಸುತ್ತಾರೆ. ಇದಕ್ಕೆ ಜಿಲ್ಲೆಯಲ್ಲಿರುವ ಬಂಟರ ಸಂಘಗಳು ಬಂಟರ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವ ಪ್ರಯತ್ನ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಆಗುತ್ತದೆ…

Read More

ನಾಗಬನ ಅಂದ್ರೆ ಒಂದಷ್ಟು ದಟ್ಟ ಮರಗಿಡಗಳ, ಬಳ್ಳಿಗಳ ಮಧ್ಯೆ ಇರುವಂತದ್ದು. ಅಲ್ಲಿ ಮರಗಳ ದಟ್ಟತೆ ನೆಲಕ್ಕೆ ಸೂರ್ಯನ ಬೆಳಕು ಬೀಳದಷ್ಟು ಇರುತ್ತದೆ. ಅದು ಎಷ್ಟೇ ಬಿಸಿಲಿದ್ದರೂ ತಂಪಾಗಿರುತ್ತದೆ. ಇಂತಹ ಬನದ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯುವುದು ನಿಷಿದ್ಧ! ಅದೆಲ್ಲೋ ಗದ್ದೆಗೆ ಬಾಗಿಕೊಂಡಿರುವ ಉಳುಮೆಗೆ ತೊಂದರೆ ಕೊಡುವ ಬನದ ಮರದ ಗೆಲ್ಲುಗಳನ್ನು ಕಡಿಯುತ್ತಾರೆ ಬಿಟ್ರೆ ಬುಡದಿಂದ ಮರಗಳನ್ನು ಕಡಿಯುವುದಾಗಲಿ, ಹಾರೆ ಪಿಕ್ಕಾಸು ಹಿಡಿದು ಬನದಲ್ಲಿ ಮಣ್ಣು ಅಗೆಯುವ ಕೆಲಸ ಮಾಡುವುದಾಗಲಿ ಮಾಡುವುದಿಲ್ಲ. ಹೆಚ್ಚಾಗಿ ಎಲ್ಲಾ ಸಾಂಪ್ರದಾಯಿಕವಾದ ನಾಗ ಬನದಲ್ಲಿ ನೆಲದ ಮೇಲೆಯೇ ಕಲ್ಲುಗಳು ಇರುತ್ತದೆ. ಅದು ನೋಡಲೂ ಚಂದ ಅಲ್ಲಿರುವ ನಾಗಗಳಿಗೂ ಅದರಿಂದ ಒಳ್ಳೆಯದು. ಆದರೆ ಇತ್ತೀಚಿಗೆ ಜನರು ನಾಗ ಬನದಲ್ಲಿರುವ ಮರಗಳನ್ನು ಎಲ್ಲಾ ಕಡಿದು ನೆಲದ ಮೇಲಿದ್ದ ನಾಗನ ಕಲ್ಲುಗಳನ್ನು ಸಿಮೆಂಟಿನ ಕಟ್ಟೆ ಮಾಡಿ, ಅದರ ಮೇಲೆ ಪ್ರತಿಷ್ಠಾಪನೆ ಮಾಡುತ್ತಾ ಇದ್ದಾರೆ. ಇದು ತಿಳುವಳಿಕೆ ಇದ್ದೋ ಅಥವಾ ತಿಳುವಳಿಕೆ ಇಲ್ಲದೆಯೋ ಗೊತ್ತಿಲ್ಲ. ಸಿಮೆಂಟಿನ ಕಟ್ಟೆಯ ಮೇಲೆ ನಾಗ ಬರುತ್ತದೆಯೇ ಎಂದು ಕೇಳಿದರೆ…

Read More

ದುರಂತವನ್ನಪ್ಪಿದ ಅವಳಿ ಸಹೋದರಿಯರು ಉರ್ಕಿದೊಟ್ಟು ಸಾನದ ಸೊನ್ನೆ ಮತ್ತು ಗುರು ಮಾರ್ಲ ರ ಮಕ್ಕಳು ಅಬ್ಬಗ-ದಾರಗರು. ಬ್ರಹ್ಮರಿಗೆ ಹರಸಿಕೊಂಡು ಹುಟ್ಟಿದ ಅವಳಿಮಕ್ಕಳು ಇವರು. ಹೇಳಿಕೊಂಡ ಹರಕೆಯನ್ನು ಸಲ್ಲಿಸಲು ಮರೆಯುತ್ತಾರೆ ಸೊನ್ನೆ-ಗುರುಮಾರ್ಲ ದಂಪತಿಗಳು. ಅಬ್ಬಗೆ-ದಾರಗೆಯರಿಗೆ ಗಂಡು ನಿಶ್ಚಯಿಸಿ ಬರಲು ಹೋಗುವಾಗ ಬೆರ್ಮೆರ್ ಬಡ ಬ್ರಾಹ್ಮಣನ ವೇಷ ಧರಿಸಿ ಬಂದು ‘ಬೆರ್ಮೆರಿಗೆ ಹೇಳಿದ ಹರಿಕೆಯನ್ನು ನೆನಪಿಸುತ್ತಾರೆ. ಆಗ ಸೊನ್ನೆ ಉದ್ಧಟತನದಿಂದ ವರ್ತಿಸುತ್ತಾಳೆ. ಇದರಿಂದ ಕೋಪಗೊಂಡ ಬೆರ್ಮೆರು ಅದೇ ಬಡ ಬ್ರಾಹ್ಮಣನ ರೂಪದಲ್ಲಿ ಬೀಡಿಗೆ ಬಂದು ಅಬ್ಬಗೆ-ದಾರಗೆಯರನ್ನು ಚೆನ್ನೆಯಾಡಲು ಪ್ರೇರೇಪಿಸಿ ಅವರೊಳಗೆ ಜಗಳ ತಂದು ಹಾಕಿ ಅವರಿಬ್ಬರೂ ಸಾವನ್ನಪ್ಪುವಂತೆ ಮಾಡುತ್ತಾರೆ. ಅಬ್ಬಗ ದಾರಗರು ಒಳಗಿನ ಕೋಣೆಗೆ ಹೋದರು ಕಲ್ಲು ಪೆಟ್ಟಿಗೆಯ ಬೀಗ ತೆರೆದು ಬರುತ್ತದೆ. ಬೆಳ್ಳಿಯ ಚೆನ್ನಮಣೆ ಬಂಗಾರದ ಮುತ್ತು ಹರಳು ತೆಗೆದುಕೊಂಡರು ಬಾಜಿರ ಹಲಗೆಯಲ್ಲಿ ಕುಳಿತರು ಚೆನ್ನೆಯಾಡಿದರು ಒಂದಾಟ ಆಡಿದಳು ತಂಗಿಗೆ ಗೆಲುವು ತೋರಿ ಬಂತು ಎರಡಾಟವಾಗಿ ಅಕ್ಕನಿಗೆ ಪೊರಿ ಆಯಿತು ಮೂರನೆ ಆಟದಲ್ಲಿಯೂ ಅಕ್ಕನಿಗೆ ತಂಗಿಯನ್ನು ಗೆಲ್ಲಲಾಗಲಿಲ್ಲ ಆಗೆಂದಳು ತಂಗಿ ಓ ಅಕ್ಕನವರೆ…

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತದಲ್ಲಿ ಸಾಧನೆ ಮಾಡಿದ ಕಾರ್ಕಳ, ಹೆಬ್ರಿ ತಾಲೂಕಿನ ಸಾಧಕ ಮಹಿಳೆಯರನ್ನು ಕಾರ್ಕಳದ ಸಾವಿತ್ರಿ ಸತ್ಯವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮವು ಹೆಬ್ರಿ ಚೈತನ್ಯ ಯುವ ವೃಂದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮೋದಿ ಬ್ರಿಗೇಡ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ವೇದಾವತಿ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಜೀವನದ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಿ, ಮಹಿಳೆಯರ ಕಷ್ಟಗಳನ್ನು ತಡೆಯುವ ಸಲುವಾಗಿ ಮಹಿಳಾ ದಿನಾಚರಣೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಮಹಿಳೆಯರ ಆರ್ಥಿಕ, ಸಾಮಾಜಿಕ, ಮತ್ತು ಸಾಧನೆಗಳನ್ನು ಮಹಿಳಾ ದಿನಾಚರಣೆಯಂದು ನೆನೆಯಲಾಗುತ್ತಿದೆ. ಮಹಿಳೆಯರು ಮಾಡುವ ಪ್ರತಿ ಕಾರ್ಯಗಳನ್ನು ಸಮಾಜ ಗೌರವಿಸುತ್ತದೆ. ಮಹಿಳೆಯರು ಯಾವ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲವೆಂದು ನಿರೂಪಿಸಿದ್ದಾರೆ. ಸಂಸ್ಥೆಯು ಸಾಧಕ ಮಹಿಳೆಯರನ್ನು ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮಹರ್ಷಿ ಅರವಿಂದ ಘೋಷ್ ರವರ ನೆನಪಿಗಾಗಿ ಸಾವಿತ್ರಿ ಸತ್ಯವಾನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯನ್ನು ಆರಂಭಿಸಿದೆವು. ಸಾಧನೆಗೆ ಸ್ಫೂರ್ತಿ, ಬದುಕಿಗೆ ದಾರಿ, ಕುಟುಂಬಕ್ಕೆ…

Read More