ಟೀಮ್ ಅಭಿಮತ ಮತ್ತು ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಇದರ ಸೇವಾ ಯೋಜನೆಯಾದ ಅಶಕ್ತರಿಗೆ ಮನೆ ನಿರ್ಮಿಸಿಕೊಡುವ ’ಮಡಿಲು’ ಯೋಜನೆಗೆ ಮುಹೂರ್ತ ಇತ್ತೀಚಿಗೆ ನೆರವೇರಿತು. ಶಿರಿಯಾರ ಬಳಿಯ ಅತ್ಯಂತ ಆರ್ಥಿಕ ಅಶಕ್ತ ಮತ್ತು ಅನಾರೋಗ್ಯ ಪೀಡಿತ ಕುಟುಂಬವೊಂದರ ಮನೆ ಈ ವರ್ಷದ ಮಳೆಗಾಲದಲ್ಲಿ ಕುಸಿದು ಬೀಳುವ ಎಲ್ಲಾ ಸಾದ್ಯತೆಗಳಿದ್ದವು. ಅದನ್ನು ಗುರುತಿಸಿ ಅವರಿಗೊಂದು ಪುಟ್ಟದಾದರೂ, ನೆಮ್ಮದಿಯ ಸೂರು ನಿರ್ಮಿಸಿಕೊಡುವ ಯೋಜನೆಗೆ ಮುನ್ನುಡಿ ಬರೆದರು.
ಕೋಟೇಶ್ವರದ ಪ್ರಸಿದ್ಧ ಗುರು ಎಂಜಿನಿಯರ್ ಸೇವಾರ್ಥವಾಗಿ ಮಾರ್ಕಿಂಗ್ ಮಾಡಿ, ಮಾರ್ಗದರ್ಶನ ನೀಡಿದ್ದು, ಈ ಮನೆ ನಿರ್ಮಾಣಕ್ಕೆ ಹಲವು ದಾನಿಗಳು ತಮ್ಮ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದ ವಿಜಯದಶಮಿಯ ದಿವಸ ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಲಿದೆ. ಈ ಸಂಧರ್ಭ ವಸಂತ್ ಗಿಳಿಯಾರ್, ಆನಂದ್ ಸಿ ಕುಂದರ್, ಟೀಮ್ ಅಭಿಮತದ ಸದಸ್ಯರು ಉಪಸ್ಥಿತರಿದ್ದರು.
