Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಪುರುಷೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಿನ್ನಿಗೋಳಿ ಘಟಕದ ಧನ್ಯೋತ್ಸವ ಕಾರ್ಯಕ್ರಮ ಕಿನ್ನಿಗೋಳಿಯಲ್ಲಿ ನಡೆಯಿತು. ಮೇ 9 ರಂದು ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಿನ್ನಿಗೋಳಿ ಘಟಕದ ಅದ್ದೂರಿ ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ಎಲ್ಲಾ ಫೌಂಡೇಶನ್ ಅಭಿಮಾನಿ ಬಂಧುಗಳಿಗೆ ಧನ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಮೊನ್ನೆ ನಡೆದ ಘಟಕದ ಉದ್ಘಾಟನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆದಿದೆ. ಹಾಗೆಯೇ ಜೂನ್ ಒಂದರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ಫೌಂಡೇಶನ್ ನ ದಶಮಾನ ಉತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಬಂದು ಮುಕ್ತ ಮನಸ್ಸಿನಿಂದ ಸಹಕಾರ, ಸಹಾಯ ನೀಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು. ಕಿನ್ನಿಗೋಳಿ ಘಟಕದ ವತಿಯಿಂದ ದಶಮಾನೋತ್ಸವ ಸಂಭ್ರಮದ ಸಲುವಾಗಿ ಫೌಂಡೇಶನ್ ಗೆ ಈಗಾಗಲೇ 10 ಲಕ್ಷ ರೂಪಾಯಿ (10 ಟ್ರಸ್ಟಿಗಳನ್ನು) ಒಟ್ಟು ಮಾಡಿದ್ದು, ಜೂನ್ ಒಂದರ ಒಳಗೆ…
ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧಕಲೆ ಎಂದು ಖ್ಯಾತಿ ಪಡೆದ ಕಳರಿ ಪೈಟ್ ತುಳುನಾಡಿನಿಂದಲೇ ಉದ್ಭವವಾಗಿದೆ ಎಂಬುದು ಹೆಮ್ಮೆಯ ವಿಷಯ. ಹಿಂದೆ ದ.ಕ., ಕಣ್ಣೂರು, ವಯನಾಡು ಮತ್ತು ಕೊಝೀಕೋಡ್ ಭಾಗಗಳನ್ನೊಳಗೊಂಡ ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಯುದ್ಧಕಲೆ ಅಭ್ಯಾಸದ ಪ್ರಬಲ ಕೇಂದ್ರವಾಗಿತ್ತು. ಕೇರಳದಲ್ಲೂ ಇದನ್ನು “ತುಳುನಾಡನ್ ಕಳರಿ” ಎಂದೇ ಕರೆಯುತ್ತಾರೆ. ಪುರಾವೆಗಳ ಪ್ರಕಾರ, ಹಲವಾರು ರಾಜರು ಹಾಗೂ ಸೇನಾ ನಾಯಕರು ತುಳುನಾಡಿಗೆ ಬಂದು ಕಲರಿ ಪೈಟ್ ಕಲಿತಿದ್ದರು. ಕೋಟಿ ಚೆನ್ನಯರು ಗರಡಿಗಳ ಮೂಲಕ ಈ ಕಲೆಯ ಉಳಿವಿಗೆ ಶ್ರಮಿಸಿದರು. ಅವರ ಗುರು ನಾನಯ್ಯರಿಗೆ ಕೇರಳದ ರಾಜರು ಗ್ರಾಮಗಳನ್ನು ದತ್ತವಾಗಿ ನೀಡಿದ ದಾಖಲೆಗಳೂ ಇವೆ. ಅದೇ ರೀತಿ ಅವಳಿ ವೀರರಾದ ಮುದ್ದ ಕಳಲೆರ್, ಕಾನದ ಕಟದೆರ್ ಇವರ ಶೌರ್ಯಗಳು ಕಳರಿಯಿಂದಲೇ ಬೆಳೆದು ಬಂದಿದೆ. ಕಲರಿ ಪೈಟ್ನಲ್ಲಿ 108 ಮರ್ಮ ಬಿಂದುಗಳಲ್ಲಿ 64ಕ್ಕೆ ಸಂಬಂಧಪಟ್ಟ ಮರ್ಮ ವಿದ್ಯೆಗಳು ಪ್ರಮುಖ. ಇದು ದೇಹ ಹಾಗೂ ಮನಸ್ಸಿಗೆ ಆರೋಗ್ಯ ನೀಡುವುದಲ್ಲದೆ, ಯುದ್ಧ ತಂತ್ರಗಳು, ಕಣ್ಕಟ್ಟು ವಿದ್ಯೆ,…
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದಶಮ ಸಂಭ್ರಮಕ್ಕೆ ಉದ್ಯಮಿ ಕೆ.ಕೆ ಶೆಟ್ಟಿ ಅವರು ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ. ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಬರೋಡ ಶಶಿಧರ ಶೆಟ್ಟಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಮನವಿಗೆ ಸ್ಪಂದಿಸಿದ ಅಹಮದ್ ನಗರದ ಪ್ರಖ್ಯಾತ ಹೋಟೆಲ್ ಉದ್ಯಮಿಗಳು, ಮುಂಡಪಲ್ಲ (ಕಾಸರಗೋಡು) ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿಯವರು “ಪಟ್ಲ ದಶಮ ಸಂಭ್ರಮಕ್ಕೆ” ದೊಡ್ಡ ಮೊತ್ತದ ಆರ್ಥಿಕ ನೆರವನ್ನು ನೀಡಿದ್ದಾರೆ.ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೆಲಸ ಕಾರ್ಯಗಳು ಇದೇ ರೀತಿ ನಿರಂತರವಾಗಿ ಸಾಗಲಿ, ಕಲಾವಿದರ ಪಾಲಿನ ಕಾಮಧೇನು ಆಗಿರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಕೆ.ಕೆ ಶೆಟ್ಟಿಯವರು ಹಾರೈಸಿದ್ದಾರೆ. ಕೆ.ಕೆ ಶೆಟ್ಟಿ ಅವರಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಕೆ ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಹಾಗೂ ಪಟ್ಲ ಟ್ರಸ್ಟ್…
‘ತೆಂಕು ತಿಟ್ಟಿನ ಬಣ್ಣದ ವೇಷಗಾರಿಕೆ ಯಕ್ಷಗಾನ ರಂಗದ ವಿಸ್ಮಯಗಳಲ್ಲೊಂದು. ಅನುಭವೀ ಹಿರಿಯ ಕಲಾವಿದರು ಈ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯ ಜಾಡಿನಲ್ಲಿ ಹೊಸ ಆವಿಷ್ಕಾರದೊಂದಿಗೆ ಜನಮನ ಗೆದ್ದ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಅವರು ಓರ್ವ ಪ್ರಯೋಗಶೀಲ ಬಣ್ಣದ ವೇಷಧಾರಿ’ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ. ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಗೃಹ ಸಮ್ಮಾನದೊಂದಿಗೆ ಅಳಿಕೆ ರಾಮಯ್ಯ ರೈ ಯಕ್ಷ ಸಹಾಯನಿಧಿ ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಮುಖ್ಯ ಸಲಹೆಗಾರರಾಗಿ ಅವರು ಮಾತನಾಡಿದರು. ಇನ್ನೋರ್ವ ಸಲಹೆಗಾರ ಹಾಗೂ ಸದಾಶಿವ ಶೆಟ್ಟಿಗಾರ್ ಅವರ ಒಡನಾಡಿ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬಣ್ಣದ ಮಾಲಿಂಗಜ್ಜನ ಗರಡಿಯಲ್ಲಿ ಪಳಗಿದ ಸದಾಶಿವ ಶೆಟ್ಟಿಗಾರ್ ರವರು…
ಯಕ್ಷದ್ರುವ ಪಟ್ಲ ಫೌಂಡೇಶನ್ ನ ದಶಮ ಸಂಭ್ರಮಕ್ಕೆ ಉದ್ಯಮಿ, ಸಮಾಜ ಸೇವಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ದೊಡ್ಡ ಮೊತ್ತದ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಬರೋಡ ಶಶಿಧರ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಪಟ್ಲ ಫೌಂಡೇಶನ್ ನ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ದೇಣಿಗೆ ನೀಡುತ್ತಿದ್ದಾರೆ.ಉದ್ಯಮಿಯಾಗಿರುವ ಕಾಂಗ್ರೆಸ್ ನ ಮುಖಂಡರಾದ ಉದಯ ಕುಮಾರ್ “ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್”ನ್ನು ಸ್ಥಾಪಿಸಿ ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಮಾಡಿದವರು. ಅವರಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ಗೌರವಾಧ್ಯಕ್ಷರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರು ಬಂಟರ ಸಂಘವು ಮೊದಲಿನಿಂದಲೂ ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿದ್ದು, ವಿವಿಧ ಸಮಿತಿಗಳ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ವಿವಿಧ ಸ್ತರಗಳಲ್ಲಿನ ಜನಗಳಿಗೆ ಅಗತ್ಯಕ್ಕೆ ತಕ್ಕಂತೆ ಸಹಕಾರ ನೀಡುತ್ತಾ ಬಂದಿದೆ. ‘ಇಂದಿನ ವಿದ್ಯಾರ್ಥಿಗಳೇ ಮುಂದಿನ ಸಮುದಾಯದ ಭವಿಷ್ಯದ ರೂವಾರಿ’ ಎಂಬ ನಿತ್ಯ ಸತ್ಯವನ್ನು ಮನಗಂಡು ತಮ್ಮ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಸಮುದಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ‘ಬಡ್ಡಿ ರಹಿತ ಸಾಲ’ ರೂಪದಲ್ಲಿ ಕೋಟ್ಯಾಂತರ ರೂಪಾಯಿಗಳ ನೆರವನ್ನು ನೀಡಿದೆ.ಬೆಂಗಳೂರು ಬಂಟರ ಸಂಘದಿಂದ ಸಹಾಯ ಪಡೆದ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿ ಔದ್ಯೋಗಿಕವಾಗಿ ಮುನ್ನಡೆಯುತ್ತಿರುವುದು ಸಂಘಕ್ಕೆ ಸಾರ್ಥಕತೆಯನ್ನು ತಂದಿದೆ. ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯದ ಸೇವೆಯನ್ನು ಮುಂದುವರಿಸಬೇಕಾದಲ್ಲಿ ಈಗಾಗಲೇ ತಾವು ಸಂಘದಿಂದ ಪಡೆದ ‘ಬಡ್ಡಿ ರಹಿತ ಸಾಲ’ ರೂಪದ ಸಹಾಯ ನಿಧಿಯನ್ನು ಸಂಘಕ್ಕೆ ಹಿಂತಿರುಗಿಸುವುದು ಅತ್ಯಗತ್ಯ. ಸಂಘದ ಸಹಾಯ ಧನ ಹಾಗೂ ತಮ್ಮ ಶ್ರಮದಿಂದ ಔದ್ಯೋಗಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಿರುವ ತಾವು, ಪಡೆದ ಹಣವನ್ನು ಸಂಘಕ್ಕೆ…
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಎಂ. ಕೆ. ಪ್ರಸಾದ್ ಅವರು ಈಗಾಗಲೇ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಮೇ 11ರಂದು ಸಂಜೆ ಆದರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಗಣೇಶೋತ್ಸವ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು ಡಾ. ಎಂ. ಕೆ. ಪ್ರಸಾದ್ ಹಾಗೂ ರವೀಂದ್ರ ಶೆಟ್ಟಿ ನುಳಿಯಾಲು ಅವರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ರವೀಂದ್ರ ಶೆಟ್ಟಿಯವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಡಾ. ಎಂ. ಕೆ. ಪ್ರಸಾದ್ ಅವರು ತನ್ನ ಜೊತೆಯಲ್ಲಿ ಇನ್ನೋರ್ವ ಗೌರವಾಧ್ಯಕ್ಷರನ್ನಾಗಿ ಸೇರಿಸಿಕೊಂಡಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ರವೀಂದ್ರ ಶೆಟ್ಟಿಯವರು ನಿಡ್ಪಳ್ಳಿ ಗ್ರಾಮದ ನುಳಿಯಾಲು ಬಾರಿಕೆ ತರವಾಡು ಮನೆತನದವರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ…
ನೀಟ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ತೆಗೆದು, ವೈದ್ಯಕೀಯ ವ್ಯಾಸಂಗವನ್ನು ಮಾಡಲು ಅರ್ಹತೆಯನ್ನು ಹೊಂದಿದ್ದ ಕೈಕಾರದ ದೇವಿನ್ ಪ್ರಜ್ವಲ್ ರೈರವರ ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಬೇಕಾದ ಆರ್ಥಿಕ ನೆರವನ್ನು 2020- 21ರ ಅವಧಿಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಅವಧಿಯಲ್ಲಿ 35 ಮಂದಿ ದಾನಿಗಳ ಸಹಕಾರದಲ್ಲಿ 5.73 ಲಕ್ಷ ರೂ ದೇಣಿಗೆ ಸಂಗ್ರಹಿಸಿ ನೀಡಲಾಗಿದ್ದು, ಇದೀಗ ದೇವಿನ್ ಪ್ರಜ್ವಲ್ ರೈಯವರು ವೈದ್ಯರಾಗಿದ್ದು, ಈ ನಿಟ್ಟಿನಲ್ಲಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸರಳ ಸಮಾರಂಭ ಬೂಡಿಯಾರ್ ರಾಧಾಕೃಷ್ಣ ರೈಯವರ ನಿವಾಸದಲ್ಲಿ ಮೇ 20ರಂದು ಜರಗಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಬೂಡಿಯಾರ್ ರಾಧಾಕೃಷ್ಣ ರೈಯವರು ದೇವಿನ್ ಪ್ರಜ್ವಲ್ ರೈಯವರು ಆರ್ಥಿಕವಾಗಿ ಬಹಳ ಹಿಂದಿದ್ದರೂ, ಕಲಿಕೆಯಲ್ಲಿ ಮುಂದಿದ್ದರು. ವೈದ್ಯನಾಗಬೇಕೆಂಬ ತುಡಿತ ಇತ್ತು. ಈ ವಿಚಾರ ಬಂಟರ ಸಂಘದ ಗಮನಕ್ಕೆ ಬಂದಾಗ 2020-21ರ ಅವಧಿಯಲ್ಲಿ ನಾನು ಬಂಟರ ಸಂಘದ ಅಧ್ಯಕ್ಷನಾಗಿದ್ದ ಸಮಯದಲ್ಲಿ ಚಿಲ್ಮೆತ್ತಾರು ಜಗಜೀವನ್ ದಾಸ್ ರೈ ಹಾಗೂ ಜೈರಾಜ್ ಭಂಡಾರಿ ಡಿಂಬ್ರಿ ಅವರೊಂದಿಗೆ…
ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ: ವಾರ್ಷಿಕ ಶ್ರೀ ಮನ್ಮಹಾರಥೋತ್ಸವ
ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವು ಸಂಭ್ರಮದಲ್ಲಿ ನಡೆಯಿತು. ರಥೋತ್ಸವ ಪ್ರಯುಕ್ತ ಸಾನಿಧ್ಯದಲ್ಲಿ ಬೆಳಿಗ್ಗೆ ಬುದ್ಧ ಪೂರ್ಣಿಮಾ, ಪೂರ್ವಾಹ್ನ ನಿತ್ಯಬಲಿ, ಅಧಿವಾಸ ಹೋಮ, ರಥ ಶುದ್ಧಿ, ರಥ ಬಲಿ, ಪೂರ್ವಾಹ್ನ 10ಕ್ಕೆ ರಥಾರೋಹಣ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ಸಡಗರ ಸಂಭ್ರಮದಲ್ಲಿ ನಡೆಯಿತು. ರಥೋತ್ಸವಕ್ಕೆ ವಿವಿಧ ರಾಜ್ಯಗಳಿಂದ, ವಿವಿಧ ಜಿಲ್ಲೆಗಳಿಂದ, ವಿದೇಶದಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನ ಸುತ್ತಲೂ ಮತ್ತು ರಥ ಬೀದಿ ಸುತ್ತಲೂ ಹೂವಿನ ಅಲಂಕಾರ ವಿದ್ಯುತ್ ದೀಪ ಅಲಂಕಾರ ಮತ್ತು ವಿವಿಧ ವೇಷ ಭೂಷಣಗಳು ವಾದ್ಯಗೋಷ್ಠಿಗಳು ಚಂಡೆ ವಾದನ ರಥೋತ್ಸವಕ್ಕೆ ಇನ್ನಷ್ಟು ಅದ್ದೂರಿಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಕಿರಿಮಂಜೇಶ್ವರ ಗ್ರಾಮ…
ಗುಡ್ಡಮ್ಮಾಡಿ ಸೇನಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಮತ್ತು ಶ್ರೀ ದುರ್ಗಾಪರಮೇಶ್ವರಿ ಮೂಲಸ್ಥಾನದ ಮೆಟ್ಟಿಲು ಸೇವೆ ಲೋಕಾರ್ಪಣೆ ಬಹಳ ವಿಜೃಂಭಣೆ ಯಿಂದ ನಡೆಯಿತು. ಬೆಳಿಗ್ಗೆ ಗಂಟೆ 8-00 ರಿಂದ ಗುರುಗಣಪತಿ ಪೂಜೆ, ಪ್ರಾರ್ಥನೆ, ಪುಣ್ಯಾಹ, ಸ್ನಪನಾಧಿವಾಸ ಹೋಮ, ಕಲಶ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಮೂಲಸ್ಥಾನದ ಮೆಟ್ಟಿಲು ಲೋಕಾರ್ಪಣೆಯನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆಯವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು.11.30 ಕ್ಕೆ ಶ್ರೀ ದೇವಿಯ ಮೂಲಸ್ಥಾನಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಭಜನಾ ತಂಡಗಳು ವಾದ್ಯಗೋಷ್ಠಿ ಚಂಡೆ ವಾದನಗಳ ಮೂಲಕ ಭವ್ಯ ಮೆರವಣಿಗೆ ಸಾಗಿತು. ನಂತರ ಅಷ್ಠಾವಧಾನ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. 12-30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 7ಕ್ಕೆ ಶ್ರೀ ದೇವಿಯ ಸಾನ್ನಿಧ್ಯದಲ್ಲಿ ರಂಗಪೂಜೆ, ಪ್ರಸಾದ ವಿತರಣೆ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.ದೇವಸ್ಥಾನ ಸುತ್ತಲೂ ಹೂವಿನ…














