ಕಲಾಪೋಷಕ ಕುಂಬ್ರ ಬಾಲಕೃಷ್ಣ ರೈ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಸಂಸ್ಮರಣೆ, ಗೌರವಾರ್ಪಣೆ, ಆರ್ಥಿಕ ಸಹಾಯ ಕಾರ್ಯಕ್ರಮ ನವೆಂಬರ್ 22 ರಂದು ಕುಂಬ್ರ ಮನೆಯಲ್ಲಿ ಜರಗಿತು. ಸಭಾಧ್ಯಕ್ಷರಾಗಿ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಭಾಗವಹಿಸಿದ್ದರು. ದೀಪ ಪ್ರಜ್ವಲನೆಯನ್ನು ಜಿ ಮಹಾಬಲ ರೈ ಒಳತಡ್ಕ (ಸದಸ್ಯರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು) ಇವರು ನೆರವೇರಿಸಿದರು. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ದಿವಂಗತ ಬಾಲಕೃಷ್ಣ ರೈಯವರ ಸಂಸ್ಮರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಸರಪ್ಪಾಡಿ ಅಶೋಕ್ ಶೆಟ್ಟಿ, ಪ್ರಕಾಶ್ಚಂದ್ರ ರೈ ಕೈಕಾರ, ಮೋನಪ್ಪ ಪೂಜಾರಿ ಬಡಕ್ಕೋಡಿ ಮತ್ತು ನಾರಾಯಣ ರೈ ಬಾರಿಕೆ ಭಾಗವಹಿಸಿದ್ದರು.

ಹಿರಿಯ ಯಕ್ಷಗಾನ ಕಲಾವಿದರನ್ನು ನಗದು, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಶಕ್ತ 5 ಜನರಿಗೆ ನಗದು ವಿತರಿಸಿ ಒಟ್ಟು 50,000 ಮೊತ್ತವನ್ನು ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುಂದರ ರೈ ಮಂದಾರ ಇವರನ್ನು ಗೌರವಿಸಲಾಯಿತು. ಪುಟಾಣಿ ಹಂಸಿಕ ಪ್ರಾರ್ಥಿಸಿ, ಉದ್ಯಮಿ ಮೋಹನದಾಸ್ ರೈ ಸ್ವಾಗತಿಸಿ, ರಾಜಪ್ರಕಾಶ್ ರೈ ವಂದಿಸಿ, ತಾರಾನಾಥ್ ರೈ ನೀರಳ ಕಾರ್ಯಕ್ರಮ ನಿರೂಪಿಸಿದರು.










































































































