
ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಆದಿತ್ಯ ಎಚ್ ಪೆರ್ಗಡೆ ಅವರು ಒಟ್ಟು 406 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 47 ನೇ ರ್ಯಾಂಕ್ ಪಡೆದಿದ್ದಾರೆ. ಬಂಟ್ವಾಳ ಪರಂಗಿಪೇಟೆ ಮೇರೆಮಜಲು ಎಂಬಲ್ಲಿ ಅಸಹಾಯಕ, ಅನಾಥ, ನಿರ್ಲಕ್ಷಿತ ಮಂದಿಯ ಸೇವೆಯಲ್ಲಿ, ‘ಶ್ರೀ ಮಾತಾ ಲಕ್ಷಣಿ ಆಶ್ರಯ ಧಾಮ’ ಸಂಸ್ಥೆಯ ಮೂಲಕ ಸಮಾಜಮುಖಿಯಾಗಿ ಪ್ರಸ್ತುತ ಪಡಿಸಿಕೊಂಡಿರುವ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಮತ್ತು ಶಶಿಕಲಾ ಪೆರ್ಗಡೆ ದಂಪತಿಯ ಪುತ್ರರಾದ ಇವರು ಪ್ರತಿಭಾವಂತ ಸಾಧಕ. ಸಿಎ ಫೌಂಡೇಶನ್ ಮತ್ತು ಸಿಎ ಇಂಟರ್ ಮೀಡಿಯೆಟ್ ತರಬೇತಿ ಜೊತೆಗೆ ಪದವಿ ಶಿಕ್ಷಣವನ್ನು ಮಂಗಳೂರಿನ ತ್ರಿಶಾ ಕಾಲೇಜಿನಲ್ಲಿ ಪಡೆದಿದ್ದಾರೆ. ಆರ್ಟಿಕಲ್ ಶಿಪ್ ಅನ್ನು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕ ಸಂಸ್ಥೆ ಗಣೇಶ ಮತ್ತು ಸುಧೀರ್ ಅವರಲ್ಲಿ ಪೂರೈಸಿದ್ದಾರೆ.
































































































































