Author: admin
ಗಣಿತ ನಗರ : ಶ್ರೀ ಮಹಾಗಣಪತಿ ದೇವಸ್ಥಾನ ಜ್ಞಾನಸುಧಾ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ದಿನಾಂಕ 28.05.2025ನೇಬುಧವಾರ, ಸಂಜೆ 6 ಗಂಟೆಗೆ, ಗಣಿತನಗರ ಜ್ಞಾನಸುಧಾ ಸಭಾಂಗಣದಲ್ಲಿ ನಡೆಯಲಿರುವ ಮೌಲ್ಯಸುಧಾ ಕಾರ್ಯಕ್ರಮದಲ್ಲಿ ಗದಗದ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಪ.ಪೂಜ್ಯ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು “ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ-ಜೀವನ ದರ್ಶನ” ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ದಿನಾಂಕ 29.05.2025ರ ಗುರುವಾರದಂದು ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸ್ಮರಣೆಯಲ್ಲಿ ಆಹ್ವಾನಿತ 12 ಭಜನಾ ತಂಡಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷ ಭಜನಾಸುಧಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 15,16 ಮತ್ತು 17 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜು ರಾಜ್ಯ ಮಟ್ಟದ 100 ರ್ಯಾಂಕ್ನೊಳಗೆ 14 ಸ್ಥಾನ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್ ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ್ಯಾಂಕ್, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 18 ನೇ ರ್ಯಾಂಕ್, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ್ಯಾಂಕ್, B/ D-ಫಾರ್ಮ್ ವಿಭಾಗಗಳಲ್ಲಿ 25 ನೇ ರ್ಯಾಂಕ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ್ಯಾಂಕ್ ಗಳಿಸಿದ್ದಾರೆ. ಹಾಗು ವಿದ್ಯಾರ್ಥಿ ಹೆಚ್ ಎ ರಾಜೇಶ್ ಬಿ.ಎನ್.ವೈ.ಎಸ್. ವಿಭಾಗದಲ್ಲಿ 35ನೇ ರ್ಯಾಂಕ್, ಬಿ.ಎಸ್.ಸಿ. ನರ್ಸಿಂಗ್ ವಿಭಾಗ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ 52ನೇ ರ್ಯಾಂಕ್, B/ D-ಫಾರ್ಮ್ ವಿಭಾಗಗಳಲ್ಲಿ 62 ನೇ ರ್ಯಾಂಕ್…
ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2025ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ. ಅಕ್ಷಯ್ ಎಂ. ಹೆಗ್ಡೆ ಕೆಸಿಇಟಿ-ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಅಸಾಧಾರಣ ಸಾಧನೆಯ ಜೊತೆಗೆ ಆಳ್ವಾಸ್ನ ಇತರ ವಿದ್ಯಾರ್ಥಿಗಳು ಸಹ ಉನ್ನತ ರ್ಯಾಂಕ್ಗಳನ್ನು ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಸಿಇಟಿ ಫಲಿತಾಂಶವನ್ನು ಮುಂದುವರಿಸಿದ್ದಾರೆ. ರಾಜ್ಯದ ಮೊದಲ 10 ರ್ಯಾಂಕ್ಗಳಲ್ಲಿ 02 ರ್ಯಾಂಕ್, ಮೊದಲ 50 ರ್ಯಾಂಕ್ಗಳಲ್ಲಿ 12 ರ್ಯಾಂಕ್, ಮೊದಲ 100 ರ್ಯಾಂಕ್ಗಳಲ್ಲಿ 24 ರ್ಯಾಂಕ್, ಮೊದಲ 200 ರ್ಯಾಂಕ್ಗಳಲ್ಲಿ 52 ರ್ಯಾಂಕ್, ಮೊದಲ 500 ರ್ಯಾಂಕ್ಗಳಲ್ಲಿ 172 ರ್ಯಾಂಕ್, ಮೊದಲ 1,000 ರ್ಯಾಂಕ್ಗಳಲ್ಲಿ 506 ರ್ಯಾಂಕ್ಗಳನ್ನು ಪಡೆದುಕೊಂಡಿರುತ್ತಾರೆ. ಪಿಸಿಬಿಯಲ್ಲಿ 3 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ, 49 ವಿದ್ಯಾರ್ಥಿಗಳು 160ಕ್ಕೂ ಅಧಿಕ, 146 ವಿದ್ಯಾರ್ಥಿಗಳು 150ಕ್ಕೂ ಅಧಿಕ, 851 ವಿದ್ಯಾರ್ಥಿಗಳು 121ಕ್ಕೂ ಅಧಿಕ, 1359 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.…
2024- 25 ನೆಯ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಸಾಲಿನ ಐ.ಸಿ.ಎಸ್.ಇ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಥಾಣೆಯ ಸುಲೋಚನಾ ದೇವಿ ಸಿಂಗಾನೀಯ ಸ್ಕೂಲಿನ ವಿದ್ಯಾರ್ಥಿನಿ ಶ್ರಾವ್ಯ ಎಸ್ ಶೆಟ್ಟಿ ಅವರು ಶೇಕಡ 94.02 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಥಾಣೆ ಪಶ್ಚಿಮದ ವರ್ತಕ್ ನಗರದ ನಿವಾಸಿಯಾಗಿದ್ದು, ಸುರತ್ಕಲ್ ಮಧ್ಯ ಕುಂಜರ ಬಾಳಿಕೆ ಸಂದೀಪ್ ಎಸ್ ಶೆಟ್ಟಿ ಮತ್ತು ನಂದಬೆಟ್ಟು ಮಮತಾ ಎಸ್ ಶೆಟ್ಟಿ ದಂಪತಿಯ ಪುತ್ರಿ ಹಾಗೂ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ ಕೆ ಶೆಟ್ಟಿಯವರ ಮೊಮ್ಮಗಳು.
ನೀರ ಮೇಲ್ಡ್ ಪಾಂಬು ಪುಡೆಮಿನ್/ಬೂಮಿನ್ ಅಪ್ಪೆ ಪಂದ್ ಮಾನಿತಿನ ನರಮಾನಿ ಪುಡೆಮಿ ಮೇಲ್ಮೆಡ್ ಇಪ್ಪುನ ಸರ್ವ ಜೂವೊ ಜಂತುಲೆಡ್ಲಾ ದೇವೆರೆನ್ ತೂದು ಪೂಜನೆ ಮಲ್ಪುನಕ್ಲ್. ಗಡಿ ಗಡಿ ಮಲ್ಪಿ ತಪ್ಪುಲೆನ್ ಮಾಪಿತ್ ‘ಕ್ಷಮಯಾಧರಿತ್ರಿ’ ಪನ್ಪವೊನ್ನ ಬೂಮ್ಯಪ್ಪೆನ ಜಕ್ಕೆಲ್ಡ್ ತೆಲಿತ್ತ್ ನಲಿಪ್ಪುನ ಒಟ್ಟುಡು ಆಲೆನ್ ಪೂಜೆ ಮಲ್ಪೆರೆಲ, ಬೆನ್ನಿ ಸಾಗೊಳಿ ಮಲ್ಪೆರೆಲಾ ದಿನ, ಗಡು ನಿಗಂಟ್ ಮಲ್ತಿನಕ್ಲ್ ನಮ್ಮ ಪೆರಿಯ ತರೆಮಂದೆಲ್. ಒರ್ಸೊ ಇಡೀ ಮಿನದನ ಮಲ್ತೊಂದೇ ಕುಲ್ಲ್ಂಡ ಒರ್ಸೊದ ಬಂಜಿದ ಪಡಿಕ್ಕ್ ತತ್ವಾರ ಬರ್ಪುನವು ಸಾಜ. ಅವೆಕ್ಕ್ ಬೋಡಾದ್ ಮಿನದನ ಮುಗಿತ್ ಬೆನ್ನಿ ತೊಟ್ಟೆರೆ ನಮ್ಮ ಪೆರಿಯ ಮಂದೆಲೆ ನಿಗಂಟ್ದ ಗಡುವೇ ಈ ಪತ್ತನಾಜೆ. ಉಂದು ತುಳುನಾಡ ಜನಮಂದೆಲ್ ಮಲ್ಪಿ ಗೌಜಿ, ಗಮ್ಮತ್ತ್, ಎಡ್ಡೆ ಮೆಲ್ಲಿಲೆನ್ ಮಾತ ಉಂತವುನ ಗಡುತ್ತ ದಿನೊ.ತುಳುವೆರೆ ಕಾಲಕೊಂದೆದ ರಡ್ಡನೇ ತಿಂಗೊಲಾಯಿ ಬೇಸ ತಿಂಗೊಲುಡು ಪತ್ತ್ ಪೋಪುನಾನಿಗ್ ಪಂಡ ಗ್ರೇಗೋರಿಯನ್ ಕ್ಯಾಲೆಂಡರ್ ಪ್ರಕಾರ ಮೇ ತಿಂಗೊಲುದ 24 ಅತಂಡ 25ನೇ ತಾರೀಕ್ದಾನಿ ತುಳುವೆರೆ ಬಿತ್ತಿಲ್ಡ್ ಪತ್ತನಾಜೆದ ಗೌಜಿ.…
ಸುವರ್ಣ ಸಂಭ್ರಮದಲ್ಲಿರುವ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2024- 25 ನೇ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 22ರಂದು ಏರ್ಪಡಿಸಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಅಶೋಕ್ ಬಿ. ಹಿಂಚಿಗೇರಿ ದೀಪ ಬೆಳಗಿ ಉದ್ಘಾಟಿಸಿದರು. ಸಮಾರಂಭದಲ್ಲಿ ಉದ್ಯಮ, ಸಂಸ್ಕೃತಿ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕ ಮಂಗಳೂರಿನ ಮಹೇಶ್ ಮೋಟಾರ್ಸ್ ಮಾಲೀಕ ಎ.ಕೆ ಜಯರಾಮ ಶೇಖ ಅವರು ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದರು. ಫರಂಗಿಪೇಟೆಯ ಶ್ರೀರಾಮ ಪ್ರೌಢ ಪ್ರಾಥಮಿಕ ಶಾಲೆಯ ನವೀಕರಣ, ಬಡ ವಿದ್ಯಾರ್ಥಿಗಳಿಗೆ ನೆರವು, ಸ್ಥಳೀಯ ಶಿಕ್ಷಕರ ನೇಮಕಾತಿ, ಯಕ್ಷ ಶಿಕ್ಷಣ, ರಂಗಮಂದಿರ ಮತ್ತು ಜಯಪದ್ಮ ಸಭಾಂಗಣಗಳ ನಿರ್ಮಾಣ ಇತ್ಯಾದಿ ಶೈಕ್ಷಣಿಕ ಸೇವೆಗಳಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದ ಅವರ ಸಾಧನೆಯನ್ನು ಪರಿಗಣಿಸಿ ಆರ್ಯಭಟ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಆರ್ಯಭಟ ಸಾಂಸ್ಕೃತಿಕ…
2025ರ ಸಾಲಿನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ಗಳನ್ನು ಗಳಿಸುವುದರ ಮೂಲಕ ಎಕ್ಸಲೆಂಟ್ ಕಾಲೇಜಿನ ಕೀರ್ತಿಯನ್ನು ರಾಜ್ಯಾದ್ಯಂತ ಹೆಚ್ಚಿಸಿರುತ್ತಾರೆ. ಪ್ರಸ್ತುತಿ ಶೆಟ್ಟಿ 222, ತ್ರಿಶಾ ಪಿ ಶೆಟ್ಟಿ 1123, ಅನನ್ಯ ಯು ಶೆಟ್ಟಿ 1195, ಸ್ಮರಣ್ ಎಂ 1415, ರಶ್ಮಿ 1542, ಧನುಷ್ ದೇವಾಡಿಗ 1801, ಅವಿಜಿತ್ ಶೆಟ್ಟಿ 1806, ಪದ್ಮಾಶ್ರೀ ವಿ ಎನ್ 3414, ಸುಶಾಂತ್ ಚಂದ್ರ 3446, ಪ್ರಥಮ ತಾಳಿಕೋಟೆ 3641, ಚಿತ್ರಾ ನಾಯ್ಕ 3675, ಶ್ರೀ ಹರ್ಷ ಪಿ ಎನ್ 3940, ಪ್ರಜ್ವಲ್ ಕುಮಾರ್ ಎಸ್ 3950, ಆಕಾಶ್ 4383, ತನ್ವಿ ಶೆಟ್ಟಿ 4548, ಶಬರಿ ಡಿ ಶೆಟ್ಟಿ 4675, ರ್ಯಾಂಕ್ ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್…
ಥಾಣೆ:- 2024-25ನೆಯ ಶೈಕ್ಷಣಿಕ ಸಾಲಿನ ಎಚ್.ಸಿ. ಸಿ ಪರೀಕ್ಷಾ ಫಲಿತಾಂಶದಲ್ಲಿ ಮುಲುಂಡ್ ಪೂರ್ವದ ವಿ.ಜಿ.ವಾಝೆ ಕಾಲೇಜಿನ ವಿದ್ಯಾರ್ಥಿ ಕ್ರಿಷ್ ಕರುಣಾಕರ ಶೆಟ್ಟಿ ಅವರು ಶೇ 92 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಲ್ವಾ ಖಾರೇಗಾಂವ್ ನಿವಾಸ್ ಮೂಲತ: ಪೆಲತ್ತೂರು ಕುಂಬರ್ಜಡ್ಡು ಪ್ರೀತಿಕಾ ನಿಲಯ ಕರುಣಾಕರ ಶೆಟ್ಟಿ ಮತ್ತು ಕಣಂಜಾರು ಕೊಳಕೆಬೈಲು ಸುಜಾತ ಶೆಟ್ಟಿ ದಂಪತಿಯ ಪುತ್ರಿ.
ಗುಡ್ಡೆಯಂಗಡಿ:- 2024-25ನೆಯ ಶೈಕ್ಷಣಿಕ ಸಾಲಿನ ಹತ್ತನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಹೈಸ್ಕೂಲು ಇಲ್ಲಿನ ವಿದ್ಯಾರ್ಥಿನಿ ಸ್ವಸ್ತಿ.ಎಸ್ ಶೆಟ್ಟಿ ಶೇಕಡಾ 97.44 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಗುಡ್ಡೆಯಂಗಡಿ ಪೆಲತ್ತೂರು ಕುಂಬರ್ಜಡ್ಡು ಪ್ರೀತಿಕಾ ನಿಲಯ ಸುರೇಶ. ಎನ್. ಶೆಟ್ಟಿ ಹಾಗೂ ಉಡುಪಿ ಅಂಬಲಪಾಡಿ ಕಪ್ಪೆಟ್ಟು ಶ್ರೀ ರತ್ನಾ ನಿವಾಸದ ಸೌಮ್ಯ.ಎಸ್.ಶೆಟ್ಟಿ ಇವರ ಸುಪುತ್ರಿಯಾಗಿದ್ದಾರೆ.
ಗಣಿತನಗರ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇ ಮೈನ್.ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಅಂತಿಮ ಫಲಿತಾಂಶದಲ್ಲಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕೆ.ಮನೋಜ್ ಕಾಮತ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ್ಯಾಂಕನ್ನು ಪಡೆದಿರುತ್ತಾರೆ. ಬಿ.ಆರ್ಕ್ ವಿಭಾಗದಲ್ಲಿ ಚಿಂತನ್ ಮೆಘವತ್ 99.9741943 ಪರ್ಸಂಟೈಲ್ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ 19ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ ಮೊದಲನೇ ರ್ಯಾಂಕನ್ನು, ಬಿ.ಪ್ಲಾನಿಂಗ್ ವಿಭಾಗದಲ್ಲಿ 99.8556269 ಪರ್ಸಂಟೈಲ್ನೊಂದಿಗೆ ಕೆಟಗರಿ ವಿಭಾಗದಲ್ಲಿ 3ನೇ ರ್ಯಾಂಕ್ ಹಾಗೂ ಜನರಲ್ ಮೆರಿಟ್ ವಿಭಾಗದಲ್ಲಿ 48ನೇ ರ್ಯಾಂಕನ್ನು ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ಆಕಾಶ್ ಪ್ರಭು 99.9627251 ಪರ್ಸಂಟೈಲ್ನೊಂದಿಗೆ 27ನೇ ರ್ಯಾಂಕ್, ತರುಣ್ ಎ.ಸುರಾನ 99.9483886 ಪರ್ಸಂಟೈಲ್ನೊಂದಿಗೆ 39ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 7ನೇ…















