ಶಿವಮೊಗ್ಗ ಬಂಟರ ಸಂಘದ ಬಂಟರ ಭವನಕ್ಕೆ ಹಾಗೂ ಕಚೇರಿಗೆ ಸಾಗರ ಬಂಟರ ಸಂಘದ ಪದಾಧಿಕಾರಿಗಳು ಇತ್ತೀಚಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಅವರು ಸಾಗರ ಬಂಟರ ಸಂಘದ ಸದಸ್ಯರನ್ನು ಸ್ವಾಗತಿಸಿದರು. ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ತಾಲೂಕು ಮಟ್ಟದ ಬಂಟರ ಸಂಘ ಸಾಗರದಲ್ಲಿ ನಿರ್ಮಾಣವಾಗುತ್ತಿದ್ದು, ಜಿಲ್ಲೆಯ ಬಂಟರ ಸಂಘದಿಂದ ನಮಗೆ ಆದಷ್ಟು ಧನಸಹಾಯವನ್ನು ನೀಡಬೇಕೆಂದು ವಿನಂತಿಸಿಕೊಂಡರು.

ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಮುಂದಿನ ಪದಾಧಿಕಾರಿಗಳ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ನಾವು ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ನೀಡಲು ಸರ್ವ ಪ್ರಯತ್ನ ಮಾಡುವುದಾಗಿ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ನಿರ್ದೇಶಕರಾದ ಸದಾನಂದ ಶೆಟ್ಟಿ, ಆನಂದ ಶೆಟ್ಟಿ, ಸುನೀಲ್ ಶೆಟ್ಟಿ ಯಡೆಹಳ್ಳಿ ಉಪಸ್ಥಿತರಿದ್ದರು. ಶಿವಮೊಗ್ಗ ಬಂಟರ ಸಂಘದ ಮುಖಂಡರುಗಳಾದ ರಾಜೀವ್ ಶೆಟ್ಟಿ, ಪರಮೇಶ್ವರ್ ಶೆಟ್ಟಿ, ಉದಯ್ ಶೆಟ್ಟಿ ಶುಭಂ ಹೋಟೆಲ್, ರಾಜಮೋಹನ್ ಹೆಗ್ಡೆ ಪಿಂಗಾರ ಹೋಟೆಲ್, ರಾಘವೇಂದ್ರ ಶೆಟ್ಟಿ ನಿಸರ್ಗ, ಸುಧಾಕರ್ ಶೆಟ್ಟಿ ಶಿಲ್ಪಾ ಹೋಟೆಲ್, ಮಂಜುನಾಥ್ ಶೆಟ್ಟಿ ಲಾಯರ್, ಉದಯ್ ಶೆಟ್ಟಿ ಚಿಕ್ಕು, ಶೆಟ್ಟಿ ಮೆಡಿಕಲ್ ಅರುಣ್ ಶೆಟ್ಟಿ, ಮಂಜುನಾಥ್ ಶೆಟ್ಟಿ ಪ್ರಜಾಶಕ್ತಿ ಉಪಸ್ಥಿತರಿದ್ದರು.