
ಮಾರ್ಚ್ 20 ರಂದು ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಆಯೋಜಿಸಲಿರುವ 3ನೇ ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನವನ್ನು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ, ಶ್ರೀದೇವಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎ. ಸದಾನಂದ ಶೆಟ್ಟಿಯವರು ಬಿಡುಗಡೆ ಮಾಡಿದರು. ಈ ಲಾಂಛನವನ್ನು ಐ.ಎಮ್.ಜೆ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಆಂಡ್ ಕಾಮರ್ಸ್ ಮೂಡ್ಲುಕಟ್ಟೆ ಕುಂದಾಪುರದ ಪ್ರಥಮ ಬಿ.ಬಿ.ಎ ವಿದ್ಯಾರ್ಥಿ ಶ್ರೇಯಸ್ ಶೆಟ್ಟಿಯವರು ರಚಿಸಿದ್ದಾರೆ. ಲಾಂಛನ ಬಿಡುಗಡೆಯ ಸಂದರ್ಭದಲ್ಲಿ ತುಳು ಪರಿಷತ್ ಅಧ್ಯಕ್ಷರಾದ ಶುಭೋದಯ ಆಳ್ವ ಕಂಚಿಲ, ಉದ್ಯಮಿ ಹರಿಕಿಶನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಬೆನೆಟ್ ಅಮ್ಮನ್ನ, ಕಾರ್ಯದರ್ಶಿ ಶ್ರೀಮತಿ ಅಮಿತಾ ಅಶ್ವಿನ್, ಕೋಶಾಧಿಕಾರಿ ಶ್ರೀಮತಿ ಸುಮತಿ ಹೆಗ್ಡೆ, ಸ್ಪರ್ಧಾ ಸಂಚಾಲಕರಾದ ದುರ್ಗಾಪ್ರಸಾದ್ ಮತ್ತು ಶ್ರೀಮತಿ ಚಂದ್ರಕಲಾ ರಾವ್ ಉಪಸ್ಥಿತರಿದ್ದರು.




























































































































