Author: admin
ತುಲುವೆರೆ ಕಲತ್ತ ರಡ್ಡನೇ ವರ್ಷೋಚ್ಚಯ : ಕಲತ್ತ ಬುಲೆ ಬುಡುಗಡೆ, ಕಲತ್ತ ಬೊಲ್ಲಿ ಮಾನಾದಿಗೆ, ಬಾನೊದಾರೆ ಕಬಿಕೂಟ
ತುಲುವೆರೆ ಕಲ ಕೂಟೊದ ರಡ್ಡನೇ ವರ್ಷೋಚ್ಚಯ ಲೇಸ್ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಡ್ ತುಲುವೆರೆ ಕಲತ್ತ ಗುರ್ಕಾರ್ದಿ ಗೀತಾ ಲಕ್ಷ್ಮೀಶ್ ಗುರ್ಕಾರ್ಮೆಡ್ ನಡತ್ಂಡ್. ಕೊಂಡೆವೂರು ಮಠತ್ತ ಸ್ವಾಮೀಜಿ ಲೇಸ್ ಉದಿಪನ ಮಲ್ತ್ ಎಡ್ಡೆಪುದ ಸಿರಿ ಮದಿಪು ಬಾಮಿಯೆರ್. ಮಿತ್ತರ್ಮೆಡ್ ಶ್ರೀ ಧರ್ಮಸ್ಥಳ ತುಳು ಪೀಠದ ಸಂಯೋಜಕೆರ್ ಡಾ. ಮಾಧವ ಎಂ ಕೆ, ಕುಡ್ಲ ಪ್ರೆಸ್ ಕ್ಲಬ್ದ ಗುರ್ಕಾರ್ರ್ ಪಿ.ಬಿ ಹರೀಶ್ ರೈ, ಕೋಟಿ ಚೆನ್ನಯ ಸೇವಾ ಬ್ರಿಗೇಡ್ದ ಗುರ್ಕಾರ್ಲು ಕಿರಣ್ ಕುಮಾರ್ ಕೊಡಿಕಲ್, ಪೆರಿಯ ಪತ್ರಕರ್ತೆ ಮಲಾರ್ ಜಯರಾಮ್ ರೈ ಪಾಲ್ ಪಡೆದ್ ಲೇಸ್ಗೆಡ್ಡೆಪು ಬಾಮಿಯೆರ್. ಗೇನದ ಮಂಟಮೆಡ್ ತುಳುನಾಡ್ದ ಸಾಹಿತ್ಯ ಪರಂಪರೆದ ಬಗೆಟ್ ಮಹಿ ಮುಲ್ಕಿ, ತುಳು ನಾಡ್, ನುಡಿ, ಸಂಸ್ಕೃತಿ ಒರಿಪುನಲ್ಪ ಬಾಸೆದ ಮಹತ್ವದ ಬಗೆಟ್ ಡಾ. ಅರುಣ್ ಉಳ್ಳಾಲ್ ಪಾತೆರಿಯೆರ್. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಜೇಶ್ ಶೆಟ್ಟಿ ದೋಟ ಬೊಕ್ಕ ತುಳುನಾಡ್ದ ಗೇನದ ಪಿಂಗಾರ ಬಿರುದಾಂಕಿತ ಶ್ರೀಶಾವಾಸವಿ ತುಳುನಾಡ್ ಕಲತ್ತ ಬೊಲ್ಲಿ ಮಾನಾದಿಗೆ…
ಶಿವಮೊಗ್ಗದ ಪ್ರಖ್ಯಾತ ಉದ್ಯಮಿ ಶುಭಂ ಹೋಟೆಲ್ ಮಾಲೀಕರಾದ ಕೊಡುಗೈ ದಾನಿ ಉದಯ್ ಕಡಂಬ ಅವರು ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕೆ 1 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ವತಿಯಿಂದ ಉದಯ್ ಕಡಂಬ ದಂಪತಿಗಳನ್ನು ಸನ್ಮಾನಿಸಲಾಯಿತು.ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ನಿರ್ದೇಶಕರಾದ ಸದಾನಂದ ಶೆಟ್ಟಿ ಹಾಗೂ ಆನಂದ್ ಶೆಟ್ಟಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ತುಳು ಒಂದು ಸಮೃದ್ಧ ಭಾಷೆ. ಅದರ ಸಮೃದ್ಧತೆ, ಹಿರಿಮೆ, ಗರಿಮೆಯನ್ನು ಸುಂದರವಾಗಿ ತನ್ನ ಕೃತಿಗಳಲ್ಲಿ ಮೂಡಿಸುವ ಕಲೆ ಶ್ರೀಶಾವಾಸವಿಯವರಿಗೆ ಕರಗತವಾಗಿದೆ. ಅವರ ಕೃತಿಗಳಲ್ಲಿ ಜೀವಂತಿಕೆಯಿದೆ ಎಂದು ಪುತ್ತೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಹೇಳಿದರು. ಅವರು ಶುಕ್ರವಾರ ಪುತ್ತೂರು ಪತ್ರಿಕಾ ಭವನದಲ್ಲಿ ಸಿರಿಗಂಗೆ ಪ್ರಕಾಶನ ತುಳುನಾಡ್ ಪ್ರಕಟಿತ ಶ್ರೀಶಾವಾಸವಿ ತುಳುನಾಡ್ರವರ ‘ಗೇನೊದ ಬುಲೆ’ ಲೇಖನ ಮಾಲೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕೈಲಾಸ ನಮ್ಮ ಕೈಯಲ್ಲೇ ಇದೆ. ನಿರ್ಮಲ ಮತ್ತು ನಿಷ್ಕಲ್ಮಶ ಭಕ್ತಿಗೆ ಶಿವ ಒಲಿದು ಬರುತ್ತಾನೆ. ಅಲ್ಲದೆ ಮುಕ್ತಿ ನೀಡುವುದರೊಂದಿಗೆ ಬದುಕನ್ನು ಪಾವನಗೊಳಿಸಲು ಶಿವಧ್ಯಾನವೇ ಸುಲಭ ಮಾರ್ಗ. ದೈವ ಭಕ್ತಿ, ದೇವೆರಲ್ಲಿ ಅಚಲ ನಂಬಿಕೆ ಬೇಕು. ಶಿವ ತತ್ವವೇ ಸತ್ಯ ಎಂದು ಪಟ್ಟೆ ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ಪಟ್ಟೆ ಹೇಳಿದರು. ಅವರು ಸಿರಿಗಂಗೆ ಅರ್ಪಿಸುವ ಧೃತೀಜ್ ತುಳುನಾಡ್ ನಿರ್ಮಾಣದಲ್ಲಿ ಮೂಡಿಬಂದ ಶ್ರೀಶಾವಾಸವಿ ತುಳುನಾಡ್ ಸಾಹಿತ್ಯದ, ಶರತ್ ಬಿಳಿನೆಲೆ ರಾಗಸಂಯೋಜನೆ ಮತ್ತು…
ಶಿವಮೊಗ್ಗ ಬಂಟರ ಸಂಘದ ಬಂಟರ ಭವನಕ್ಕೆ ಹಾಗೂ ಕಚೇರಿಗೆ ಸಾಗರ ಬಂಟರ ಸಂಘದ ಪದಾಧಿಕಾರಿಗಳು ಇತ್ತೀಚಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಅವರು ಸಾಗರ ಬಂಟರ ಸಂಘದ ಸದಸ್ಯರನ್ನು ಸ್ವಾಗತಿಸಿದರು. ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ತಾಲೂಕು ಮಟ್ಟದ ಬಂಟರ ಸಂಘ ಸಾಗರದಲ್ಲಿ ನಿರ್ಮಾಣವಾಗುತ್ತಿದ್ದು, ಜಿಲ್ಲೆಯ ಬಂಟರ ಸಂಘದಿಂದ ನಮಗೆ ಆದಷ್ಟು ಧನಸಹಾಯವನ್ನು ನೀಡಬೇಕೆಂದು ವಿನಂತಿಸಿಕೊಂಡರು. ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಮುಂದಿನ ಪದಾಧಿಕಾರಿಗಳ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ನಾವು ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ನೀಡಲು ಸರ್ವ ಪ್ರಯತ್ನ ಮಾಡುವುದಾಗಿ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ನಿರ್ದೇಶಕರಾದ ಸದಾನಂದ ಶೆಟ್ಟಿ, ಆನಂದ ಶೆಟ್ಟಿ, ಸುನೀಲ್ ಶೆಟ್ಟಿ ಯಡೆಹಳ್ಳಿ ಉಪಸ್ಥಿತರಿದ್ದರು. ಶಿವಮೊಗ್ಗ ಬಂಟರ…
ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪರಿಸರವಾದಿ ಸುನಿಲ್ ಸಾಲಿಯಾನ್ರವರು ಆಗಮಿಸಿದ್ದರು. ಅವರು ಪ್ಲಾಸ್ಟಿಕ್ನ ಇತಿಹಾಸ ಮತ್ತು ಅತಿಯಾದ ಬಳಕೆ ಅದರ ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಿ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಈಚೆಗೆ ಪ್ಲಾಸ್ಟಿಕ್ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ದಿನನಿತ್ಯದ ಜೀವನ ಕ್ರಮದಲ್ಲಿ ಪ್ಲಾಸ್ಟಿಕ್ ರಹಿತ ವಸ್ತುಗಳನ್ನು ಬಳಸಬೇಕೆಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಪ್ರತಿದಿನವೂ ಪರಿಸರದಿನವಾಗಿರಬೇಕು. ಸ್ವಚ್ಛತೆಯನ್ನು ನಾವು ಪಾಲಿಸಿ ಇತರರಿಗೆ ಮಾಹಿತಿಯನ್ನು ನೀಡಬೇಕು. ಗಿಡವನ್ನು ನೆಟ್ಟು ಆರೈಕೆ ಮಾಡಿ ಅವುಗಳು ಬೆಳೆದಾಗ ಮಕ್ಕಳನ್ನು ಪೋಷಿಸಿದ ಹಾಗೆ ಸಂತೃಪ್ತಿ ದೊರೆಯುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲರಿಂದಲೂ ಪ್ಲಾಸ್ಟಿಕ್ ಮುಕ್ತ ಪರಿಸರದ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ ನಾವು ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಗೆಲುವನ್ನು ಸಾಧಿಸಬೇಕು. ಹಾಗೆಯೇ ಸ್ವಚ್ಛ, ಹಸಿರು ಪ್ರಕೃತಿಯನ್ನು ನಿರ್ಮಾಣ ಮಾಡಬೇಕೆಂದರು.…
ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಕ್ಲಬ್ ನ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆಯಾಗಿದ್ದಾರೆ. ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನ ಸಮಾಲೋಚನೆ ಸಭೆಯು ಸುರತ್ಕಲ್ ಸೂರಜ್ ಹೋಟೆಲ್ ನಲ್ಲಿ ಕ್ಲಬ್ ನ ಮಹಾಪೋಷಕರು ವಿರಾಜಪೇಟೆ ಪೋಲಿಸ್ ಸಹಾಯಕ ಅಯುಕ್ತರಾದ ಎಸ್ ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸಮಾಜ ಮುಖಿ ಕೆಲಸಗಳಿಗೆ ನೂತನ ಟ್ರಸ್ಟ್ ರಚಿಸಲು ನಿರ್ಧರಿಸಲಾಯಿತು. ಟ್ರಸ್ಟ್ ನ ಮಹಾಪೋಷಕರಾಗಿ ಎಸ್ ಮಹೇಶ್ ಕುಮಾರ್, ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಶೆಟ್ಟಿ, ಸದಸ್ಯರಾಗಿ ನಾಗರಾಜ್ ಕಡಂಬೋಡಿ, ಸಂತೋಷ್ ಬೇಕಲ್, ಪುಷ್ಪರಾಜ್ ಶೆಟ್ಟಿ ಮಧ್ಯ, ಕುಶಲ ಮಣಿಯಾಣಿ, ಅನಿಲ್ ಶೆಟ್ಟಿ ಸೂರಿಂಜೆ, ಸಂದೀಪ್ ಪೂಜಾರಿ, ಶಿವಪ್ರಸಾದ್, ರಾಜೇಶ್ ಮುಂಚೂರು, ಜೀವನ್, ದಿಲೀಪ್ ಇವರನ್ನು ಅಯ್ಕೆ ಮಾಡಲಾಯಿತು. ಅಗಸ್ಟ್ 10 ರಂದು ರಕ್ತದಾನ ಶಿಬಿರ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಮಹಾಬಲ ಪೂಜಾರಿ ಕಡಂಬೋಡಿ, ಮನೋಹರ ಶೆಟ್ಟಿ ಸೂರಿಂಜೆ, ನಾಗರಾಜ್…
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸಹಕಾರ ರತ್ನ ಸವಣೂರು ಕೆ ಸೀತಾರಾಮ ರೈಯವರ 78 ನೇಯ ಹುಟ್ಟು ಹಬ್ಬ ಆಚರಣೆ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ 9.30 ರಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 2025- 26 ರ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಸಂಚಾಲಕರಾದ ಸವಣೂರು ಕೆ ಸೀತಾರಾಮ ರೈ ಅವರ 78ನೇ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಳ್ಳಲಿದ್ದಾರೆ. ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಮೆರವಣಿಗೆ, ವನಮಹೋತ್ಸವಆಚರಣೆ, ದ್ವಿತೀಯ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಹಾರಾಷ್ಟ್ರದ ಪ್ರತಿಷ್ಠಿತ ಜಾತೀಯ ಸಂಘ ಸಂಸ್ಥೆಗಳಲ್ಲೊಂದಾದ ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯಿಂದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮ ಜೂನ್ 7 ರಂದು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10ರಿಂದ ಅಪರಾಹ್ನ 2ರ ತನಕ ನಡೆಯಲಿದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ವಿಶೇಷ ಚೇತನರುಗಳಿಗೆ ಮತ್ತು ವಿಧವೆಯರಿಗೆ ಆರ್ಥಿಕ ನೆರವು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ದತ್ತು ಸ್ವೀಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಸಾಧನೆಗೈಯ್ಯುತ್ತಿರುವ ವಿದ್ಯಾರ್ಥಿಗಳು, ಸಾಧಕರುಗಳಿಗೆ ಆರ್ಥಿಕ ನೆರವು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವಾರ್ಪಣೆ ಹೀಗೆ ಅನೇಕ ಸಮಾಜಪರ ಕಾರ್ಯಗಳು ಅಂದು ನಡೆಯಲಿವೆ. ಈ ಅರ್ಥಪೂರ್ಣ ಕಾರ್ಯಕ್ರಮ ದಿವಂಗತ ವಾಸು ಕೆ. ಶೆಟ್ಟಿಯವರ ಸ್ಮರಣಾರ್ಥ ಚರಿಶ್ಮಾ ಬಿಲ್ಡರ್ಸ್ ನ ಕಾರ್ಯಾಧ್ಯಕ್ಷ ಸುಧೀರ್ ವಿ. ಶೆಟ್ಟರ ಪ್ರಮುಖ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಈ ಸಮಾಜಪರ ಮಾತ್ರವಲ್ಲ, ಸಂಘದ ಬಹುದೊಡ್ಡ ಕಾರ್ಯಕ್ರಮ ಆಗಿರುವ ಬೃಹತ್…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮ ಸಂಭ್ರಮ ಕಾರ್ಯಕ್ರಮದ ರಾಷ್ಟ್ರೀಯ ಕಲಾ ಸಮ್ಮೇಳನ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ನಾಡೋಜ ಜಿ. ಶಂಕರ್ ಅವರು, ಕಳೆದ 10 ವರ್ಷಗಳಿಂದ ಪಟ್ಲ ಫೌಂಡೇಶನ್ ಟ್ರಸ್ಟ್ ಜನಮೆಚ್ಚಿದ ಕೆಲಸವನ್ನು ಮಾಡುತ್ತಾ ಬಂದಿದೆ. ಈಗಿನ ಪೀಳಿಗೆ ಯಕ್ಷಗಾನ ಕಲೆಯ ಬಗ್ಗೆ ಅಷ್ಟಾಗಿ ಅಭಿರುಚಿಯನ್ನು ಹೊಂದಿಲ್ಲ. ಆದರೆ ಪಟ್ಲರ ಕಾರ್ಯ ಸಾಧನೆಯಿಂದ ಯಕ್ಷಗಾನ ಇಂದು ಯುವ ಮನಸುಗಳಿಗೂ ಆಪ್ತವಾಗಿದೆ. ಉಡುಪಿಯಲ್ಲೂ ನಮ್ಮ ಟ್ರಸ್ಟ್ ಪಟ್ಲರ ಜೊತೆಗೆ ಕೈಜೋಡಿಸಲಿದೆ. ಇದೊಂದು ಒಳ್ಳೆಯ ಕಾರ್ಯಕ್ರಮ. ಪಟ್ಲರ ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿದಾಗ ಕಲಾವಿದರ ಬದುಕು ಹಸನಾಗುತ್ತದೆ ಎಂದರು. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತಾಡಿ, ಯಕ್ಷಗಾನ ಮಲೆನಾಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುನ್ನತ ಕಲೆ. ನಮ್ಮ ಕ್ಷೇತ್ರದ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದನಾರ್ಹರು. ಇಂತಹ ಕಾರ್ಯಕ್ಕೆ ನಾವೆಲ್ಲರೂ ಬೆಂಬಲ…
ಒಮ್ಮೊಮ್ಮೆ ಹೀಗೂ ಆಗುವುದು. 2025ರ ಐಪಿಎಲ್ನ ಕ್ವಾಲಿಫೈಯರ್ ಪಂದ್ಯದಲ್ಲಿ ಆಗಿದ್ದು ಅದೇ. ಕೆಂಪು ಗುಲಾಬಿಯನ್ನು ಕೀಳಲು ಹೋದ ಪ್ರೀತಿಯ ಹುಡುಗರಿಗೆ ಮುಳ್ಳು ಚುಚ್ಚಿದ್ದು ಗೊತ್ತೇ ಆಗಲಿಲ್ಲ. ಗೊತ್ತಾದಾಗ ಡಿಂಪಲ್ ರಾಣಿಯ ಹುಡುಗರ ಮನಸ್ಸು ಕೈ ಜಾರಿ ಹೋಗಿದೆ. ಐಪಿಎಲ್ನಲ್ಲಿ ಭಗ್ನ ಪ್ರೇಮದ ವೇದನೆಯಲ್ಲಿರುವ ಬೆಂಗಳೂರು ಹುಡುಗರ ಭಾಗ್ಯದ ಬಾಗಿಲು ತೆರೆದಂತಿದೆ. ಹೌದು, ಆರ್ ಸಿಬಿ ಅಂದ್ರೆ ಸೂಜಿಗಲ್ಲಿನಂತೆ ಸೆಳೆಯುವ ಅಯಸ್ಕಾಂತ. ಸೋತರೆ ಕಣ್ಣೀರು. ಗೆದ್ದರೆ ಪರಮಾನಂದ. ಕಪ್ ಗೆಲ್ಲದಿದ್ರೂ ಚಿಂತೆ ಇಲ್ಲ. ಯಾಕಂದ್ರೆ ಅದು ಎಂದೆಂದಿಗೂ ಮುಗಿಯದ ಅಮರ ಪ್ರೇಮ. ಒಂದು ರೀತಿಯಲ್ಲಿ ಮೋಹದ ಬಲೆಯೊಳಗೆ ಬಿದ್ದ ಪ್ರೀತಿಯ ಹಾಗೇ. ಆರ್ ಸಿಬಿ ಅಭಿಮಾನಿಗಳ ಪ್ರೀತಿಯ ಅಭಿಮಾನ, ತಾಳ್ಮೆ, ಸಂಯಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಪ್ರತಿಷ್ಠೆ, ಆತ್ಮಾಭಿಮಾನಕ್ಕೆ ದಕ್ಕೆಯಾದ್ರೂ ಡೋಂಟ್ಕೇರ್. ಎಷ್ಟೇ ಟೀಕೆ, ಹೀಯಾಳಿಸಿದ್ರೂ ಪರವಾಗಿಲ್ಲ. ಒಂದಲ್ಲ ಒಂದು ದಿನ ಗೆದ್ದೇ ಗೆಲ್ತೀವಿ ಅನ್ನೋ ಬಲವಾದ ನಂಬಿಕೆ ರೆಡ್ ಆರ್ಮಿಯಲ್ಲಿದೆ. ಪ್ರತಿ ಸಲ ಈ ಬಾರಿ ಕಪ್ ನಮ್ದೆ ಅಂತ…














