ಭಾರತೀಯ ಕಲೆ, ಲಲಿತ ಕಲೆ, ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಕೆಲಸ ಮಾಡುವ ರಾಷ್ಟ್ರೀಯ ಚಿಂತನೆ ಸಂಸ್ಥೆಯ ಸಂಸ್ಕಾರ ಭಾರತಿ, ಬೇರೆ ಬೇರೆ ವಿಶೇಷ ಕೆಲಸ ಕಾರ್ಯಗಳ ಮೂಲಕ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರನ್ನಾಗಿ ಮನ್ಮಥ ಶೆಟ್ಟಿ ಪುತ್ತೂರು ಇವರನ್ನು ಜಿಲ್ಲಾ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ತಾರಾನಾಥ್ ಕೊಟ್ಟಾರಿಯವರು ಜಿಲ್ಲಾ ಬೈಠಕ್ ನ ಪ್ರಮುಖರ ಸಭೆಯಲ್ಲಿ ಘೋಷಿಸಿದರು.ಬರಹಗಾರರಾಗಿ, ಭಾಷಣಗಾರರಾಗಿ, ದೈವರಾದನೆ, ಸಾಹಿತ್ಯ, ಜಾನಪದ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಕಳೆದ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು, ಬೇರೆ ಪ್ರಶಸ್ತಿಗಳನ್ನು ಪಡೆದುಕೊಂಡವರಾಗಿದ್ದಾರೆ. ಸಭೆಯಲ್ಲಿ ಬೆಳ್ತಂಗಡಿ, ಬಂಟ್ವಾಳ, ಪುತ್ತೂರಿನ ಸಂಯೋಜಕರು, ಗೌರವಾಧ್ಯಕ್ಷರು, ಪ್ರಮುಖರು ಉಪಸ್ಥಿತರಿದ್ದರು.