ಸಂತ ಜ್ಞಾನೇಶ್ವರ ಮಹಾರಾಜ್ ಸಂತ ತುಕಾರಂ ಮಹರಾಜ್ ಪಲ್ಲಕ್ಕಿಯು ಪುಣೆಯಲ್ಲಿ ಎರಡು ದಿನದ ದರ್ಶನದ ನಂತರ ಪಂಡರಾಪುರಕ್ಕೆ ಹಡಪ್ಸರ್ ಮಾರ್ಗವಾಗಿ ಜೂನ್ 22ರಂದು ಬೆಳಿಗ್ಗೆ ಹೊರಟಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ವಾರ್ಕರಿಗಳಿಗೆ ಪುಣೆ ಬಂಟ್ಸ್ ಅಸೋಸಿಯೇಷನ್ ವತಿಯಿಂದ ವಾರ್ಕರಿಗಳಿಗೆ ಉಚಿತ, ಬಿಸ್ಕೆಟ್, ಹಣ್ಣು ಹಂಪಲು ವಿವಿಧ ಆಹಾರ ವಸ್ತುಗಳ ವಿತರಣೆಯು ಹಡಪ್ಸರ್ ನಲ್ಲಿ ಹಾಕಿದ ಬಂಟ್ಸ್ ಅಸೋಸಿಯೇಷನ್ ವಿತರಣಾ ಕೌಂಟರ್ ನಲ್ಲಿ ಬೆಳಿಗ್ಗೆ ಗಂಟೆ 6.00 ರಿಂದ ನಡೆಯಿತು. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು ಹಾಗೂ ಪದಾಧಿಕಾರಿಗಳ ಹಾಗೂ ದಾನಿಗಳ ನೇತೃತ್ವದಲ್ಲಿ ನಡೆದ ಈ ಆಹಾರ ವಿತರಣೆಯಲ್ಲಿ ಸಮಿತಿಯ ಸದಸ್ಯರು ತಮ್ಮ ಪ್ರಾಯೋಜಕತ್ವದ ವಿವಿಧ ಬಗೆಯ ಆಹಾರ ವಸ್ತುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಸತೀಶ್ ರೈ ಕಲ್ಲಂಗಳ ಗುತ್ತು, ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ, ಪ್ರಮುಖರಾದ ರವೀಂದ್ರ ಶೆಟ್ಟಿ, ತಾರಾನಾಥ್ ರೈ ಸೂರಂಬೈಲು, ಸುಧಾ ಎನ್ ಶೆಟ್ಟಿ, ಶರ್ಮಿಳಾ ಟಿ ರೈ, ನಿಖಿಲ್ ಎನ್ ಶೆಟ್ಟಿ, ಪ್ರಸಾದ್ ಶೆಟ್ಟಿ ವಾಲ್ಪಾಡಿ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ವಿಠ್ಠಲ ಭಕ್ತ ವಾರ್ಕರಿಗಳಿಗೆ ಸಮರ್ಪಣಾ ಭಾವದಿಂದ ಸಾಮೂಹಿಕ ಉಚಿತ ಆಹಾರ ವಿತರಣಾ ಕಾರ್ಯದಲ್ಲಿ ತನು ಮನ ಧನ ಹಾಗೂ ಪ್ರೀತಿ ಭಕ್ತಿಯಿಂದ ಸಹಕಾರ ನೀಡಿದ ಸಂಘದ ಸಮಿತಿಯ ಪದಾಧಿಕಾರಿಗಳಿಗೆ, ಮಹಿಳಾ ವಿಭಾಗ, ಯುವ ವಿಭಾಗ, ಹಾಗೂ ಸಮಾಜ ಭಾಂದವರಿಗೆ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ಉಪಾಧ್ಯಕ್ಷ ಸತೀಶ್ ರೈ ಕಲ್ಲಂಗಳ ಗುತ್ತು, ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ರೈಯವರು ಮನಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ ಪುಣೆ