ಮುಂಬಯಿ (ಆರ್ಬಿಐ), ಡಿ.06: ಅಮೇರಿಕಾದ ಯುಎಸ್ಎ ಟೆನ್ನೆಸ್ಸೀ ಇಲ್ಲಿನ ನ್ಯಾಶ್ವಿಲ್ಲೆ ಇಲ್ಲಿ 2023ರ ಜುಲಾಯಿ 25-28ರ ತನಕ ಜರುಗುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಆರ್ಡಿಟಿ ) ಶೃಂಗಸಭೆಯ ಸಭಾಪತಿ (ಕನೆಕ್ಸಿಯಾನ್ ವಲಯದ ಭಾಷಣಕಾರ) ಆಗಿ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಆರ್ಡಿಟಿ ) ಸ್ಪೀಕರ್ ಆಗಿ ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಆರ್ಥಿಕ ಮೇಧಾವಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ನೇಮಕ ಗೊಂಡಿದ್ದಾರೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ ಆಫ್ ಇಂಡಿಯಾ) ಇದರ ಸರ್ವೋತ್ಕೃಷ್ಟ ಅಧಿಕಾರಿ ಆಗಿದ್ದು ಇತ್ತೀಚೆಗಷ್ಟೇ ಎಂಆರ್ಡಿಟಿ) ಇದರ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗಿ ಆಯ್ಕೆ ಆಗಿರುವ ಡಾ| ಆರ್.ಕೆ ಶೆಟ್ಟಿ ಇತ್ತೀಚೆಗಷ್ಟೇ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣಾ ಮಂಗಳೂರು ವಿವಿ ಗೌರವಕ್ಕೂ ಪಾತ್ರರಾಗಿದ್ದರು. ಮುಂಬಯಿಯಲ್ಲಿನ ಇಸ್ಸಾರ್ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್ ಕೆ ಶೆಟ್ಟಿ ಎಂಡ್ ಕಂಪೆನಿ ಇದರ ಆಡಳಿತ ನಿರ್ದೇಶಕರಾಗಿರುವ ಆರ್ಕೆಎಸ್ ಸದ್ಯ ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ ಇದರ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷ,ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾಗಿ ಇನ್ನಿತರ ಹತ್ತುಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ತೊಡಗಿಸಿ ಕೊಂಡಿರುವರು. ಕರ್ನಾಟಕದ ಚಿಕ್ಕಮಗಳೂರು ಇಲ್ಲಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು ಶ್ರೀಮತಿ ಅಪ್ಪಿ ಕೆ.ಶೆಟ್ಟಿ ದಂಪತಿ ಸುಪುತ್ರರಾಗಿದ್ದು ಅರ್ಥಶಾಸ್ತ್ರದಲ್ಲಿ ಬಿಕಾಂ ಪದವೀಧರನಾಗಿ ಹಣಕಾಸು ನಿರ್ವಹಣೆಯಲ್ಲಿ ಡಿಪ್ಲೋಮಾ, ಅಮೇರಿಕಾದ ವಿಮಾ ಕಾಲೇಜ್ನಿಂದ ಎಲ್ಯುಟಿಸಿಎಫ್ ಪದವಿಧರನಾಗಿದ್ದು ಡಾ| ಆರ್.ಕೆ ಶೆಟ್ಟಿ ಅವರ ಸಾಧನೆಗೆ ಬೃಹನ್ಮುಂಬಯಿಯ ಹತ್ತಾರು ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಅಭಿನಂದಿಸಿ ಶುಭ ಕೋರಿದ್ದಾರೆ.









































































































