ಮಹಾರಾಷ್ಟ್ರದ ಪ್ರತಿಷ್ಠಿತ ಜಾತೀಯ ಸಂಘ ಸಂಸ್ಥೆಗಳಲ್ಲೊಂದಾದ ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯಿಂದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮ ಜೂನ್ 7 ರಂದು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10ರಿಂದ ಅಪರಾಹ್ನ 2ರ ತನಕ ನಡೆಯಲಿದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ವಿಶೇಷ ಚೇತನರುಗಳಿಗೆ ಮತ್ತು ವಿಧವೆಯರಿಗೆ ಆರ್ಥಿಕ ನೆರವು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ದತ್ತು ಸ್ವೀಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಸಾಧನೆಗೈಯ್ಯುತ್ತಿರುವ ವಿದ್ಯಾರ್ಥಿಗಳು, ಸಾಧಕರುಗಳಿಗೆ ಆರ್ಥಿಕ ನೆರವು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವಾರ್ಪಣೆ ಹೀಗೆ ಅನೇಕ ಸಮಾಜಪರ ಕಾರ್ಯಗಳು ಅಂದು ನಡೆಯಲಿವೆ. ಈ ಅರ್ಥಪೂರ್ಣ ಕಾರ್ಯಕ್ರಮ ದಿವಂಗತ ವಾಸು ಕೆ. ಶೆಟ್ಟಿಯವರ ಸ್ಮರಣಾರ್ಥ ಚರಿಶ್ಮಾ ಬಿಲ್ಡರ್ಸ್ ನ ಕಾರ್ಯಾಧ್ಯಕ್ಷ ಸುಧೀರ್ ವಿ. ಶೆಟ್ಟರ ಪ್ರಮುಖ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಈ ಸಮಾಜಪರ ಮಾತ್ರವಲ್ಲ, ಸಂಘದ ಬಹುದೊಡ್ಡ ಕಾರ್ಯಕ್ರಮ ಆಗಿರುವ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿಯವರು ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಬರೋಡಾದ ಹೆಸರಾಂತ ಉದ್ಯಮಿ ಶಶಿಧರ ಶೆಟ್ಟಿ ಉಪಸ್ಥಿತರಿರುವರು. ಜೊತೆಗೆ ಜಮ್ಮು ಕಾಶ್ಮೀರ ಸರಕಾರದ ಅತ್ಯುನ್ನತ ಐಎಎಸ್ ಅಧಿಕಾರಿ ಹಿರಿಯಡ್ಕ ರಾಜೇಶ್ ಪ್ರಸಾದ್ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಚರಿಶ್ಮಾ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯಾಧ್ಯಕ್ಷ ಸುದೀರ್ ವಿ. ಶೆಟ್ಟಿ, ತುಂಗಾ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ಸುಧಾಕರ್ ಹೆಗ್ಡೆ, ಕ್ಯಾನ್ ಬರ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಕೆ.ಎಂ. ಶೆಟ್ಟಿ, ರಾಕ್ಷಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ರಾಜೇಶ್ ಎನ್. ಶೆಟ್ಟಿ, ಈಸ್ಟ್ ವೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಪ್ರಭಾಕರ ಜೆ. ಶೆಟ್ಟಿ, ಫಾರ್ಮ್ ಹೌಸ್ ಗ್ರೂಪ್ ಆಫ್ ಹೋಟೆಲ್ಸ್ ನ ಕಾರ್ಯಾಧ್ಯಕ್ಷ ಪಾಂಡು ಎಲ್. ಶೆಟ್ಟಿ ಇವರು ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿರಲ್ಲಿದ್ದು, ಈ ಎಲ್ಲಾ ಅತಿಥಿ ಗಣ್ಯರು ಆರ್ಥಿಕ ನೆರವಿನ ಚೆಕ್ಕುಗಳನ್ನು ವಿತರಿಸಿ ಮಕ್ಕಳನ್ನು ಹರಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಸದಸ್ಯರು ಅಶೋಕ್ ಪಕ್ಕಳ ರಚಿಸಿದ, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದ, ನವೀನ್ ಶೆಟ್ಟಿ ಇನ್ನ ಬಾಳಿಕೆಯ ನಿರ್ವಹಣೆಯಲ್ಲಿ ಜೋಕುಲಾಟಿಗೆ ತುಳು ಹಾಸ್ಯ ನಾಟಕವನ್ನು ಪ್ರದರ್ಶಿಸಲಿದ್ದಾರೆ.ನವಿ ಮುಂಬಯಿ, ಅಂದೇರಿ ಬಾಂದ್ರಾ, ಸಿಟಿ ರೀಜನ್, ಕುರ್ಲಾ ಬಾಂಡೂಪ್ ಪ್ರಾದೇಶಿಕ ವಲಯಗಳು ಮತ್ತು ಥಾಣೆ ಮುಲುಂಡ್ ಪರಿಸರದ ಅರ್ಜಿದಾರರುಗಳಿಗೆ ಅಂದು ಆರ್ಥಿಕ ನೆರವನ್ನು ವಿತರಿಸಲಾಗುವುದು.
ದಿನಾಂಕ 8-6-2025 ರಂದು ಬೆಳಿಗ್ಗೆ 11 ಗಂಟೆಗೆ ಮೀರಾ ಭಾಯಂದರ್ ವಲಯದ ಅರ್ಜಿದಾರರುಗಳಿಗೆ ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹ, ಮೀರಾರೋಡ್ ಇಲ್ಲಿ ಮತ್ತು ಸಂಜೆ 4ಕ್ಕೆ ವಸ್ಯಾ- ಡಹಾಣು ಅರ್ಜಿದಾರರುಗಳಿಗೆ ನಾಲಾಸೋಪಾರ ಪಶ್ಚಿಮದ ಗ್ಯಾಲಕ್ಸಿ ರೆಸ್ಟೋರೆಂಟ್ ನಲ್ಲಿ ವಿತರಿಸಲಾಗುವುದು. ಜೂ. 14 ರಂದು ಬೆಳಿಗ್ಗೆ 10.30 ಕ್ಕೆ ಕಾಂದಿವಲಿ ಪೂರ್ವದ ಹೋಟೆಲ್ ಅವೆನ್ಯೂದಲ್ಲಿ ಅರ್ಜಿದಾರರುಗಳಿಗೆ ವಿತರಿಸಲಾಗುವುದು. ಜೂ. 22 ರಂದು ಬೆಳಿಗ್ಗೆ 9.30 ಕ್ಕೆ ಡೊಂಬಿವಲಿ ವಲಯದ ಅರ್ಜಿದಾರರಿಗೆ ಡೊಂಬಿವಲಿ ಪೂರ್ವದ ಪ್ಲಾಟಿನಮ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಮತ್ತು ಮಧ್ಯಾಹ್ನ 12ಕ್ಕೆ ಭಿವಂಡಿ ಬದ್ಲಾಪುರ ಪ್ರಾದೇಶಿಕ ವಲಯದ ಅರ್ಜಿದಾರರುಗಳಿಗೆ ಉಲ್ಲಾಸನಗರದ ಪ್ರವೀಣ್ ಇಂಟರ್ನ್ಯಾಷನಲ್ ಹೋಟೆಲ್ ಇಲ್ಲಿ ಈ ನೆರವನ್ನು ವಿತರಿಸಲಾಗುವುದು.
ಈ ಯೋಜನೆಯಡಿ ಸುಮಾರು 2 ಕೋಟಿ ರೂ. ಹಣವನ್ನು ಸಮಾಜದ ಏಳಿಗೆಗಾಗಿ ವಿತರಿಸಲಾಗುತ್ತಿದ್ದು, ಈ ಅರ್ಥಪೂರ್ಣ ಕಾರ್ಯಕ್ರಮದ ಯಶಸ್ವಿಗಾಗಿ ಮತ್ತು ಧನ ಸಂಗ್ರಹಕ್ಕಾಗಿ ಈ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ದಿವಾಕರ ಶೆಟ್ಟಿ ಇಂದ್ರಾಳಿ, ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಸಿಎಸ್ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಆರ್, ಶೆಟ್ಟಿಯವರು ದಿನ ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಒಂದಿಷ್ಟು ಉತ್ತಮವಾಗಿದ್ದವರೆಲ್ಲ ತಮ್ಮಿಂದಾದಷ್ಟು ಸಹಕರಿಸಿ ಸಮಾಜದ ಋಣ ಸಂದಾಯ ಮಾಡುವುದಕ್ಕೆ ಮುಂದಾದಲ್ಲಿ ಬಂಟರ ಸಂಘ ಮತ್ತು ಬಂಟ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಲ್ಲುವಲ್ಲಿ ಸಂದೇಹವೇ ಇಲ್ಲ ಎನ್ನಬಹುದು.
ಈ ಅತ್ಯುನ್ನತ ಶಿಸ್ತುಬದ್ಧ ಕಾರ್ಯಕ್ರಮದಲ್ಲಿ ಸರ್ವ ಬಂಟ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ದಿವಾಕರ್ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ರವೀಂದ್ರ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶಶಿಧರ ಕೆ. ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಸಿಎಸ್ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ ಮತ್ತು ಸಂಘದ ವಿಶ್ವಸ್ಥರು ಹಾಗೂ ಮಹಿಳಾ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ ಮತ್ತು ಆಡಳಿತ ಸಮಿತಿ ಸದಸ್ಯರು ವಿನಂತಿಸಿದ್ದಾರೆ.