Author: admin
ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಎಂಶ್ರೀ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮದಡಿ ಇಕೋಕ್ಲಬ್, ಸ್ಕೌಟ್ ಆಂಡ್ ಗೈಡ್, ಸಾಹಿತ್ಯ ಕ್ಲಬ್ ಸೇವಾದಳ, ಸಾಂಸ್ಕೃತಿಕ ಕ್ಲಬ್ ಆಯೋಜಿಸಿದ ತುಳುನಾಡಿನ ಸಂಸ್ಕೃತಿಗಳ ಪರಿಚಯವನ್ನು ಮಾಡುವ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳಿಂದ ಮಾತುಕತೆ, ತುಳುನಾಡಿನ ಆಷಾಡ ಮಾಸದ ತಿನಿಸುಗಳು ಹಾಗೂ ತುಳುನಾಡ ಬಲಿಯೇಂದ್ರೆ ಎಂಬ ಯಕ್ಷಗಾನ ತಾಳಮದ್ದಳೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಇವರು ನೆರವೇರಿಸಿದರು. ತಾಸೆ ಡೋಳು ಬಾರಿಸಿ ತುಳು ಸಂಸ್ಕೃತಿಯನ್ನು ಉದ್ಘಾಟಿಸಿ ಮಾತನಾಡಿದ ರಾಕೇಶ್ ರೈ ಕೆಡೆಂಜಿಯವರು, ತುಳುನಾಡು ಬಾರ್ಕೂರಿನಿಂದ ಕಾಸರಗೋಡಿನ ತನಕ ವ್ಯಾಪಿಸಿದೆ. ಇಲ್ಲಿಯ ಆಚರಣೆಗಳು, ಇಲ್ಲಿನ ಜನರ ಪ್ರೀತಿ, ನಂಬಿಕೆಗಳು, ಆರಾದನೆಗಳು, ಜಾಗತೀಕರಣದ ಜಂಜಾಟದಲ್ಲಿ ಬದುಕು ಮರೆಯಾಗಿ ಯಾಂತ್ರಿಕತೆಗೆ ವಾಲುತ್ತಿರುವ ದಿನಮಾನಗಳಲ್ಲಿ ತುಳು ಸಂಸ್ಕೃತಿಯ ಬದುಕು ಕಟ್ಟಿಕೊಳ್ಳುವ ಕಾಯಕ ಶಾಲೆಗಳಲ್ಲಿ ಆಗುತ್ತಿರುವುದು ಸ್ತುತ್ಯಾರ್ಹ್ಯ ಎಂದರು. ಶಾಲೆಯಲ್ಲಿ ಸಿದ್ಧಗೊಳಿಸಿದ ತುಳು ಆಹಾರ ಖಾದ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಭಾಗ್ಯೇಶ್ ರೈಯವರು, ಆಹಾರಗಳು ಮನುಷ್ಯನ ಮೇಲೆ ವಿಶೇಷವಾದ…
ಬಂಟರ ಸಂಘ ಅಳಿಕೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಷ್ಟಾವದಾನ ದುರ್ಗಾ ಪೂಜೆಯು ಎರುಂಬು ವಿಷ್ಣುಮಂಗಲ ದೇವಸ್ಥಾನದ ಸಭಾ ಭವನದಲ್ಲಿ ಬಹಳ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ನಡೆಯಿತು. ಪ್ರಾರಂಭದಲ್ಲಿ ವಿಷ್ಣುಮಂಗಲ ದೇವಸ್ಥಾನದಲ್ಲಿ ಸಂಕಲ್ಪ ಮಾಡಿ, ಸಭಾಭವನದಲ್ಲಿ ದೀಪ ಬೆಳಗಿಸುವ ಮೂಲಕ ಬಾಲಕೃಷ್ಣ ಕಾರಂತರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟ ಬಾಂಧವರಿಂದ ಭಜನೆ, ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ರೈ ಪಡಿಬಾಗಿಲು ಇವರು ನೂತನ ಕಮಿಟಿಗೆ ಅಧಿಕಾರ ಹಸ್ತಾಂತರಿಸಿದರು. ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಅಳಿಕೆ ಮತ್ತು ಬಂಟರ ಸಂಘ ಅಳಿಕೆಯ ಪದಗ್ರಹಣ ಸಮಾರಂಭ ಹಿರಿಯರ ಸಮ್ಮುಖದಲ್ಲಿ ನಡೆಯಿತು. ಬಂಟರ ಸಂಘ ಅಳಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನದಾಸ್ ರೈಯವರು ಮುಂದಿನ ಮೂರು ವರ್ಷದ ಕಾಲಾವಧಿಯಲ್ಲಿ ಎಲ್ಲರ ಸಂಪೂರ್ಣ ಸಹಕಾರವಿರಲೆಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ಇಬ್ಬರು ಮಕ್ಕಳನ್ನು ಸನ್ಮಾನಿಸಲಾಯಿತು. ಬಳಿಕ ಅಷ್ಟಾವದಾನ ಸೇವೆ…
ಯುನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರಿಗಾಗಿ ವಿಶೇಷವಾಗಿ ನಾಯಕತ್ವ ಹಾಗೂ ಚಿಂತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 2 ರಂದು ಬೆಳಗ್ಗೆ 11ರಿಂದ ಸಂಜೆ 4.30 ರವರೆಗೆ ಕೆಂಗೇರಿಯಲ್ಲಿರುವ ಯುನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಕೀರ್ಣದ ಕೋಲೂರು ಶಾಖೆಯಲ್ಲಿ ಕಾರ್ಯಾಗಾರ ನಡೆಯಲಿದೆ. ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ನೇತೃತ್ವ ವಹಿಸಲಿದ್ದು, ‘ಶೈಕ್ಷಣಿಕ ಕ್ಷೇತ್ರದಲ್ಲಿನ ಪ್ರಸ್ತಕ ಸವಾಲುಗಳು ಹಾಗೂ ಶೈಕ್ಷಣಿಕ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ’ ಕುರಿತು ಕಾರ್ಯಕ್ರಮ ನಡೆಯಲಿದೆ.ಕೃತಕ ಬುದ್ಧಿಮತ್ತೆ ಮೂಲಕ ಶೈಕ್ಷಣಿಕ ಆಡಳಿತ ಮತ್ತು ನಿರ್ಧಾರಗಳ ಯಶಸ್ಸಿಗೆ ಸಹಾಯ ಮಾಡುವುದರ ಜತೆಗೆ ಶಿಕ್ಷಣ ಸಂಸ್ಥೆಗಳು ಹೊಸ ಸವಾಲು ಎದುರಿಸುವುದರ ಕುರಿತು ಚರ್ಚೆ ನಡೆಯಲಿದೆ. ನೋಂದಣಿ ಉಚಿತವಾಗಿದ್ದು, ಶೈಕ್ಷಣಿಕ ಆಡಳಿತದಲ್ಲಿ ಎಐ ಕುರಿತು ತಜ್ಞರ ಭಾಷಣ, ಪಿಯು ಕಾಲೇಜು ಮುಖ್ಯಸ್ಥರೊಂದಿಗೆ ನೆಟ್ ವರ್ಕಿಂಗ್ ಅವಕಾಶ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9686664985 ಗೆ ಸಂಪರ್ಕಿಸಬಹುದು.
ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾಮರ್ಸ್ ಫೆಸ್ಟ್ ಪ್ರಯುಕ್ತ ನಡೆಸಲ್ಪಟ್ಟ ಎಕನಾವಾಂಝ ಇಂಟರ್ ಕಾಲೇಜುಗಳ ವಿವಿಧ ಸ್ಪರ್ಧಾವಳಿಗಳಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಚಾಂಪಿಯನ್ ಶಿಪ್ ನೊಂದಿಗೆ, ನಗದು ಪುರಸ್ಕಾರವನ್ನು ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳಾದ ಆದ್ಯ ಪಡ್ರೆ, ಚಿರಾಯು, ಸುಜೀತ್, ಶ್ರೇಯಸ್, ಮಂಗಿಲಲ್, ಅನ್ವಿತ್, ಕಿಶನ್, ಚಿನ್ಮಯ್, ಸೃಷ್ಟಿ, ಅರುಷಿ, ಸೋನಿಯಾ, ಸಂಜನಾ, ಪ್ರೇರಣಾ, ಹರ್ಷಿತ, ಅನಿಷಾ,ವೃದ್ಧಿ, ದ್ಯುತಿ, ಪೂರ್ವಿ ವಿವಿಧ ಸ್ಪರ್ಧೆ ಯಲ್ಲಿ ಭಾಗವಹಿಸಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ಯನ್ನು ತಂದು ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ : ಮಹಿಳಾ ವಿಭಾಗದಿಂದ ಆಟಿದ ಪೊರ್ಲ ತಿರ್ಲ್ ಕಾರ್ಯಕ್ರಮ
ಈಗ ಎಲ್ಲಾ ಸಂಸ್ಥೆಗಳು ಆಟಿಯನ್ನು ವೈವಿಧ್ಯಮಯವಾಗಿ ಆಚರಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯ ತಿರುಳನ್ನು ತಿಳಿಸುತ್ತದೆ. ಇವತ್ತು ಈ ಸಮಿತಿ ಕೃಷಿ ಸಂಸ್ಕೃತಿಗೆ ವಿಶೇಷ ಮಹತ್ವ ನೀಡಿರುವುದು ಸಂತೋಷವಾಗಿದೆ. ನಾನು ಕೂಡಾ ಕೃಷಿಯ ಎಲ್ಲಾ ಬಗೆಯ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡವನು ಎನ್ನಲು ಆನಂದವಾಗುತ್ತದೆ. ಇಲ್ಲಿನ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಅಂಧೇರಿ ಬಾಂದ್ರಾದ ಕೊಡುಗೆ ಮಹತ್ವದ್ದು. ಇಂದು ಸಮಿತಿಯ ಪದಾಧಿಕಾರಿಗಳು ವಿಶೇಷ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟದ್ದನ್ನು ನೋಡಿ, ನಿಮ್ಮ ಮಾತುಗಳನ್ನು ಕೇಳಿ ಖುಷಿಯಾಗಿದೆ. ಮಹಿಳೆಯರನ್ನು ಸಾಂಘಿಕವಾಗಿ, ಸಾಂಸ್ಕ್ರತಿಕವಾಗಿ ಒಗ್ಗೂಡಿಸಿ ಪ್ರತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಶೋಭಾ ಅಮರನಾಥ ಶೆಟ್ಟಿ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಮಿತಿ ಅಂದಿನಿಂದ ಇಂದಿನವರೆಗೂ ಎಲ್ಲಾ ವಿಧದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆಟಿ ತಿಂಗಳ ಆಚರಣೆ ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿನೊಂದಿಗೆ ಸಹಭೋಜನದೊಂದಿಗೆ ಭಾಂಧವ್ಯವನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ ಭೋಜ…
ಅನ್ಯ ಉದ್ಯೋಗವಿಲ್ಲದೆ ಕೇವಲ ಕೃಷಿ ಕಾಯಕದಲ್ಲಿ ತೊಡಗಿದ್ದ ನಮ್ಮ ಹಿರಿಯರು ತೀರಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿದ್ದ ಕಾಲ ಆಟಿ. ಆಗ ತೀವ್ರ ಬಡತನ, ನಿರುದ್ಯೋಗ ಮತ್ತು ರೋಗ ರುಜಿನಗಳಿಂದ ಜನ ನರಳುತ್ತಿದ್ದರು. ಆದರೆ ಆಟಿ ಅನಿಷ್ಟವೆಂದು ಅವರೆಂದೂ ಭಾವಿಸಿರಲಿಲ್ಲ; ಅದು ಅವರ ಬದುಕಿಗೆ ನಿಷ್ಠವಾಗಿತ್ತು. ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನೇ ಸೇವಿಸಿ ದಿನ ದೂಡುತ್ತಿದ್ದವರಿಗೆ ಆಹಾರವೇ ಔಷಧಿಯೂ ಆಗಿತ್ತು ಎಂದು ವಿಶ್ರಾಂತ ಪ್ರಾಧ್ಯಾಪಕ, ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ‘ಪಿಂಗಾರ’ ತುಳು ಸಂಘದ ಆಶ್ರಯದಲ್ಲಿ ಜರಗಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಟಿಪಳ್ಳ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಅನುಸೂಯ ಕೆ.ಪಿಯವರು ತೆಂಗಿನ ಗರಿ ಅರಳಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಲ್ಯಪದವು ಸರಕಾರಿ ಕಿರಿಯ ಕಾಲೇಜಿನ ಇತಿಹಾಸ ಉಪನ್ಯಾಸಕ ಕೇಶವ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಗುರುಪುರ ಸರಕಾರಿ ಪದವಿಪೂರ್ವ…
ಬಂಟರ ಸಂಘ ಫರಂಗಿಪೇಟೆ ವಲಯದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಆಟಿದ ಗಮ್ಮತ್ ಕಾರ್ಯಕ್ರಮ ಬಂಟವಾಳದ ಬಂಟರ ಭವನದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಜುಲೈ 27 ರಂದು ಜರಗಿತು. ಮಾಜಿ ಸಚಿವ ಬಿ ರಮಾನಾಥ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಂಟ ಸಮುದಾಯ ಇತರ ಸಮುದಾಯದವರನ್ನು ಗೌರವಿಸುವ ಸಮಾಜ. ಅದಕ್ಕಾಗಿಯೇ ನಮಗೆ ಇತರ ಸಮಾಜದವರು ಕೂಡಾ ನಾಯಕತ್ವವನ್ನು ನೀಡುತ್ತಾರೆ. ನಾವಾಗಿಯೇ ನಾಯಕತ್ವವನ್ನು ಪಡೆದಿರುವುದಲ್ಲ. ಇತರರು ನಮಗೆ ನೀಡಿರುವುದೆಂದು ಹೇಳಿದರು. ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ ಸಮುದಾಯ ಸಾಹಸಿ ಪ್ರವೃತ್ತಿಯವರು. ಎಲ್ಲಾ ರಂಗಗಳಲ್ಲಿಯೂ ಬಂಟರು ತನ್ನ ವಿಶೇಷ ಛಾಪು ಮೂಡಿಸಿದ್ದಾರೆ ಎಂದು ಶಶಿ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡ ಇದರ ಸಿಎಂಡಿ ಶಶಿಧರ ಶೆಟ್ಟಿ ಬರೋಡರವರು ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ…
ಕಲಾಪ್ರಕಾಶ ಪ್ರತಿಷ್ಠಾನ (ರಿ.) ಮುಂಬಯಿ ಇವರ ಸಂಯೋಜನೆಯಲ್ಲಿ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ ಕಲಾವಿದರು ಅಭಿನಯಿಸುವ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ನಿರ್ದೇಶನದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಜುಲೈ 26 ರಂದು ಹೊಟೇಲ್ ಗ್ಯಾಲಕ್ಸಿ ನಾಲಾಸೋಪಾರ (ಪ) ಇಲ್ಲಿ ನಡೆಯಿತು. ಯಕ್ಷಗಾನದ ಮಧ್ಯಂತರದಲ್ಲಿ ತಂಡದ ನಿರ್ದೇಶಕಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಮಹಿಷಾಸುರ ಪಾತ್ರದಲ್ಲಿ ಸಂಭ್ರಮಿಸಿದ ಪೂರ್ಣಿಮಾ ಯತೀಶ್ ರೈ, ತೆಂಕುತಿಟ್ಟಿನ ಹಿರಿಯ ಚೆಂಡೆ ವಾದಕ ಸುಬ್ರಹ್ಮಣ್ಯ ಭಟ್ ದೇಲಂತ ಮಜಲು ಹಾಗೂ ಕಟೀಲು ಮೇಳದ ಭಾಗವತ ಸತೀಶ್ ಬೊಂದೆಲ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತುಳುಕೂಟ ಫೌಂಡೇಶನ್ ನಾಲಾಸೋಪಾರ ಅಧ್ಯಕ್ಷ ಶಶಿಧರ ಕೆ ಶೆಟ್ಟಿ ಇನ್ನಂಜೆ ಮಾತನಾಡುತ್ತಾ, ಕಲೆ ಮತ್ತು ಕಲಾವಿದರಿಗೆ ನಿರಂತರವಾಗಿ ಈ ಪರಿಸರದ ಎಲ್ಲಾ ಕಲಾಪೋಷಕರು ಸಹಕಾರವನ್ನು ನೀಡುತ್ತಾ ಬಂದವರು. ಪ್ರಕಾಶ್ ಶೆಟ್ಟಿ ಅವರು ಊರಿನಿಂದ ನಾಟಕ,…
ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 28 ಜುಲೈ 2025 ರಂದು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು. ಕಾರ್ಯಗಾರದ ಉದ್ಘಾಟನೆಯನ್ನು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಕಾರ್ಕಳದ ಉದ್ಯಮಿ ಸೂರಜ್ ಶೆಟ್ಟಿ ನೆರವೇರಿಸಿ ಉದ್ಘಾಟನಾ ಮಾತುಗಳನ್ನಾಡುತ್ತ " ಮನೆ ಬಜೆಟ್ ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಶ್ಲೇಷಣಾ ಕೌಶಲ್ಯ, ಆರ್ಥಿಕ ತರ್ಕ ಮತ್ತು ನಿರ್ಣಾಯಕತೆ ಅಗತ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಮಾರುತಿ ರವರು ಅರ್ಥಶಾಸ್ತ್ರ…
ರೆಡ್ ಕ್ರಾಸ್ ತನ್ನ ಸಾಂಪ್ರದಾಯಿಕ ಸೇವಾ ಕಾರ್ಯಗಳೊಂದಿಗೆ ಪರಿಸರ ಮಾಲಿನ್ಯದ ವಿರುದ್ಧ ಜಾಗೃತಿ, ಜನರ ಮಾನಸಿಕ ಒತ್ತಡ ನಿವಾರಣೆ ಇತ್ಯಾದಿಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಜಿಲ್ಲಾಧಿಕಾರಿ ಹಳೆ ಕಚೇರಿ ಆವರಣದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ರೆಡ್ ಕ್ರಾಸ್ ನೂರಾರು ಸ್ವಯಂಸೇವಕರಿಗೆ ತರಬೇತಿ ನೀಡಿದ್ದು ವಿಪತ್ತು ನಿರ್ವಹಣೆ, ಪ್ರಾಥಮಿಕ ಜೀವ ರಕ್ಷಣೆಯಂತಹ ವಿಷಯಗಳನ್ನು ನಿಭಾಯಿಸುತ್ತಿದೆ. 160 ಕ್ಕೂ ಅಧಿಕ ದೇಶಗಳಲ್ಲಿ ರೆಡ್ ಕ್ರಾಸ್ ಯುವಜನರು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಭಾಗೀದಾರಿಕೆಯನ್ನು ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದರು. ಜನಜಾಗೃತಿ, ಸಮುದಾಯ ಸೇವೆಗೆ ಕರ್ನಾಟಕದ ರೆಡ್ ಕ್ರಾಸ್ ಘಟಕ ಎರಡು ಬಾರಿ ಪ್ರಶಸ್ತಿ ಗೆದ್ದಿರುವುದು ವಿಶೇಷ. ಸೇವೆ ಪರಮೋಚ್ಛ ಧರ್ಮ ಎನ್ನುವಂತೆ ಹೊಸ ಕಟ್ಟಡವನ್ನು ಜನ ಕಲ್ಯಾಣದ ಕೇಂದ್ರವಾಗಿ ರೂಪಿಸಿ ಎಂದು ಅವರು ಕರೆ ಕೊಟ್ಟರು. ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕೇವಲ ರಕ್ತದಾನ ಕೆಲಸವನ್ನಷ್ಟೇ ಮಾಡದೆ…