<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>www.buntsnow.com |  web-based media For Bunts Community</title>
	<atom:link href="https://buntsnow.com/feed" rel="self" type="application/rss+xml" />
	<link>https://buntsnow.com/</link>
	<description>Chief Editor Ranjith Kumar Shetty Mangalore  - Bunts Portal - Website</description>
	<lastBuildDate>Fri, 29 May 2026 04:26:14 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://buntsnow.com/wp-content/uploads/2025/09/BUNTS-NOW-1.png</url>
	<title>www.buntsnow.com |  web-based media For Bunts Community</title>
	<link>https://buntsnow.com/</link>
	<width>32</width>
	<height>32</height>
</image> 
	<item>
		<title>ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿ</title>
		<link>https://buntsnow.com/archives/35951</link>
		
		<dc:creator><![CDATA[admin]]></dc:creator>
		<pubDate>Fri, 29 May 2026 04:25:49 +0000</pubDate>
				<category><![CDATA[ಸಾಧಕರು]]></category>
		<guid isPermaLink="false">https://buntsnow.com/?p=35951</guid>

					<description><![CDATA[<p>ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ವಿ ಶೆಟ್ಟಿಯವರು ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದ ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ. ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ, [...]</p>
<p>The post <a href="https://buntsnow.com/archives/35951">ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img fetchpriority="high" decoding="async" width="488" height="375" src="https://buntsnow.com/wp-content/uploads/2026/05/4cbc3205-255e-491d-aa6f-6b7d87e34879.jpeg" alt="" class="wp-image-35940" srcset="https://buntsnow.com/wp-content/uploads/2026/05/4cbc3205-255e-491d-aa6f-6b7d87e34879.jpeg 488w, https://buntsnow.com/wp-content/uploads/2026/05/4cbc3205-255e-491d-aa6f-6b7d87e34879-300x231.jpeg 300w, https://buntsnow.com/wp-content/uploads/2026/05/4cbc3205-255e-491d-aa6f-6b7d87e34879-150x115.jpeg 150w, https://buntsnow.com/wp-content/uploads/2026/05/4cbc3205-255e-491d-aa6f-6b7d87e34879-450x346.jpeg 450w" sizes="(max-width: 488px) 100vw, 488px" /></figure>



<figure class="wp-block-image size-large"><img decoding="async" width="1024" height="683" src="https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-1024x683.jpeg" alt="" class="wp-image-35943" srcset="https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-1024x683.jpeg 1024w, https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-300x200.jpeg 300w, https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-768x512.jpeg 768w, https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-150x100.jpeg 150w, https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-450x300.jpeg 450w, https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a-1200x801.jpeg 1200w, https://buntsnow.com/wp-content/uploads/2026/05/8e0af4c9-f796-4ad9-9ce7-8f75bb67479a.jpeg 1280w" sizes="(max-width: 1024px) 100vw, 1024px" /></figure>



<p class="wp-block-paragraph">ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ವಿ ಶೆಟ್ಟಿಯವರು ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದ ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ. ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ, ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೈಟರ್, ಕ್ಯಾಪ್ಟನ್‌ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ ತನಕ ಒಟ್ಟು 45 ಹೊಟೇಲ್‌ಗಳಲ್ಲಿ ದುಡಿದು ಅಪಾರ ಅನುಭವ ಗಳಿಸಿದರು. ತದನಂತರ, ಅವರು ತಾಯಿಯವರಿಗೆ ಫೋನ್ ಮಾಡಿ ಮುಂಬಯಿಯಲ್ಲಿ ಮನೆ ಮಾಡುತ್ತೇನೆ, ಬಂದು ನೆಲೆಸಿ ಎಂದಾಗ ಅವರ ತಾಯಿಯವರು ತಾನು ಸತ್ತರೂ ಬರೋಲ್ಲ ಎಂದರು.</p>



<figure class="wp-block-image size-large"><img decoding="async" width="486" height="534" src="https://buntsnow.com/wp-content/uploads/2026/05/414d18d5-8e8c-4084-95d1-9294e6e206e3.jpeg" alt="" class="wp-image-35941" srcset="https://buntsnow.com/wp-content/uploads/2026/05/414d18d5-8e8c-4084-95d1-9294e6e206e3.jpeg 486w, https://buntsnow.com/wp-content/uploads/2026/05/414d18d5-8e8c-4084-95d1-9294e6e206e3-273x300.jpeg 273w, https://buntsnow.com/wp-content/uploads/2026/05/414d18d5-8e8c-4084-95d1-9294e6e206e3-150x165.jpeg 150w, https://buntsnow.com/wp-content/uploads/2026/05/414d18d5-8e8c-4084-95d1-9294e6e206e3-450x494.jpeg 450w" sizes="(max-width: 486px) 100vw, 486px" /></figure>



<figure class="wp-block-image size-large"><img loading="lazy" decoding="async" width="960" height="638" src="https://buntsnow.com/wp-content/uploads/2026/05/7713f499-2ea2-42e4-ad18-d5368aa620f3.jpeg" alt="" class="wp-image-35942" srcset="https://buntsnow.com/wp-content/uploads/2026/05/7713f499-2ea2-42e4-ad18-d5368aa620f3.jpeg 960w, https://buntsnow.com/wp-content/uploads/2026/05/7713f499-2ea2-42e4-ad18-d5368aa620f3-300x199.jpeg 300w, https://buntsnow.com/wp-content/uploads/2026/05/7713f499-2ea2-42e4-ad18-d5368aa620f3-768x510.jpeg 768w, https://buntsnow.com/wp-content/uploads/2026/05/7713f499-2ea2-42e4-ad18-d5368aa620f3-150x100.jpeg 150w, https://buntsnow.com/wp-content/uploads/2026/05/7713f499-2ea2-42e4-ad18-d5368aa620f3-450x299.jpeg 450w" sizes="(max-width: 960px) 100vw, 960px" /></figure>



<figure class="wp-block-image size-large"><img loading="lazy" decoding="async" width="716" height="578" src="https://buntsnow.com/wp-content/uploads/2026/05/8c444226-bc3d-4ea1-bfc5-cda4ac0aa381.jpeg" alt="" class="wp-image-35944" srcset="https://buntsnow.com/wp-content/uploads/2026/05/8c444226-bc3d-4ea1-bfc5-cda4ac0aa381.jpeg 716w, https://buntsnow.com/wp-content/uploads/2026/05/8c444226-bc3d-4ea1-bfc5-cda4ac0aa381-300x242.jpeg 300w, https://buntsnow.com/wp-content/uploads/2026/05/8c444226-bc3d-4ea1-bfc5-cda4ac0aa381-150x121.jpeg 150w, https://buntsnow.com/wp-content/uploads/2026/05/8c444226-bc3d-4ea1-bfc5-cda4ac0aa381-450x363.jpeg 450w" sizes="(max-width: 716px) 100vw, 716px" /></figure>



<figure class="wp-block-image size-large"><img loading="lazy" decoding="async" width="727" height="761" src="https://buntsnow.com/wp-content/uploads/2026/05/902e2011-824a-42d1-b959-cf46221af223.jpeg" alt="" class="wp-image-35945" srcset="https://buntsnow.com/wp-content/uploads/2026/05/902e2011-824a-42d1-b959-cf46221af223.jpeg 727w, https://buntsnow.com/wp-content/uploads/2026/05/902e2011-824a-42d1-b959-cf46221af223-287x300.jpeg 287w, https://buntsnow.com/wp-content/uploads/2026/05/902e2011-824a-42d1-b959-cf46221af223-150x157.jpeg 150w, https://buntsnow.com/wp-content/uploads/2026/05/902e2011-824a-42d1-b959-cf46221af223-450x471.jpeg 450w" sizes="(max-width: 727px) 100vw, 727px" /></figure>



<figure class="wp-block-image size-large"><img loading="lazy" decoding="async" width="1024" height="758" src="https://buntsnow.com/wp-content/uploads/2026/05/18876d50-e6a9-42e8-85b6-6720e42a4fdf-1024x758.jpeg" alt="" class="wp-image-35946" srcset="https://buntsnow.com/wp-content/uploads/2026/05/18876d50-e6a9-42e8-85b6-6720e42a4fdf-1024x758.jpeg 1024w, https://buntsnow.com/wp-content/uploads/2026/05/18876d50-e6a9-42e8-85b6-6720e42a4fdf-300x222.jpeg 300w, https://buntsnow.com/wp-content/uploads/2026/05/18876d50-e6a9-42e8-85b6-6720e42a4fdf-768x568.jpeg 768w, https://buntsnow.com/wp-content/uploads/2026/05/18876d50-e6a9-42e8-85b6-6720e42a4fdf-150x111.jpeg 150w, https://buntsnow.com/wp-content/uploads/2026/05/18876d50-e6a9-42e8-85b6-6720e42a4fdf-450x333.jpeg 450w, https://buntsnow.com/wp-content/uploads/2026/05/18876d50-e6a9-42e8-85b6-6720e42a4fdf.jpeg 1200w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="682" src="https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-1024x682.jpeg" alt="" class="wp-image-35947" srcset="https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-1024x682.jpeg 1024w, https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-300x200.jpeg 300w, https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-768x511.jpeg 768w, https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-150x100.jpeg 150w, https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-450x300.jpeg 450w, https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2-1200x799.jpeg 1200w, https://buntsnow.com/wp-content/uploads/2026/05/cbaca887-1897-4b4a-9cf1-07d57f4441d1-2.jpeg 1280w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="682" src="https://buntsnow.com/wp-content/uploads/2026/05/abfbb51a-847b-42d9-b377-acdb382302a1-1024x682.jpeg" alt="" class="wp-image-35948" srcset="https://buntsnow.com/wp-content/uploads/2026/05/abfbb51a-847b-42d9-b377-acdb382302a1-1024x682.jpeg 1024w, https://buntsnow.com/wp-content/uploads/2026/05/abfbb51a-847b-42d9-b377-acdb382302a1-300x200.jpeg 300w, https://buntsnow.com/wp-content/uploads/2026/05/abfbb51a-847b-42d9-b377-acdb382302a1-768x512.jpeg 768w, https://buntsnow.com/wp-content/uploads/2026/05/abfbb51a-847b-42d9-b377-acdb382302a1-1536x1023.jpeg 1536w, https://buntsnow.com/wp-content/uploads/2026/05/abfbb51a-847b-42d9-b377-acdb382302a1-150x100.jpeg 150w, https://buntsnow.com/wp-content/uploads/2026/05/abfbb51a-847b-42d9-b377-acdb382302a1-450x300.jpeg 450w, https://buntsnow.com/wp-content/uploads/2026/05/abfbb51a-847b-42d9-b377-acdb382302a1-1200x800.jpeg 1200w, https://buntsnow.com/wp-content/uploads/2026/05/abfbb51a-847b-42d9-b377-acdb382302a1.jpeg 1600w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="768" src="https://buntsnow.com/wp-content/uploads/2026/05/35765059-da09-4d59-8008-c1485027bfd2-1024x768.jpeg" alt="" class="wp-image-35949" srcset="https://buntsnow.com/wp-content/uploads/2026/05/35765059-da09-4d59-8008-c1485027bfd2-1024x768.jpeg 1024w, https://buntsnow.com/wp-content/uploads/2026/05/35765059-da09-4d59-8008-c1485027bfd2-300x225.jpeg 300w, https://buntsnow.com/wp-content/uploads/2026/05/35765059-da09-4d59-8008-c1485027bfd2-768x576.jpeg 768w, https://buntsnow.com/wp-content/uploads/2026/05/35765059-da09-4d59-8008-c1485027bfd2-150x113.jpeg 150w, https://buntsnow.com/wp-content/uploads/2026/05/35765059-da09-4d59-8008-c1485027bfd2-450x338.jpeg 450w, https://buntsnow.com/wp-content/uploads/2026/05/35765059-da09-4d59-8008-c1485027bfd2.jpeg 1080w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="684" src="https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-1024x684.jpeg" alt="" class="wp-image-35950" srcset="https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-1024x684.jpeg 1024w, https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-300x200.jpeg 300w, https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-768x513.jpeg 768w, https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-150x100.jpeg 150w, https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-450x301.jpeg 450w, https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e-1200x802.jpeg 1200w, https://buntsnow.com/wp-content/uploads/2026/05/facf4f92-f65d-4fec-a83a-0ddbe21ead6e.jpeg 1280w" sizes="(max-width: 1024px) 100vw, 1024px" /></figure>



<p class="wp-block-paragraph">ತಾಯಿ ಲೀಲಾವತಿ ವಿ ಶೆಟ್ಟರ ಮೇಲೆ ರಾಜೇಂದ್ರ ಶೆಟ್ಟಿಯವರಿಗೆ ಅತೀವ ಪ್ರೀತಿ. ತಾಯಿಯೆಂದರೆ ಪಂಚಪ್ರಾಣ. ಅವರ ಪಾಲಿಗೆ ಪ್ರತ್ಯಕ್ಷ ದೇವರು. ಈ ಕಾರಣಕ್ಕಾಗಿಯೇ ತನ್ನ ತಾಯಿಗಾಗಿ ಮುಂಬಯಿ ಬಿಟ್ಟು ಅಲ್ಲಿನ ಅಸಂಖ್ಯಾತ ಸ್ನೇಹಿತರ ಫ್ರೆಂಡ್ಸ್ ಸರ್ಕಲ್ ತೊರೆದರು. ಹುಬ್ಬಳ್ಳಿಯಲ್ಲಿಯೇ ಹೊಟೇಲ್ ಉದ್ಯಮ ಆರಂಭಿಸಿದ ಅವರು ನವೀನ್ ಕಾಮತ್ ಅವರು ಕೊಟ್ಟ 50 ಸಾವಿರ ರೂಪಾಯಿ ಹಣದಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡರು. ಮನೆ ದೇವರ ಹೆಸರಲ್ಲಿ ಹುಬ್ಬಳ್ಳಿ, ಧಾರವಾಡದಲ್ಲಿ ‘ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್’ ಮತ್ತು ತಾಯಿ ಲೀಲಾವತಿಯವರ ಹೆಸರಲ್ಲಿ ‘ಹೊಟೇಲ್ ಲೀಲಾವತಿ ಪ್ಯಾಲೇಸ್’ ಸೇರಿದಂತೆ ಒಟ್ಟು 9 ಹೊಟೇಲ್‌ಗಳನ್ನು ಆರಂಭಿಸಿದರು. ದಾವಣಗೆರೆಯಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು. ಪುಣೆಯಲ್ಲಿ ತಂದೆಯ ಹೆಸರಲ್ಲಿ &#8216;ವಿಶ್ವನಾಥ್ ಪ್ಯಾಲೇಸ್&#8217; ಹೋಟೆಲು ತೆರೆದರು. ಇಂದು ಅದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೇ ಖ್ಯಾತಿಯನ್ನು ಪಡೆದು ಗ್ರಾಹಕರ ಶ್ಲಾಘನೆಗೆ ಪಾತ್ರವಾಗಿದೆ. ತಾನೊಬ್ಬನೇ ಬೆಳೆಯಬೇಕು, ತಾನೊಬ್ಬನೇ ದುಡ್ಡು ಗಳಿಸಬೇಕೆಂಬ ದುರಾಸೆಗೆ ಬೀಳದೆ 20 ವರ್ಷಗಳ ಕಾಲ ವಿವಿಧ ಹೊಟೇಲ್‌ಗಳಲ್ಲಿ ಕೆಲಸ ಮಾಡುವಾಗ ತನ್ನ ಜೊತೆಯಲ್ಲಿ ಕೆಲಸ ಮಾಡಿದ, ಸಹಾಯ, ಸಹಕಾರ ನೀಡಿದ, ಅರ್ಹ ಹಾಗೂ ಪ್ರಾಮಾಣಿಕ ಆತ್ಮೀಯ ಗೆಳೆಯರನ್ನು ಕರೆದು ತನ್ನ ಹೊಟೇಲುಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟರು. ಅವರು ಕೂಡಾ ತನ್ನೊಟ್ಟಿಗೆ ಬೆಳೆದು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಹೀಗೇ ತನ್ನ ಹೊಟೇಲ್‌ನ ಕಾರ್ಮಿಕರನ್ನೇ ಮಾಲಕರಾಗಿಸಿ ಹಿರಿತನ ಮೆರೆದರು.</p>



<p class="wp-block-paragraph">ಇಂದು ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ ಮೂಲಕ ನಾನಾ ಸಂಸ್ಥೆಗಳನ್ನು ಆರಂಭಿಸಿ, ಉದ್ಯಮದಲ್ಲಿ ಗಳಿಸಿದ ಹಣದಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಅವರ ತಂದೆಯವರು ತನ್ನ ಮಗ ದಾನಶೂರ ಕರ್ಣನಾಗುತ್ತಾನೆ ಎನ್ನುತ್ತಿದ್ದರಂತೆ. ದಾನ ಮಾಡುವುದೆಂದರೆ ರಾಜೇಂದ್ರ ಶೆಟ್ಟಿಯವರಿಗೆ ಎಲ್ಲಿಲ್ಲದ ಪ್ರೀತಿ. ಅವರು ಕೊಡುಗೈದಾನಿ, ಬಡವರ ಬಂಧು. ತಾಳ್ಮೆ ಮತ್ತು ಶ್ರದ್ಧೆಯೊಂದಿದ್ದರೆ ಯಶಸ್ಸು ಸಾಧಿಸಬಹುದೆಂಬುವುದಕ್ಕೆ ರಾಜೇಂದ್ರ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಯಾವುದೇ ದುರಾಭ್ಯಾಸಗಳಿಲ್ಲದ ರಾಜೇಂದ್ರ ಶೆಟ್ಟಿಯವರು ಸದ್ಗುಣಗಳ ಸಂಪನ್ನ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಪೂರ್ವ ಸಾಧಕ. ಅವರ ಸಾಧನೆಯ ಹಿಂದೆ ಕಷ್ಟಗಳ ನೆರಳಿದೆ. ಹಠ, ಛಲ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠುರತೆ, ಅನುಭವ, ಮಾತೃ ವಾತ್ಸಲ್ಯ ಸೇರಿದಂತೆ ನಂಬಿಕೆ, ವಿಶ್ವಾಸದ ಗುಣವಿದೆ. ಅದೇ ಅವರನ್ನು ಹೊಟೇಲು ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಸಿದೆ.</p>



<p class="wp-block-paragraph">ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತಗಳೇ ಅವರ ಯಶಸ್ಸಿನ ಬೆನ್ನೆಲುಬುಗಳು. ಹುಬ್ಬಳ್ಳಿ ಧಾರವಾಡದಲ್ಲಿ ಹೊಟೇಲ್ ಎಂದರೆ ಹಸಿದವನಿಗೆ ಅನ್ನ ಹಾಕುವ ಮನೆಯಿಂದ್ದಂತೆ. ರಾಜೇಂದ್ರ ಶೆಟ್ಟಿಯವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್, ಹೊಟೇಲ್ ಲೀಲಾವತಿ ಪ್ಯಾಲೇಸ್, ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ಮೂಲಕ ಹೊಟೇಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಬಡವರ ಬಂಧುವಾಗಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ. 42 ವರ್ಷಗಳ ಹೊಟೇಲು ಉದ್ಯಮದ ಅನುಭವವಿರುವ ಅವರು ಇಂದು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ. ಅವರ ಸಾಧನೆ, ಜೀವನ ಶೈಲಿ ಯುವಜನತೆಗೆ ಸ್ಪೂರ್ತಿ. ಬಂಟ ಸಮಾಜದ ಹೆಮ್ಮೆಯ ಸುಪುತ್ರ ರಾಜೇಂದ್ರ ಶೆಟ್ಟಿಯವರು ನವೆಂಬರ್ 20, 1973 ರಂದು ಉಡುಪಿ ಜಿಲ್ಲೆಯ ಮೂಡುಬೆಟ್ಟು ಮಣಿಪುರ ಗ್ರಾಮದ ದೆಂದೂರಿನಲ್ಲಿ ಜನಿಸಿದರು. ಅವರ ತಂದೆ ದಿ. ವಿಶ್ವನಾಥ ಶೆಟ್ಟಿ ಮತ್ತು ತಾಯಿ ಲೀಲಾವತಿ ವಿ ಶೆಟ್ಟಿ. ಹರೀಶ್ ಮತ್ತು ಅಜಯ್ ಅವರು ರಾಜೇಂದ್ರ ಶೆಟ್ಟಿಯವರ ಸಹೋದರರಾಗಿದ್ದು, ದೀಪಾ ಮತ್ತು ವಿದ್ಯಾ ಸಹೋದರಿಯರು. ರಾಜೇಂದ್ರ ಶೆಟ್ಟಿಯವರ ಧರ್ಮಪತ್ನಿ ಹರಿಣಿ. ಕುಮಾರಿ ವೈಷ್ಣವಿ ಮತ್ತು ಕುಮಾರಿ ವೈಭವಿ ಇವರ ಸುಪುತ್ರಿಯರು. 2005 ರಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2009ರಲ್ಲಿ ಹುಬ್ಬಳ್ಳಿ ಕೋರ್ಟು ಸರ್ಕಲ್‌ನ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ, 2011ರಲ್ಲಿ ಹುಬ್ಬಳ್ಳಿ ವಿದ್ಯಾನಗರದ ಬಿ.ವಿ.ಬಿ. ಎದುರು ಹೊಟೇಲ್ ಶ್ರೀ ಪಂಜುರ್ಲಿ, 2012 ರಲ್ಲಿ ಧಾರವಾಡ ಕೆ.ಸಿ ಪಾರ್ಕ್ ಎದುರು ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ್ ರಸ್ತೆಯ ನೆಹರು ನಗರದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2018 ರಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಓಯಾಸಿಸ್ ಮಾಲ್ ಎದುರು ಹೊಟೆಲ್ ಲೀಲಾವತಿ ಪ್ಯಾಲೇಸ್, 2020ರಲ್ಲಿ ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೇ ಗೇಟ್ ಬಳಿ ಶ್ರೀ ಪಂಜುರ್ಲಿ ಫೈನ್ ಡೈನ್, 2022ರಲ್ಲಿ ದಾವಣಗೆರೆ ಹೊಸ ಬಸ್ ನಿಲ್ದಾಣದ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ ಪ್ಯಾಲೇಸ್, ದಾವಣಗೆರೆ ಹೊಸ ಬಸ್ ನಿಲ್ದಾಣದ ಹತ್ತಿರ 2022ರಲ್ಲಿ ಲೀಲಾವತಿ ಕಲ್ಯಾಣ ಮಂಟಪ, 2024ರಲ್ಲಿ ಪುಣೆಯಲ್ಲಿ ವಿಶ್ವನಾಥ್ ಪ್ಯಾಲೇಸ್ ಸ್ಥಾಪಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಉದ್ಯಮ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ ಹೊಟೇಲ್ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ ಬೆಂಗಳೂರು ಇದರ ಧಾರವಾಡ ಜಿಲ್ಲಾ ಪ್ರತಿನಿಧಿ ಸದಸ್ಯರಾಗಿದ್ದಾರೆ.</p>



<p class="wp-block-paragraph">ಹುಬ್ಬಳ್ಳಿ ಧಾರವಾಡ ಬಂಟರ ಸಂಘ ಇದರ ಪೂಜಾ ಸಮಿತಿ ಅಧ್ಯಕ್ಷರಾಗಿ, ಜೊತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ 2026-29 ರ ಸಾಲಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಹೊನ್ನಾವರದ ಹೊನ್ನಾವರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಹೊಟೇಲ್ ಸಂಘದ ಅಮೃತ ಮಹೋತ್ಸವ ಕಾರ‍್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಸ್ತಿ, ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯಿಂದ 2018ರಲ್ಲಿ ಅರ್ಚಿವರ‍್ಸ್ ಆಫ್ ಕರ್ನಾಟಕ ಪ್ರಶಸ್ತಿ, 2021ರಲ್ಲಿ ಮದರ್ ಥೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ನ್ನು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ಮಾದ್ಯಮ ಸಹಕಾರ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. 2025 ರಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ ಬಂಟ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ. ಉದ್ಯೋಗ ರತ್ನ ಪ್ರಶಸ್ತಿ, ಕರುನಾಡ ಕಣ್ಮಣಿ, ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯೂ ಅವರಿಗೆ ಬಂದಿದೆ. ರಾಜೇಂದ್ರ ವಿ ಶೆಟ್ಟರಿಗೆ ಸಮಸ್ತ ಬಂಟ ಸಮಾಜದ ಆಶೀರ್ವಾದ, ಪ್ರೋತ್ಸಾಹ ಸದಾ ಇರಲಿ ಎಂದು ಬಂಟ್ಸ್ ನೌ ತಂಡ ಸದಾ ಆಶಿಸುತ್ತದೆ.</p>



<p class="wp-block-paragraph"></p>
<p>The post <a href="https://buntsnow.com/archives/35951">ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಡಾ&#124; ಅರುಣೋದಯ ಎಸ್ ರೈ ನಿರ್ಮಾಣದ &#8216;ವಿಲೇಜ್ ಬಾಯ್ಸ್&#8217; ಚಿತ್ರಕ್ಕೆ ಮುಹೂರ್ತ</title>
		<link>https://buntsnow.com/archives/35937</link>
		
		<dc:creator><![CDATA[admin]]></dc:creator>
		<pubDate>Fri, 29 May 2026 04:23:19 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=35937</guid>

					<description><![CDATA[<p>ಬೆಳಿಯೂರು ಗುತ್ತು ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ &#8216;ವಿಲೇಜ್ ಬಾಯ್ಸ್&#8217; ಕನ್ನಡ ಚಲನಚಿತ್ರದ ಮುಹೂರ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನ ಅನುವಂಶಿಕ ಪ್ರಧಾನ ಅರ್ಚಕರಾದ ಶ್ರೀ ಹರಿ ಅಸ್ರಣ್ಣರು ದೇವರ ಸಾನಿಧ್ಯದಲ್ಲಿ ಕ್ಯಾಮೆರಾ ಪೂಜೆ ಸಲ್ಲಿಸಿ, ಸಿನಿಮಾ ಕ್ಲಾಪ್ ಬೋರ್ಡ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಸಿನಿಮಾ ತಂಡಕ್ಕೆ ಆಶೀರ್ವಾವಚನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತುಳು ರಂಗಭೂಮಿಯ ಖ್ಯಾತ ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ನಿವೃತ್ತ [...]</p>
<p>The post <a href="https://buntsnow.com/archives/35937">ಡಾ| ಅರುಣೋದಯ ಎಸ್ ರೈ ನಿರ್ಮಾಣದ &#8216;ವಿಲೇಜ್ ಬಾಯ್ಸ್&#8217; ಚಿತ್ರಕ್ಕೆ ಮುಹೂರ್ತ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="900" height="544" src="https://buntsnow.com/wp-content/uploads/2026/05/4a39a6c9-226f-49a4-9f32-af149bc7113e.jpeg" class="wp-image-35935" srcset="https://buntsnow.com/wp-content/uploads/2026/05/4a39a6c9-226f-49a4-9f32-af149bc7113e.jpeg 900w, https://buntsnow.com/wp-content/uploads/2026/05/4a39a6c9-226f-49a4-9f32-af149bc7113e-300x181.jpeg 300w, https://buntsnow.com/wp-content/uploads/2026/05/4a39a6c9-226f-49a4-9f32-af149bc7113e-768x464.jpeg 768w, https://buntsnow.com/wp-content/uploads/2026/05/4a39a6c9-226f-49a4-9f32-af149bc7113e-150x91.jpeg 150w, https://buntsnow.com/wp-content/uploads/2026/05/4a39a6c9-226f-49a4-9f32-af149bc7113e-450x272.jpeg 450w" sizes="(max-width: 900px) 100vw, 900px" /></figure>



<p class="wp-block-paragraph">ಬೆಳಿಯೂರು ಗುತ್ತು ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ &#8216;ವಿಲೇಜ್ ಬಾಯ್ಸ್&#8217; ಕನ್ನಡ ಚಲನಚಿತ್ರದ ಮುಹೂರ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನ ಅನುವಂಶಿಕ ಪ್ರಧಾನ ಅರ್ಚಕರಾದ ಶ್ರೀ ಹರಿ ಅಸ್ರಣ್ಣರು ದೇವರ ಸಾನಿಧ್ಯದಲ್ಲಿ ಕ್ಯಾಮೆರಾ ಪೂಜೆ ಸಲ್ಲಿಸಿ, ಸಿನಿಮಾ ಕ್ಲಾಪ್ ಬೋರ್ಡ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಸಿನಿಮಾ ತಂಡಕ್ಕೆ ಆಶೀರ್ವಾವಚನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತುಳು ರಂಗಭೂಮಿಯ ಖ್ಯಾತ ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ನಿವೃತ್ತ ಸೇನಾಧಿಕಾರಿ ರಂಗನಾಥ್ ಎಸ್ ರೈ, ಬನ ಸಿನಿಮಾ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಬನ ಸಿನಿಮಾದ ನಿರ್ಮಾಪಕ ಮನೋಹರ್ ರೈ, ಅನಾರ್ಕಲಿ ಸಿನಿಮಾದ ನಿರ್ದೇಶಕ ಹರ್ಷಿತ್ ಸೋಮೇಶ್ವರ, ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ ಇದರ ಅಧ್ಯಕ್ಷರಾದ ಪುಷ್ಪರಾಜ್ ಇರ್ದೆ ಮತ್ತು ಕಾರ್ಯದರ್ಶಿಗಳಾದ ಚಂದ್ರಶೇಖರ್ ಮೂರೂರು, ಆನಂದ್ ಶೆಟ್ಟಿ ಕುಕ್ಕುಂದೂರು ಅಥಿತಿಗಳಾಗಿ ಉಪಸ್ಥಿತರಿದ್ದು ಚಿತ್ರೀಕರಣಕ್ಕೆ ಶುಭ ಹಾರೈಸಿದರು.</p>



<p class="wp-block-paragraph">ವಿಲೇಜ್ ಬಾಯ್ಸ್ ಕನ್ನಡ ಸಿನಿಮಾಕ್ಕೆ ನಿರ್ಮಾಪಕರಾಗಿ ರೈ ಸುಮತಿ ಎಜುಕೇಶನ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಡಾ| ಅರುಣೋದಯ ಎಸ್ ರೈಯವರು ಬಂಡವಾಳ ಹೂಡಿದ್ದು, ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಬಾಬಾ ಪ್ರಸಾದ್ ಅರಸ ಕುತ್ಯಾರು ನಿರ್ದೇಶನ ಮಾಡಲಿದ್ದಾರೆ. ತಾರಾಂಗಣದಲ್ಲಿ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ಬಾಬಾ ಪ್ರಸಾದ್ ಅರಸ ಕುತ್ಯಾರು, ದಯಾನಂದ ರೈ ಬೆಟ್ಟಂಪಾಡಿ, ವಿಜಯ ಹರಿ ರೈ, ಅಕ್ಷತಾ ಶೆಟ್ಟಿ, ಶಶಿರಾಜ್, ಚಂದ್ರಶೇಖರ್ ಸಿದ್ಧಕಟ್ಟೆ, ಶರತ್ ಆಳ್ವ, ಮೋಹನ್ ಹೆಗ್ಡೆ, ಜ್ಯೋತಿ ಕುಲಾಲ್, ಸುಪಲಿತ ಹಾಗೂ ಅನೇಕ ಬಾಲ ಕಲಾವಿದರು ಮತ್ತು ಹಿರಿಯ ಕಲಾವಿದರು ಅಭಿನಯಿಸಲಿದ್ದಾರೆಂದು ಚಿತ್ರ ತಂಡ ಮಾಹಿತಿಯನ್ನು ಹಂಚಿಕೊಂಡಿದೆ.</p>



<p class="wp-block-paragraph">ಈ ಚಿತ್ರದ ತಂತ್ರಜ್ಞಾನ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಚರಣ್ ಆಚಾರ್ಯ ಪುತ್ತೂರು, ಸಂಗೀತ ನಿರ್ದೇಶನ ಕಿಶೋರ್ ಶೆಟ್ಟಿ, ನವೀನ್ ನಿರೋಲ್ತಾಡಿ, ಸಹ ನಿರ್ದೇಶನ ವಿಭಾಗದಲ್ಲಿ ರಝಾಕ್ ಪುತ್ತೂರು, ದೀಕ್ಷಿತ್ ಶೆಟ್ಟಿ ಕಾರ್ಕಳ, ಯತೀಶ್ ಕುಲಾಲ್ ಬೆಟ್ಟಂಪಾಡಿ, ಸಾಗರ್, ಕಲಾ ವಿಭಾಗದಲ್ಲಿ ಹರ್ಷಕಿರಣ ಆಚಾರ್ಯ ಪ್ರತಾಪನಗರ, ದೀಕ್ಷಿತ್ ಕುಲಾಲ್ ಕಬಕ, ಬ್ರಿಜೇಶ್ ಕುಲಾಲ್ ಕುಂಡಡ್ಕ, ದಿಶಾನ್ ರೈ ಬೆಟ್ಟಂಪಾಡಿ, ಪ್ರೊಡಕ್ಷನ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಮೋಹನ್ ಹೆಗ್ಡೆ ಮುಂಬೈ, ಜೈದೀಪ್ ರೈ ಕೊರಂಗ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮವನ್ನು ಬಾಬಾ ಪ್ರಸಾದ್ ಅರಸ ನಿರೂಪಿಸಿ, ವಂದಿಸಿದರು.</p>
<p>The post <a href="https://buntsnow.com/archives/35937">ಡಾ| ಅರುಣೋದಯ ಎಸ್ ರೈ ನಿರ್ಮಾಣದ &#8216;ವಿಲೇಜ್ ಬಾಯ್ಸ್&#8217; ಚಿತ್ರಕ್ಕೆ ಮುಹೂರ್ತ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಪ್ರಚಾರ ಬಯಸದ ಪ್ರಬುದ್ಧ ಸಂಘಟಕ ದಿವಾಕರ ಸಾಮಾನಿ ಚೇಳ್ಯಾರು ಗುತ್ತು</title>
		<link>https://buntsnow.com/archives/35929</link>
		
		<dc:creator><![CDATA[admin]]></dc:creator>
		<pubDate>Thu, 28 May 2026 09:38:13 +0000</pubDate>
				<category><![CDATA[ಸಾಧಕರು]]></category>
		<guid isPermaLink="false">https://buntsnow.com/?p=35929</guid>

					<description><![CDATA[<p>ವನಸುಮದೋಲ್ ಎನ್ನ ಜೀವನವು ವಿಕಸಿಸುವಂತೆ ಮನವನನು ಗೊಳಿಸು ಗುರುವೆ&#8217; ಎಂಬ ಸದಾಶಯ ವಾಕ್ಯಕ್ಕೆ ಒಪ್ಪುವ ಜೀವನ ಶೈಲಿಯನ್ನು ಅನುಸರಿಸಿಕೊಂಡು ಕಾನನದ ಸುಮವೊಂದು ಮೌನದಿಂ ಬಿರಿದು ನಿಜ ಸೌರಭವ ಸೂಸಿ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯೆಯನು ಪಡೆವಂತೆ ಬಾಳನ್ನು ರೂಪಿಸಿಕೊಂಡ ಸಜ್ಜನ ಸಂಘಟಕ ಬಲು ಪ್ರತಿಷ್ಠಿತ ಚೇಳ್ಯಾರು ಗುತ್ತು ಮೂಲದ ದಿವಾಕರ ಸಾಮಾನಿ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜನರ ಜೀವನಕ್ಕೆ ಹತ್ತಿರವಾಗುವ ಸಮಾಜಬಂಧು ಸಾಮಾನಿ ಯಾವುದೇ ಪ್ರತಿಫಲಾಪೇಕ್ಷೆ ಅಥವಾ ಕೀರ್ತಿಕಾಂಕ್ಷೆಯನ್ನು ಹೊಂದಿದವರಲ್ಲ. ಬಂಟ ಸಮುದಾಯದ ಮೂಲ [...]</p>
<p>The post <a href="https://buntsnow.com/archives/35929">ಪ್ರಚಾರ ಬಯಸದ ಪ್ರಬುದ್ಧ ಸಂಘಟಕ ದಿವಾಕರ ಸಾಮಾನಿ ಚೇಳ್ಯಾರು ಗುತ್ತು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="768" height="1024" src="https://buntsnow.com/wp-content/uploads/2026/05/16bf85cd-7b19-44f2-bf14-738ec220be86-768x1024.jpeg" alt="" class="wp-image-35931" srcset="https://buntsnow.com/wp-content/uploads/2026/05/16bf85cd-7b19-44f2-bf14-738ec220be86-768x1024.jpeg 768w, https://buntsnow.com/wp-content/uploads/2026/05/16bf85cd-7b19-44f2-bf14-738ec220be86-225x300.jpeg 225w, https://buntsnow.com/wp-content/uploads/2026/05/16bf85cd-7b19-44f2-bf14-738ec220be86-1152x1536.jpeg 1152w, https://buntsnow.com/wp-content/uploads/2026/05/16bf85cd-7b19-44f2-bf14-738ec220be86-150x200.jpeg 150w, https://buntsnow.com/wp-content/uploads/2026/05/16bf85cd-7b19-44f2-bf14-738ec220be86-450x600.jpeg 450w, https://buntsnow.com/wp-content/uploads/2026/05/16bf85cd-7b19-44f2-bf14-738ec220be86-1200x1600.jpeg 1200w, https://buntsnow.com/wp-content/uploads/2026/05/16bf85cd-7b19-44f2-bf14-738ec220be86.jpeg 1500w" sizes="(max-width: 768px) 100vw, 768px" /></figure>



<p class="wp-block-paragraph">ವನಸುಮದೋಲ್ ಎನ್ನ ಜೀವನವು ವಿಕಸಿಸುವಂತೆ ಮನವನನು ಗೊಳಿಸು ಗುರುವೆ&#8217; ಎಂಬ ಸದಾಶಯ ವಾಕ್ಯಕ್ಕೆ ಒಪ್ಪುವ ಜೀವನ ಶೈಲಿಯನ್ನು ಅನುಸರಿಸಿಕೊಂಡು ಕಾನನದ ಸುಮವೊಂದು ಮೌನದಿಂ ಬಿರಿದು ನಿಜ ಸೌರಭವ ಸೂಸಿ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯೆಯನು ಪಡೆವಂತೆ ಬಾಳನ್ನು ರೂಪಿಸಿಕೊಂಡ ಸಜ್ಜನ ಸಂಘಟಕ ಬಲು ಪ್ರತಿಷ್ಠಿತ ಚೇಳ್ಯಾರು ಗುತ್ತು ಮೂಲದ ದಿವಾಕರ ಸಾಮಾನಿ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜನರ ಜೀವನಕ್ಕೆ ಹತ್ತಿರವಾಗುವ ಸಮಾಜಬಂಧು ಸಾಮಾನಿ ಯಾವುದೇ ಪ್ರತಿಫಲಾಪೇಕ್ಷೆ ಅಥವಾ ಕೀರ್ತಿಕಾಂಕ್ಷೆಯನ್ನು ಹೊಂದಿದವರಲ್ಲ. ಬಂಟ ಸಮುದಾಯದ ಮೂಲ ಸಂಘಟನೆಯಾದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮೂಲ ಘಟಕದ ಜೊತೆಗೆ ತನ್ನನ್ನು ತೊಡಗಿಸಿಕೊಂಡು ಹಲವು ಮಜಲುಗಳ ಮುಂದಾಳು ಎನಿಸಿ ಸಮುದಾಯಪರ ಚಟುವಟಿಕೆಗಳಿಂದ ಜನಪ್ರಿಯತೆ ಪಡೆದ ಸಾಮಾನಿ ಯಾವುದೆ ಅಧಿಕಾರ ಲಾಲಸೆಯಿಂದ ಕಾರ್ಯ ಎಸಗಿಕೊಂಡು ಬಂದಿಲ್ಲವಾದರೂ ಅವರ ಯೋಗ್ಯತೆಗೆ ಅರ್ಹವಾದ ಉತ್ತಮ ಜವಾಬ್ದಾರಿಯುತ ಸ್ಥಾನಮಾನಗಳು ಲಭ್ಯವಾಗಿವೆ.</p>



<p class="wp-block-paragraph">ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಕಾರ್ಯಕಾರಿ ಸಮಿತಿ ಸಂಚಾಲಕರಾಗಿ ಮಹತ್ವದ ಕಾರ್ಯಭಾರ ವಹಿಸಿಕೊಂಡ ದಿವಾಕರ ಸಾಮಾನಿ ಈ ಸ್ಥಾನಕ್ಕೆ ಅರ್ಹ ಆಯ್ಕೆಯೂ ಹೌದು. ಸುರತ್ಕಲ್ ನಲ್ಲಿ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ಉತ್ಸವದಲ್ಲಿ ತಮ್ಮ ಕಾರ್ಯ ಕೌಶಲತೆಯನ್ನು ಮೆರೆದ ಇವರು ಓರ್ವ ಉತ್ತಮ ಮಾತುಗಾರರೂ ಹೌದು. ಅನೇಕ ಕಡೆ ಅರ್ಥಪೂರ್ಣ ಕಾರ್ಯಕ್ರಮ ನಿರ್ವಹಣೆ ಮಾಡಿದ ಖ್ಯಾತಿಯೂ ಶ್ರೀಯುತರಿಗಿದೆ. ಹಿಡಿದ ಕೆಲಸಕ್ಕೆ ಉತ್ತಮ ಪರಿಣಾಮ ದೊರೆಯುವ ತನಕ ವಿರಮಿಸುವ ಜಾಯಮಾನ ಇವರದ್ದಲ್ಲ. ಇವರಿಗೆ ನೀಡಿದ ಜವಾಬ್ದಾರಿಯಲ್ಲಿ ತನ್ನನ್ನು ಪೂರ್ಣ ತೊಡಗಿಸಿಕೊಂಡು ಅದನ್ನು ಯಶಸ್ವಿಗೊಳಿಸಿ ಕೊಡುವ ಅರ್ಹತೆ ಇವರಿಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ಹಲವಾರು ಕಡೆಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಇವರು ಉತ್ತಮ ಜನಸಂಪರ್ಕ ಹೊಂದಿರುವುದರ ಜೊತೆಗೆ ಅವರ ಸ್ಥಾನಮಾನ ಸಾಮಾಜಿಕ ಪ್ರತಿಷ್ಠೆ ಕುರಿತಂತೆ ಎಚ್ಚರ ವಹಿಸುತ್ತಾರೆ.</p>



<p class="wp-block-paragraph">&#8216;ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕು ತಿಮ್ಮ&#8217; ಎಂಬ ಕಗ್ಗದ ವಾಕ್ಯಗಳ ಜೀವನಾದರ್ಶವನ್ನಾಗಿ ರೂಪಿಸಿಕೊಂಡ ವ್ಯಕ್ತಿತ್ವದ ಸಾಮಾನಿ ಅವರಿಗೆ ಇನ್ನಷ್ಟು ಉತ್ತಮ ಸ್ಥಾನಮಾನ ಗೌರವಗಳು ದೊರೆಯಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.</p>



<p class="wp-block-paragraph">ಬರಹ : ಅರುಣ್ ಶೆಟ್ಟಿ ಎರ್ಮಾಳ್<br />ಗೌರವ ಸಂಪಾದಕರು</p>
<p>The post <a href="https://buntsnow.com/archives/35929">ಪ್ರಚಾರ ಬಯಸದ ಪ್ರಬುದ್ಧ ಸಂಘಟಕ ದಿವಾಕರ ಸಾಮಾನಿ ಚೇಳ್ಯಾರು ಗುತ್ತು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಬಂಟರ ಯಾನೆ ನಾಡವರ ಮಾತೃ ಸಂಘ : 105 ನೇ ವಾರ್ಷಿಕ ಸರ್ವಸದಸ್ಯರ ಸಭೆ</title>
		<link>https://buntsnow.com/archives/35923</link>
		
		<dc:creator><![CDATA[admin]]></dc:creator>
		<pubDate>Thu, 28 May 2026 09:09:24 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=35923</guid>

					<description><![CDATA[<p>ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 2 (ಎ) ಯಲ್ಲಿ ಸೇರಲು ಅರ್ಹವಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತವಾಗಿ ಬಂಟ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ [...]</p>
<p>The post <a href="https://buntsnow.com/archives/35923">ಬಂಟರ ಯಾನೆ ನಾಡವರ ಮಾತೃ ಸಂಘ : 105 ನೇ ವಾರ್ಷಿಕ ಸರ್ವಸದಸ್ಯರ ಸಭೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="1024" height="654" src="https://buntsnow.com/wp-content/uploads/2026/05/a41a1521-fd18-4371-b7a3-b787ce9da157-1024x654.jpeg" class="wp-image-35921" srcset="https://buntsnow.com/wp-content/uploads/2026/05/a41a1521-fd18-4371-b7a3-b787ce9da157-1024x654.jpeg 1024w, https://buntsnow.com/wp-content/uploads/2026/05/a41a1521-fd18-4371-b7a3-b787ce9da157-300x192.jpeg 300w, https://buntsnow.com/wp-content/uploads/2026/05/a41a1521-fd18-4371-b7a3-b787ce9da157-768x490.jpeg 768w, https://buntsnow.com/wp-content/uploads/2026/05/a41a1521-fd18-4371-b7a3-b787ce9da157-150x96.jpeg 150w, https://buntsnow.com/wp-content/uploads/2026/05/a41a1521-fd18-4371-b7a3-b787ce9da157-450x287.jpeg 450w, https://buntsnow.com/wp-content/uploads/2026/05/a41a1521-fd18-4371-b7a3-b787ce9da157.jpeg 1040w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="768" src="https://buntsnow.com/wp-content/uploads/2026/05/1fed504b-7d28-45cd-b09b-f018fc9e7259-1024x768.jpeg" class="wp-image-35922" srcset="https://buntsnow.com/wp-content/uploads/2026/05/1fed504b-7d28-45cd-b09b-f018fc9e7259-1024x768.jpeg 1024w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259-300x225.jpeg 300w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259-768x576.jpeg 768w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259-1536x1152.jpeg 1536w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259-150x113.jpeg 150w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259-450x338.jpeg 450w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259-1200x900.jpeg 1200w, https://buntsnow.com/wp-content/uploads/2026/05/1fed504b-7d28-45cd-b09b-f018fc9e7259.jpeg 1600w" sizes="(max-width: 1024px) 100vw, 1024px" /></figure>



<p class="wp-block-paragraph">ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 2 (ಎ) ಯಲ್ಲಿ ಸೇರಲು ಅರ್ಹವಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತವಾಗಿ ಬಂಟ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಎಸ್.ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಇದರ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>



<p class="wp-block-paragraph">2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಹಾಗೂ ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟರನ್ನು ಪ್ರವರ್ಗ 3 (ಬಿ) ಯಿಂದ ಪ್ರವರ್ಗ 2 (ಎ) ಸೇರ್ಪಡೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾತಿಯಲ್ಲಿ ಸೇರಿಸುವ ಉದ್ದೇಶದಿಂದ ಹಾಗೂ ಬಂಟ ಸಮಾಜದ ನಿಜವಾದ ಸ್ಥಿತಿಗತಿಯನ್ನು ಸರಕಾರದ ಗಮನಕ್ಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ &#8220;ಬಾಂಧವ್ಯ&#8221; ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ, ಧಾರ್ಮಿಕ ಮತ್ತು ಒಟ್ಟು ಜೀವನದ ವ್ಯವಸ್ಥೆ ಹಾಗೂ ಇತರ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಹೋನ್ನತವಾದ ದೂರಗಾಮಿ ಪರಿಣಾಮವನ್ನು ಬೀರುವ &#8220;ವಿಶ್ವ ಬಂಟರ ಮಾಹಿತಿ ಕೋಶ&#8221;ವನ್ನು ತಯಾರು ಮಾಡುವ ಒಂದು ಅನುಕರಣೀಯ ಶ್ರೇಷ್ಠ ಕೆಲಸವನ್ನು ಮಾಡಲು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ವಿಶ್ವ ಬಂಟರ ಮಾಹಿತಿಕೋಶ ಪೂರ್ಣವಾದ ನಂತರ ನಾವು ನಮ್ಮ ಸಮಾಜ ಬಾಂಧವರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುವ ಅವಕಾಶ ಒದಗಿ ಬರುತ್ತದೆ ಎಂದರು. 118 ವರ್ಷಗಳ ಹಿಂದೆ ಹಿರಿಯರ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಬಂಟರ ಮಾತೃ ಸಂಘ ಸ್ಥಾಪನೆಯಾಗಿದೆ. ಅಂದು ಯಾವುದೇ ವಾಹನಗಳ ಸೌಕರ್ಯ ಇಲ್ಲದಂತಹ ಸಂದರ್ಭದಲ್ಲಿ ಕಾಸರಗೋಡಿನಿಂದ ಬೈಂದೂರುವರೆಗಿನ ಬಂಟರನ್ನು ಹಿರಿಯರು ಒಂದುಗೂಡಿಸಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಲು ಬಾಡಿಗೆಯಲ್ಲಿ ವಿದ್ಯಾನಿಲಯ ಸ್ಥಾಪಿಸಿದರು. ಪರಿವರ್ತನೆ ಜಗದ ನಿಯಮ, ಕಾಲಕ್ಕನುಗುಣವಾಗಿ ಪರಿಸ್ಥಿತಿ ಬದಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಯಿತು ಎಂದರು.</p>



<p class="wp-block-paragraph">ಸಭೆಯಲ್ಲಿ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ನಡಾವಳಿಗಳ ಮತ್ತು 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ ಶೆಟ್ಟಿ ಮಂಡಿಸಿದರು. 2024-25 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ ಸಭೆಯಲ್ಲಿ ಮಂಡಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿ ಮಂಡನೆ ನಡೆಯಿತು. 2025-26 ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ಸಿಎ ದಯಾಚರಣ್ ಶೆಟ್ಟಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು.<br />ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಡಾ| ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.</p>
<p>The post <a href="https://buntsnow.com/archives/35923">ಬಂಟರ ಯಾನೆ ನಾಡವರ ಮಾತೃ ಸಂಘ : 105 ನೇ ವಾರ್ಷಿಕ ಸರ್ವಸದಸ್ಯರ ಸಭೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಜಾಗತಿಕ ವೇದಿಕೆಗೆ ಜೆ.ಪಿ ಶೆಟ್ಟಿಯವರ &#8216;ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್&#8217; -ಬಂಟರ ಕೌಶಲ್ಯದ ಯಶೋಗಾಥೆ</title>
		<link>https://buntsnow.com/archives/35917</link>
		
		<dc:creator><![CDATA[admin]]></dc:creator>
		<pubDate>Thu, 28 May 2026 05:09:42 +0000</pubDate>
				<category><![CDATA[ಸಾಧಕರು]]></category>
		<guid isPermaLink="false">https://buntsnow.com/?p=35917</guid>

					<description><![CDATA[<p>ಬೆಂಗಳೂರು ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ಲೇಕ್ ಎದುರು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆ, ಕಮರ್ಷಿಯಲ್ ಕಿಚನ್ ಉಪಕರಣಗಳ ತಯಾರಿಕೆಯಲ್ಲಿ ತನ್ನದೇ ಆದ ಮುದ್ರೆ ಮೂಡಿಸಿದೆ. ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಎಲ್ಲರಿಗೂ ಆತ್ಮೀಯವಾಗಿ &#8216;ಜೇಪಿ ಅಣ್ಣ&#8217; ಎಂದು ಪರಿಚಿತರಾಗಿರುವವರು. ತಮ್ಮ ದೂರದೃಷ್ಟಿ ಮತ್ತು ದುಡಿಮೆಯಿಂದ ಈ ಸಂಸ್ಥೆಯನ್ನು ಇಂದು ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಸಂಸ್ಥೆ ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ [...]</p>
<p>The post <a href="https://buntsnow.com/archives/35917">ಜಾಗತಿಕ ವೇದಿಕೆಗೆ ಜೆ.ಪಿ ಶೆಟ್ಟಿಯವರ &#8216;ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್&#8217; -ಬಂಟರ ಕೌಶಲ್ಯದ ಯಶೋಗಾಥೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="818" height="1024" src="https://buntsnow.com/wp-content/uploads/2026/05/ec21893d-b31d-4dfd-b1cd-50d861f19515-818x1024.jpeg" alt="" class="wp-image-35915" srcset="https://buntsnow.com/wp-content/uploads/2026/05/ec21893d-b31d-4dfd-b1cd-50d861f19515-818x1024.jpeg 818w, https://buntsnow.com/wp-content/uploads/2026/05/ec21893d-b31d-4dfd-b1cd-50d861f19515-240x300.jpeg 240w, https://buntsnow.com/wp-content/uploads/2026/05/ec21893d-b31d-4dfd-b1cd-50d861f19515-768x961.jpeg 768w, https://buntsnow.com/wp-content/uploads/2026/05/ec21893d-b31d-4dfd-b1cd-50d861f19515-150x188.jpeg 150w, https://buntsnow.com/wp-content/uploads/2026/05/ec21893d-b31d-4dfd-b1cd-50d861f19515-450x563.jpeg 450w, https://buntsnow.com/wp-content/uploads/2026/05/ec21893d-b31d-4dfd-b1cd-50d861f19515.jpeg 1080w" sizes="(max-width: 818px) 100vw, 818px" /></figure>



<p class="wp-block-paragraph">ಬೆಂಗಳೂರು ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ಲೇಕ್ ಎದುರು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆ, ಕಮರ್ಷಿಯಲ್ ಕಿಚನ್ ಉಪಕರಣಗಳ ತಯಾರಿಕೆಯಲ್ಲಿ ತನ್ನದೇ ಆದ ಮುದ್ರೆ ಮೂಡಿಸಿದೆ. ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಎಲ್ಲರಿಗೂ ಆತ್ಮೀಯವಾಗಿ &#8216;ಜೇಪಿ ಅಣ್ಣ&#8217; ಎಂದು ಪರಿಚಿತರಾಗಿರುವವರು. ತಮ್ಮ ದೂರದೃಷ್ಟಿ ಮತ್ತು ದುಡಿಮೆಯಿಂದ ಈ ಸಂಸ್ಥೆಯನ್ನು ಇಂದು ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಸಂಸ್ಥೆ ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ಸಂಪೂರ್ಣ ಅಡುಗೆ ಮನೆಯ ಪರಿಹಾರಗಳನ್ನು ಒದಗಿಸುವ ಸಮಗ್ರ ಕೈಗಾರಿಕಾ ಘಟಕವಾಗಿದೆ. ಸ್ಟೈನ್ ಲೆಸ್ ಸ್ಟೀಲ್ ಕಿಚನ್ ವ್ಯವಸ್ಥೆಗಳು, ಕಮರ್ಷಿಯಲ್ ಸ್ಟೌವ್‌ಗಳು, ಸ್ಟೋರೇಜ್ ಯೂನಿಟ್‌ಗಳು ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಕಸ್ಟಮ್ ವಿನ್ಯಾಸದ ಉಪಕರಣಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ನಿಪುಣ ಕಾರ್ಮಿಕರ ತಂಡದ ಸಹಕಾರದಿಂದ ಗುಣಮಟ್ಟ, ದೀರ್ಘಕಾಲಿಕತೆ ಮತ್ತು ಕಾರ್ಯಕ್ಷಮತೆ ಎಂಬ ಮೂರು ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಉತ್ಪಾದನೆ ನಡೆಯುತ್ತಿದೆ.</p>



<p class="wp-block-paragraph">ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯ ಸೇವಾ ವ್ಯಾಪ್ತಿ ಬೆಂಗಳೂರು ನಗರವನ್ನು ಮೀರಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿದೆ. ಶಿವಮೊಗ್ಗ, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಹೋಟೆಲ್‌ಗಳಿಗೆ ಈ ಸಂಸ್ಥೆ ಕಿಚನ್ ಉಪಕರಣಗಳನ್ನು ಒದಗಿಸಿದೆ. ಇದರ ಜೊತೆಗೆ ಗೋವಾ, ಮಧ್ಯ ಪ್ರದೇಶ, ಅಯೋಧ್ಯಾ, ಕಾಶಿ ಮುಂತಾದ ಹೊರ ರಾಜ್ಯಗಳಲ್ಲಿಯೂ ಈ ಸಂಸ್ಥೆ ತನ್ನ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಅನೇಕ ಉದ್ಯಮಿಗಳು ತಮ್ಮ ಹೋಟೆಲ್‌ಗಳ ಸಂಪೂರ್ಣ ಕಿಚನ್ ವ್ಯವಸ್ಥೆಯನ್ನು ಜೇಪಿ ಅಣ್ಣ ಅವರ ಸಂಸ್ಥೆಯ ಮೂಲಕವೇ ನಿರ್ಮಿಸಿಕೊಂಡಿರುವುದು ಸಂಸ್ಥೆಯ ಮೇಲಿನ ಗಾಢ ವಿಶ್ವಾಸವನ್ನು ತೋರಿಸುತ್ತದೆ.</p>



<p class="wp-block-paragraph">ಇತ್ತೀಚಿನ ದಿನಗಳಲ್ಲಿ &#8216;ಮೇಕ್ ಇನ್ ಇಂಡಿಯಾ&#8217; ಧ್ಯೇಯದಡಿ ತಯಾರಾಗುವ ಈ ಸಂಸ್ಥೆಯ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಗಮನ ಸೆಳೆಯುತ್ತಿವೆ. ಅಮೆರಿಕದಲ್ಲಿ ಆರಂಭವಾಗುತ್ತಿರುವ &#8216;ಬೆಂಗಳೂರು ಕಫೆ&#8217; ಹೋಟೆಲ್‌ಗೆ ಅಗತ್ಯವಿರುವ ಎಲ್ಲಾ ಕಿಚನ್ ಉಪಕರಣಗಳನ್ನು ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯೇ ಪೂರೈಸುತ್ತಿದ್ದು, ಈಗಾಗಲೇ ಕಂಟೇನರ್ ಮೂಲಕ ಅಮೆರಿಕಕ್ಕೆ ರವಾನಿಸಲಾಗುತ್ತಿದೆ. ಇದು ಸಂಸ್ಥೆಯ ಜಾಗತಿಕ ಪಯಣದ ಮಹತ್ವದ ಘಟ್ಟವಾಗಿದೆ. ಒಟ್ಟಾರೆ, ಜಯಪ್ರಕಾಶ್ ಶೆಟ್ಟಿ (ಜೇಪಿ ಅಣ್ಣ) ಅವರ ನಿಷ್ಠೆ, ಪರಿಶ್ರಮ ಮತ್ತು ಗುಣಮಟ್ಟದ ಮೇಲಿನ ಬದ್ಧತೆ, ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯನ್ನು ಒಂದು ಸಾಮಾನ್ಯ ಉದ್ಯಮದಿಂದ ಪ್ರೇರಣಾದಾಯಕ ಯಶೋಗಾಥೆಯಾಗಿ ರೂಪಿಸಿದೆ. ಸ್ಥಳೀಯವಾಗಿ ಆರಂಭವಾದ ಈ ಪ್ರಯಾಣ ಇಂದು ಜಾಗತಿಕ ವೇದಿಕೆಯಲ್ಲಿ ಬಂಟರ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಿದೆ.</p>



<p class="wp-block-paragraph">ಬರಹ : ಜಯಶೀಲ ಶೆಟ್ಟಿ</p>



<p class="wp-block-paragraph"></p>
<p>The post <a href="https://buntsnow.com/archives/35917">ಜಾಗತಿಕ ವೇದಿಕೆಗೆ ಜೆ.ಪಿ ಶೆಟ್ಟಿಯವರ &#8216;ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್&#8217; -ಬಂಟರ ಕೌಶಲ್ಯದ ಯಶೋಗಾಥೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಡಿ.ಕೆ ಶಿವಕುಮಾರ್ ಅವರಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯವೈಖರಿಗೆ ಶ್ಲಾಘನೆ</title>
		<link>https://buntsnow.com/archives/35913</link>
		
		<dc:creator><![CDATA[admin]]></dc:creator>
		<pubDate>Wed, 27 May 2026 08:38:42 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=35913</guid>

					<description><![CDATA[<p>ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿಯವರು ಮೇ 23 ರಂದು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಚಟುವಟಿಕೆಗಳು ಮತ್ತು ಸಮಿತಿಯ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು. ಡಿ.ಕೆ ಶಿವಕುಮಾರ್ ಅವರು ಸಮಿತಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಸಿದರು.</p>
<p>The post <a href="https://buntsnow.com/archives/35913">ಡಿ.ಕೆ ಶಿವಕುಮಾರ್ ಅವರಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯವೈಖರಿಗೆ ಶ್ಲಾಘನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<p class="wp-block-paragraph">ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿಯವರು ಮೇ 23 ರಂದು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಚಟುವಟಿಕೆಗಳು ಮತ್ತು ಸಮಿತಿಯ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು. ಡಿ.ಕೆ ಶಿವಕುಮಾರ್ ಅವರು ಸಮಿತಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಸಿದರು.</p>
<p>The post <a href="https://buntsnow.com/archives/35913">ಡಿ.ಕೆ ಶಿವಕುಮಾರ್ ಅವರಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯವೈಖರಿಗೆ ಶ್ಲಾಘನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಪಾರ್ಕ್ಸ್ ಸಮೂಹ ಸಂಸ್ಥೆಯ &#8216;ಕಾವೇಶ್ವರ ಕೆಫೆ&#8217; ಉದ್ಘಾಟನೆ</title>
		<link>https://buntsnow.com/archives/35907</link>
		
		<dc:creator><![CDATA[admin]]></dc:creator>
		<pubDate>Wed, 27 May 2026 04:45:45 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=35907</guid>

					<description><![CDATA[<p>ಮಂಗಳೂರಲ್ಲೊಂದು ಹೊಸ ಶುದ್ಧ ಸಸ್ಯಹಾರಿ ಊಟ, ತಿಂಡಿ, ತಿನಸುಗಳ ವಿನೂತನ ಪರಿಕಲ್ಪನೆಯ ಪಾರ್ಕ್ಸ್ ಸಮೂಹ ಸಂಸ್ಥೆಯ &#8216;ಕಾವೇಶ್ವರ ಕೆಫೆ&#8217; ಕದ್ರಿ ಪಾರ್ಕ್ ಬಳಿ ಶುಭಾರಂಭಗೊಂಡಿತು. ಈ ಸಂಧರ್ಭ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಉದ್ಯಮಿ ರಘು ಎಲ್ ಶೆಟ್ಟಿ, ಸಮಾಜಸೇವಕ ಡಾ&#124; ಅಗರಿ ನವೀನ್ ಭಂಡಾರಿ, ಮಾಜಿ ಮೇಯರ್ ಎಂ ಶಶಿಧರ್ ಹೆಗ್ಡೆ, ಉದ್ಯಮಿ ರೋಹನ್ ಮೊಂತೆರೋ, ಶಕೀಲಾ ಕಾವ, ಸಹಜ್ ರೈ ಬಳಜ್ಜ, ಮಾಜಿ ಮೇಯರ್ ಭಾಸ್ಕರ್ ಉದ್ಘಾಟನಾ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ರುಚಿಯಾದ, ಶುಚಿಯಾದ, ಬಿಸಿಯಾದ, [...]</p>
<p>The post <a href="https://buntsnow.com/archives/35907">ಪಾರ್ಕ್ಸ್ ಸಮೂಹ ಸಂಸ್ಥೆಯ &#8216;ಕಾವೇಶ್ವರ ಕೆಫೆ&#8217; ಉದ್ಘಾಟನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="1024" height="592" src="https://buntsnow.com/wp-content/uploads/2026/05/64304d9f-5ff8-45a2-93f5-7c866162e5df-1024x592.jpeg" alt="" class="wp-image-35905" srcset="https://buntsnow.com/wp-content/uploads/2026/05/64304d9f-5ff8-45a2-93f5-7c866162e5df-1024x592.jpeg 1024w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df-300x173.jpeg 300w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df-768x444.jpeg 768w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df-1536x888.jpeg 1536w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df-150x87.jpeg 150w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df-450x260.jpeg 450w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df-1200x694.jpeg 1200w, https://buntsnow.com/wp-content/uploads/2026/05/64304d9f-5ff8-45a2-93f5-7c866162e5df.jpeg 2000w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="681" src="https://buntsnow.com/wp-content/uploads/2026/05/565cd9b4-85ce-4f63-8451-e5d315611435-1024x681.jpeg" alt="" class="wp-image-35906" srcset="https://buntsnow.com/wp-content/uploads/2026/05/565cd9b4-85ce-4f63-8451-e5d315611435-1024x681.jpeg 1024w, https://buntsnow.com/wp-content/uploads/2026/05/565cd9b4-85ce-4f63-8451-e5d315611435-300x200.jpeg 300w, https://buntsnow.com/wp-content/uploads/2026/05/565cd9b4-85ce-4f63-8451-e5d315611435-768x511.jpeg 768w, https://buntsnow.com/wp-content/uploads/2026/05/565cd9b4-85ce-4f63-8451-e5d315611435-1536x1021.jpeg 1536w, https://buntsnow.com/wp-content/uploads/2026/05/565cd9b4-85ce-4f63-8451-e5d315611435-150x100.jpeg 150w, https://buntsnow.com/wp-content/uploads/2026/05/565cd9b4-85ce-4f63-8451-e5d315611435-450x299.jpeg 450w, https://buntsnow.com/wp-content/uploads/2026/05/565cd9b4-85ce-4f63-8451-e5d315611435-1200x798.jpeg 1200w, https://buntsnow.com/wp-content/uploads/2026/05/565cd9b4-85ce-4f63-8451-e5d315611435.jpeg 1600w" sizes="(max-width: 1024px) 100vw, 1024px" /></figure>



<p class="wp-block-paragraph">ಮಂಗಳೂರಲ್ಲೊಂದು ಹೊಸ ಶುದ್ಧ ಸಸ್ಯಹಾರಿ ಊಟ, ತಿಂಡಿ, ತಿನಸುಗಳ ವಿನೂತನ ಪರಿಕಲ್ಪನೆಯ ಪಾರ್ಕ್ಸ್ ಸಮೂಹ ಸಂಸ್ಥೆಯ &#8216;ಕಾವೇಶ್ವರ ಕೆಫೆ&#8217; ಕದ್ರಿ ಪಾರ್ಕ್ ಬಳಿ ಶುಭಾರಂಭಗೊಂಡಿತು. ಈ ಸಂಧರ್ಭ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಉದ್ಯಮಿ ರಘು ಎಲ್ ಶೆಟ್ಟಿ, ಸಮಾಜಸೇವಕ ಡಾ| ಅಗರಿ ನವೀನ್ ಭಂಡಾರಿ, ಮಾಜಿ ಮೇಯರ್ ಎಂ ಶಶಿಧರ್ ಹೆಗ್ಡೆ, ಉದ್ಯಮಿ ರೋಹನ್ ಮೊಂತೆರೋ, ಶಕೀಲಾ ಕಾವ, ಸಹಜ್ ರೈ ಬಳಜ್ಜ, ಮಾಜಿ ಮೇಯರ್ ಭಾಸ್ಕರ್ ಉದ್ಘಾಟನಾ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ರುಚಿಯಾದ, ಶುಚಿಯಾದ, ಬಿಸಿಯಾದ, ಸಿಹಿಯಾದ, ತಂಪಾದ, ಹಿತವಾದ ಆಹಾರ ವಿಹಾರಕ್ಕಾಗಿ ಸೇರುವ ವಿಶಾಲವಾದ ಅಚ್ಚುಕಟ್ಟಾದ ಪರಿಸರ ಇದಾಗಿದ್ದು, ಜನಮಾಸದ ಹಸಿವು ನೀಗುವ ಕಾವೇಶ್ವರದಲಿ ಅನ್ನಪೂರ್ಣೆ ಕೃಪೆಯಾಗಲಿ ಸದಾಪೂರ್ಣೆಯಾಗಿ ನೆಲೆಯಾಗಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.</p>



<p class="wp-block-paragraph"></p>
<p>The post <a href="https://buntsnow.com/archives/35907">ಪಾರ್ಕ್ಸ್ ಸಮೂಹ ಸಂಸ್ಥೆಯ &#8216;ಕಾವೇಶ್ವರ ಕೆಫೆ&#8217; ಉದ್ಘಾಟನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ರಾಶಿ ಆರ್ ಹೆಗ್ಡೆ ಭರತನಾಟ್ಯ ರಂಗಪ್ರವೇಶ</title>
		<link>https://buntsnow.com/archives/35895</link>
		
		<dc:creator><![CDATA[admin]]></dc:creator>
		<pubDate>Wed, 27 May 2026 04:03:18 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=35895</guid>

					<description><![CDATA[<p>ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಇಲ್ಲಿನ ಗುರುಗಳಾದ ಯು.ಕೆ ಪ್ರವೀಣ್ ಅವರ ಶಿಷ್ಯೆ ರಾಶಿ ಆರ್ ಹೆಗ್ಡೆ ಅವರ ಭರತನಾಟ್ಯ ರಂಗ ಪ್ರವೇಶವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನೆರವೇರಿತು. ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮುಖ್ಯಸ್ಥ ಶರವು ರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ ಅಧ್ಯಕ್ಷತೆ ವಹಿಸಿದ್ದರು. ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇದರ ಪ್ರಾಂಶುಪಾಲೆ ಪ್ರೊ. [...]</p>
<p>The post <a href="https://buntsnow.com/archives/35895">ರಾಶಿ ಆರ್ ಹೆಗ್ಡೆ ಭರತನಾಟ್ಯ ರಂಗಪ್ರವೇಶ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="1024" height="682" src="https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-1024x682.jpeg" alt="" class="wp-image-35900" srcset="https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-1024x682.jpeg 1024w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-300x200.jpeg 300w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-768x512.jpeg 768w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-1536x1024.jpeg 1536w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-150x100.jpeg 150w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-450x300.jpeg 450w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1-1200x800.jpeg 1200w, https://buntsnow.com/wp-content/uploads/2026/05/736ac0a6-43c8-4e52-af99-66b60de011f1-1.jpeg 2000w" sizes="(max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="521" src="https://buntsnow.com/wp-content/uploads/2026/05/377a3005-9012-4ed9-9f32-9e6907b73f32-1024x521.jpeg" alt="" class="wp-image-35893" srcset="https://buntsnow.com/wp-content/uploads/2026/05/377a3005-9012-4ed9-9f32-9e6907b73f32-1024x521.jpeg 1024w, https://buntsnow.com/wp-content/uploads/2026/05/377a3005-9012-4ed9-9f32-9e6907b73f32-300x153.jpeg 300w, https://buntsnow.com/wp-content/uploads/2026/05/377a3005-9012-4ed9-9f32-9e6907b73f32-768x391.jpeg 768w, https://buntsnow.com/wp-content/uploads/2026/05/377a3005-9012-4ed9-9f32-9e6907b73f32-1536x782.jpeg 1536w, https://buntsnow.com/wp-content/uploads/2026/05/377a3005-9012-4ed9-9f32-9e6907b73f32-150x76.jpeg 150w, https://buntsnow.com/wp-content/uploads/2026/05/377a3005-9012-4ed9-9f32-9e6907b73f32-450x229.jpeg 450w, https://buntsnow.com/wp-content/uploads/2026/05/377a3005-9012-4ed9-9f32-9e6907b73f32-1200x611.jpeg 1200w, https://buntsnow.com/wp-content/uploads/2026/05/377a3005-9012-4ed9-9f32-9e6907b73f32.jpeg 2000w" sizes="(max-width: 1024px) 100vw, 1024px" /></figure>



<p class="wp-block-paragraph">ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಇಲ್ಲಿನ ಗುರುಗಳಾದ ಯು.ಕೆ ಪ್ರವೀಣ್ ಅವರ ಶಿಷ್ಯೆ ರಾಶಿ ಆರ್ ಹೆಗ್ಡೆ ಅವರ ಭರತನಾಟ್ಯ ರಂಗ ಪ್ರವೇಶವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನೆರವೇರಿತು. ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮುಖ್ಯಸ್ಥ ಶರವು ರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ ಅಧ್ಯಕ್ಷತೆ ವಹಿಸಿದ್ದರು. ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇದರ ಪ್ರಾಂಶುಪಾಲೆ ಪ್ರೊ. ಡಾ. ಮಿತ್ರ ಹೆಗ್ಡೆ, ಉಡುಪಿ ಜೀವವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಗಣಪತಿ ಎನ್ ಭಟ್ ಉಪಸ್ಥಿತರಿದ್ದರು. ಭರತನಾಟ್ಯ ಮಾರ್ಗ ಪದ್ಧತಿಯ ನೃತ್ಯಗಳಾದ ಪುಷ್ಪಾಂಜಲಿ, ಜತಿಸ್ವರ, ವರ್ಣಂ, ದೇವಿ ಸ್ತುತಿ, ಪದಂ ಹಾಗೂ ತಿಲ್ಲಾನಗಳನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರದರ್ಶಿಸಿದರು. ಪರಾಶಕ್ತಿಯ ವಿವಿಧ ರೂಪಗಳಾದ ಚಂಡಿ, ಚಾಮುಂಡಿ, ಮಹಿಷಮರ್ದಿನಿ, ಭಗಲ, ಚಿನಮಸ್ಥ, ಕಾಳಿ, ಕಮಲ, ಧೂಮಾವತಿ, ಬೈರವಿ ಮುಂತಾದ ದೇವಿಯರ ಹುಟ್ಟು, ಶತ್ರುಗಳನ್ನು ನಾಶಪಡಿಸಿದ ರೀತಿ ಇದನ್ನೆಲ್ಲಾ ವಿವರಿಸಲಾಗಿತ್ತು.</p>



<figure class="wp-block-image size-large"><img loading="lazy" decoding="async" width="1024" height="863" src="https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-1024x863.jpeg" alt="" class="wp-image-35901" srcset="https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-1024x863.jpeg 1024w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-300x253.jpeg 300w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-768x648.jpeg 768w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-1536x1295.jpeg 1536w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-150x126.jpeg 150w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-450x379.jpeg 450w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2-1200x1012.jpeg 1200w, https://buntsnow.com/wp-content/uploads/2026/05/147ae34a-2f93-48d6-bf59-65a9006bd92d-2.jpeg 1735w" sizes="(max-width: 1024px) 100vw, 1024px" /></figure>



<p class="wp-block-paragraph">ನಟುವಾಂಗದಲ್ಲಿ ಗುರುಗಳಾದ ಯು.ಕೆ ಪ್ರವೀಣ್, ಹಾಡುಗಾರಿಕೆಯಲ್ಲಿ ಉಷಾ ಪ್ರವೀಣ್, ಆರಾಧನಾ, ಮೃದಂಗದಲ್ಲಿ ಜಿತೇಶ್ ಎ.ಜಿ ನೀಲೆಶ್ವರಂ, ಪಿಟೀಲಿನಲ್ಲಿ ಶ್ರೀಧರಾಚಾರ್ಯ ಪಾಡಿಗಾರು, ಕೊಳಲಿನಲ್ಲಿ ರಾಜಗೋಪಾಲ್ ಪಿ.ವಿ ಕಾಂಜ್ಞಗಾಡ್, ಖಂಜರದಲ್ಲಿ ವಿ.ಯು.ಪಿ ಶರಣ್ ಸಹಕರಿಸಿದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ರಾಶಿ ಅವರ ಪಾಲಕರಾದ ಮೊಗರುಗುತ್ತು ರಾಜೇಶ್ ಕುಮಾರ್ ಹೆಗ್ಡೆ ಹಾಗೂ ಮೂಡಂಬೈಲು ಶುಭ ಆರ್ ಹೆಗ್ಡೆ ಸ್ವಾಗತಿಸಿದರು. ನೃತ್ಯ ಗುರುಗಳಾದ ವಿದುಷಿ ನಿಶ್ವಿತ ಶರಣ್, ರಾಶಿಯ ಸಹೋದರ ಸಕ್ಷಮ್ ಆರ್ ಹೆಗ್ಡೆ ಉಪಸ್ಥಿತರಿದ್ದರು.</p>



<p class="wp-block-paragraph"></p>



<p class="wp-block-paragraph"></p>
<p>The post <a href="https://buntsnow.com/archives/35895">ರಾಶಿ ಆರ್ ಹೆಗ್ಡೆ ಭರತನಾಟ್ಯ ರಂಗಪ್ರವೇಶ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಮೇ 28 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಸರ್ವ ಸದಸ್ಯರ ಸಭೆ</title>
		<link>https://buntsnow.com/archives/35889</link>
		
		<dc:creator><![CDATA[admin]]></dc:creator>
		<pubDate>Tue, 26 May 2026 05:29:33 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=35889</guid>

					<description><![CDATA[<p>ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಇದರ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆ ದಿನಾಂಕ ಮೇ 28 ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಎಸ್.ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. 2026 -29 ರ ಸಾಲಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವೂ ನಡೆಯಲಿದ್ದು, 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ [...]</p>
<p>The post <a href="https://buntsnow.com/archives/35889">ಮೇ 28 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಸರ್ವ ಸದಸ್ಯರ ಸಭೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<p class="wp-block-paragraph">ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಇದರ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆ ದಿನಾಂಕ ಮೇ 28 ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಎಸ್.ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. 2026 -29 ರ ಸಾಲಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವೂ ನಡೆಯಲಿದ್ದು, 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಲಿದ್ದಾರೆ.</p>
<p>The post <a href="https://buntsnow.com/archives/35889">ಮೇ 28 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಸರ್ವ ಸದಸ್ಯರ ಸಭೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಜಾಲ್ ಪಾದೆ ಆವೊಡು</title>
		<link>https://buntsnow.com/archives/35885</link>
		
		<dc:creator><![CDATA[admin]]></dc:creator>
		<pubDate>Tue, 26 May 2026 03:13:55 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=35885</guid>

					<description><![CDATA[<p>ಎರು ಆರ್ಯೆ ಆಂಡ ಕೊಟ್ಟೆ ಗುದ್ದುನ ಕರ್ಚಿ ಇಜ್ಜಿ. ಈ ಎರ್ಲು ಪರು ಸರ್ಕೆಗ್ ಬತ್ತಿನದಗ ಕೊಟ್ಟೆಗ್ ಕಲ್ಲ್ ಪಾಡೊಡು‌, ಇಜ್ಜಿಡ ಐಕ್ಲೆನ ಅಬತಾರ ತಡೆವರೆ ತೀರುಜಿ. ಬೊಕ್ಕ ಐಕ್ಲೆನ ನರನಾಡಿ ಬಂದ್ ಆಪುಂಡುಗೆ, ಕಾರ್ ಮರಕಟ್ಟುಂಡುಗೆ. ಪರು ಸರ್ಕೆ ಪನ್ನಗ ಎಡ್ಮ ಪರು (ಕೂಲಿ) ಕದೆಪುನು (ಅಡಿ ದೀಪಿನಿ, ಬರ್ಪಿನಿ). ನಾಲ್ ವರ್ಸ ಪೂರಾ ಆವೊಡು. ಎರು, ಬೋರಿನ್ ನಾಲ್ ಕಾರ್ಗ್ ಬಲ್ಲ್ ಅರ್ಕಲ್ ಪಾಡ್ದ್ ಮುಟ್ಟ ಒಯಿಪುನಗ, ನಾಲ್ ಕಾರ್ ಒಟ್ಟು ಆನಗ ಕೈಕಂಜಿ [...]</p>
<p>The post <a href="https://buntsnow.com/archives/35885">ಜಾಲ್ ಪಾದೆ ಆವೊಡು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="683" height="1024" src="https://buntsnow.com/wp-content/uploads/2026/05/33a59fd1-696d-4a83-abb3-a531517b19fb-683x1024.jpeg" class="wp-image-35884" srcset="https://buntsnow.com/wp-content/uploads/2026/05/33a59fd1-696d-4a83-abb3-a531517b19fb-683x1024.jpeg 683w, https://buntsnow.com/wp-content/uploads/2026/05/33a59fd1-696d-4a83-abb3-a531517b19fb-200x300.jpeg 200w, https://buntsnow.com/wp-content/uploads/2026/05/33a59fd1-696d-4a83-abb3-a531517b19fb-768x1152.jpeg 768w, https://buntsnow.com/wp-content/uploads/2026/05/33a59fd1-696d-4a83-abb3-a531517b19fb-150x225.jpeg 150w, https://buntsnow.com/wp-content/uploads/2026/05/33a59fd1-696d-4a83-abb3-a531517b19fb-450x675.jpeg 450w, https://buntsnow.com/wp-content/uploads/2026/05/33a59fd1-696d-4a83-abb3-a531517b19fb.jpeg 1024w" sizes="(max-width: 683px) 100vw, 683px" /></figure>



<p class="wp-block-paragraph">ಎರು ಆರ್ಯೆ ಆಂಡ ಕೊಟ್ಟೆ ಗುದ್ದುನ ಕರ್ಚಿ ಇಜ್ಜಿ. ಈ ಎರ್ಲು ಪರು ಸರ್ಕೆಗ್ ಬತ್ತಿನದಗ ಕೊಟ್ಟೆಗ್ ಕಲ್ಲ್ ಪಾಡೊಡು‌, ಇಜ್ಜಿಡ ಐಕ್ಲೆನ ಅಬತಾರ ತಡೆವರೆ ತೀರುಜಿ. ಬೊಕ್ಕ ಐಕ್ಲೆನ ನರನಾಡಿ ಬಂದ್ ಆಪುಂಡುಗೆ, ಕಾರ್ ಮರಕಟ್ಟುಂಡುಗೆ. ಪರು ಸರ್ಕೆ ಪನ್ನಗ ಎಡ್ಮ ಪರು (ಕೂಲಿ) ಕದೆಪುನು (ಅಡಿ ದೀಪಿನಿ, ಬರ್ಪಿನಿ). ನಾಲ್ ವರ್ಸ ಪೂರಾ ಆವೊಡು. ಎರು, ಬೋರಿನ್ ನಾಲ್ ಕಾರ್ಗ್ ಬಲ್ಲ್ ಅರ್ಕಲ್ ಪಾಡ್ದ್ ಮುಟ್ಟ ಒಯಿಪುನಗ, ನಾಲ್ ಕಾರ್ ಒಟ್ಟು ಆನಗ ಕೈಕಂಜಿ ಮಗುರುವ. ಸರೀ ತಪ್ಪು ಅಡಿಕ್ ಪಾಡ್ದ್ ಇಪ್ಪೊಡು ಕಿದೆಟ್. ಬೊಕ್ಕ ಅಡಿಟ್ ಮನೆ ದೀದ್, ಮಿತ್ತ್‌ಡ್ದ ಕೊಟ್ಟೆ ದೀದ್, ಉದ್ದ ಉರುಂಟುದ ಕಲ್ಲ್‌ಡ್ ಞಂಕ್ಕ ಞಂಕ್ಕ ಗುದ್ದಿಯೆರ್ ಪೊಸಲ್ಲ್ ದೇವು ಪೂಜಾರ್ಲು, ಎರ್ಲೆನ ಕೊಟ್ಟೆನ್. ಬಾರಿ ಜಾಗ್ರತೆ ಬೋಡು, ಪೆಟ್ಟ್ ತತ್ತ್‌ದ್ ತಾವುದ ಕೋಡಿಗ್ ಬೂರ್ಂಡ, ಕೈಟೆ ಜೀವ ಬುಡುವ ಎರು ಬೋರಿಲು. ಐತ ಮುದೆಲ್ದ ನರಂಬುನು ಗುದ್ದುದ್ದು ನೀರ್ ಮಲ್ಪುನು‌. ಗುದ್ದುನಗ (ಬವುಸ) ಆತ್ ಬೇನೆ ಆಪುಜಿ. ಗುದ್ದರೆ ಪತ್ತೊಡ್ದುಂಬು, ಕನ್ನ್‌ಗ್ ಬೊಲ್ ನೆಯಿ ಪೂಜಿವೆರ್. ಗುದ್ದ್‌ದ್ ಆಯಿ ಬೊಕ್ಕ, ಎನ್ನೆಡ್ ಕಲತ್‌ದ್ ಪೊನ್ನೆದೆನ್ನೆದ ಕರಿ ಪೂಜುವೆರ್. ವಾರ ಇಡೀ ಕೆಂಪು ಕೆಂಪು ಬಾತ್ ಪೋಪುಂಡು‌. ಕೆಲವು ಎರ್ಲು ನಾಲ್ ನಾಲ್ ದಿನ ಜೆಪ್ಪುಜ. ಐಕ್ಲೆನ ಕಾರಡಿಗ್ ತೆಗ್‌ಲೆ ತೆಗ್‌ಲೆ ತಪ್ಪು ಕುತ್ತ್‌ದ್, ಕೋಲ್ ಜತ್ತ್‌ದ್ ಕಂತ್ ಪಾಡುವೆರ್. ಕೊಟ್ಟೆ ಗುದ್ದಿನ ಎರ್ಲೆಗ್ ಒರ್ಂಬ ಪತ್ತ್ ದಿನ ಸನ್ನಾಯ ಪಾಡುವೆರ್, ಪೆದಿಮೆದಿಯಲ್ಲೆಗ್ ಪಾಡಿಲೆಕ್ಕ. ಕುಡು, ಎನ್ನೆ, ಪುರ್ಗ, ತಾರಾಯಿದ ಗಂಜಿ ಇಂಚ ಮಾತ. ಬೊಕ್ಕ ಚಿರ್ಂಟುಂಡು ಪನ್ಕ. ಇತ್ತೆ ಗೋ (Veterinary) ಡಾಕ್ಟರ್‌ನಗುಲು ಇಕ್ಕುಲಿಡ್ ಕೊಟ್ಟೆ (testicles)ಗ್ ಪೋಪಿನ ನೆತ್ತ್‌ರ್‌ದ ನರಂಬುನು ಒತುದು ಞಂಪ್ಪೆ (ಪೊಡಿ) ಮಲ್ಪುವೆರ್. ಏರಾ ಜೋಕುಲು ಉಂದೆನ್ ತೂದು, ಒರಿ ಆನನ್ ಕೈಕಾರ್ ಕಟ್‌ದ್, ಕಲ್ಲ್‌ಡ್ ಗುದ್ದುದು ಕೆರ್ದೆ ಬುಡ್ತೆರ್‌ಗೆ. ತಾವುದ ಕೋಡಿ, ಅಂಜೋವೆನ ವೀಕ್ ಪಾಯಿಂಟ್. ಕ್ರಿಕೆಟ್‌ಡ್ ಸೆಂಟರ್ ಪ್ಯಾಡ್ ಪಾಡುವೆರ್, ಅಂಜೋವು.</p>



<p class="wp-block-paragraph">ಬುಡೆದಿ ಗೊಡ್ಡು ಆಂಡ, ಬಾಯಕೆ ಪಾಡೊಡು ಪಂದ್ ಇಜ್ಜಿ. ಸೀರೆ, ಬಂಗಾರ್, ಬಯಕೆದ ಅಡ್ಡೆ, ಊರುಗು ಉನಸ್, ಸನ್ನಾಯ ಪೂರ ಒರಿವುಂಡು. ಅಪ್ಪೆಲ್ಲೆದಕ್ಲೆಗ್‌ಲಾ ಎಚ್ಚಿ ಕಡಿಮೆ ನಲ್ಪ ದಿನ, ಪೆದ್ಮೆದಿ ತಾಂಕುನ, ಮರ್ದ್ ಅಡ್ಪಿನ, ಬೊಲ್ಲೆ ತಪ್ಪು ಪಾಡ್ದ್ ಬೆಂದ್ರ್ ಕೈಪುನ ಕರ್ಚಿ ಇಜ್ಜಿ. ಕುಡ ಬಾಲೆ ತುವ್ವರೆಗ್ ಬರ್ಪಿನಗಲೆಗ್ ಪೆದ್ಮೆದಿಗ್ ಅಡ್ತಿನ ಮರ್ದ್, ಬಾಜೆಲ್, ಬಚ್ಚಿರೆ ಕೊರೊಡು. ಕೆಲವೆರ್ ಬಾಲೆದ ಕೈಟ್ ದಾಲ ಕೊರ್ಪೆರ್, ಕೆಲವೆರ್ ಪಿರ ಪೋನಗ ತಾದಿಡೆ ಬಾಲೆಗ್ ದಾದಾಂಡಲ ಇಲ್ಲೆ ಪನೊಂದು ಪೋಪೆರ್. ಬಂಜಿ ಬಾಂಪ್ರಿ, ಪಿಂಕನ್ ಪೀಂಪ್ರಿ, ಕನ್ನ್ ಬಿದ್ದ್, ಕಾರ್ ಅಟ್ಟೆ, ಮೂಂಕು ಮೂಜಿ ಮುಲ, ಮಂಡೆ ಗೋಂಟು, ಅಂಗೆಲ್ ಬಾಯಿ, ದುಡಿ ಈತ್ ಉದ್ದ, ಬನ್ನ ಮಜ್ಜಿ ತುಂಡು, ಆನ್ ಬಾಲೆ ಆಂಡ ಗಂಟ್… ಒಂಜಾ ರಡ್ಡಾ ಪುರು ಬಾಲೆಲೆಡ್ ಊರ್ದಗಲೆ ತೋಜುನ ದೋಸೊಲು. ಅಂಚ ಬುಡೆದಿ ಗೊಡ್ಡು ಆಂಡ ಇ ಪೂರಾ ಕರ್ಚಿ, ಮಂಡೆ ಬೆಚ್ಚೊಲು ಇಜ್ಜಿ. ಅಂಚ ದುಂಬೊರಿ ಇಂಚಲಾ ಪಂತೆಗೆ &#8216;ಅಮ್ಮೆ ರಡ್ಡ್ ಕೊರಿಯೆಡಾ, ತಪ್ಪಾಡ್ದ್ ಪೋಯಿನ ರಡ್ಡ್ ತಿಕಿಯಡ, ಎನ್ನ ಬುದ್ದಿಡ್ ರಡ್ ಮಲ್ತೆಡ, ಮೂಜಿ ಜೋಡು ದಪ್ಪುನ ಅಯ. ಮುಪ್ಪ ಮುಡಿ ಗೇನಿದ ಬೆನ್ನಿ ಬೆನೊಲಿ&#8217;. ಇಂಚೆನೇ ಕನ್ನಡೊಡು ಪಂತೆರ್ ಉಂದೆನ್ &#8216;ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ&#8217;.</p>



<p class="wp-block-paragraph">ತನ್ನ ಬುಡೆದಿ ಗೊಡ್ಡು ಆವಡ್ ಪಂದ್ ತುಲುವೆರ್ ಬಯಕಯೆರ್. ಅವ್ವೆ ನೂಲ್ ಪಾಡಿನಗುಲು, ಅತ್ತ್‌ಡ ಉತ್ತರ ಭಾರತದಗಲು ಬುಡೆದಿ ಗೊಡ್ಡು ಪಂದ್ ಕುಡೊಂಜಿ ಮದಿಮೆ ಆವೆರ್. ಚಂದ್ರಶೇಖರ ಕಂಬಾರೆರೆನ &#8216;ಜೋಕುಮಾರಸ್ವಾಮಿ&#8217; ನಾಟಕ ತೆರಿದುಪ್ಪು ನಿಕಲೆಗ್. ಕೆಲವು ಸರ್ತಿ ಬುಡೆದಿ ಗೊಡ್ಡಾ, ಕಂಡೆನೆ ಆರ್ಯೆನಾ ಪನ್ಪಿನ ಸಂಶಯ ಬರಂದೆ ಇಪ್ಪಂದ್. ಜಾಲ್ ಪಾದೆ ಆಂಡ ಬಾರ್ ಮುಂಗೆ ಬತ್ತ್‌ದ್ ನೇಜಿ ಕೋಡ್ಯುವಾ? ಬಿತ್ತ್ (ಬಾರ್) ಜಡ್ಡ್ ಆಂಡ, ಮನ್ನ್‌ದ ಕಲೊಟುಲಾ ಕೊಡ್ಯಂದ್. ಕಡೆಕೊಂಜಿ ಕೊಂಗಿ, ಇತ್ತೆ ಗೊತ್ತಾಂಡ ಆರ್ಯೆರ್ ಏರ್ ಪಂದ್?</p>



<p class="wp-block-paragraph">ಬರವು : ಕೌಡೂರು ನಾರಾಯಣ ಶೆಟ್ಟಿ ಇಟೆಲಿ.</p>



<p class="wp-block-paragraph"></p>
<p>The post <a href="https://buntsnow.com/archives/35885">ಜಾಲ್ ಪಾದೆ ಆವೊಡು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
	</channel>
</rss>
