Author: admin
ಪುಣೆ ; ಪುಣೆಯ ಹೆಸರಾಂತ ಸಮಾಜ ಸೇವಕ ,ಕಲಾ ಸಂಘಟಕ ಅಪತ್ಭಾಂದವ ಎಂದೇ ಹೆಸರು ಪಡೆದಿರುವ ಪುಣೆಯ – ಖ್ಯಾತ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ರವರಿಗೆ 2023 ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ . .ವಿವಿದ ಕ್ಷೇತ್ರಗಳಲ್ಲಿ ಕಾರ್ಯ ಗೈದ, ಮಹಾನ್ ಸಾಧನೆ ಮಾಡಿದ ಸಾಧಕರಿಗೆ ಹೊರನಾಡ ಕನ್ನಡಿಗರ ಮಟ್ಟದಲ್ಲಿ ಕೊಡಮಾಡುವ ಈ ಉಡುಪಿ ಜಿಲ್ಲೆಗೆ ಅನ್ವಯಿಸುವಂತೆ ಈ ಬಾರಿ ಪ್ರಶಸ್ತಿ ಪುಣೆಯ ಪ್ರವೀಣ್ ಶೆಟ್ಟಿ ಪುತ್ತೂರುವರಿಗೆ ಲಭಿಸಿದೆ . ನವೆಂಬರ್ ಒಂದರಂದು ಉಡುಪಿ ಅಜ್ಜರ ಕಾಡು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ರವರು ಪ್ರವೀಣ್ ಶೆಟ್ಟಿ ಯವರು ಪ್ರಶಸ್ತಿ ಪ್ರದಾನ ಮಾಡಿದರು . ಪೂನಾದಲ್ಲಿ ಅರ್ .ಬಿ ಐ ಪ್ರವೀಣಣ್ಣ ಎಂದೇ ಪ್ರಸಿದ್ದಿ ಪಡೆದ ಪ್ರವೀಣ್ ಶೆಟ್ಟಿ ಯವರು ,ಜನ್ಮ ಭೂಮಿ ತುಳುನಾಡಿನ ಪ್ರೀತಿಯಿಂದ ,ಕರ್ಮ ಭೂಮಿ ಪುಣೆಯಲ್ಲಿ ಸಾಮಾಜಿಕ ಜೀವನದಲ್ಲಿ ತನ್ನದೊಂದು ಕಾರ್ಯವೆಂದು ಸಮಾಜ…
ಹರ್ಯಾಣ ಛೋಟು ರಾಮ್ ನಗರದ ಕಾಳಿದಾಸ್ ಧಾಮ ಸಂಪ್ಲಾ ಆಶ್ರಮದ ಸಿದ್ಧಯೋಗಿ ಗುರುದೇವ್ ಬಾಬಾ ಕಾಳಿದಾಸ್ ಮಹಾರಾಜ್ ಶಿವಭಕ್ತಿ ಬಾಬಾ ಅವರು ಕಳೆದ ಮಂಗಳವಾರ ಶ್ರೀ ಗಣೇಶ ಚತುರ್ಥಿ ಶುಭ ದಿನದಂದು ಮುಂಬಯಿಗೆ ಚರಣಸ್ಪರ್ಶಗೈದರು. ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾದರ್ಪಣೆಗೈದ ಬಾಬಾ ಅವರನ್ನು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್. ಶೆಟ್ಟಿ (ಪಣಕಜೆ ಬೆಳ್ತಂಗಡಿ) ಪುಷ್ಪ ಮಾಲೆಯನ್ನಿತ್ತು ಭಕ್ತಿ ಪೂರ್ವಕವಾಗಿ ಬೃಹನ್ಮುಂಬಯಿಗೆ ಬರಮಾಡಿಕೊಂಡರು. ಬಳಿಕ ಬಾಬಾ ಅವರು ವಿಜಯ್ ಶೆಟ್ಟಿ ಅವರ ಮಾಲಿಕತ್ವದ ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಬಾಬಾಸ್ ಹಾಸ್ಪಿಟಾಲಿಟಿ ಆಂಡ್ ಫುಡ್ ಸರ್ವಿಸಸ್ ಸಂಸ್ಥೆಗೆ ಭೇಟಿಯನ್ನಿತ್ತು ಆಶೀರ್ವಾಚನ ನೀಡಿದರು. ಬಾಬಾಜೀ ಬಳಿಕ ಪ್ರಭಾದೇವಿ ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆಗೈದರು. ಬಳಿಕ ಲಾಲ್ ಬಾಗ್ ಕಾ ರಾಜಾ, ಕಿಂಗ್ ಸರ್ಕಲ್ ಅಲ್ಲಿನ ಜಿಎಸ್ ಬಿ ಗಣಪತಿ ಮಂಡಲಗಳಿಗೆ ಭೇಟಿಯನ್ನಿತ್ತು ದೇವರ ದರ್ಶನಗೈದರು. ಬಾಬಾ ಅವರ ಆಗಮನದ ವೇಳೆ…
ನಿಜವಾದ ಪ್ರೀತಿಗೆ ಬಣ್ಣ ಬಣ್ಣದ ಮಾತುಗಳು ಬೇಕಾಗಿಲ್ಲ, ಸರ್ಪ್ರೈಸ್ ಗಿಫ್ಟ್ ಗಳ ಆಗತ್ಯವಿಲ್ಲ, ಆಸ್ತಿ – ಅಂತಸ್ತು ಲೆಕ್ಕಕ್ಕೇ ಬರೋದಿಲ್ಲ. ಅಲ್ಲಿ ಬೇಕಾಗಿರೋದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ. ಜೊತೆಗೊಂದು ಭವಿಷ್ಯದ ಭರವಸೆ. ಈ ಅಂಶಗಳನ್ನು ಮೂಲವಾಗಿಟ್ಟುಕೊಂಡು ಅದನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಕಟ್ಟಿ ಕೊಟ್ಟಿರುವ ಚಿತ್ರ ‘ಸಪ್ತಸಾಗರದಾಚೆ ಎಲ್ಲೋ’. ಈ ಸಿನಿಮಾದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ನೋಡ ನೋಡುತ್ತಲೇ ಕಾಡುವ ಸಿನಿಮಾ. ಆ ಮಟ್ಟಿಗೆ ನಿರ್ದೇಶಕ ಹೇಮಂತ್ ಒಂದು ಸುಂದರವಾದ ಕಥೆಯನ್ನು ಅಷ್ಟೇ ಸೊಗಸಾಗಿ ಹೆಣೆದು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಒಂದು ಔಟ್ ಅಂಡ್ ಔಟ್ ಲವ್ಸ್ಟೋರಿ. ಹಾಗಂತ ಇದು ಸಾದ – ಸೀದಾ ಲವ್ಸ್ಟೋರಿ ಯಲ್ಲ, ಇಂಟೆನ್ಸ್ ಲವ್ಸ್ಟೋರಿ. ಈ ಲವ್ ಸ್ಟೋರಿಗೆ ಹಲವು ಮಗ್ಗುಲುಗಳಿವೆ. ಪ್ರೀತಿ, ದ್ವೇಷ, ಸ್ವಾರ್ಥ, ಮೋಸ. ಹೀಗೆ ವಿವಿಧ ಆಯಾಮಗಳೊಂದಿಗೆ ಸಿನಿಮಾ ಸಾಗುವುದು ವಿಶೇಷ. ಹಾಗಂತ ಯಾವುದನ್ನೂ ಇಲ್ಲಿ ಅತಿಯಾಗಿ ತೋರಿಸಿಲ್ಲ. ಎಲ್ಲವೂ ಮೂಲಕಥೆಯಲ್ಲಿ ಹಾಸುಹೊಕ್ಕಾಗಿದೆ. ಮನು-ಪ್ರಿಯಾಳ ಸರಳ ಸುಂದರ…
ಪ್ರತಿವರ್ಷ ಕ್ಯಾಲೆಂಡರ್ ಅನ್ನು ಗೋಡೆಗೆ ಮಾತ್ರವಲ್ಲ, ನಿಮ್ಮ ಬದುಕಿಗೂ ಅಳವಡಿಸಿಕೊಳ್ಳಿ. -ರಂಜಿತ್ ನಿಡಗೋಡು ಕಂಟೆಂಟ್ ಡೆವಲಪರ್, ಕಲರ್ಸ್ ಕನ್ನಡ
ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಕಲರ್ಸ್ ಕನ್ನಡ’ ಮಾತುಕತೆ ಮಾಧ್ಯಮದಲ್ಲಿ ಎಚ್ಚರ ಅಗತ್ಯ: ರಂಜಿತ್ ವಿದ್ಯಾಗಿರಿ: ‘ನಾಲ್ಕು ಗೋಡೆ ಮಧ್ಯೆ ಕುಳಿತು ಬರೆದರೂ, ನಾಲ್ಕು ಕೋಟಿ ಜನ ನೋಡುತ್ತಾರೆ ಎಂಬ ಎಚ್ಚರವು ಮಾಧ್ಯಮದಲ್ಲಿ ಅತಿಮುಖ್ಯ’ ಎಂದು ಕಲರ್ಸ್ ಕನ್ನಡದ ಕಂಟೆಂಟ್ ಡೆವಲಪರ್ ರಂಜಿತ್ ನಿಡಗೋಡು ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಮನೋರಂಜನಾ ಮಾಧ್ಯಮ- ವ್ಯಾಪ್ತಿ ಮತ್ತು ಪ್ರವೃತ್ತಿ’ ಕುರಿತು ಅವರು ಮಾತನಾಡಿದರು. ನಿಮ್ಮ ಬದುಕು ಹಾಗೂ ವೃತ್ತಿಯನ್ನು ಪ್ರೀತಿಸಬೇಕು. ಪರಿಸರಕ್ಕೆ ಸ್ಪಂದಿಸಬೇಕು. ಸೂಕ್ಷ್ಮವಾಗಿ ಗ್ರಹಿಸುತ್ತಿರಬೇಕು. ಓದು ನಿರಂತರವಾಗಿರಬೇಕು. ಪ್ರವೃತ್ತಿಯಲ್ಲಿ ಸೃಜನಶೀಲತೆ ಇರಬೇಕು. ವೃತ್ತಿಯನ್ನು ಸರಳ ಎಂದು ತಿಳಿದು, ಕಷ್ಟಪಟ್ಟು ಶ್ರಮಿಸಿದಾಗ ಯಶಸ್ಸು ನಿಮ್ಮೆಡೆಗೆ ಬರುತ್ತದೆ ಎಂದರು. ಪತ್ರಿಕೋದ್ಯಮವು ಹಲವಾರು ಮಜಲುಗಳನ್ನು ದಾಟಿ ವ್ಯಾಪಿಸಿದೆ. ಪತ್ರಿಕೆ, ಟಿವಿ, ಸುದ್ದಿ, ಮನೋರಂಜನೆ, ನವಮಾಧ್ಯಮ ಹೀಗಾಗಿ ಸಾವಿರಾರು ಅವಕಾಶಗಳು ಸೃಷ್ಟಿಯಾಗಿವೆ. ಇಲ್ಲಿನ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ, ಯಶಸ್ಸು, ಪರಿಶ್ರಮ, ತಾಳ್ಮೆ ಹಾಗೂ ಸ್ಪಂದನೆ ಅತಿಮುಖ್ಯ ಎಂದರು. ಮನೋರಂಜನಾ ಮಾಧ್ಯಮದಲ್ಲಿ ಪ್ರತಿ…
ತಿನಿಪಿನ ಉನ್ ಪಿನ ಜೋಕುಲೆ ಮರ್ಲ್ ಜವನಾದಿಗೆದ ರೂಪದ ಮರ್ಲ್ ಪಿರಿಪಿರಿ ಪಾತೆರುನ ಪ್ರಾಯದ ಮರ್ಲ್ ದೊಡ್ದು ಕಾಸ್ ದ ಮಲ್ಲ ಮರ್ಲ್! ! ಆಸೆದ ಮರ್ಲ್ ಅರೆ ಮರ್ಲ್ ಒರಿಯಗ್ ಆಯ್ತ ಮರ್ಲ್ ಕುಡೊರಿಯಾಗ್ ನೆತ್ತ ಮರ್ಲ್ ಜನ – ಜನಕ್ ಲೆಗ್ ಬೇತೆ – ಬೇತೆ ಮರ್ಲ್! ! ಜಗತ್ತ್ ಡ್ ಮರ್ಲೇ ಮರ್ಲ್ ಪರ್ಪಿನ ಮರ್ಲ್ ಒಯಿಪುನ ಮರ್ಲ್ ಪೊಣ್ಣನ ಮರ್ಲ್ ಬಣ್ಣದ ಮರ್ಲ್ ಮಣ್ಣ್ ದ ಮರ್ಲ್ ಬಂಗಾರದ ಮರ್ಲ್! ಮುಳ್ಳುನು ಮುಳ್ಳುಡ್ ದೆಪ್ಪುಗ ಮರ್ಲ್ ನ್ ಮರ್ಲ್ ಡೆ ದೆಪ್ಪುಗ ಮರ್ಲಾವೊಡು ನಮ ದೇವೆರೆ ಪುದರ್ ಗ್ ಉಂದುವೇ ಮರ್ದ್ ಮಾತ – ಮರ್ಲ್ ಗ್! ! ಗುತ್ತಿನಾರ್ ಸುಧಾಕರ್ ಶೆಟ್ಟಿ ದೆಪ್ಪುಣಿಗುತ್ತು
ರಾಜ್ಯ ವಿಧಾನಸಭಾ ಚುನಾವಣ ಹಿನ್ನೆಲೆಯಲ್ಲಿ ಈಗ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಭರವಸೆ ಪತ್ರದಲ್ಲಿ ಉಚಿತ ಘೋಷಣೆಗಳೇ ರಾರಾಜಿಸುತ್ತಿದ್ದು, ಇದರಿಂದ ರಾಜ್ಯದ ಒಟ್ಟಾರೆ ಬೆಳವಣಿಗೆಯ ಗತಿಯ ಮೇಲಾಗುವ ಪರಿಣಾಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ. ದುರ್ಬಲ, ಶೋಷಿತ, ಅವಕಾಶ ವಂಚಿತ ಸಮುದಾಯಗಳು, ಮಹಿಳೆಯರು, ವೃದ್ಧರು, ಅಂಗವಿಕಲರ ಏಳಿಗೆಗೆ ಯೋಜನೆಗಳನ್ನು ರೂಪಿಸುವುದು ಸರಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ವಿನಿಯೋಗಿಸುವ ಹಣವನ್ನು ಬೊಕ್ಕಸಕ್ಕಾಗುವ ನಷ್ಟ ಎಂದು ಯಾರೂ ಪರಿಗಣಿಸಲು ಸಾಧ್ಯವಿಲ್ಲ. ಆದರೆ ಸಾರಾಸಗಟಾಗಿ ಉಚಿತ ಭರವಸೆ ಹಾಗೂ ಓಲೈಕೆಯ ಘೋಷಣೆಗಳು ದೂರಗಾಮಿ ದೃಷ್ಟಿಯಿಂದ ಅನನುಕೂಲತೆ ಸೃಷ್ಟಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಇದಕ್ಕಿಂತ ಪ್ರಮುಖವಾಗಿ ಘೋಷಣೆ ಮಾಡಿದ ಮೇಲೆ ಅವುಗಳನ್ನು ಈಡೇರಿಸುವ ಕುರಿತಂತೆಯೂ ರಾಜಕೀಯ ಪಕ್ಷಗಳು ವಾಗ್ಧಾನ ನೀಡಬೇಕಾದ ಅಗತ್ಯತೆಯೂ ಇದೆ. ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಕಾರ್ಡ್ಗಳು ಈಗಾಗಲೇ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಲ್ಲ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್,…
ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥದಲ್ಲಿ ರಥೋತ್ಸವ ಸಂಭ್ರಮದಿಂದ ಮಾ. 15ರಂದು ಜರಗಿತು. ಅರ್ಚಕ ಡಾ| ರಾಮಚಂದ್ರ ಅಡಿಗರ ನೇತೃತ್ವದಲ್ಲಿ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥಬಲಿ ನಡೆದು, ಮಧ್ಯಾಹ್ನ 12.30ಕ್ಕೆ ರಥಾರೋಹಣ ನಡೆಯಿತು. ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಲಾಗಿತ್ತೆನ್ನಲಾದ 400 ವರ್ಷಗಳ ಪುರಾತನ ರಥವನ್ನು ಬದಲಾಯಿಸಿ ದಾನಿ ಸುನಿಲ್ ಶೆಟ್ಟಿಯವರು ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನೂತನ ರಥವನ್ನು ಸಮರ್ಪಿಸಿದ್ದಾರೆ. ಈ ರಥದಲ್ಲಿ ವಿರಾಜಮಾನಳಾದ ಶ್ರೀದೇವಿಯನ್ನು ವೀಕ್ಷಿ ಸಲು 20 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ರಥೋತ್ಸವದ ಸಂದರ್ಭ ಅರ್ಚಕರು ಎಸೆಯುವ ನಾಣ್ಯವನ್ನು ಹಿಡಿಯಲು ಭಕ್ತರು ಮುಗಿಬಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಎಡಿಸಿ ವೀಣಾ ಬಿ.ಎನ್. ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಥ ಸಮರ್ಪಿಸಿದ ಉದ್ಯಮಿ ಸುನಿಲ್ ಶೆಟ್ಟಿ…
ತುಳುನಾಡ ಐಸಿರಿ ಸಂಸ್ಥೆಯಿಂದ ಏರ್ಪಟ್ಟ ಪ್ರಿಮಿಯಾರ್ ಲೀಗ್ ಕ್ರಿಕೆಟ್ ಪಂದ್ಯಾಟ ಟ್ರೋಫಿ ಮುಡಿಗೇರಿಸಿದ ಎಸ್ಕೆಸಿ ದಮನ್ (ಪ್ರಥಮ) ಶಶಿ ಹಂಟರ್ ಬರೋಡ (ದ್ವಿತೀಯ)
ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ (ವಾಪಿ, ದಮ್ಮನ್, ವಲ್ಸಡ್, ಸಿಲ್ವಾಸ ಮತ್ತು ಉಮ್ಮರ್ಗಾಂವ್) ಸಂಯೋಗದೊಂದಿಗೆ ತುಳುನಾಡ ಐಸಿರಿ ಪ್ರಿಮಿಯಾರ್ ಲೀಗ್ ಕ್ರಿಕೆಟ್ ಪಂದ್ಯವು ಕಳೆದ ಭಾನುವಾರ ಗುಜರಾತ್ ರಾಜ್ಯದ ವಾಪಿ ಪ್ರರಿಸರದಲ್ಲಿನ ಕೆ.ಕೆ ಭಂಡಾರಿ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟಿತು.ತುಳುನಾಡ ಐಸಿರಿಯ ಅಧ್ಯಕ್ಷರು ಬಾಲಕೃಷ್ಣ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಪಂದ್ಯಾಟದಲ್ಲಿ ಸ್ಥಾನೀಯ ತಂಡಗಳು ಭಾಗವಹಿಸಿದ್ದವು. ವಾಪಿ ಕನ್ನಡ ಸಂಘದ ವಿಶ್ವಸ್ಥ ಪಿ.ಎಸ್ ಕಾರಂತ ಅವರು ರಿಬ್ಬನ್ ಕತ್ತರಿಸಿ ಕ್ರಿಕೆಟ್ ಪಂದ್ಯಾಟಕೆ ಚಾಲನೆ ನೀಡಿದರು. ತುಳುನಾಡ ಐಸಿರಿ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಸಂಘ ವಾಪಿ ಅಧ್ಯಕ್ಷ ಸದಾಶಿವ ಜಿ.ಪೂಜಾರಿ ಪ್ರಥಮ ಬ್ಯಾಟಿಂಗ್ ಮಾಡಿ ಪಂದ್ಯಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು. ಅಥಿüತಿಗಳಾಗಿ ರಾಧಾಕೃಷ್ಣ ಮೂಲ್ಯ ಸೂರತ್, ಹರೀಶ್ ವೆಂಕಪ್ಪ ಪೂಜಾರಿ, ಸಂಜಯ ಮರ್ಪಲಿ ಕಲ್ಪವೃಕ್ಷ ಹೊಡೆದು ಕ್ರೀಡಾ ಕಾರ್ಯಕ್ರಮಕ್ಕೆ ಅನುವು ಮಾದಿ ಶುಭಕೋರಿದರು. ಎಸ್ಕೆಸಿ ದಮನ್, ತುಳುನಾಡ ಐಸಿರಿ-ಎ, ತುಳುನಾಡ ಐಸಿರಿ-ಬಿ, ಸಿಲ್ವಾಸ ವರಿಯರ್ಸ್, ಕೆಎಫ್ಸಿ-ಎ, ಕೆಎಫ್ಸಿ-ಬಿ, ಕೆಎಫ್ಸಿ ಸೂರತ್, ಅಂಕಲೇಶ್ವರ್ ತುಳು ಸಂಘ, ಶಶಿ ಹಂಟರ್ ಬರೋಡ…
ಉಳ್ಳಾಲದ ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮನಂತಹ ಸ್ವಾತಂತ್ರ ಹೋರಾಟಗಾರರು ನಮ್ಮ ರಾಜ್ಯದ ಮಹಿಳೆಯರಿಗೆ ಪ್ರೇರಣ ಶಕ್ತಿಯಾಗಿದ್ದು, ಉಳ್ಳಾಲದಲ್ಲಿ ಅಬ್ಬಕ್ಕಳ ಶೌರ್ಯವನ್ನು ದೇಶ ವಿದೇಶಗಳಿಗೆ ತಿಳಿಸುವ ನಿಟ್ಟಿನಲ್ಲಿ ಥೀಮ್ ಪಾರ್ಕ್ ಆಗಬೇಕು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಇಡಲು ಪ್ರಧಾನಿಗೆ ಮತ್ತು ಸಂಬಂಧಿತ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಅವರು ಮಾತನಾಡಿ ಅಬ್ಬಕ್ಕಳ ಉತ್ಸವ ಕೇವಲ ಉಳ್ಳಾಲಕ್ಕೆ ಸೀಮಿತವಾಗಬಾರದು. ರಾಜ್ಯಮಟ್ಟದ ಉತ್ಸವವಾಗಿ ಸ್ವಾತಂತ್ರ ಹೋರಾಟಗಾರರ ಉತ್ಸವ ಆಚರಿಸಲು ರಾಜ್ಯ ಸರಕಾರ ಮುಂದಾಗಬೇಕು. ಅಬ್ಬಕ್ಕ ಭವನ ನಿರ್ಮಾಣದ ಸಂದರ್ಭ ಸುಸಜ್ಜಿತ ಥಿಯೇಟರ್ ನಿರ್ಮಾಣ ಮಾಡಿ ಅವರ ಸಾಹಸ ಗಾಥೆಯನ್ನು ಚಿತ್ರೀಕರಣದ ಮೂಲಕ ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು. ಇದರೊಂದಿಗೆ ಪಠ್ಯಕ್ರಮದಲ್ಲೂ ಆಬ್ಬಕ್ಕಳ ಸಾಹಸಗಾಥೆಯನ್ನು ಅಳವಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು. ಎಸ್ಸಿಡಿಸಿಸಿ ಬ್ಯಾಂಕ್…
ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಂಗವಾಗಿ ಸಂಜೆ ಸಭಾ ಕಾರ್ಯಕ್ರಮ ನಡೆಯಿತು.ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಂಬಳ ಕೂಟಕ್ಕೆ ಸೆನ್ಸಾರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ| ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು. ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ದಿ| ಜಯಂತ್ ರೈ ಅವರಿಂದ ತೊಡಗಿ ದಿ| ಮುತ್ತಪ್ಪ ರೈ ಅವರ ಕಾಲದಲ್ಲೂ ಕಂಬಳ ಯಶಸ್ವಿಯಾಗಿ ನಡೆದಿದೆ. ಕಾಂತಾರ ಚಿತ್ರದ ಮೂಲಕ ನಮ್ಮ ಕಲೆ, ಸಂಸ್ಕೃತಿ, ಕಂಬಳ ಕ್ರೀಡೆ ಜಗತ್ತಿಗೆ ಆಕರ್ಷಣೆಯಾಗುವ ಕೆಲಸ ಮಾಡಿದೆ ಎಂದರು. ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ಕಂಬಳ ಸಮಿತಿ ಮಾರ್ಗದರ್ಶಕಿ,…