ಕಾರ್ಕಳ ಎಸ್.ಕೆ.ಎಸ್ ಸಂಸ್ಥೆಯ ಸುಜಯ್ ಕುಮಾರ್ ಶೆಟ್ಟಿ ಮತ್ತು ಅಮೃತಾ ದಂಪತಿಯ ಪುತ್ರಿ ಸಚಿ ಶೆಟ್ಟಿಯವರು ಎಸ್.ಎಸ್.ಎಲ್.ಸಿಯಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ 3 ನೇ ಸ್ಥಾನ ಗಳಿಸಿದ್ದಾರೆ. ತಂದೆ ಸುಜಯ್ ಶೆಟ್ಟಿಯವರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಣಿ ಸಾಧನೆ ಪ್ರತೀಕವಾಗಿ ಅಲ್ಲಲ್ಲಿ ಅದ್ಭುತ ಕಟ್ಟಡಗಳು ಎದ್ದು ನಿಂತಿವೆ. ಕಾರ್ಕಳ ಮಾರಿಗುಡಿ, ಕಾಪು ಹೊಸ ಮಾರಿಗುಡಿ, ದಿಲ್ಲಿಯಲ್ಲಿ ಅದ್ಭುತ ಕರ್ನಾಟಕ ಭವನ ಮೊದಲಾದ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಅಪೂರ್ವ ವಾಸ್ತುಶಿಲ್ಪದೊಂದಿಗೆ ನಿರ್ಮಿಸಿದವರು.

ಸುಜಯ್ ಶೆಟ್ಟಿಯವರ ಎಸ್.ಕೆ.ಎಸ್ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ನುರಿತ ಕೆಲಸಗಾರರು ಇದ್ದಾರೆ. ನೌಕರರ, ಕಾರ್ಮಿಕರ ಮಕ್ಕಳ ಶಾಲೆ ಫೀಸ್, ಆರೋಗ್ಯ ರಕ್ಷಣೆ ಹೊಣೆ ಹೊತ್ತಿದ್ದಾರೆ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಚಿ ಶೆಟ್ಟಿಯವರಿಗೆ ಅಭಿನಂದನೆಗಳು.