ರೋಟರಿ ಕ್ಲಬ್ ಕಾರ್ಕಳ ಇದರ ಆತಿಥ್ಯದಲ್ಲಿ ರೋಟರಿ ಫೌಂಡೇಶನ್ ಹಾಗೂ ಪೋಲಿಯೋ ಪ್ಲಸ್ ಬಗ್ಗೆ ವಲಯ ಮಟ್ಟದ ವಿಚಾರ ಸಂಕಿರಣವು ರೋಟರಿ ಬಾಲಭವನ ಕಾರ್ಕಳ ಇಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲಾ ಮಾಜಿ ಗವರ್ನರ್ ರಾಜಾರಾಮ್ ಭಟ್ ರವರು ರೋಟರಿ ಫೌಂಡೇಶನ್ ಬಗ್ಗೆ ಉಪಯುಕ್ತ ಮಾಹಿತಿಯನ್ನು ಸವಿವರವಾಗಿ ನೀಡಿದರು. ವಲಯ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೋ ವರದಿ ಮಂಡಿಸಿದರು.

ಸಹಾಯಕ ಗವರ್ನರ್ ವಿಘ್ನೇಶ್ ಶೆಣೈರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯ ಸಂಪನ್ಮೂಲ ವ್ಯಕ್ತಿ ಅನಿಲ್ ಡೇಸಾ, ವಲಯ ಸೇನಾನಿಗಳಾದ ಜಾನ್ ಡಿಸಿಲ್ವ, ಸಂದೀಪ್ ಬಂಗೇರ, ಪ್ರಶಾಂತ್ ಬೆಳಿರಾಯ, ಟಿ.ಆರ್.ಎಫ್ ಸಂಯೋಜಕ ಇಕ್ಬಾಲ್ ಅಹಮದ್, ಪೋಲಿಯೋ ಪ್ಲಸ್ ಸಂಯೋಜಕ ಶೇಖರ್ ಹೆಚ್, ಕಾರ್ಕಳ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಗೀತಾ ಕಾಮತ್ ಪ್ರಾರ್ಥಿಸಿದರು. ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.





































































































