ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನ ಮಧ್ಯ ಇದರ ನೂತನ ವ್ಯವಸ್ಥಾಪನಾ ಸಮಿತಿಯ ಸಭೆಯು ದೇವಸ್ಥಾನದ ಅಡಳಿತಾಧಿಕಾರಿ ಸುಲೋಚನ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಗಿರಿಜಾ ಶೆಟ್ಟಿ ಸಮುದಾಯ ಭವನದಲ್ಲಿ ಜರುಗಿತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು ಉಪಸ್ಥಿತರಿದ್ದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸಮಾಜಸೇವಕ, ವಿ.ಕೆ ಗ್ರೂಪ್ ನ ಸಿಎಂಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಮೂರನೇ ಬಾರಿ ಅಯ್ಕೆಗೊಂಡರು.

ಸದಸ್ಯರಾಗಿ ಮೋಹನ್ ಚೌಟ ಮಧ್ಯ ಕುಜುಂಬತೋಟ, ಶಂಕರ ಹೆಗಡೆ ಮಧ್ಯಬೀಡು, ಬೋಜ ಅಂಚನ್ ಮಧ್ಯ, ದಿನೇಶ್ ದೇವಾಡಿಗ ಮಧ್ಯ, ಕೃಷ್ಣಮೂರ್ತಿ ಭಟ್ ಮಧ್ಯ, ಸೀತಾರಾಮ ಮಧ್ಯ, ಶೋಭಾ ಶೆಟ್ಟಿ ಕಟ್ಟೆಮಾರ್, ಪ್ರಭಾಲಾಕ್ಷಿ ಶೆಟ್ಟಿ ಕುಂಜರಬಾಳಿಕೆ ಅಯ್ಕೆಗೊಂಡರು.