Author: admin
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಮ್ಮ ಫ್ರೆಂಡ್ಸ್ ಮುಂಡ್ಕೂರು ಸಹಕಾರದೊಂದಿಗೆ ಮುದ್ದುಕೃಷ್ಣ ಸ್ಪರ್ಧೆ
ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ದೇವಸ್ಥಾನದ ನೇತೃತ್ವದಲ್ಲಿ ನಮ್ಮ ಫ್ರೆಂಡ್ಸ್ ಸಹಕಾರದೊಂದಿಗೆ ಮುದ್ದುಕೃಷ್ಣ ಸ್ಪರ್ಧೆ ನೆರವೇರಿತು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಮುದ್ದುಕೃಷ್ಣ ಸ್ಪರ್ಧೆಯಿಂದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಹಾಗೂ ಮುದ್ದು ಮಕ್ಕಳಲ್ಲಿ ದೇವರನ್ನು ಕಾಣುವ ಕಾರಣದಿಂದ ಮುದ್ದುಕೃಷ್ಣ ಸ್ಪರ್ಧೆ ಅರ್ಥಪೂರ್ಣ ಎಂದು ಹೇಳಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಲ್ಲಡ್ಕ ಕೋರಿಬೆಟ್ಟು ಗುತ್ತು ಸುರೇಂದ್ರ ಎಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕೃಷ್ಣ ಪೂಜಾರಿ ಬಂಡ್ರೊಟ್ಟು, ಸುಜಾತ ಸಬೋಧ ಶೆಟ್ಟಿ, ನಲಿನಾಕ್ಷಿ ಸಪಲಿಗ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಸಾಯಿನಾಥ ಶೆಟ್ಟಿ, ನಮ್ಮ ಫ್ರೆಂಡ್ಸ್ ನ ಗೌರವ ಸಲಹೆಗಾರರಾದ ಉದಯ ಮುಂಡ್ಕೂರು, ಶರತ್ ಶೆಟ್ಟಿ, ಆನಂದ ಸಾಲಿಯಾನ್, ಮುಂಡ್ಕೂರು ಭಾರ್ಗವ ಜೆಸಿಐ ನ ಅಧ್ಯಕ್ಷ ವಸಂತ, ತೀರ್ಪುಗಾರರಾದ ನೇಹ, ಪಾವನ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕ ಅರುಣ್ ರಾವ್ ಕಾರ್ಯಕ್ರಮ…
ಎಕ್ಸಲೆಂಟ್ ವಿದ್ಯಾಸಂಸ್ಥೆಯು ಕೇವಲ ಶಿಕ್ಷಣಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದದ್ದಲ್ಲದೆ, ಸಾಂಸ್ಕøತಿಕ, ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕ್ಷೇತ್ರದಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ತನ್ನ ಹಿರಿಮೆಯ ಛಾಪನ್ನು ಮೂಡಿಸಿ ಅದೆಷ್ಟೊ ಪ್ರಶಸ್ತಿಗಳನ್ನು ತನ್ನ ಮೂಡಿಗೇರಿಸಿಕೊಂಡಿದೆ. ಅಂತಹ ಸಾಧನೆಗಳ ಹಾದಿಯ ದಾಖಲೆಗಳ ಸರಮಾಲೆಗಳ ಗರಿಯತ್ತ ಸಾಗುತ್ತಾ, ದಿನಾಂಕ 13-09-2025ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಇವರ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಾಲಿಬಾಲ್ ಪ್ರತಿಭೆಗಳಾದ ದೇವಿಪ್ರಸಾದ್ ಮತ್ತು ಆರ್ಯನ್ ಹೆಚ್.ಎ ರವರು ತಾಲೂಕು ತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ. ಈ ನಮ್ಮ ಸಂಸ್ಥೆಯ ಹೆಮ್ಮೆಯ ವಾಲಿಬಾಲ್ ಆಟಗಾರರಾದ ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುವುದರ ಜೊತೆಗೆ ಜಿಲ್ಲಾಮಟ್ಟದಲ್ಲಿಯೂ ಸಾಧನೆಯನ್ನು ಮಾಡಿ ಆಯ್ಕೆಗೊಳ್ಳುವಂತೆ ಹಾರೈಸಿದ್ದಾರೆ.
ಮೂಡುಬಿದಿರೆ: ಸೂಕ್ಷ್ಮಜೀವಿಗಳನ್ನು ಕೇವಲ ರೋಗಕಾರಕರೆಂದು ನೋಡುವ ಬದಲು, ಅವು ಪ್ರಕೃತಿಯ ಸಮತೋಲನ ಮತ್ತು ಮಾನವ ಬದುಕಿಗೆ ನೀಡುವ ಕೊಡುಗೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ಆರೋಗ್ಯಕರ ಹಾಗೂ ಸಮೃದ್ಧ ಸಮಾಜವನ್ನು ಕಟ್ಟಬಹುದು ಎಂದು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ದಿವ್ಯಶ್ರೀ ಎಂ.ಎಸ್. ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸೂಕ್ಷ್ಮಜೀವಿಗಳ ದಿನಾಚರಣೆಯ ಅಂಗವಾಗಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉಪನ್ಯಾಸದಲ್ಲಿ ಸೂಕ್ಷ್ಮಜೀವಿಗಳಿಂದ ಪಡೆಯಬಹುದಾದ ಅನೇಕ ಉಪಯೋಗಗಳ ಕುರಿತಂತೆ ವಿವರಿಸಿದರು. ಸಾಮಾನ್ಯವಾಗಿ ಸೂಕ್ಷ್ಮಜೀವಿಗಳನ್ನು ಕೇಳಿದಾಗ ಅನೇಕರು ರೋಗಗಳೊಂದಿಗೆ ಅವುಗಳನ್ನು ಸಂಬ0ಧಿಸುತ್ತಾರೆ. ನಿಜಕ್ಕೂ ಕೆಲವೆಡೆ ಸೂಕ್ಷ್ಮಜೀವಿಗಳು ಅಪಾಯಕಾರಿ, ಆದರೆ ಅದಕ್ಕಿಂತ ಹೆಚ್ಚಿನವು ಮಾನವನ ಬದುಕಿಗೆ ಅತ್ಯಗತ್ಯವಾದವುಗಳೇ ಆಗಿವೆ. ನಮ್ಮ ಕರುಳಿನಲ್ಲಿ ಕೋಟ್ಯಾಂತರ ಸೂಕ್ಷ್ಮಜೀವಿಗಳು ವಾಸಿಸುತ್ತಿದ್ದು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಕರ ಜೀವನಕ್ಕೆ ನೆರವಾಗುತ್ತವೆ. ದೈನಂದಿನ ಜೀವನದಲ್ಲಿ ಹಾಲಿನ ಉತ್ಪನ್ನಗಳು – ಮೊಸರು, ಚೀಸ್, ಬೆಣ್ಣೆ ಮುಂತಾದವುಗಳ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳೇ…
ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ಪ್ರೊವಿನಿಯೋ ೨.೦ ರಾಷ್ಟ್ರೀಯ ವಿಚಾರ ಸಂಕಿರಣ ಸೆಪ್ಟೆಂಬರ್ ೧೯ ಮತ್ತು ೨೦ರಂದು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದೆಹಲಿಯ ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಪರಿಷತ್ನ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷ ಡಾ.ಎ.ಎಸ್.ಕುಮಾರ್ ಮಿತ್ರಚಂದ್ರ ಧಾವಲೆ, ಗೌರವ ಅತಿಥಿಯಾಗಿ ದಕ್ಷಿಣ ಕನ್ನಡದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಕೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಎಂಮೋಹನ ಆಳ್ವ ಅಧ್ಯಕ್ಷತೆವಹಿಸುವರು. ಎರಡು ದಿನ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ಹೋಮಿಯೋಪಥಿ ಕ್ಷೇತ್ರದ ದೇಶದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕರ್ಯಕ್ರಮ ನಡೆಯಲಿದೆ.
‘ನಮ್ಮ ಹಬ್ಬಗಳಲ್ಲೆಲ್ಲಾ ಐಕ್ಯತೆಯ ಸಂದೇಶವಿದೆ. ಅಷ್ಟಮಿಯ ಆಚರಣೆಯಲ್ಲಿ ಅದು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀ ಕೃಷ್ಣನಂತಹ ಪುರಾಣ ಪುರುಷರ ಉಪದೇಶಗಳಿಂದ ಸಮಾಜದಲ್ಲಿ ಜಾಗೃತಿ ಮೂಡುವ ಜೊತೆಗೆ ವಿವಿಧ ಉದ್ಯಮ ರಂಗಗಳಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಸಾಮಾಜಿಕ ಪ್ರಗತಿಯೂ ಸಾಧ್ಯವಾಗಿದೆ’ ಎಂದು ಮಾಜಿ ಅಕಾಡೆಮಿ ಸದಸ್ಯ, ಲೇಖಕ ಹಾಗೂ ಧಾರ್ಮಿಕ ಚಿಂತಕ ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಹಿಂದೂ ಸುರಕ್ಷಾ ಸಮಿತಿ ಅಡ್ಯಾರ್ ಆಶ್ರಯದಲ್ಲಿ ಅಡ್ಯಾರು ಸೋಮನಾಥ ಕಟ್ಟೆ ಬಳಿ ಛತ್ರಪತಿ ಶಿವಾಜಿ ಮೈದಾನದ ಶ್ರೀ ಕೃಷ್ಣ ಕಲಾಮಂಟಪದ ಗೀತೋಪದೇಶ ಕಲಾವೇದಿಕೆಯಲ್ಲಿ ಜರಗಿದ 43ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ‘ಭಾರತೀಯ ಕಾವ್ಯಗಳಲ್ಲಿ ಪ್ರಸ್ಥಾನ ತ್ರಯಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳಲ್ಲಿ ಮಾನವರ ಬದುಕನ್ನು ಸುಭಗಗೊಳಿಸುವ ಜೀವನ ಮೌಲ್ಯಗಳ ಪಾಠವಿದೆ. ಅದರಲ್ಲೂ ಶ್ರೀ ಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯನ್ನು ಹಿಂದೂಗಳ ಪವಿತ್ರ ಧರ್ಮ ಗ್ರಂಥವೆಂದೆ ಭಾವಿಸಲಾಗಿದೆ’ ಎಂದವರು ನುಡಿದರು. ಶ್ರೀ…
ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ, ಕಾರ್ಕಳ : 4 ನೇ ವಾರ್ಷಿಕ ಮಹಾಸಭೆ, 58.47 ಲಕ್ಷ ನಿವ್ವಳ ಲಾಭ ಮತ್ತು ಶೇ 13.50 ಡಿವಿಡೆಂಟ್ ಘೋಷಣೆ
ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ, ಕಾರ್ಕಳ ಇದರ 4 ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ 13ರಂದು ಕಾರ್ಕಳದ ಹೋಟೆಲ್ ಸ್ವಾಗತ್ ನಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 31-03-2025ರ ಅಂತ್ಯಕ್ಕೆ ಸೊಸೈಟಿಯು 18.77 ಕೋಟಿ ಠೇವಣಿ ಸಂಗ್ರಹಿಸಿ, 17.95 ಕೋಟಿ ಸಾಲ ನೀಡಿ 36.72 ಕೋಟಿ ವ್ಯವಹಾರವನ್ನು ನಡೆಸಿ 107 ಕೋಟಿ ವಹಿವಾಟನ್ನು ಮಾಡಿ, 58.47 ಲಕ್ಷ ಲಾಭವನ್ನು ಗಳಿಸಿ, 3 ವರ್ಷದಲ್ಲಿಯೇ ಶೇ 13.50 ಡಿವಿಡೆಂಟ್ ನೀಡಿರುವುದು ನಮ್ಮ ಸೊಸೈಟಿಯ ಹೆಮ್ಮೆ ಎಂದು ತಿಳಿಸಿದರು. ಈ ಅಭಿವೃದ್ಧಿಯಲ್ಲಿ ನಮ್ಮ ಸಂಘದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೊಸೈಟಿಯು ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದು ತಿಳಿಸಿದರು. ಸೊಸೈಟಿಯ ಉಪಾಧ್ಯಕ್ಷ ಕೆ ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕಿ ವಿನಯ ಅರುಣ್ ಶೆಟ್ಟಿ ಮಹಾಸಭೆಯ ನೋಟಿಸನ್ನು ವಾಚಿಸಿದರು. ನಿರ್ದೇಶಕ ಪ್ರಶಾಂತ್…
ಶ್ರೀ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿ : ನವೆಂಬರ್ 09 ರಂದು ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ
ಶ್ರೀ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿ ಕುತ್ತೆತ್ತೂರು ಸೂರಿಂಜೆ ಇದರ ಆಶ್ರಯದಲ್ಲಿ 75ನೇ ಭಜನಾ ಮಂಗಲೋತ್ಸವದ ಪ್ರಯುಕ್ತ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಹ್ವಾನಿತ ಭಜನಾ ತಂಡಗಳಿಂದ ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ ನವೆಂಬರ್ 9 ರಂದು ಭಾನುವಾರ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಬೆಳಿಗ್ಗೆ 8.30 ರಿಂದ ನಡೆಯಲಿದೆ. ವಿಭಾಗ I ಬಾಲಕ ಬಾಲಕಿಯರಿಗೆ 15 ವರ್ಷದ ಒಳಗಿನ, ವಿಭಾಗ II ಮಹಿಳೆಯರಿಗೆ ಮುಕ್ತ ವಿಭಾಗ ಇದೆ. ಸ್ಪರ್ಧಾ ನಿಬಂಧನೆಗಳು : ದಾಸರ ಕೀರ್ತನೆಗಳನ್ನು ಮಾತ್ರ ಹಾಡುವುದು ಮತ್ತು ಅಂಕಿತನಾಮ ಕಡ್ಡಾಯ ಆಗಿದೆ. ಪ್ರತಿ ವಿಭಾಗದಲ್ಲಿ 12 ತಂಡಗಳಿಗೆ ಮಾತ್ರ ಅವಕಾಶ ಇದೆ. ಒಬ್ಬ ಸದಸ್ಯ ಒಂದು ತಂಡದಲ್ಲಿ ಮಾತ್ರ ಭಾಗವಹಿಸುವುದು (ಹಿಮ್ಮೇಳ ಸೇರಿ), ಒಬ್ಬ ಭಜಕರು ಒಂದೇ ಹಾಡು ಹಾಡಬೇಕು. ತಂಡದಲ್ಲಿ ಸದಸ್ಯರ ಮಿತಿ ಹಿಮ್ಮೇಳ ಸೇರಿ ಕನಿಷ್ಠ 10 ಹಾಗೂ ಗರಿಷ್ಠ 16 ಇರಬೇಕು. ಹಿಮ್ಮೇಳದಲ್ಲಿ ತಬಲ,…
“ಅಡ್” ಪಂಡ ಅಟ್ಟಿಲ್ ಮಲ್ಪುನು, ಕನ್ನಡೊಡು “ಆಡುಗೆ ಮಾಡು” (the act and process of cooking food). ಕೋರಿ ಅಡ್ಪಿನಿ ಪಂಡ ಕೋರಿದ ಕಜಿಪು ಮಲ್ಪುನು. ನನ “ಕಂಡ್ಯಾನೆ ಅಡ್ಪಿನಿ” ಪಂಡ ಕಂಡ್ಯಾನನ್ ಕಯಿಪು ಮಲ್ತ್ ತಿನ್ಪಿನಿ ಪಂದ್ ಅರ್ತ ಅತ್ತ್, ಅತ್ತ್ ಡ ಕಂಡ್ಯಾನೆ ಅಟ್ಟಿಲ್ ಮಲ್ಪುನು ಪಂದ್ ಲಾ ಅತ್ತ್. ಮುಲ್ಪ “ಅಡ್ಪಿನಿ” ಪಂಡ ಪೊನ್ನು ಪೊಂಜೋವು ಆನ್ ಅಂಜೋವೆನ್ “ಕಂಡ್ಯಾನೆ” ಆದ್ ಒತ್ತೊಂಬಿನಿ (ಸ್ವೀಕಾರ ಮಲ್ಪುನು). ಬೋಡಾಂಡ ಒಪ್ಪಂದ (agreement) ಪಂದ್ ಲಾ ಅರ್ತ ಮಲ್ತೊನೊಲಿ. ನರಮಾನಿನ ಅತ್ತ್ ಡ ಕಂಜಿ ಕೈಕಂಜಿಲೆನ ಉಡಲ್ ಗ್ ಕೊರ್ಪಿನ ಮರ್ದ್ ನ್ ಪಂಡಿತೆರ್ ನಗುಲು “ತಯಾರ್” ಮಲ್ಪುನು. ಮರ್ದ್ “ಅರೆಪುನು”ಲಾ ಉಂಡು. ಅಪಗ ಉಂದು ಒವ್ವು ಅಡ್ಪಿನ ಮರ್ದ್? ಉಂದು ಪೆದ್ಮೆದಿಯಲ್ಲೆಗ್ ಕೊರ್ಪಿನ ಮರ್ದ್. ಒಂಜಿ ಅರ್ತೊಡು ಉಂದು ಪೆದ್ಮೆದಿಯಲ್ಲೆಗ್ ಮಲ್ಪುನ ಅನುಪಾನ ಅತ್ತ್ ಡ ಪತ್ಯ (ಪಥ್ಯ). ಅಂದ್, ಮರ್ದ್ ಗೆತೊನ್ನಗ ಡಾಕ್ಟ್ರು ಪತ್ಯ ಮಲ್ಪುಲೆ,…
ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು ನಿಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ಸಂಸ್ಥೆಯ ಪೂರ್ಣಶ್ರೀ ವಿ.ಎಸ್. ಶ್ರೇಯಾ ಹೆಮರಡ್ಡಿ ಸಿ ಮತ್ತು ಗ್ರೀಷ್ಮಾ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಮಹಿಳೆಯರಲ್ಲಿ ಅಂಡಾಶಯದ ನೀರುಗುಳ್ಳೆ ( ಓವರಿಯನ್ ಸಿಸ್ಟ್ /PCOD) – ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸಾ ಮಾರ್ಗಗಳು ಪರಿಚಯ
ಮಾಸಿಕ ಚಕ್ರವು ಮಹಿಳೆಯ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಮೊದಲ ಋತು ಚಕ್ರ ದಿಂದ ಶುರುವಾಗಿ ಋತು ಬಂಧದವರೆಗೆ ಇದು ಜೀವನದ ಅವಿಭಾಜ್ಯ ಅಂಗ. ಆದರೆ ಮಾಸಿಕ ಚಕ್ರ ಅಸಮಂಜಸವಾಗಿ, ವಿಳಂಬವಾಗಿ, ಅತಿಯಾದ ಪ್ರಮಾಣದಲ್ಲಿ ಅಥವಾ ಸಂಪೂರ್ಣ ನಿಂತಾಗ , ಅದು ಮಹಿಳೆಗೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಕಿರಿಕಿರಿ ಯನ್ನು ಉಂಟುಮಾಡುತ್ತದೆ. ಅಂತಹ ಒಂದು ಸಾಮಾನ್ಯ ಸಮಸ್ಯೆ ಎಂದರೆ PCOD – ಪಾಲಿ ಸಿಸ್ಟಿಕ್ ಓವರಿಯನ್ ಡಿಸೀಸ್. ಇಲ್ಲಿ ಅಂಡಾಶಯದ ಹಲವು ಸಿಸ್ಟ್ಗಳು (ದ್ರವ ತುಂಬಿದ ಗುಳ್ಳೆಗಳು ) ಕಂಡುಬರುತ್ತವೆ. ಹಾರ್ಮೋನ್ಗಳ ಅಸಮತೋಲನದಿಂದ ಇದು ಉಂಟಾಗುತ್ತದೆ. ಇದರ ಪ್ರಮುಖ ಲಕ್ಷಣಗಳು – ಮಾಸಿಕ ನಿಲ್ಲುವುದು (ಅಮೆನೋರಿಯಾ), ದೇಹದ ಮೇಲೆ ಹೆಚ್ಚುವರಿ ಕೂದಲು ಬೆಳವಣಿಗೆ (ಹಿರ್ಸುಟಿಸಮ್), ದೇಹದ ತೂಕ ಹೆಚ್ಚಾಗುವುದು ಮತ್ತು ಅಂಡಾಶಯ ದೊಡ್ಡದಾಗಿರುವುದು. ಹಾರ್ಮೋನ್ಗಳು ಯಾವುವು? PCOD ಯಲ್ಲಿ ಏನಾಗುತ್ತದೆ? PCOD ಯಲ್ಲಿ ಆಂಡ್ರೋಜನ್ (ಪುರುಷ ಹಾರ್ಮೋನ್) ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಅಂಡಾಣು ಬಿಡುಗಡೆ ಪ್ರಕ್ರಿಯೆ ಯಲ್ಲಿ ಏರುಪೇರಾಗಿ…















