ಬಂಟರ ಸಂಘ ಸಿದ್ದಕಟ್ಟೆ ವಲಯ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಎಲಿಯನಡಗೋಡು ಗ್ರಾಮದ ಕೊನೆರಬೆಟ್ಟು ಗುತ್ತುವಿನ ಗದ್ದೆಯಲ್ಲಿ ನಡೆಯಿತು. ಮೀನಾಕ್ಷಿ ರಘುರಾಮ ಶೆಟ್ಟಿ ಕೊನೆರಬೆಟ್ಟು ಮತ್ತು ಸಂಜೀವ ಶೆಟ್ಟಿ ಉಮ್ಮೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಲೋಕೇಶ್ ಶೆಟ್ಟಿ ಕುಳ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಾ ಎನ್ ಶೆಟ್ಟಿ, ತಾಲೂಕು ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಹಿರಿಯರಾದ ನಿತ್ಯಾನಂದ ಶೆಟ್ಟಿ, ಬೊಗರಬೆಟ್ಟು, ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಪ್ರಮುಖರಾದ ಶ್ರೀಧರ ಶೆಟ್ಟಿ, ಮಂದಾರತಿ ಶೆಟ್ಟಿ, ಅರುಣ ಸುರೇಶ್ ಶೆಟ್ಟಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಶೆಟ್ಟಿ, ಪ್ರತಿಭಾ ಶೆಟ್ಟಿ ಬದ್ಯಾರು, ಅಶ್ವಿನಿ ಶೆಟ್ಟಿ, ಸಂತೋಷ್ ಶೆಟ್ಟಿ ಕೊನೆರಬೆಟ್ಟು, ಬಾಬು ಶೆಟ್ಟಿ ಆಸಾಯಿ, ರಾಜೇಶ್ ಶೆಟ್ಟಿ ಸಿದ್ದಕಟ್ಟೆ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಜಗನಾಥ ಚೌಟ ಬದಿಗುಡ್ಡೆ, ಗಣೇಶ ಶೆಟ್ಟಿ ಗೋಳ್ತಮಜಲು, ಪದ್ಮನಾಭ ರೈ ಕಲ್ಲಡ್ಕ, ಗಂಗಾಧರ ಶೆಟ್ಟಿ, ಯಶೋಧರ ಶೆಟ್ಟಿ ದಂಡೆಗೋಳಿ, ದುರ್ಗಾಧರ ಶೆಟ್ಟಿ ಮಾವಂತೂರು, ಶಶಿಧರ ಶೆಟ್ಟಿ ಕಲ್ಲಾಪು, ಸಂದೀಪ್ ಶೆಟ್ಟಿ ಕುಂಡಾಜೆ, ಸಂದೀಪ್ ಶೆಟ್ಟಿ ರಾಯಿ, ಬೋಜ ಶೆಟ್ಟಿ, ಸಂತೋಷ ಚೌಟ, ಉದಯ ಶೆಟ್ಟಿ ಪರನೀರು, ಸ್ಥಳದ ಮಾಲಕರಾದ ಅಕ್ಷತ ಶೆಟ್ಟಿ, ಆರತಿ ಶೆಟ್ಟಿ ಅರಳ, ಗೋಪಾಲ ಬಂಗೇರ ಉಳಿರೋಡಿ, ನಿತಿನ್ ವಗ್ಗ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯದರ್ಶಿ ರತೀಶ್ ಶೆಟ್ಟಿ ಸ್ವಾಗತಿಸಿ, ಗಣೇಶ ಶೆಟ್ಟಿ ನಿರೂಪಿಸಿದರು. ದೈಹಿಕ ಶಿಕ್ಷಕ ಸತೀಶ್ ತೀರ್ಪುಗಾರರಾಗಿದ್ದರು.