ಬಂಟರ ಸೇವಾ ಸಂಘ (ರಿ.), ಕುಕ್ಕುಂದೂರು ಕಾರ್ಕಳ ತಾಲೂಕು ವತಿಯಿಂದ 11ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಆಗಸ್ಟ್ 28 ರಂದು ಶುಕ್ರವಾರ ಹಮ್ಮಿಕೊಳ್ಳಲಾಗಿದೆ. ಕುಕ್ಕುಂದೂರು ಶ್ರೀ ದೇವಿಕೃಪಾ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8:30 ರಿಂದ 9 ಗಂಟೆಯವರೆಗೆ ಪೂಜಾ ವೃತದಾರಿಗಳ ನೋಂದಣಿ ನಡೆಯಲಿದ್ದು, 9 ರಿಂದ 11 ಗಂಟೆಯವರೆಗೆ ಶ್ರೀ ವರಮಹಾಲಕ್ಷ್ಮಿ ಪೂಜೆ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿವೇತನ ಹಾಗೂ ಸಹಾಯಧನ ವಿತರಣೆ ಸೇರಿದಂತೆ ಬಂಟ ಸಮಾಜದ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.





ಬಂಟರ ಸೇವಾ ಸಂಘ ಕುಕ್ಕುಂದೂರಿನ ಅಧ್ಯಕ್ಷರಾದ ಜಯಂತಿ ಸುಧಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟನೆ ಮಾಡಲಿದ್ದಾರೆ. ಡಾ| ಕನ್ಯಾನ ಸದಾಶಿವ ಶೆಟ್ಟಿ, ಉದಯಕುಮಾರ ಶೆಟ್ಟಿ ಮುನಿಯಾಲು, ಶ್ಯಾಮ ಎನ್ ಶೆಟ್ಟಿ ಬಲಿಪ ಗುತ್ತು, ರಾಕೇಶ್ ಶೆಟ್ಟಿ ಎಣ್ಣೆಹೊಳೆ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಕರುಣಾಕರ ಶೆಟ್ಟಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಶ್ರೀ ದೇವರ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಪೂಜೆಗೆ ಕುಳಿತುಕೊಳ್ಳುವ ಮಹಿಳೆಯರು ಬೆಳಗ್ಗೆ 8:30ರೊಳಗೆ ಹಾಜರಾಗುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.















































































































