ಮೂಡಬಿದ್ರೆ ಯುವ ಕಾಂಗ್ರೆಸ್ ವತಿಯಿಂದ ಬೆಳುವಾಯಿ ಅಂಬೂರಿ ನಿವಾಸಿಗಳಾದ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನಾಗರಾಜ್ ಶೆಟ್ಟಿ ಅವರಿಗೆ ದೆಹಲಿಯ ಎಂಪೈರ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನವಾಗಿದ್ದು ಮತ್ತು ಇವರ ಸಹೋದರರಾದ ಮಧ್ವರಾಜ್ ಶೆಟ್ಟಿ ಇವರು ಕೂಡ ಮಂಗಳೂರು ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಿ ಮತ್ತು ಗೌರವ ಡಾಕ್ಟರೇಟ್ ಪ್ರದಾನವನ್ನು ಪಡೆದುಕೊಂಡ ಇಬ್ಬರು ಸಾಧಕರನ್ನು ಗುರುತಿಸಿ ಅವರ ಸ್ವಗೃಹದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು ಹಾಗೂ ಅವರ ಸಾಧನೆಗೆ ಮತ್ತಷ್ಟು ದೇವರ ಆಶೀರ್ವಾದ ಒದಗಿ ಬರಲಿ ಎಂದು ಹಾರೈಸಲಾಯಿತು.