ಅಂಧೇರಿ ಪಶ್ಚಿಮದ ಲೋಖಂಡ್ವಾಲ ಆಜಾದ್ ನಗರ, ಭಕ್ತಿ ವೇದಾಂತ ಸ್ಕೂಲ್ ಸಮೀಪದ ಶಾಸ್ತ್ರಿ ನಗರ, 105 ವಿಕ್ಟೋರಿಯಾ ಬಿಲ್ಡಿಂಗ್ ಬಿ/25 ರ ನಿವಾಸಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಹರಿಪ್ರಸಾದ್ ಬಿ. ಶೆಟ್ಟಿ (54) ಅವರು ಮೇ 19 ರಂದು ನಿಧನರಾಗಿದ್ದಾರೆ. ತುಂಗಾ ಹಾಸ್ಪಿಟಲ್ ಮತ್ತು ತಿರುಮಲ ಫುಡ್ ಇಂಡಸ್ಟ್ರೀಸ್ ನ ನಿರ್ದೇಶಕರಾಗಿದ್ದ ಅವರು ಮಧ್ವ ಗುತ್ತು ದಿವಂಗತ ಭೋಜ ಎಂ. ಶೆಟ್ಟಿ ಮತ್ತು ಬೈಲು ಕೊಳಂಬೆ ವಸಂತಿ ಬಿ. ಶೆಟ್ಟಿ ದಂಪತಿಯ ಜೇಷ್ಠ ಪುತ್ರರಾಗಿದ್ದರು.

ಮೃತರು ಪತ್ನಿ ಕಾಂತಿ ಎಚ್. ಶೆಟ್ಟಿ, ಇಬ್ಬರು ಪುತ್ರರಾದ ಆದರ್ಶ್, ಅಭಿಷೇಕ್ ಮತ್ತು ಇಬ್ಬರು ಸಹೋದರರಾದ ರಾಜೇಶ್ ಬಿ. ಶೆಟ್ಟಿ ( ಜವಾಬ್ ನ ಅಧ್ಯಕ್ಷರು ಹಾಗೂ ತುಂಗಾ ಹಾಸ್ಪಿಟಲ್ ನ ನಿರ್ದೇಶಕರು) ಮತ್ತು ಡಾ. ಸತೀಶ್ ಬಿ. ಶೆಟ್ಟಿ (ತುಂಗಾ ಹಾಸ್ಪಿಟಲ್ ನ ನಿರ್ದೇಶಕರು) ಮತ್ತು ಡಾ. ಸತೀಶ್ ಬಿ. ಶೆಟ್ಟಿ (ತುಂಗಾ ಹಾಸ್ಪಿಟಲ್ ನ ಸಿಎಂಡಿ) ಹಾಗೂ ಸಹೋದರಿ ಪೂಜಾ ಯು. ಶೆಟ್ಟಿ, ಭಾವ ಉಮೇಶ್ ಎ. ಶೆಟ್ಟಿ (ತುಂಗಾ ಹಾಸ್ಪಿಟಲ್ ನ ನಿರ್ದೇಶಕರು) ಕುಟುಂಬಿಕರು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಹರಿಪ್ರಸಾದ್ ಬಿ ಶೆಟ್ಟಿಯವರ ನಿಧನಕ್ಕೆ ಜವಾಬ್ ನ ಸರ್ವ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಸದಸ್ಯರು ಹಾಗೂ ಬಂಟರ ಸಂಘದ ಪದಾಧಿಕಾರಿಗಳು ಮತ್ತು ತಿರುಮಲ ಫುಡ್ಸ್ ಇಂಡಸ್ಟ್ರೀಸ್ ಹಾಗೂ ತುಂಗಾ ಹಾಸ್ಪಿಟಲ್ ನ ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.