ಪುಣೆಯ ಬಂಟರ ಸಂಘದ ಯುವ ವಿಭಾಗದ ನೂತನ ಸಮಿತಿಯ ಪ್ರಥಮ ಸಭೆಯು ಮೇ 25ರಂದು ಪುಣೆ ಶಿವಾಜಿನಗರದ ಕೋರೋನೆಟ್ ಹೋಟೆಲ್ ನಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಬಂಟರ ಸಂಘದ ಯುವ ವಿಭಾಗದ ನೂತನ ಸಮಿತಿಯ ಉಪಾಧ್ಯಕ್ಷರುಗಳಾದ ನಿಶಾನ್ ಶೆಟ್ಟಿ, ಶ್ರಾವ್ಯಾ ಎಸ್ ಶೆಟ್ಟಿ, ಕಾರ್ಯದರ್ಶಿ ಜಿತೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಿಧಿ ಹೆಗ್ಡೆ ಹಾಗೂ ಕಾರ್ಯಕಾರಿ ಸಮಿತಿ ಪ್ರಮುಖರುಗಳಾದ ಧೀರ್ ಶೆಟ್ಟಿ, ಸುಮೀತ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ, ಅಕ್ಷಯ್ ಶೆಟ್ಟಿ, ಅಭಿಜಿತ್ ಶೆಟ್ಟಿ, ದೃತಿ ಶೆಟ್ಟಿ, ಸುಚೀತ್ ಶೆಟ್ಟಿ, ದಿಶಾಂಕ್ ಶೆಟ್ಟಿ, ಹೃತಿಕ್ ಶೆಟ್ಟಿ, ಅಕ್ಷತಾ ರೈ, ಸಾನ್ಯಾ ಶೆಟ್ಟಿ, ಖುಶಿ ಶೆಟ್ಟಿ, ಸಾಗರ್ ಶೆಟ್ಟಿ, ಶರಣ್ ಶೆಟ್ಟಿ, ಸಾನ್ವಿ ಶೆಟ್ಟಿ, ಅಕ್ಷಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.2025 -27 ರ ಸಾಲಿಗೆ ಆಯ್ಕೆಯಾದ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು ಹಾಗೂ ಅಭಿನಂದಿಸಲಾಯಿತು. ಯುವ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರ ಕೂಡುವಿಕೆಯಲ್ಲಿ ನಡೆದ ಸಭೆಯಲ್ಲಿ ಪುಣೆ ಬಂಟರ ಸಂಘಕ್ಕೆ ಪೂರಕವಾಗಿ ಯುವ ವಿಭಾಗ ಕೈಗೊಳ್ಳುವ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಸಾಮಾಜಿಕ ಚಟುವಟಿಕೆಗಳಲ್ಲಿ ಯುವ ವಿಭಾಗದ ಕಾರ್ಯ ಚಟುವಟಿಕೆಗಳು ಮತ್ತು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಹತ್ವದ ನಿರ್ಣಯವನ್ನು ಕೈಗೊಂಡು ಚರ್ಚಿಸಲಾಯಿತು. ಮುಂದೆ ಯುವ ವಿಭಾಗದ ವತಿಯಿಂದ ಕೈಗೊಳ್ಳುವ ಟ್ರೀ ಪ್ಲಾಂಟೇಶನ್ ಕಾರ್ಯಕ್ರಮದ ಪ್ರಾರಂಭದ ಬಗ್ಗೆ ಹಾಗೂ ಪಂಡರಾಪುರ ಹೋಗುವ ವಾರ್ಕರಿಗಳಿಗೆ ಆಹಾರ ವಿತರಣೆ ಸಿದ್ದತೆಗಳ ಬಗ್ಗೆ ಚರ್ಚಿಸಿ ಕಾರ್ಯ ಯೋಜನೆ ರೂಪಿಸಲಾಯಿತು. ಪುಣೆಯ ಯುವ ಬಂಟ್ಸ್ ಸದಸ್ಯರಿಗೆ ಚಾರಣ ಯೋಜನೆ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಅಭಿನಂದನ್ ಶೆಟ್ಟಿಯವರು ಎಲ್ಲಾ ಸದಸ್ಯರಿಗೆ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿ ಯುವ ವಿಭಾಗದ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ಮಹಿಳಾ ವಿಭಾಗದ ಉಪಾಧ್ಯಕ್ಷೆ ದಿವ್ಯಾ ಸಂತೋಷ್ ಶೆಟ್ಟಿಯವರು ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿಯವರನ್ನು ಹಾಗೂ ಯುವ ವಿಭಾಗದ ಸಮಿತಿ ಸದಸ್ಯರನ್ನು ಶಾಲು, ಫಲಪುಷ್ಪ ನೀಡಿ ಅಭಿನಂದಿಸಿದರು.

ವರದಿ, ಚಿತ್ರ : ಹರೀಶ್ ಮೂಡಬಿದ್ರಿ ಪುಣೆ