Author: admin

ಪ್ರತಿಷ್ಠಿತ ಬಂಟರ ಸಂಘ ಪುಣೆಯ ಗೌರವಾಧ್ಯಕ್ಷರಾಗಿ ಸಮಾಜಸೇವಕ, ಪುಣೆ ಬಂಟರ ಭವನದ ರೂವಾರಿ, ಬಂಟ ಭಗೀರಥ ಸಂತೋಷ್ ವಿ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಅವರು ಆಯ್ಕೆಯಾಗಿದ್ದಾರೆ. ತಾನು ಕೈಗೆತ್ತಿಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿಯೇ ನೆಮ್ಮದಿಯ ಉಸಿರು ಬಿಡುವ ಛಲವಂತ. ಸಮುದಾಯದ ಸೇವೆಗೆಂದೇ ಜನ್ಮ ತಳೆದರೋ ಎಂಬಂತೆ ಅರ್ಪಣಾ ಭಾವದಿಂದ ತನ್ನವರ ಏಳಿಗೆಗಾಗಿ ಟೊಂಕಕಟ್ಟಿ ದುಡಿದಿರುವ ಸಂತೋಷ್ ವಿ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರನ್ನು ಅಪರೂಪದ ಅಪರಂಜಿ ಎಂದರೂ ತಪ್ಪಾಗಲಾರದು. ಸಮಸ್ತ ಸಮುದಾಯ ಬಾಂಧವರ ಅಸ್ಮಿತೆಯ ಕೇಂದ್ರವಾಗಿ ಗುರುತಿಸಲ್ಪಡುವ ಮಹಾರಾಷ್ಟ್ರದ ಸಾಂಸ್ಕೃತಿಕ ನಗರವೆಂದೇ ಖ್ಯಾತಿವೆತ್ತ ಪುಣೆ ನಗರದಲ್ಲಿ ಇಂದು ತಲೆಯೆತ್ತಿ ನಿಂತ ಸುಂದರ ಸುಸಜ್ಜಿತ ಬಂಟರ ಭವನ ಆದರಣೀಯ ಸಂತೋಷ್ ಶೆಟ್ಟಿ ಅವರ ಸಂಘರ್ಷ, ಛಲ, ಪರಿಶ್ರಮ ಅರ್ಪಣಾ ಭಾವದ ಕತೆಯನ್ನು ಸಾರಿ ಹೇಳುತ್ತಿದೆ. ಹೀಗೆ ಸಿಧ್ಧಿ ಸಾಧನೆಗಳೆರಡೂ ಸಮನ್ವಯಗೊಂಡು ಪ್ರಖರ ತೇಜ ಹೊಂದಿದ ಬಂಟ ನಾಯಕ ಸಂತೋಷ್ ಶೆಟ್ಟಿಯವರು ಇಂದು ಮಹಾನಗರ ಹಾಗೂ ಹುಟ್ಟೂರಿನ ಹೆಮ್ಮೆಯ…

Read More

ಪುಣೆ ಬಂಟರ ಸಂಘದ ನೂತನ ಅಧ್ಯಕ್ಷ ಕೆಂಜಾರು ಅಜಿತ್ ಹೆಗ್ಡೆ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶಮ್ಮಿ ಅಜಿತ್ ಹೆಗ್ಡೆ ಅವರನ್ನು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಬಿಸು ಕಾರ್ಯಕ್ರಮದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಡಾ ಎ ಸದಾನಂದ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.ಈ ಸಂಧರ್ಭ ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಜೆಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ರಾಜಗೋಪಾಲ್ ರೈ, ಪ್ರಸಾದ್ ರೈ ಕಲ್ಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.

Read More

ಮೂಡುಬಿದಿರೆ: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಹಾಗೂ ಮಂಗಳೂರು ವಿವಿ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಉಡುಪಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಕ್ರಿಕೆಟ್ ತಂಡವು ಜಯಶಾಲಿಯಾಯಿತು. ಫೈನಲ್ ಪಂದ್ಯದಲ್ಲಿ ಕುಂದಾಪುರದ ಬಿಬಿ ಹೆಗ್ಡೆ ಕಾಲೇಜಿನ ತಂಡವನ್ನು 8 ವಿಕೆಟ್‌ಗಳ ಅಂತರದಿ0ದ ಗೆದ್ದು, ಶಿರ್ವ ಲೆಸ್ಲಿ ಡಿಸೋಜಾ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನ ತಂಡದ ವಿರುದ್ಧ 23 ರನ್‌ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಆಳ್ವಾಸ್ ಕಾಲೇಜಿನ ಜಿಷ್ಣು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ದೀರ್ಘಕಾಲ ಹೊರನಾಡು ಮುಂಬಯಿಯಲ್ಲಿದ್ದು, ಕನ್ನಡ ನಾಡುನುಡಿಯ ಕೈಂಕರ್ಯ ಮಾಡುತ್ತಾ ಅಲ್ಲಿ ಕನ್ನಡದ ಉಳಿವಿಗೆ, ಬೆಳವಣಿಗೆಗೆ ಶ್ರಮಿಸಿದ ವಿದ್ವಾನ್ ರಾಮಚಂದ್ರ ಉಚ್ಚಿಲರ ಬರಹ ಬದುಕನ್ನು ಅನಾವರಣಗೊಳಿಸಬೇಕು. ಅದು ದಾಖಲೀಕರಣಗೊಳ್ಳಬೇಕು ಎಂಬುದಾಗಿ ಈ ಮೇಲಿನ ಮೂರು ಸಂಸ್ಥೆಗಳು ಒಂದುಗೂಡಿ ಮಾಡಿದ ಕಾರ್ಯವೇ ಚ.ರಾ. ನೆನಪಿನ ನಾಲ್ಕು ಸಂಪುಟಗಳ ಸಂಚಯ. ಉಚ್ಚಿಲರ ಹುಟ್ಟೂರಿನಲ್ಲಿ ಈ ಸಂಪುಟಗಳು ಲೋಕಾರ್ಪಣೆಗೊಳ್ಳುತ್ತಿರುವುದು ಅದೂ ಉಚ್ಚಿಲರ ಜನ್ಮ ಶತಮಾನೋತ್ಸವದ ಸಂಸ್ಮರಣೆಯನ್ನು ಮಾಡುವ ವಿಶೇಷ ದಿನ. ಅದರೊಂದಿಗೆ ಡಾ. ವಾಣಿ ಎನ್. ಉಚ್ಚಿಲ್ಕರ್ ರವರ ಮೂರು ಕೃತಿಗಳು ಹಾಗೂ ಇನ್ನೊಂದು ಸಂಪಾದಿತ ಕೃತಿ ಹಾಗೆ ಒಟ್ಟು ೮ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಚ.ರಾ. ನೆನಪಿನ ಸಂಪುಟ ಒಂದರಲ್ಲಿ ಚ.ರಾ.ರವರ ಪ್ರಕಟಿತ ಕೃತಿಗಳಲ್ಲಿ ೫ ಕೃತಿಗಳನ್ನು ೧ ಸಂಪುಟವಾಗಿ ಸಂಕಲಿಸಲಾಗಿದೆ. ಸಂಪುಟ ಒಂದರಲ್ಲಿ ಕಡಲಕರೆಯ ಚಿತ್ರಗಳು, ೨ನೇ ಕೃತಿ ಪದರ, ೩ನೇ ಕೃತಿ ನೆನಪಿನ ಬುತ್ತಿ ೪ನೇ ಕೃತಿ ಯಕ್ಷಗಾನ ನಡೆದು ಬಂದ ದಾರಿ ಹಾಗೂ ೫ನೇ ಕೃತಿ ಗಿಡ, ಮರ, ಬಳ್ಳಿ, ಮೂಲಿಕೆಗಳು ಇದರ…

Read More

ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಂತತೆಯಿಂದ ಸಮಯ ಕಳೆಯಲು ತಕ್ಕ ಸ್ಥಳವನ್ನು ಹುಡುಕುತ್ತಿದ್ದೀರಾ? ಮಂಗಳೂರಿನ ಕಿನ್ನಿಗೋಳಿ ಬಳಿ ಇರುವ ಎಸ್‌ಬಿಎಸ್ ಫಾರ್ಮ್‌ಹೌಸ್ (Sugandhi Bhoja Shetty Farm House ) ನಿಮಗೆ ಸರಿಯಾದ ಆಯ್ಕೆ. ಇದು ನಗರದ ಜೀವನದ ಜಂಜಾಟದಿಂದ ದೂರವಿದ್ದು, ನಿಸರ್ಗದ ಸೌಂದರ್ಯವನ್ನು ಅನುಭವಿಸಲು ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣಗಳನ್ನು ರಚಿಸಲು ಶಾಂತವಾದ ಪರಿಸರವನ್ನು ಹೊಂದಿದೆ. ನಿಸರ್ಗದ ಸೌಂದರ್ಯದಲ್ಲಿ ವಿಶ್ರಾಂತಿ ಎಸ್‌ಬಿಎಸ್ ಫಾರ್ಮ್‌ಹೌಸ್ ತೆಂಗಿನ ತೋಟ , ಎತ್ತರದ ಮರಗಳು ಮತ್ತು ತಾಜಾ ಗಾಳಿಯಿಂದ ಆವರಿತವಾಗಿದೆ. ಇಲ್ಲಿ ನೀವು ದಿನನಿತ್ಯದ ಒತ್ತಡ ಮತ್ತು ಗದ್ದಲವನ್ನು ಮರೆತು, ನಿಜವಾದ ವಿಶ್ರಾಂತಿಯ ಅನುಭವ ಪಡೆಯಬಹುದು. ಮರಗಳ ನೆರಳಿನಲ್ಲಿ ಕುಳಿತುಕೊಳ್ಳುವುದು ಅಥವಾ ಹುಲ್ಲಿನ ಮೇಲೆ ನಡೆಯುವುದು—ಇದಕ್ಕೆಲ್ಲ ನಿಸರ್ಗದ ಶಾಂತಿಯೇ ಸಾಥಿ. ಇದು ಶಾಂತವಾದ ಸ್ಥಳವಾದರೂ, ತುಂಬಾ ಸುಲಭವಾಗಿ ತಲುಪಬಹುದಾಗಿದೆ. ಕಿನ್ನಿಗೋಳಿ, ಮುಲ್ಕಿ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ) ಇವೆಲ್ಲದರ ಹತ್ತಿರವಿರುವ ಈ ಸ್ಥಳ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸಹ ಸುಂದರವಾದ ತಾಣವಾಗಿದೆ. ಮೋಜು ಮತ್ತು ಆಚರಣೆಗಳಿಗೆ ( Event ) ಸೂಕ್ತ ಸ್ಥಳ ನೀವು ಹುಟ್ಟುಹಬ್ಬದ ಪಾರ್ಟಿ, ವಾರಾಂತ್ಯದ ಗೆಟ್-ಟುಗೆದರ್ ಅಥವಾ ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು…

Read More

ಪುಣೆ ಬಂಟರ ಸಂಘದ ಸಮಿತಿಯ 2025-2027 ರ ಅವಧಿಗೆ ನೂತನ ಅಧ್ಯಕ್ಷರಾಗಿ ಕೆಂಜಾರುಗುತ್ತು ಅಜಿತ್ ಹೆಗ್ಡೆ ಹಾಗೂ ಸಂಘದ ನೂತನ ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಶೀತಲ್ ಹಾಗೂ ರಾಮಕೃಷ್ಣ ಶೆಟ್ಟಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಏಪ್ರಿಲ್ 14 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಿಶೇಷ ಮಹಾಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಹಾಗೂ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಶೆಟ್ಟಿ ಕಣಂಜಾರು, ಗೌರವ ಕೋಶಾಧಿಕಾರಿಯಾಗಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ ನಿಟ್ಟೆ ಆಯ್ಕೆಗೊಂಡಿದ್ದಾರೆ.

Read More

ಮೂಡುಬಿದಿರೆ: 2024-25ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ರ‍್ಯಾಂಕ್ ಪಟ್ಟಿ ಬಿಡುಗಡೆಗೊಂಡಿದ್ದು, ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಡಾ. ಜ್ಯೋತಿ ಕೆ. ವಿ.  ಕ್ಲಿನಿಕಲ್ ನಾಚುರೋಪತಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್,  ಡಾ. ಅನಘಶ್ರೀ ಎಸ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ತೃತೀಯ ರ‍್ಯಾಂಕ್, ಡಾ. ಲೆಂಜಿಕ್ಲೂ  ಗಾನ್‌ಮೈ  ಕ್ಲಿನಿಕಲ್ ಯೋಗ ವಿಭಾಗದಲ್ಲಿ ಆರನೆಯ ರ‍್ಯಾಂಕ್, ಡಾ. ಮೇಘನಾ ಎಂ. ಕ್ಲಿನಿಕಲ್ ನ್ಯಾಚುರೋಪತಿ ವಿಭಾಗದಲ್ಲಿ ಒಂಬತ್ತನೆಯ ರ‍್ಯಾಂಕ್ ಗಳಿಸಿದ್ದಾರೆ. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.

Read More

ಬಂಟರ ಸಮುದಾಯದವರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕಾಗಿ ಬೆಂಗಳೂರು ಬಂಟರ ಸಂಘವು ಸಮುದಾಯದ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ವಿಭಾಗದ ಛೇರ್ಮನ್ ಉಮೇಶ್ ಕುಮಾರ್ ಶೆಟ್ಟಿ ಹೇಳಿದರು. ತೀರ್ಥಹಳ್ಳಿ ತಾಲೂಕು ಬಂಟರ ಸಂಘದ ವತಿಯಿಂದ ಸೌರಮಾನ ಯುಗಾದಿಯ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು. ಬೆಂಗಳೂರು ಬಂಟರ ಸಂಘವು ಪ್ರತಿ ವರ್ಷ ಒಂದು ಕೋಟಿ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಸಮಾಜದ ಬಡ ಹೆಣ್ಣು ಮಕ್ಕಳ ಮದುವೆಗೆ 50 ಲಕ್ಷ ರೂಪಾಯಿ ಮತ್ತು ಬಡವರ ಅರೋಗ್ಯ ಚಿಕಿತ್ಸೆಗೆ 25 ಲಕ್ಷ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದ್ದೇವೆ ಎಂದು ಹೇಳಿದರು. ತೀರ್ಥಹಳ್ಳಿ ಬಂಟರ ಸಂಘದ ಉಪಾಧ್ಯಕ್ಷ ಡಿ.ಎಸ್ ವಿಶ್ವನಾಥ್ ಶೆಟ್ಟಿ ಮಾತನಾಡಿ, ನಮ್ಮ ತಾಲೂಕು ಬಂಟರ ಸಂಘವು ಇತರ ಸಮಾಜ ಬಂಧುಗಳೊಂದಿಗೆ ಸೇರಿ ಸೌಹಾರ್ದವಾಗಿ ಸಮಾಜದಲ್ಲಿ ಬೆರೆತಿದೆ. ನಮ್ಮ ಮಕ್ಕಳನ್ನು ಮಾನವ ಸಂಪತ್ತಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ…

Read More

ಎಕ್ಸಲೆಂಟ್ ಹೈಸ್ಕೂಲು ಸುಣ್ಣಾರಿ, ಕುಂದಾಪುರ ಇದರ ಆಶ್ರಯದಲ್ಲಿ ದಿನಾಂಕ: 06-04-2025 ಉದ್ಘಾಟನೆಗೊಂಡಂತಹ ಚಿಣ್ಣರ ಅಂಗಳದ ಬೇಸಿಗೆ ಶಿಬಿರವಾದ ‘ ಬೆಸುಗೆ’ ಕಾರ್ಯಕ್ರಮವು ಸತತ ಎಂಟು ದಿನಗಳ ಕಾಲ ಬಹಳ ಸಾಂಸ್ಕøತಿಕ ವೈಭವಗಳೊಂದಿಗೆ ಅದ್ಧೂರಿ ಕಾರ್ಯಕ್ರಮವಾಗಿ 13-04-2025 ರಂದು ಸಮಾರೋಪಗೊಂಡಿತು. ಈ ಶಿಬಿರವು 200 ವಿದ್ಯಾರ್ಥಿಗಳ ಸೇರ್ಪಡೆಯ ನಿರೀಕ್ಷೆಯನ್ನು ಇಟ್ಟುಕೊಂಡು ಪ್ರಾರಂಭಿಸಲು ಯೋಜನೆ ಹಾಕಿಕೊಂಡರೂ, ನಿರೀಕ್ಷೆಗೂ ಮೀರಿ 250 ಕ್ಕಿಂತಲೂ ಅಧಿಕ ಚಿಣ್ಣರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿತು. ಚಿಣ್ಣರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಾ ಪ್ರತಿದಿನವು ಹೊಸ ಹೊಸ ಯೋಜನೆಗಳ ಬಣ್ಣ ಬಣ್ಣದ ಚಿತ್ತಾರಗಳೊಂದಿಗೆ ಮೂಡಿಬಂದ ಈ ಚಿಣ್ಣರ ಕಾರ್ಯಕ್ರಮವು 13-04-2025ರ ಸುಂದರ ಸಂಜೆಯಲ್ಲಿ ಸಮಾರೋಪಗೊಂಡಿರುತ್ತದೆ. ಈ ಸಮಾರೋಪ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಲು ಹಾಗೂ ಚಿಣ್ಣರ ಜೊತೆ ಹಾಸ್ಯದ ಹೊನಲನ್ನು ಹರಿಸಲು ಅತಿಥಿ ಅಭ್ಯಾಗತರಾಗಿ ಆಗಮಿಸಿದ ಕರಾವಳಿ ಕುಂದಾಪುರದ ಕುಂದಗನ್ನಡದ ಹರಿಕಾರ ಹಾಗೂ ರಾಯಭಾರಿಯೆಂದು ಜನಮನದಲ್ಲಿ ಖ್ಯಾತರಾಗಿರುವ ಮನು ಹಂದಾಡಿಯವರು ಆಗಮಿಸಿ ಈ ಸಮಾರೋಪ ಕಾರ್ಯಕ್ರಮದಲ್ಲಿ ಚಿಣ್ಣರ ಬಳಗದೊಂದಿಗೆ ರಸವತ್ತಾದ ಕುಂದಗನ್ನಡದಲ್ಲಿ ಹಾಸ್ಯ ಚಟಾಕಿಯ…

Read More

ಮುಂಬಯಿಯ ಹಿರಿಯ ಹೋಟೆಲ್ ಉದ್ಯಮಿ ಸುಬ್ಬಯ್ಯ ವಿ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದ ಏಪ್ರಿಲ್ 17 ರಂದು ಮುಂಬಯಿಯ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಮುಂಬಯಿಯ ವಿಲೇಪಾರ್ಲೆ, ಲೋನಾವಾಲ, ಪುಣೆ ನಗರಗಳಲ್ಲಿ ಹೋಟೆಲ್ ರಾಮಕೃಷ್ಣ ಮುಖಾಂತರ ಕರಾವಳಿ ಕನ್ನಡಿಗರು ನೆಲೆಯಾಗಲು ಶ್ರಮಿಸಿದ ಹಿರಿಯ ಉದ್ಯಮಿಗಳಲ್ಲಿ ಸುಬ್ಬಯ್ಯ ಶೆಟ್ಟಿಯವರೂ ಒಬ್ಬರು. ಮೂಲತಃ ಬೋಳ ಪರ್ತಿಮಾರ್ ಗುತ್ತಿನವರಾದ ಇವರು ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನ, ಬೋಳ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Read More