ಮಂತ್ರಾಲಯದ ಪವಿತ್ರ ಭೂಮಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಕ್ತರು ಹಾರೈಸಿದ್ದ ಮಹತ್ವದ ಯೋಜನೆ ಸಾಕಾರಗೊಂಡಿದೆ. ಇಲ್ಲಿಗೆ ತೀರ್ಥಸ್ನಾನಕ್ಕಾಗಿ ಅಗತ್ಯವಾಗಿದ್ದ ‘ಪರಿಮಳ ತೀರ್ಥಂ’ ಪುಷ್ಕರಣಿ ಇಲ್ಲದ ಕೊರತೆಯನ್ನು ನಿವಾರಿಸುವಂತೆ, ಅಲಂಕೃತವಾಗಿ ಸೌಕರ್ಯ ಸಮೇತ ನಿರ್ಮಿಸಲ್ಪಟ್ಟ ಈ ಅದ್ಭುತ ಪುಷ್ಕರಣಿ ಉದ್ಘಾಟನೆಗೊಂಡಿತು. ಈ ಮಹತ್ತಾದ ಸೇವೆಯನ್ನು ಮಂತ್ರಾಲಯದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರೊಂದಿಗೆ, ಡಾ| ಕೆ. ಪ್ರಕಾಶ್ ಶೆಟ್ಟಿ ಹಾಗೂ ಅವರ ಪತ್ನಿ ಅಶಾ ಪ್ರಕಾಶ್ ಶೆಟ್ಟಿ ಅವರು ತಮ್ಮ ಹೃದಯಪೂರ್ವಕ ದೇಣಿಗೆಯಿಂದ ನೆರವೇರಿಸಿದ್ದಾರೆ.

ಸುಮಾರು 4 ಕೋಟಿಗಳ ವೆಚ್ಚದಲ್ಲಿ ರೂಪುಗೊಂಡಿರುವ ಈ ಯೋಜನೆ, ಭಕ್ತರ ಆತ್ಮಶಾಂತಿ ಮತ್ತು ಸೌಕರ್ಯಕ್ಕಾಗಿ ನಿರ್ಮಿಸಲ್ಪಟ್ಟ ಒಂದು ಅನನ್ಯ ಕಾಣಿಕೆ. ಶ್ರೀ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರ ಸಾನಿಧ್ಯದಲ್ಲಿ ಡಾ| ಪ್ರಕಾಶ್ ಶೆಟ್ಟಿ ಮತ್ತು ಅಶಾ ಪ್ರಕಾಶ್ ಶೆಟ್ಟಿ ದಂಪತಿಗಳು ಸ್ವತಃ ಉದ್ಘಾಟನೆ ನೆರವೇರಿಸಿ, ಭಕ್ತ ಸಮುದಾಯಕ್ಕೆ ಈ ಮಹಾನ್ ಕಾಣಿಕೆಯನ್ನು ಅರ್ಪಿಸಿದರು. ಮಂತ್ರಾಲಯದ ಪವಿತ್ರ ವಾತಾವರಣಕ್ಕೆ ಹೊಸ ಶೋಭೆ ನೀಡುವ ಈ ‘ಪರಿಮಳ ತೀರ್ಥಂ’ ಪುಷ್ಕರಣಿ, ಧರ್ಮ, ಸೇವೆ ಮತ್ತು ದಾನದ ಮೌಲ್ಯಗಳನ್ನು ಜೀವಂತವಾಗಿ ತೋರಿಸುವ ಉದಾಹರಣೆ. ಡಾ| ಪ್ರಕಾಶ್ ಶೆಟ್ಟಿ ಮತ್ತು ಅಶಾ ಪ್ರಕಾಶ್ ಶೆಟ್ಟಿ ದಂಪತಿಗಳ ಈ ಮಹಾದಾನ, ಅವರ ಭಕ್ತಿಭಾವ ಮತ್ತು ಮಾನವೀಯತೆಯ ಜೀವಂತ ನಿದರ್ಶನವಾಗಿದ್ದು, ಮಂತ್ರಾಲಯದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ.