
ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರೀಕದಲ್ಲಿ ಬಂಟ ಸಮಾಜದ ಮಹಾನ್ ಚೇತನ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಕೊಡುಗೈ ದಾನಿಯಾಗಿದ್ದ ದಿವಂಗತ ಸತೀಶ್ಚಂದ್ರ ಹೆಗ್ಡೆ ಅವರ ಸವಿ ನೆನಪಿಗಾಗಿ ‘ಸತೀಶ್ಚಂದ್ರ ಹೆಗ್ಡೆ ಸರ್ಕಲ್’ ಲೋಕಾರ್ಪಣೆಗೊಂಡಿತು. ಈ ಸಂಧರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರೇಮಲತಾ ಎಸ್ ಹೆಗ್ಡೆ, ಆತ್ರಾಡಿ ಬೀಡು ದಿಲೀಪ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.































































































































