ಮುಂಬೈ ಕಲಾಜಗತ್ತು ಕ್ರಿಯೇಷನ್ಸ್ ವತಿಯಿಂದ ಶ್ರೀ ಕ್ಷೇತ್ರ ವಜ್ರೇಶ್ವರೀ ಪರಶುರಾಮ ಕುಂಡ, ತುಂಗರೇಶ್ವರ ಬಾಲಯೋಗಿ ಶ್ರೀ ಸದಾನಂದ ಮಹಾರಾಜ ಸ್ವಾಮೀಜಿಯವರ ಗುರುವಂದನಾ ಸಮಾರಂಭ ಹಾಗೂ ಡಾ| ಜಿ.ಪಿ ಕುಸುಮಾರವರು ಭಾಷಾಂತರಗೊಳಿಸಿದ ಸ್ವಾಮೀಜಿಯವರ ಐತಿಹಾಸಿಕ ಸಂಗೀತ ನಾಟಕ ‘ಚೋಖಾ ಮೇಳ’ ಕನ್ನಡ ನಾಡಿನ ನಾಮಾಂಕಿತ ಸಂಗೀತ ಕಲಾವಿದರ ಸಮಾಗಮದಲ್ಲಿ ಪ್ರದರ್ಶನಗೊಳ್ಳಲಿದೆ. ರಂಗಭೂಮಿಯಲ್ಲಿ ಲಿಮ್ಕಾ ಬುಕ್ ರಾಷ್ಟ್ರೀಯ ದಾಖಲೆ ಮಾಡಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರ್ದೇಶನದ ಕನ್ನಡ ಸಂಗೀತ ನಾಟಕ ‘ಚೋಖಾ ಮೇಳ’ ಅದ್ಬುತ ಸಂಯೋಜನೆಯಲ್ಲಿ ಸಂಗೀತ ನಾಟಕದ ಪ್ರಥಮ ಪ್ರದರ್ಶನಗೊಳ್ಳಲಿದೆ.

ಶತಕಗಳ ಹಿಂದೆ ಮಹಾರಾಷ್ಟ್ರದಲ್ಲಿ ಪಂಡರಪುರದ ವಿಠ್ಟೋಭ ದೇವರ ಮಹಿಮೆಯನ್ನು ತನ್ನ ಅಭಂಗ ಹಾಡುಗಳ ಮೂಲಕ ಹಾಡಿ ಹೊಗಳುತ್ತಿದ್ದ ಸಂತ ಚೋಖಾನ ಕಥೆಯಿದು. ಈ ಕಥೆಯನ್ನು ಅವಧೂತ ಭಗವಾನ್ ಶ್ರೀ ನಿತ್ಯಾನಂದರ ಅನುಯಾಯಿ ಸ್ವಾಮಿ ಸದಾನಂದ ಮಹಾರಾಜ ಮರಾಠಿಯಲ್ಲಿ ಬರೆದ ‘ಚೋಖಾ ಮೇಳ’ ಎಂಬ ಸಂಗೀತ ನಾಟಕವನ್ನು ಡಾ| ಜಿ.ಪಿ ಕುಸುಮಾ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇದು ರಂಗ ಪ್ರಯೋಗವಾಗಬೇಕು ಎಂಬ ಸದಾನಂದ ಸ್ವಾಮೀಜಿ ಆಶಯದಂತೆ ಜೂನ್ 28ರ ಶನಿವಾರದಂದು ಬಂಟರ ಭವನದಲ್ಲಿ ಮಧ್ಯಾಹ್ನ 2:30ಕ್ಕೆ ಈ ನಾಟಕ ಪ್ರದರ್ಶಿಸಲ್ಪಡಲಿದೆ. ಈ ಸುಸಂದರ್ಭದಲಿ ಸದಾನಂದ ಮಹಾರಾಜ ಸ್ವಾಮೀಜಿಯವರ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಮುಂಬೈ ಮಹಾನಗರದ ಗಣ್ಯಾತಿಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ವಿಶೇಷ ಸಮಾರಂಭ ಮತ್ತು ಗುರುವಂದನೆಯಲ್ಲಿ, ಗುರುಗಳ ಹಾಗೂ ಭಗವಾನ್ ನಿತ್ಯಾನಂದ ಸ್ವಾಮೀಜಿಯವರ ಮುಂಬೈಯ ಸಮಸ್ತ ಭಕ್ತರು ಹಾಗೂ ವಿವಿಧ ನಿತ್ಯಾನಂದ ಮಂದಿರಗಳ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಸಕುಟುಂಬದವರೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಕಲಾಜಗತ್ತು ಕ್ರಿಯೇಷನ್ಸ್ ಮುಂಬೈಯ ಪ್ರಕಟಣೆಯಲ್ಲಿ ಕೋರಲಾಗಿದೆ.