<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>www.buntsnow.com |  web-based media For Bunts Community</title>
	<atom:link href="https://buntsnow.com/feed" rel="self" type="application/rss+xml" />
	<link>https://buntsnow.com/</link>
	<description>Chief Editor Ranjith Kumar Shetty Mangalore  - Bunts Portal - Website</description>
	<lastBuildDate>Thu, 10 Sep 2026 12:50:06 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://buntsnow.com/wp-content/uploads/2025/09/BUNTS-NOW-1.png</url>
	<title>www.buntsnow.com |  web-based media For Bunts Community</title>
	<link>https://buntsnow.com/</link>
	<width>32</width>
	<height>32</height>
</image> 
	<item>
		<title>‘ಅಮರ್ಥ’ ಕನ್ನಡ ಚಿತ್ರದ ಮೂಲಕ ಡಾ&#124; ಕನ್ಯಾನ ಸದಾಶಿವ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ</title>
		<link>https://buntsnow.com/archives/38435</link>
		
		<dc:creator><![CDATA[Bunts Now]]></dc:creator>
		<pubDate>Thu, 10 Sep 2026 12:50:06 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38435</guid>

					<description><![CDATA[<p>ಪ್ರಸಿದ್ಧ ಉದ್ಯಮಿ, ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿರುವ ಸಮಾಜ ಸೇವಕ ಹಾಗೂ ಧಾರ್ಮಿಕ ಧುರೀಣ ಡಾ&#124; ಕನ್ಯಾನ ಸದಾಶಿವ ಶೆಟ್ಟಿ ಅವರು ಇದೀಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. &#8216;ಪಂಚರಂಗಿ&#8217; ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ತಮ್ಮ ಚೊಚ್ಚಲ &#8216;ಅಮರ್ಥ&#8217; ಚಿತ್ರದ ಮೂಲಕ ಅವರು ನಿರ್ಮಾಪಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಹಲವಾರು ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಿ, ಅದೆಷ್ಟೋ ಅಸಹಾಯಕರ ಕಣ್ಣೀರು ಒರೆಸಿ ಕಾಮಧೇನುವಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಅವರು, ಸಿನಿಮಾ ರಂಗದ ಕಷ್ಟ [...]</p>
<p>The post <a href="https://buntsnow.com/archives/38435">‘ಅಮರ್ಥ’ ಕನ್ನಡ ಚಿತ್ರದ ಮೂಲಕ ಡಾ| ಕನ್ಯಾನ ಸದಾಶಿವ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಪ್ರಸಿದ್ಧ ಉದ್ಯಮಿ, ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿರುವ ಸಮಾಜ ಸೇವಕ ಹಾಗೂ ಧಾರ್ಮಿಕ ಧುರೀಣ ಡಾ| ಕನ್ಯಾನ ಸದಾಶಿವ ಶೆಟ್ಟಿ ಅವರು ಇದೀಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. &#8216;ಪಂಚರಂಗಿ&#8217; ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ತಮ್ಮ ಚೊಚ್ಚಲ &#8216;ಅಮರ್ಥ&#8217; ಚಿತ್ರದ ಮೂಲಕ ಅವರು ನಿರ್ಮಾಪಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಹಲವಾರು ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಿ, ಅದೆಷ್ಟೋ ಅಸಹಾಯಕರ ಕಣ್ಣೀರು ಒರೆಸಿ ಕಾಮಧೇನುವಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಅವರು, ಸಿನಿಮಾ ರಂಗದ ಕಷ್ಟ ಸುಖಗಳನ್ನು ಅರಿತು, ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದಾರೆ.</p>
<p><img fetchpriority="high" decoding="async" class="alignnone size-full wp-image-38443" src="https://buntsnow.com/wp-content/uploads/2026/09/amarth_kannda_1.jpeg" alt="" width="977" height="772" srcset="https://buntsnow.com/wp-content/uploads/2026/09/amarth_kannda_1.jpeg 977w, https://buntsnow.com/wp-content/uploads/2026/09/amarth_kannda_1-300x237.jpeg 300w, https://buntsnow.com/wp-content/uploads/2026/09/amarth_kannda_1-768x607.jpeg 768w, https://buntsnow.com/wp-content/uploads/2026/09/amarth_kannda_1-150x119.jpeg 150w, https://buntsnow.com/wp-content/uploads/2026/09/amarth_kannda_1-450x356.jpeg 450w" sizes="(max-width: 977px) 100vw, 977px" /> <img decoding="async" class="alignnone size-full wp-image-38444" src="https://buntsnow.com/wp-content/uploads/2026/09/amarth_kannda_2.jpeg" alt="" width="1080" height="520" srcset="https://buntsnow.com/wp-content/uploads/2026/09/amarth_kannda_2.jpeg 1080w, https://buntsnow.com/wp-content/uploads/2026/09/amarth_kannda_2-300x144.jpeg 300w, https://buntsnow.com/wp-content/uploads/2026/09/amarth_kannda_2-1024x493.jpeg 1024w, https://buntsnow.com/wp-content/uploads/2026/09/amarth_kannda_2-768x370.jpeg 768w, https://buntsnow.com/wp-content/uploads/2026/09/amarth_kannda_2-150x72.jpeg 150w, https://buntsnow.com/wp-content/uploads/2026/09/amarth_kannda_2-450x217.jpeg 450w" sizes="(max-width: 1080px) 100vw, 1080px" /> <img decoding="async" class="alignnone size-full wp-image-38445" src="https://buntsnow.com/wp-content/uploads/2026/09/amarth_kannda_3.jpeg" alt="" width="2560" height="1315" srcset="https://buntsnow.com/wp-content/uploads/2026/09/amarth_kannda_3.jpeg 2560w, https://buntsnow.com/wp-content/uploads/2026/09/amarth_kannda_3-300x154.jpeg 300w, https://buntsnow.com/wp-content/uploads/2026/09/amarth_kannda_3-1024x526.jpeg 1024w, https://buntsnow.com/wp-content/uploads/2026/09/amarth_kannda_3-768x395.jpeg 768w, https://buntsnow.com/wp-content/uploads/2026/09/amarth_kannda_3-1536x789.jpeg 1536w, https://buntsnow.com/wp-content/uploads/2026/09/amarth_kannda_3-2048x1052.jpeg 2048w, https://buntsnow.com/wp-content/uploads/2026/09/amarth_kannda_3-150x77.jpeg 150w, https://buntsnow.com/wp-content/uploads/2026/09/amarth_kannda_3-450x231.jpeg 450w, https://buntsnow.com/wp-content/uploads/2026/09/amarth_kannda_3-1200x616.jpeg 1200w" sizes="(max-width: 2560px) 100vw, 2560px" /></p>
<p>ಇತ್ತೀಚೆಗಷ್ಟೇ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಜರುಗಿತು. ಖ್ಯಾತ ಉದ್ಯಮಿ ಹಾಗೂ ಕೊಡುಗೈ ದಾನಿ ಡಾ| ಬಂಜಾರ ಪ್ರಕಾಶ್ ಶೆಟ್ಟಿ ಮತ್ತು ಲವ್ ಮಾಕ್ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಎಲ್ಲಾ ಕಲಾವಿದರು ಹಾಗೂ ತಾಂತ್ರಿಕ ತಂಡದ ಪ್ರಮುಖರು ಉಪಸ್ಥಿತರಿದ್ದರು. ಗುರು ಹೆಗ್ಡೆ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಸದ್ಯ ಬಿಡುಗಡೆಯ ಅಂತಿಮ ಹಂತದಲ್ಲಿರುವ &#8216;ಅಮರ್ಥ&#8217; ಸಿನಿಮಾವು ಬರುವ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.</p>
<p>The post <a href="https://buntsnow.com/archives/38435">‘ಅಮರ್ಥ’ ಕನ್ನಡ ಚಿತ್ರದ ಮೂಲಕ ಡಾ| ಕನ್ಯಾನ ಸದಾಶಿವ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸುಜ್ಞಾನ ಪಿಯು ಕಾಲೇಜಿನಲ್ಲಿ &#8216;ಸಂಸ್ಕೃತೋತ್ಸವ&#8217;</title>
		<link>https://buntsnow.com/archives/38434</link>
		
		<dc:creator><![CDATA[Bunts Now]]></dc:creator>
		<pubDate>Thu, 10 Sep 2026 12:49:43 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38434</guid>

					<description><![CDATA[<p>ಸಂಸ್ಕೃತ ಎಲ್ಲಿರುತ್ತದೆಯೋ ಅಲ್ಲಿ ಸಂಸ್ಕೃತಿ ಇರುತ್ತದೆ. ಸಂಸ್ಕೃತ ಜೀವನದ ಮೌಲ್ಯಗಳನ್ನು ಕಲಿಸಿ, ನರನನ್ನು ನಾರಾಯಣನನ್ನಾಗಿ ಹಾಗೂ ಮಾನವನನ್ನು ಮಾಧವನನ್ನಾಗಿ ಮಾರ್ಪಡಿಸುವ ದಿವ್ಯ ಭಾಷೆಯಾಗಿದೆ. ನಮ್ಮ ಬದುಕಿನ ಪರಿಷ್ಕಾರಕ್ಕೆ ಸಂಸ್ಕೃತ ಅತ್ಯಗತ್ಯ ಎಂದು ಧರ್ಮಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಆದರ್ಶ ಗೋಖಲೆ ಹೇಳಿದರು. ಸುಜ್ಞಾನ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ &#8216;ಸಂಸ್ಕೃತೋತ್ಸವ&#8217; ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು, ಸಂಸ್ಕೃತ ನಮ್ಮನ್ನೆಲ್ಲಾ ಒಗ್ಗೂಡಿಸುವ ಭಾಷೆ. ಇಡೀ ಮನುಕುಲದ ಏಳಿಗೆಯನ್ನು ಬಯಸುವ ಉನ್ನತ [...]</p>
<p>The post <a href="https://buntsnow.com/archives/38434">ಸುಜ್ಞಾನ ಪಿಯು ಕಾಲೇಜಿನಲ್ಲಿ &#8216;ಸಂಸ್ಕೃತೋತ್ಸವ&#8217;</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಸಂಸ್ಕೃತ ಎಲ್ಲಿರುತ್ತದೆಯೋ ಅಲ್ಲಿ ಸಂಸ್ಕೃತಿ ಇರುತ್ತದೆ. ಸಂಸ್ಕೃತ ಜೀವನದ ಮೌಲ್ಯಗಳನ್ನು ಕಲಿಸಿ, ನರನನ್ನು ನಾರಾಯಣನನ್ನಾಗಿ ಹಾಗೂ ಮಾನವನನ್ನು ಮಾಧವನನ್ನಾಗಿ ಮಾರ್ಪಡಿಸುವ ದಿವ್ಯ ಭಾಷೆಯಾಗಿದೆ. ನಮ್ಮ ಬದುಕಿನ ಪರಿಷ್ಕಾರಕ್ಕೆ ಸಂಸ್ಕೃತ ಅತ್ಯಗತ್ಯ ಎಂದು ಧರ್ಮಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಆದರ್ಶ ಗೋಖಲೆ ಹೇಳಿದರು. ಸುಜ್ಞಾನ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ &#8216;ಸಂಸ್ಕೃತೋತ್ಸವ&#8217; ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು, ಸಂಸ್ಕೃತ ನಮ್ಮನ್ನೆಲ್ಲಾ ಒಗ್ಗೂಡಿಸುವ ಭಾಷೆ. ಇಡೀ ಮನುಕುಲದ ಏಳಿಗೆಯನ್ನು ಬಯಸುವ ಉನ್ನತ ಚಿಂತನೆಗಳು ಹಾಗೂ ಬದುಕಿಗೆ ಬೇಕಾದ ಆಚಾರ ವಿಚಾರಗಳು ಈ ಭಾಷೆಯಲ್ಲಿ ಅಡಗಿವೆ. ವಿದ್ಯಾರ್ಥಿಗಳು ಸಂಸ್ಕೃತವನ್ನು ಕೇವಲ ಅಂಕ ಗಳಿಸುವ ಸುಲಭ ಮಾಧ್ಯಮವೆಂದು ಪರಿಗಣಿಸದೇ, ತಮ್ಮ ಜೀವನದ ಸರ್ವಾಂಗೀಣ ಏಳಿಗೆಗಾಗಿ ಕಲಿಯಬೇಕು. ಈ ಕಾಲೇಜಿನಲ್ಲಿ ಸಂಸ್ಕೃತ ಭಾಷೆಗೆ ನೀಡಲಾಗುತ್ತಿರುವ ಮನ್ನಣೆ ಮತ್ತು ಪ್ರೋತ್ಸಾಹ ಕಂಡು ನಿಜಕ್ಕೂ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.</p>
<p><img loading="lazy" decoding="async" class="alignnone size-full wp-image-38440" src="https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1.jpeg" alt="" width="2560" height="1706" srcset="https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1.jpeg 2560w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-300x200.jpeg 300w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-1024x682.jpeg 1024w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-768x512.jpeg 768w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-1536x1024.jpeg 1536w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-2048x1365.jpeg 2048w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-150x100.jpeg 150w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-450x300.jpeg 450w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1-1200x800.jpeg 1200w" sizes="(max-width: 2560px) 100vw, 2560px" /> <img loading="lazy" decoding="async" class="alignnone size-full wp-image-38441" src="https://buntsnow.com/wp-content/uploads/2026/09/WhatsApp-Image-2026-09-10-at-3.28.36-PM.jpeg" alt="" width="2560" height="1706" srcset="https://buntsnow.com/wp-content/uploads/2026/09/WhatsApp-Image-2026-09-10-at-3.28.36-PM.jpeg 2560w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-300x200.jpeg 300w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1024x682.jpeg 1024w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-768x512.jpeg 768w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1536x1024.jpeg 1536w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-2048x1365.jpeg 2048w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-150x100.jpeg 150w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-450x300.jpeg 450w, https://buntsnow.com/wp-content/uploads/2026/09/WhatsApp-Image-2026-09-10-at-3.28.36-PM-1200x800.jpeg 1200w" sizes="(max-width: 2560px) 100vw, 2560px" /></p>
<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ, ಭಾಷೆ ಎನ್ನುವುದು ಮನುಷ್ಯನ ವ್ಯಕ್ತಿತ್ವವನ್ನು ಹಾಗೂ ಜ್ಞಾನವನ್ನು ಶ್ರೀಮಂತಗೊಳಿಸುತ್ತದೆ. ಭಾಷೆಯನ್ನು ಕಲಿಯುವ ಆಸಕ್ತಿ ಮತ್ತು ಮುಕ್ತ ಮನಸ್ಸು ನಮ್ಮಲ್ಲಿರಬೇಕು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆಯೋಜಿಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಶಿಕ್ಷಕಿ ಸುದಕ್ಷಿಣ ಉಡುಪ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>
<p>The post <a href="https://buntsnow.com/archives/38434">ಸುಜ್ಞಾನ ಪಿಯು ಕಾಲೇಜಿನಲ್ಲಿ &#8216;ಸಂಸ್ಕೃತೋತ್ಸವ&#8217;</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸಾಮಾಜಿಕ ಕಳಕಳಿಗೆ ಕನ್ನಡಿ ಹಿಡಿದ &#8216;ಮೀಡಿಯಾ ಮನಸುಗಳು&#8217;, ಪಾಳು ಬಿದ್ದಿದ್ದ ಬಸ್ ತಂಗುದಾಣಕ್ಕೆ ಸಿಕ್ತು ಕಾಯಕಲ್ಪ.</title>
		<link>https://buntsnow.com/archives/38436</link>
		
		<dc:creator><![CDATA[Bunts Now]]></dc:creator>
		<pubDate>Thu, 10 Sep 2026 12:49:25 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38436</guid>

					<description><![CDATA[<p>ಸ್ವಚ್ಛ ಭಾರತ ಹಾಗೂ ಸ್ವಸ್ಥ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಾಣಗೊಂಡ ಯೋಜನೆಯೊಂದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಮಂಗಳೂರು ಹೊರವಲಯದ ಕೂಳೂರು ಸೇತುವೆ ಸಮೀಪವಿರುವ ಕುದ್ರೆಮುಖ ಕಂಪೆನಿಯ ಮುಂಭಾಗದ ಬಸ್ ತಂಗುದಾಣವೇ ಈ ದುಸ್ಥಿತಿಗೆ ಸಾಕ್ಷಿಯಾಗಿತ್ತು. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಜನನಿಬಿಡ ಸ್ಥಳವು, ನಿರ್ವಹಣೆಯಿಲ್ಲದೆ ತ್ಯಾಜ್ಯದ ತೊಟ್ಟಿಯಾಗಿ ಪರಿಣಮಿಸಿತ್ತು. ದುರ್ನಾತ, ಅಸ್ತವ್ಯಸ್ತವಾಗಿ ಬೆಳೆದಿದ್ದ ಹುಲ್ಲು ಮತ್ತು ಗಿಡಗಂಟಿಗಳಿಂದಾಗಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವುದಕ್ಕೂ ಅಯೋಗ್ಯವಾದ [...]</p>
<p>The post <a href="https://buntsnow.com/archives/38436">ಸಾಮಾಜಿಕ ಕಳಕಳಿಗೆ ಕನ್ನಡಿ ಹಿಡಿದ &#8216;ಮೀಡಿಯಾ ಮನಸುಗಳು&#8217;, ಪಾಳು ಬಿದ್ದಿದ್ದ ಬಸ್ ತಂಗುದಾಣಕ್ಕೆ ಸಿಕ್ತು ಕಾಯಕಲ್ಪ.</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಸ್ವಚ್ಛ ಭಾರತ ಹಾಗೂ ಸ್ವಸ್ಥ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಾಣಗೊಂಡ ಯೋಜನೆಯೊಂದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಮಂಗಳೂರು ಹೊರವಲಯದ ಕೂಳೂರು ಸೇತುವೆ ಸಮೀಪವಿರುವ ಕುದ್ರೆಮುಖ ಕಂಪೆನಿಯ ಮುಂಭಾಗದ ಬಸ್ ತಂಗುದಾಣವೇ ಈ ದುಸ್ಥಿತಿಗೆ ಸಾಕ್ಷಿಯಾಗಿತ್ತು. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಜನನಿಬಿಡ ಸ್ಥಳವು, ನಿರ್ವಹಣೆಯಿಲ್ಲದೆ ತ್ಯಾಜ್ಯದ ತೊಟ್ಟಿಯಾಗಿ ಪರಿಣಮಿಸಿತ್ತು. ದುರ್ನಾತ, ಅಸ್ತವ್ಯಸ್ತವಾಗಿ ಬೆಳೆದಿದ್ದ ಹುಲ್ಲು ಮತ್ತು ಗಿಡಗಂಟಿಗಳಿಂದಾಗಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವುದಕ್ಕೂ ಅಯೋಗ್ಯವಾದ ವಾತಾವರಣ ಇಲ್ಲಿತ್ತು. ಸಾರ್ವಜನಿಕರು ಅನುಭವಿಸುತ್ತಿದ್ದ ಈ ನರಕಯಾತನೆಯನ್ನು ಕಂಡು ಸುಮ್ಮನಿರದ ಸ್ಥಳೀಯರೊಬ್ಬರು, ಈ ಸಮಸ್ಯೆಯ ಕುರಿತು &#8216;ಮೀಡಿಯಾ ಮನಸುಗಳು&#8217; ತಂಡದ ಗಮನಕ್ಕೆ ತಂದರು. ಸಾರ್ವಜನಿಕರ ದೂರಿಗೆ ತಕ್ಷಣವೇ ಸ್ಪಂದಿಸಿದ ತಂಡದ ಸದಸ್ಯರು ಕೇವಲ ಸುದ್ದಿ ವರದಿ ಮಾಡುವುದಕ್ಕೆ ತಮ್ಮ ಸೇವೆಯನ್ನು ಸೀಮಿತಗೊಳಿಸದೆ ತಾವೇ ಖುದ್ದಾಗಿ ಕಣಕ್ಕಿಳಿಯಲು ನಿರ್ಧರಿಸಿದರು. ದೈನಂದಿನ ಮಾಧ್ಯಮ ರಂಗದ ವಿಪರೀತ ಕೆಲಸದ ಒತ್ತಡ ಮತ್ತು ಜಂಜಾಟಗಳ ನಡುವೆಯೂ ಸಮಯವನ್ನು ಕಾಯ್ದಿರಿಸಿಕೊಂಡ ತಂಡದ ಸದಸ್ಯರು, ಬಸ್ ತಂಗುದಾಣಕ್ಕೆ ಕಾಯಕಲ್ಪ ನೀಡಲು ಶ್ರಮದಾನಕ್ಕೆ ಮುಂದಾದರು.</p>
<p><img loading="lazy" decoding="async" class="alignnone size-full wp-image-38447" src="https://buntsnow.com/wp-content/uploads/2026/09/samajika_kalakalige_1.jpeg" alt="" width="2233" height="1174" srcset="https://buntsnow.com/wp-content/uploads/2026/09/samajika_kalakalige_1.jpeg 2233w, https://buntsnow.com/wp-content/uploads/2026/09/samajika_kalakalige_1-300x158.jpeg 300w, https://buntsnow.com/wp-content/uploads/2026/09/samajika_kalakalige_1-1024x538.jpeg 1024w, https://buntsnow.com/wp-content/uploads/2026/09/samajika_kalakalige_1-768x404.jpeg 768w, https://buntsnow.com/wp-content/uploads/2026/09/samajika_kalakalige_1-1536x808.jpeg 1536w, https://buntsnow.com/wp-content/uploads/2026/09/samajika_kalakalige_1-2048x1077.jpeg 2048w, https://buntsnow.com/wp-content/uploads/2026/09/samajika_kalakalige_1-150x79.jpeg 150w, https://buntsnow.com/wp-content/uploads/2026/09/samajika_kalakalige_1-450x237.jpeg 450w, https://buntsnow.com/wp-content/uploads/2026/09/samajika_kalakalige_1-1200x631.jpeg 1200w" sizes="(max-width: 2233px) 100vw, 2233px" /> <img loading="lazy" decoding="async" class="alignnone size-full wp-image-38448" src="https://buntsnow.com/wp-content/uploads/2026/09/samajika_kalakalige_3-scaled.jpeg" alt="" width="2560" height="1920" srcset="https://buntsnow.com/wp-content/uploads/2026/09/samajika_kalakalige_3-scaled.jpeg 2560w, https://buntsnow.com/wp-content/uploads/2026/09/samajika_kalakalige_3-300x225.jpeg 300w, https://buntsnow.com/wp-content/uploads/2026/09/samajika_kalakalige_3-1024x768.jpeg 1024w, https://buntsnow.com/wp-content/uploads/2026/09/samajika_kalakalige_3-768x576.jpeg 768w, https://buntsnow.com/wp-content/uploads/2026/09/samajika_kalakalige_3-1536x1152.jpeg 1536w, https://buntsnow.com/wp-content/uploads/2026/09/samajika_kalakalige_3-2048x1536.jpeg 2048w, https://buntsnow.com/wp-content/uploads/2026/09/samajika_kalakalige_3-150x113.jpeg 150w, https://buntsnow.com/wp-content/uploads/2026/09/samajika_kalakalige_3-450x338.jpeg 450w, https://buntsnow.com/wp-content/uploads/2026/09/samajika_kalakalige_3-1200x900.jpeg 1200w" sizes="(max-width: 2560px) 100vw, 2560px" /> <img loading="lazy" decoding="async" class="alignnone size-full wp-image-38449" src="https://buntsnow.com/wp-content/uploads/2026/09/samajika_kalakalige-2-scaled.jpeg" alt="" width="2560" height="1560" srcset="https://buntsnow.com/wp-content/uploads/2026/09/samajika_kalakalige-2-scaled.jpeg 2560w, https://buntsnow.com/wp-content/uploads/2026/09/samajika_kalakalige-2-300x183.jpeg 300w, https://buntsnow.com/wp-content/uploads/2026/09/samajika_kalakalige-2-1024x624.jpeg 1024w, https://buntsnow.com/wp-content/uploads/2026/09/samajika_kalakalige-2-768x468.jpeg 768w, https://buntsnow.com/wp-content/uploads/2026/09/samajika_kalakalige-2-1536x936.jpeg 1536w, https://buntsnow.com/wp-content/uploads/2026/09/samajika_kalakalige-2-2048x1248.jpeg 2048w, https://buntsnow.com/wp-content/uploads/2026/09/samajika_kalakalige-2-150x91.jpeg 150w, https://buntsnow.com/wp-content/uploads/2026/09/samajika_kalakalige-2-450x274.jpeg 450w, https://buntsnow.com/wp-content/uploads/2026/09/samajika_kalakalige-2-1200x731.jpeg 1200w" sizes="(max-width: 2560px) 100vw, 2560px" /></p>
<p>ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಮೀಡಿಯಾ ಮನಸುಗಳು ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಚಿತ್ರಾ ಪ್ರೀತಂ ಹಾಗೂ ಗಿರೀಶ್ ಮಣೇಲ್ ಅವರು ಶ್ರಮಿಸಿದರು. ಕಸ ತೆಗೆದು, ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಬಸ್ ನಿಲ್ದಾಣವನ್ನು ತೊಳೆದು ಹೊಸ ಕಳೆಯನ್ನು ತಂದಿತ್ತರು. ಈ ಜನಪರ ಕಾಳಜಿಯ ಕಾರ್ಯಕ್ಕೆ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಸುಮಿತ್ರಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಮೇಲ್ವಿಚಾರಕರಾದ ರೋಷನ್ ಅಮಿನ್ ಅವರು ತಂಡದ ಮನವಿಗೆ ತಕ್ಷಣ ಸ್ಪಂದಿಸಿ, ಸಂಗ್ರಹಗೊಂಡ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಕಲ್ಪಿಸಿಕೊಟ್ಟು ಸಹಕರಿಸಿದರು.</p>
<p>ಸುದ್ದಿ ಬಿತ್ತರಿಸುವ ಕೈಗಳು ಸ್ವಚ್ಛ ಮತ್ತು ಸ್ವಾಸ್ಥ್ಯ ಸಮಾಜಕ್ಕಾಗಿ ಪಣತೊಟ್ಟಾಗ ಅಲ್ಲಿ ಅಸಲಿ ಸಾಮಾಜಿಕ ಜಾಗೃತಿ ಮೂಡುತ್ತದೆ ಎಂಬುದಕ್ಕೆ ಈ ಘಟನೆ ಜ್ವಲಂತ ನಿದರ್ಶನ. ಕೇವಲ ವ್ಯವಸ್ಥೆಯನ್ನು ಟೀಕಿಸುತ್ತಾ ಕೂರದೆ, ಬದಲಾವಣೆಗೆ ತಾವೇ ಮುನ್ನುಡಿ ಬರೆದ &#8216;ಮೀಡಿಯಾ ಮನಸುಗಳು&#8217; ಬಳಗದ ಈ ಕಾರ್ಯವು ಇಂದು ಪ್ರತಿಯೊಬ್ಬ ಯುವ ಜನತೆಗೆ ಹಾಗೂ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬಸ್ ತಂಗುದಾಣವೀಗ ಮತ್ತೆ ಪ್ರಯಾಣಿಕರ ಬಳಕೆಗೆ ಯೋಗ್ಯವಾಗಿದ್ದು, ಸ್ಥಳೀಯರು ಮಾಧ್ಯಮ ತಂಡದ ಈ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.</p>
<p>The post <a href="https://buntsnow.com/archives/38436">ಸಾಮಾಜಿಕ ಕಳಕಳಿಗೆ ಕನ್ನಡಿ ಹಿಡಿದ &#8216;ಮೀಡಿಯಾ ಮನಸುಗಳು&#8217;, ಪಾಳು ಬಿದ್ದಿದ್ದ ಬಸ್ ತಂಗುದಾಣಕ್ಕೆ ಸಿಕ್ತು ಕಾಯಕಲ್ಪ.</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಪ್ರಾಂಶುಪಾಲ ಡಾ&#124; ಕೆ. ಉಮೇಶ್ ಶೆಟ್ಟಿಯವರಿಗೆ &#8216;ವಿದ್ಯಾ ದೀವಿಗೆ&#8217; ಪ್ರಶಸ್ತಿ</title>
		<link>https://buntsnow.com/archives/38450</link>
		
		<dc:creator><![CDATA[Bunts Now]]></dc:creator>
		<pubDate>Thu, 10 Sep 2026 12:49:03 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38450</guid>

					<description><![CDATA[<p>ಜೆಸಿಐ ಕುಂದಾಪುರ ಸಿಟಿ ಆಯೋಜಿಸಿದ ಜೆಸಿಐ ಸಪ್ತಾಹದ ಉದ್ಘಾಟನೆಯಲ್ಲಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ&#124; ಕೆ. ಉಮೇಶ್ ಶೆಟ್ಟಿಯವರ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ, ವಿದ್ಯಾದೀವಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕುಂದಾಪುರದ ಪೊಲೀಸ್ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ, ಲಯನ್ ಜಿಲ್ಲೆ 317 ಸಿಯ ಪ್ರಥಮ ಉಪ ಗವರ್ನರ್ ಹರಿಪ್ರಸಾದ್ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭ ಉಪ ಪ್ರಾಂಶುಪಾಲ ಡಾ&#124; ಚೇತನ್‌ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕ [...]</p>
<p>The post <a href="https://buntsnow.com/archives/38450">ಪ್ರಾಂಶುಪಾಲ ಡಾ| ಕೆ. ಉಮೇಶ್ ಶೆಟ್ಟಿಯವರಿಗೆ &#8216;ವಿದ್ಯಾ ದೀವಿಗೆ&#8217; ಪ್ರಶಸ್ತಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಜೆಸಿಐ ಕುಂದಾಪುರ ಸಿಟಿ ಆಯೋಜಿಸಿದ ಜೆಸಿಐ ಸಪ್ತಾಹದ ಉದ್ಘಾಟನೆಯಲ್ಲಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ. ಉಮೇಶ್ ಶೆಟ್ಟಿಯವರ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ, ವಿದ್ಯಾದೀವಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕುಂದಾಪುರದ ಪೊಲೀಸ್ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ, ಲಯನ್ ಜಿಲ್ಲೆ 317 ಸಿಯ ಪ್ರಥಮ ಉಪ ಗವರ್ನರ್ ಹರಿಪ್ರಸಾದ್ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭ ಉಪ ಪ್ರಾಂಶುಪಾಲ ಡಾ| ಚೇತನ್‌ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕ ರಕ್ಷಿತ್‌ ರಾವ್‌ ಗುಜ್ಜಾಡಿ, ಜೆಸಿಐ ಸಪ್ತಾಹದ ಸಂಚಾಲಕ ರಾಘವೇಂದ್ರ ಕುಲಾಲ್‌, ನಿಕಟಪೂರ್ವ ಅಧ್ಯಕ್ಷ ಯುಸೂಫ್ ಸಲೀಮ್‌, ಜೆಸಿಐ ಪದಾಧಿಕಾರಿಗಳಾದ ನವೀನ್ ಸಂಭ್ರಮ್, ದೀಪಾ ಉಪಸ್ಥಿತರಿದ್ದರು. ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಕಿರಣ್ ದೇವಾಡಿಗ ಸ್ವಾಗತಿಸಿ, ಹುಸೇನ್‌ ಹೈಕಾಡಿ ಪ್ರಸ್ತಾವಿಸಿದರು. ಕಾಲೇಜಿನ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಜಿ. ರಾವ್ ವಂದಿಸಿ, ನಿರೂಪಿಸಿದರು.</p>
<p>The post <a href="https://buntsnow.com/archives/38450">ಪ್ರಾಂಶುಪಾಲ ಡಾ| ಕೆ. ಉಮೇಶ್ ಶೆಟ್ಟಿಯವರಿಗೆ &#8216;ವಿದ್ಯಾ ದೀವಿಗೆ&#8217; ಪ್ರಶಸ್ತಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ : ಎನ್.ಜಿ ಶ್ರೀನಿವಾಸ್ ರೈ ಪಟ್ಟೆ ಅವರಿಗೆ ಸನ್ಮಾನ </title>
		<link>https://buntsnow.com/archives/38433</link>
		
		<dc:creator><![CDATA[Bunts Now]]></dc:creator>
		<pubDate>Thu, 10 Sep 2026 12:48:40 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38433</guid>

					<description><![CDATA[<p>ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಿವೃತ್ತ ಶಿಕ್ಷಕರಾದ ಎನ್.ಜಿ ಶ್ರೀನಿವಾಸ್ ರೈ ಪಟ್ಟೆಯವರಿಗೆ ಗೌರವಾರ್ಪಣೆಯು ಸೆಪ್ಟೆಂಬರ್ 5 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷರಾದ ಲಯನ್ ಕುಂಬ್ರ ದಯಾಕರ ಆಳ್ವ ವಹಿಸಿ, ಸನ್ಮಾನಿಸಿ ಶುಭ ಹಾರೈಸಿದರು. ಎನ್‌.ಜಿ ಶ್ರೀನಿವಾಸ ರೈಯವರನ್ನು ಗೌರವಿಸುವ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ಲಯನ್ ಪ್ರದೀಪ್ ಕುಮಾರ್ ರೈ ಪಾಂಬಾರು, ಯತೀಶ್ ಭಂಡಾರಿ, ಸದಸ್ಯರುಗಳಾದ ಲಯನ್ ಚಿದಾನಂದ ರೈ [...]</p>
<p>The post <a href="https://buntsnow.com/archives/38433">ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ : ಎನ್.ಜಿ ಶ್ರೀನಿವಾಸ್ ರೈ ಪಟ್ಟೆ ಅವರಿಗೆ ಸನ್ಮಾನ </a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಿವೃತ್ತ ಶಿಕ್ಷಕರಾದ ಎನ್.ಜಿ ಶ್ರೀನಿವಾಸ್ ರೈ ಪಟ್ಟೆಯವರಿಗೆ ಗೌರವಾರ್ಪಣೆಯು ಸೆಪ್ಟೆಂಬರ್ 5 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷರಾದ ಲಯನ್ ಕುಂಬ್ರ ದಯಾಕರ ಆಳ್ವ ವಹಿಸಿ, ಸನ್ಮಾನಿಸಿ ಶುಭ ಹಾರೈಸಿದರು. ಎನ್‌.ಜಿ ಶ್ರೀನಿವಾಸ ರೈಯವರನ್ನು ಗೌರವಿಸುವ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ಲಯನ್ ಪ್ರದೀಪ್ ಕುಮಾರ್ ರೈ ಪಾಂಬಾರು, ಯತೀಶ್ ಭಂಡಾರಿ, ಸದಸ್ಯರುಗಳಾದ ಲಯನ್ ಚಿದಾನಂದ ರೈ ನೆಲ್ಯಾಜೆ, ಲಯನ್ ರಮಾನಂದ ರೈ, ಲಯನ್ ಜಯಪ್ರಕಾಶ್ ಅಲೆಕ್ಕಾಡಿ, ಲಯನ್ ಉಮೇಶ್ ರೈ ಮರುವಂಜ ಉಪಸ್ಥಿತರಿದ್ದರು. ಕ್ಲಬ್ ನ ಕೋಶಾಧಿಕಾರಿ ಲಯನ್ ಈಶ್ವರ ವಾರಣಾಶಿ ಸ್ವಾಗತಿಸಿದರು. ಸುಜಿತ್ ರೈ ಪಟ್ಟೆ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ರೈಯವರ ಪತ್ನಿ ಚಿತ್ರಲತಾ ಎಸ್. ರೈ, ಸಹೋದರ ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್.ಜಿ ಲೋಕನಾಥ್ ರೈ ಉಪಸ್ಥಿತರಿದ್ದರು.</p>
<p>The post <a href="https://buntsnow.com/archives/38433">ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ : ಎನ್.ಜಿ ಶ್ರೀನಿವಾಸ್ ರೈ ಪಟ್ಟೆ ಅವರಿಗೆ ಸನ್ಮಾನ </a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳ ಬೆಂಬಲಕ್ಕೆ ಕೋಡ್‌ ಕ್ರಾಫ್ಟ್‌ನಿಂದ ರೂ. 6.28 ಲಕ್ಷ ಸಿ.ಎಸ್.ಆರ್ ನೆರವು</title>
		<link>https://buntsnow.com/archives/38421</link>
		
		<dc:creator><![CDATA[Bunts Now]]></dc:creator>
		<pubDate>Wed, 09 Sep 2026 12:59:10 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38421</guid>

					<description><![CDATA[<p>ಶಿಕ್ಷಣದ ಜತೆಗೆ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಆಳ್ವಾಸ್‌ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೋಡ್‌ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮದಡಿ ರೂ. 6.28 ಲಕ್ಷ ಆರ್ಥಿಕ ನೆರವು ನೀಡಿದೆ. ಆಳ್ವಾಸ್‌ನ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 628 ವಿದ್ಯಾರ್ಥಿಗಳಿಗೆ ತಲಾ ರೂ. 1,000ರಂತೆ ಒಟ್ಟು ರೂ. 6,28,000 ನೆರವನ್ನು ನೀಡಲಾಗಿದ್ದು, ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ [...]</p>
<p>The post <a href="https://buntsnow.com/archives/38421">ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳ ಬೆಂಬಲಕ್ಕೆ ಕೋಡ್‌ ಕ್ರಾಫ್ಟ್‌ನಿಂದ ರೂ. 6.28 ಲಕ್ಷ ಸಿ.ಎಸ್.ಆರ್ ನೆರವು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಶಿಕ್ಷಣದ ಜತೆಗೆ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಆಳ್ವಾಸ್‌ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೋಡ್‌ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮದಡಿ ರೂ. 6.28 ಲಕ್ಷ ಆರ್ಥಿಕ ನೆರವು ನೀಡಿದೆ. ಆಳ್ವಾಸ್‌ನ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 628 ವಿದ್ಯಾರ್ಥಿಗಳಿಗೆ ತಲಾ ರೂ. 1,000ರಂತೆ ಒಟ್ಟು ರೂ. 6,28,000 ನೆರವನ್ನು ನೀಡಲಾಗಿದ್ದು, ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ನೆರವಿನ ಮೊತ್ತವನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಆಳ್ವಾಸ್ ಕಾಲೇಜಿನ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ಕೋಡ್‌ ಕ್ರಾಫ್ಟ್ ಟೆಕ್ನಾಲಜೀಸ್‌ನ ಸಿ.ಎಸ್.ಆರ್ ಉಪಕ್ರಮವನ್ನು ಶ್ಲಾಘಿಸಿ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಂಸ್ಥೆಯು ನೀಡುತ್ತಿರುವ ಬೆಂಬಲವು ಶ್ಲಾಘನೀಯ. ಸಮಾಜದಲ್ಲಿ ಸಂಪತ್ತು ಹೊಂದಿರುವವರು ತಮ್ಮ ಸಂಪತ್ತಿನ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದಿನ ಕಾಲದಲ್ಲಿ ಗುರು ಶಿಷ್ಯ ಪರಂಪರೆಯ ಮೂಲಕ ವಿವಿಧ ಕಲೆಗಳನ್ನು ಕಲಿತು ಕಲಾವಿದರಾಗುವ ಅವಕಾಶವಿತ್ತು. ಆದರೆ ಆ ಪರಂಪರೆ ಇಂದು ನಿಧಾನವಾಗಿ ಮರೆಯಾಗುತ್ತಿದೆ. ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.</p>
<p><img loading="lazy" decoding="async" class="alignnone size-full wp-image-38423" src="https://buntsnow.com/wp-content/uploads/2026/09/alvas_sanskrithika-1.jpeg" alt="" width="1600" height="1127" srcset="https://buntsnow.com/wp-content/uploads/2026/09/alvas_sanskrithika-1.jpeg 1600w, https://buntsnow.com/wp-content/uploads/2026/09/alvas_sanskrithika-1-300x211.jpeg 300w, https://buntsnow.com/wp-content/uploads/2026/09/alvas_sanskrithika-1-1024x721.jpeg 1024w, https://buntsnow.com/wp-content/uploads/2026/09/alvas_sanskrithika-1-768x541.jpeg 768w, https://buntsnow.com/wp-content/uploads/2026/09/alvas_sanskrithika-1-1536x1082.jpeg 1536w, https://buntsnow.com/wp-content/uploads/2026/09/alvas_sanskrithika-1-150x106.jpeg 150w, https://buntsnow.com/wp-content/uploads/2026/09/alvas_sanskrithika-1-450x317.jpeg 450w, https://buntsnow.com/wp-content/uploads/2026/09/alvas_sanskrithika-1-1200x845.jpeg 1200w" sizes="(max-width: 1600px) 100vw, 1600px" /> ಕಲೆ ಜಾತಿ, ಧರ್ಮ, ಲಿಂಗ ಅಥವಾ ಯಾವುದೇ ಭೇದವನ್ನು ಮೀರಿ ಮಾನವೀಯತೆಯನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ. ಜೀವನದೊಂದಿಗೆ ಜನಪದ ಕಲೆಗಳು ಬೆರೆತಾಗ ಜನರಲ್ಲಿ ಸೃಜನಶೀಲತೆ ಹೆಚ್ಚುತ್ತದೆ. ಇದೇ ರೀತಿಯಲ್ಲಿ ಕಲೆಗಳನ್ನು ಮುಂದುವರಿಸಿಕೊಂಡು ಹೋದರೆ ಭಾರತದಲ್ಲಿ ಜನಪದ ಹಾಗೂ ಸಾಂಪ್ರದಾಯಿಕ ಕಲೆಗಳಿಗೆ ಉಜ್ವಲ ಭವಿಷ್ಯವಿದೆ ಎಂದರು. ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಅಭಿವ್ಯಕ್ತಿಯನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು, ದೇಶದ ವಿವಿಧ ಸಂಸ್ಕೃತಿಗಳನ್ನು ಅರಿಯುವ ಮತ್ತು ಪರಿಚಯಿಸುವ ಅವಕಾಶವನ್ನೂ ಒದಗಿಸುತ್ತವೆ. ವಿದ್ಯಾರ್ಥಿಗಳು ಇಂದು ಅನುಭವಿಸುತ್ತಿರುವ ಪರಿಶ್ರಮ ಮತ್ತು ಶಿಸ್ತು ಅವರ ಮುಂದಿನ ಸಾಧನೆಗೆ ಬುನಾದಿಯಾಗಲಿದೆ. ಪ್ರತಿಯೊಬ್ಬರೂ ತಮ್ಮ ಗುರಿಯತ್ತ ನಿರಂತರವಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.</p>
<p><img loading="lazy" decoding="async" class="alignnone size-full wp-image-38424" src="https://buntsnow.com/wp-content/uploads/2026/09/alvas_sanskrithika-2.jpeg" alt="" width="1353" height="823" srcset="https://buntsnow.com/wp-content/uploads/2026/09/alvas_sanskrithika-2.jpeg 1353w, https://buntsnow.com/wp-content/uploads/2026/09/alvas_sanskrithika-2-300x182.jpeg 300w, https://buntsnow.com/wp-content/uploads/2026/09/alvas_sanskrithika-2-1024x623.jpeg 1024w, https://buntsnow.com/wp-content/uploads/2026/09/alvas_sanskrithika-2-768x467.jpeg 768w, https://buntsnow.com/wp-content/uploads/2026/09/alvas_sanskrithika-2-150x91.jpeg 150w, https://buntsnow.com/wp-content/uploads/2026/09/alvas_sanskrithika-2-450x274.jpeg 450w, https://buntsnow.com/wp-content/uploads/2026/09/alvas_sanskrithika-2-1200x730.jpeg 1200w" sizes="(max-width: 1353px) 100vw, 1353px" /></p>
<p>ಕಾರ್ಯಕ್ರಮದಲ್ಲಿ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲಿಯೂ ಯಶಸ್ಸಿನ ಅವಕಾಶಗಳು ಒಮ್ಮೆ ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ತಮ್ಮ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕೆಲವೊಮ್ಮೆ ಕಠಿಣ ಪರಿಶ್ರಮದ ನಡುವೆಯೂ ನಿರೀಕ್ಷಿತ ಫಲಿತಾಂಶ ದೊರೆಯದಿರಬಹುದು. ಅಂತಹ ಸಂದರ್ಭಗಳಲ್ಲಿ ನಿರಾಶರಾಗದೆ ಮತ್ತಷ್ಟು ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸಿ.ಎಸ್.ಆರ್ ನೆರವು ನೀಡುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.</p>
<p><img loading="lazy" decoding="async" class="alignnone size-full wp-image-38425" src="https://buntsnow.com/wp-content/uploads/2026/09/alvas_sanskrithika-3.jpeg" alt="" width="1470" height="825" srcset="https://buntsnow.com/wp-content/uploads/2026/09/alvas_sanskrithika-3.jpeg 1470w, https://buntsnow.com/wp-content/uploads/2026/09/alvas_sanskrithika-3-300x168.jpeg 300w, https://buntsnow.com/wp-content/uploads/2026/09/alvas_sanskrithika-3-1024x575.jpeg 1024w, https://buntsnow.com/wp-content/uploads/2026/09/alvas_sanskrithika-3-768x431.jpeg 768w, https://buntsnow.com/wp-content/uploads/2026/09/alvas_sanskrithika-3-150x84.jpeg 150w, https://buntsnow.com/wp-content/uploads/2026/09/alvas_sanskrithika-3-450x253.jpeg 450w, https://buntsnow.com/wp-content/uploads/2026/09/alvas_sanskrithika-3-1200x673.jpeg 1200w" sizes="(max-width: 1470px) 100vw, 1470px" /></p>
<p>ಕಾರ್ಯಕ್ರಮದಲ್ಲಿ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದೀಕ್ಷಿತ್ ರೈಯವರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯಾಚರಣೆಗಳ ಮುಖ್ಯಸ್ಥ ಜೋಬಿನ್ ಜೋಸೆಫ್, ಆಳ್ವಾಸ್ ನ ಉದ್ಯಮಶೀಲತೆ ಅಭಿವೃದ್ಧಿ ಘಟಕದ ಮುಖ್ಯಸ್ಥ ವೇಣು ರಾವ್ ದೇವಾ ಉಪಸ್ಥಿತರಿದ್ದರು. ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.</p>
<p>The post <a href="https://buntsnow.com/archives/38421">ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳ ಬೆಂಬಲಕ್ಕೆ ಕೋಡ್‌ ಕ್ರಾಫ್ಟ್‌ನಿಂದ ರೂ. 6.28 ಲಕ್ಷ ಸಿ.ಎಸ್.ಆರ್ ನೆರವು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸಚಿವ ಸಂಪುಟ ಮಂಗಳೂರಿಗೆ ಬರುತ್ತಿದೆ… ಕರಾವಳಿಗೆ ಏನು ಕೊಡಲಿದೆ?</title>
		<link>https://buntsnow.com/archives/38420</link>
		
		<dc:creator><![CDATA[Bunts Now]]></dc:creator>
		<pubDate>Wed, 09 Sep 2026 12:58:55 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=38420</guid>

					<description><![CDATA[<p>ಮಂಗಳೂರು ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಯಾವುದೇ ಚುನಾವಣೆ ಇಲ್ಲ. ಯಾವುದೇ ರಾಜಕೀಯ ಪಕ್ಷದ ಬೃಹತ್ ಸಮಾವೇಶವೂ ಇಲ್ಲ. ಯಾವುದೇ ನಾಯಕರ ಹುಟ್ಟುಹಬ್ಬದ ಆಚರಣೆಯೂ ಇಲ್ಲ. ರಾಜ್ಯದ ಆಡಳಿತದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಾದ ಸಚಿವ ಸಂಪುಟವೇ ಮಂಗಳೂರಿಗೆ ಬರುತ್ತಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳನ್ನು ಸಭೆಯ ಮುಂದೆ ತರಲು ಇಲಾಖೆಗಳು ಸಿದ್ಧತೆ ನಡೆಸುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ [...]</p>
<p>The post <a href="https://buntsnow.com/archives/38420">ಸಚಿವ ಸಂಪುಟ ಮಂಗಳೂರಿಗೆ ಬರುತ್ತಿದೆ… ಕರಾವಳಿಗೆ ಏನು ಕೊಡಲಿದೆ?</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಮಂಗಳೂರು ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಯಾವುದೇ ಚುನಾವಣೆ ಇಲ್ಲ. ಯಾವುದೇ ರಾಜಕೀಯ ಪಕ್ಷದ ಬೃಹತ್ ಸಮಾವೇಶವೂ ಇಲ್ಲ. ಯಾವುದೇ ನಾಯಕರ ಹುಟ್ಟುಹಬ್ಬದ ಆಚರಣೆಯೂ ಇಲ್ಲ. ರಾಜ್ಯದ ಆಡಳಿತದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಾದ ಸಚಿವ ಸಂಪುಟವೇ ಮಂಗಳೂರಿಗೆ ಬರುತ್ತಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳನ್ನು ಸಭೆಯ ಮುಂದೆ ತರಲು ಇಲಾಖೆಗಳು ಸಿದ್ಧತೆ ನಡೆಸುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಈ ಸಭೆಯಲ್ಲಿ ವಿಶೇಷ ಗಮನ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಕರಾವಳಿಗರ ಮನಸ್ಸಿನಲ್ಲಿ ಸಹಜವಾಗಿಯೇ ಒಂದು ಪ್ರಶ್ನೆ ಮೂಡಿದೆ. ಸಚಿವ ಸಂಪುಟ ಮಂಗಳೂರಿಗೆ ಬರುತ್ತಿದೆ. ಆದರೆ ಕರಾವಳಿಗೆ ಏನು ಕೊಡಲಿದೆ? ಈ ಪ್ರಶ್ನೆ ಕೇಳುವುದು ಸರ್ಕಾರವನ್ನು ಟೀಕಿಸುವುದಕ್ಕಾಗಿ ಅಲ್ಲ. ಇದು ನಮ್ಮ ಹಕ್ಕಿನ ಪ್ರಶ್ನೆ. ಸಭೆ ಮಂಗಳೂರಿನಲ್ಲಿ… ನಿರೀಕ್ಷೆ ಇಡೀ ಕರಾವಳಿಯಲ್ಲಿ. ಬೆಂಗಳೂರಿನಲ್ಲಿ ಕುಳಿತು ಕರಾವಳಿಯ ಸಮಸ್ಯೆಗಳನ್ನು ಚರ್ಚಿಸುವುದಕ್ಕೂ, ಕರಾವಳಿಗೆ ಬಂದು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತು ನಿರ್ಧಾರ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಮಂಗಳೂರಿನ ರಸ್ತೆಯಲ್ಲಿ ಒಂದೆರಡು ಗಂಟೆ ಸಂಚರಿಸಿದರೆ ನಗರದ ಟ್ರಾಫಿಕ್ ಸಮಸ್ಯೆ ಅರ್ಥವಾಗುತ್ತದೆ. ಒಂದು ಕಡಲ ತೀರದ ಬಳಿ ನಿಂತರೆ ಪರಿಸರ ಮತ್ತು ಪ್ರವಾಸೋದ್ಯಮದ ಸಾಧ್ಯತೆಗಳು ಕಾಣುತ್ತವೆ. ಒಬ್ಬ ಮೀನುಗಾರನೊಂದಿಗೆ ಮಾತನಾಡಿದರೆ ಸಮುದ್ರದ ಬದುಕಿನ ಕಷ್ಟ ಗೊತ್ತಾಗುತ್ತದೆ. ಒಬ್ಬ ಯುವಕನೊಂದಿಗೆ ಮಾತನಾಡಿದರೆ ಉದ್ಯೋಗಕ್ಕಾಗಿ ಬೆಂಗಳೂರು, ಮುಂಬಯಿ ಅಥವಾ ವಿದೇಶಕ್ಕೆ ಹೋಗಬೇಕಾದ ಅನಿವಾರ್ಯತೆ ತಿಳಿಯುತ್ತದೆ. ಒಬ್ಬ ರೈತನನ್ನು ಭೇಟಿಯಾದರೆ ಮಳೆ, ಭೂಮಿ, ಬೆಳೆ ಮತ್ತು ಮಾರುಕಟ್ಟೆಯ ಸಮಸ್ಯೆಗಳು ತಿಳಿಯುತ್ತವೆ. ಕರಾವಳಿಯ ಸಮಸ್ಯೆಗಳು ಕಡತಗಳಲ್ಲಿ ಇರುವ ಅಂಕಿ ಅಂಶಗಳಲ್ಲ. ಅವು ಜನರ ಬದುಕಿನ ಭಾಗ. ಆದ್ದರಿಂದ ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆ ಕೇವಲ ಒಂದು ಆಡಳಿತಾತ್ಮಕ ಕಾರ್ಯಕ್ರಮವಾಗದೆ, ಕರಾವಳಿಯ ಭವಿಷ್ಯವನ್ನು ನಿರ್ಧರಿಸುವ ಸಭೆಯಾಗಬೇಕು. ಅಭಿವೃದ್ಧಿ ಬೇಕು. ಆದರೆ ಯಾವ ಅಭಿವೃದ್ಧಿ? ಇಂದು ಕರಾವಳಿಯಲ್ಲಿ ಅಭಿವೃದ್ಧಿಯ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ರಸ್ತೆ ಬೇಕು. ವಿಮಾನ ನಿಲ್ದಾಣ ವಿಸ್ತರಣೆ ಬೇಕು. ಪ್ರವಾಸೋದ್ಯಮ ಬೇಕು. ಕೈಗಾರಿಕೆ ಬೇಕು. ಐಟಿ ಕ್ಷೇತ್ರ ಬರಬೇಕು. ಹೊಸ ಕಟ್ಟಡಗಳು ಬರಬೇಕು. ಆದರೆ ಒಂದು ಪ್ರಶ್ನೆ ಕೇಳಲೇಬೇಕು. ಅಭಿವೃದ್ಧಿ ಎಂದರೆ ನಿಜವಾಗಿ ಏನು? ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಹೆಚ್ಚಾಗುವುದೇ ಅಭಿವೃದ್ಧಿಯೇ? ವಾಹನಗಳ ಸಂಖ್ಯೆ ಹೆಚ್ಚಾಗುವುದೇ ಅಭಿವೃದ್ಧಿಯೇ? ಭೂಮಿಯ ಬೆಲೆ ಗಗನಕ್ಕೇರುವುದೇ ಅಭಿವೃದ್ಧಿಯೇ? ಅಥವಾ ಒಬ್ಬ ಸಾಮಾನ್ಯ ಕುಟುಂಬಕ್ಕೆ ಉತ್ತಮ ಶಿಕ್ಷಣ, ಕೈಗೆಟುಕುವ ಆರೋಗ್ಯ ಸೇವೆ, ಯುವಕರಿಗೆ ಉದ್ಯೋಗ, ಸುರಕ್ಷಿತ ರಸ್ತೆ, ಶುದ್ಧ ನೀರು, ಸ್ವಚ್ಛ ಪರಿಸರ ಮತ್ತು ನೆಮ್ಮದಿಯ ಜೀವನ ಸಿಗುವುದೇ ನಿಜವಾದ ಅಭಿವೃದ್ಧಿಯೇ? ಈ ಪ್ರಶ್ನೆಗೆ ಉತ್ತರ ಹುಡುಕದೆ ನಾವು ಅಭಿವೃದ್ಧಿಯ ಹೆಸರಿನಲ್ಲಿ ಓಡಿದರೆ, ನಾಳೆ ಮಂಗಳೂರು ದೊಡ್ಡ ನಗರವಾಗಬಹುದು. ಆದರೆ ಮಂಗಳೂರಿಗರ ಬದುಕು ದೊಡ್ಡದಾಗುತ್ತದೆಯೇ? ಪ್ರವಾಸೋದ್ಯಮ ಕರಾವಳಿಯ ದೊಡ್ಡ ಅವಕಾಶ. ಕರಾವಳಿಗೆ ಪ್ರಕೃತಿ ಕೊಟ್ಟಿರುವ ಸಂಪತ್ತಿಗೆ ಮಿತಿಯೇ ಇಲ್ಲ. ಅರಬ್ಬೀ ಸಮುದ್ರ, ನದಿಗಳು, ಪಶ್ಚಿಮ ಘಟ್ಟ, ಕಡಲ ತೀರಗಳು, ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು, ಯಕ್ಷಗಾನ, ಕಂಬಳ, ಭೂತಾರಾಧನೆ, ನಾಗಾರಾಧನೆ, ತುಳು ಸಂಸ್ಕೃತಿ, ವಿಶಿಷ್ಟ ಆಹಾರ ಪದ್ಧತಿ ಇಷ್ಟೆಲ್ಲ ಇದ್ದರೂ ಕರಾವಳಿ ಪ್ರವಾಸೋದ್ಯಮ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಇನ್ನೂ ತಲುಪಿಲ್ಲ. ಸರ್ಕಾರ ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಸ್ತಾವಿತ ಮಲ್ನಾಡ್ ಟೂರಿಸಂ ಕಾರ್ಪೊರೇಷನ್ ಬಗ್ಗೆ ಚಿಂತನೆ ನಡೆಸುತ್ತಿದೆ. ಇದು ಒಳ್ಳೆಯ ಹೆಜ್ಜೆ. ಆದರೆ ಪ್ರವಾಸೋದ್ಯಮ ಎಂದರೆ ಕೇವಲ ಬೀಚ್‌ಗೆ ದೀಪ ಹಾಕುವುದು ಅಲ್ಲ. ಪ್ರವಾಸಿಗರಿಗೆ ಉತ್ತಮ ರಸ್ತೆ ಬೇಕು. ಪಾರ್ಕಿಂಗ್ ಬೇಕು. ಸ್ವಚ್ಛ ಶೌಚಾಲಯ ಬೇಕು. ಸುರಕ್ಷತೆ ಬೇಕು. ಸಾರ್ವಜನಿಕ ಸಾರಿಗೆ ಬೇಕು. ಮಾಹಿತಿ ಕೇಂದ್ರಗಳು ಬೇಕು. ಸ್ಥಳೀಯ ಸಂಸ್ಕೃತಿಯ ಪರಿಚಯ ಬೇಕು ಮತ್ತು ಮುಖ್ಯವಾಗಿ ಸ್ಥಳೀಯರಿಗೆ ಉದ್ಯೋಗ ಬೇಕು. ಪ್ರವಾಸಿಗರು ಬಂದು, ಹೋಟೆಲ್‌ನಲ್ಲಿ ಉಳಿದು, ಊಟ ಮಾಡಿ, ಹಿಂದಿರುಗಿದರೆ ಮಾತ್ರ ಪ್ರವಾಸೋದ್ಯಮದ ಯಶಸ್ಸು ಆಗುವುದಿಲ್ಲ. ಅವರಿಂದ ಬಂದ ಹಣ ಸ್ಥಳೀಯ ಮೀನುಗಾರ, ಆಟೋ ಚಾಲಕ, ಸಣ್ಣ ಹೋಟೆಲ್ ಮಾಲೀಕ, ಕರಕುಶಲ ವ್ಯಾಪಾರಿ, ಪ್ರವಾಸಿ ಮಾರ್ಗದರ್ಶಕ ಮತ್ತು ಯುವ ಉದ್ಯಮಿಯ ಮನೆಗೂ ತಲುಪಬೇಕು. ಮಂಗಳೂರು ಪ್ರವಾಸೋದ್ಯಮದ ಹೆಬ್ಬಾಗಿಲಾಗಬಹುದೇ? ಮಂಗಳೂರಿಗೆ ವಿಮಾನ, ರೈಲು, ರಸ್ತೆ ಮತ್ತು ಬಂದರು ನಾಲ್ಕೂ ಸಂಪರ್ಕಗಳಿವೆ. ವಿಮಾನ ನಿಲ್ದಾಣವನ್ನು ದೊಡ್ಡ ವಿಮಾನಗಳ ನಿರ್ವಹಣೆಗೆ ವಿಸ್ತರಿಸುವ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಹಾಗಾದರೆ ಪ್ರಶ್ನೆ?! ಮಂಗಳೂರು ಕೇವಲ ಪ್ರವೇಶ ದ್ವಾರವಾಗಬೇಕೇ? ಅಥವಾ ಪ್ರವಾಸಿಗರ ಅಂತಿಮ ತಾಣವಾಗಬೇಕೇ? ಮಂಗಳೂರಿಗೆ ಬಂದ ಪ್ರವಾಸಿಗರು ಒಂದು ರಾತ್ರಿ ಉಳಿದು ಮುಂದೆ ಹೋಗುವ ನಗರವಾಗಬಾರದು. ಅವರು ಕನಿಷ್ಠ ಮೂರು ನಾಲ್ಕು ದಿನ ಉಳಿಯುವಂತಹ ಪ್ರವಾಸಿ ವಲಯವನ್ನು ರೂಪಿಸಬೇಕು. ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದಿರೆ, ಸುಳ್ಯ, ಕೊಡಗು, ಚಿಕ್ಕಮಗಳೂರುವರೆಗೆ ಸಂಪರ್ಕ ಕಲ್ಪಿಸುವ ಕರಾವಳಿ ಮಲೆನಾಡು ಪ್ರವಾಸೋದ್ಯಮ ವಲಯ ರೂಪಿಸಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಮಾತ್ರವಲ್ಲ. ಉದ್ಯೋಗ ಸೃಷ್ಟಿಯಾಗುತ್ತದೆ.</p>
<p>ತುಳು ಭಾಷೆ ಕೇವಲ ಭಾವನೆಯಲ್ಲ, ಬದುಕಿನ ಭಾಷೆ. ಕರಾವಳಿಯ ಮತ್ತೊಂದು ಬಹುದೊಡ್ಡ ನಿರೀಕ್ಷೆ ತುಳು ಭಾಷೆಯದ್ದು. ತುಳು ನಮ್ಮ ಮನೆಯ ಭಾಷೆ. ನಮ್ಮ ಅಜ್ಜ ಅಜ್ಜಿಯರ ಭಾಷೆ. ನಮ್ಮ ಜನಪದದ ಭಾಷೆ. ನಮ್ಮ ಯಕ್ಷಗಾನದ ಭಾಷೆ. ನಮ್ಮ ಸಂಸ್ಕೃತಿಯ ಉಸಿರು. ತುಳು ಭಾಷೆಗೆ ಹೆಚ್ಚಿನ ಅಧಿಕೃತ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಈ ಬೇಡಿಕೆ ಮತ್ತೆ ಚರ್ಚೆಗೆ ಬಂದಿದೆ. ಭಾಷೆಯನ್ನು ಕೇವಲ ಚುನಾವಣೆಯ ಸಮಯದಲ್ಲಿ ನೆನಪಿಸಿಕೊಳ್ಳಬಾರದು. ಭಾಷೆ ಉಳಿಯಬೇಕಾದರೆ ಅದನ್ನು ಬಳಸುವ ಅವಕಾಶ ಕೊಡಬೇಕು. ಶಾಲೆಯಲ್ಲಿ ಕಲಿಯಲು ಅವಕಾಶ ಇರಬೇಕು. ಸರ್ಕಾರಿ ವ್ಯವಹಾರಗಳಲ್ಲಿ ಬಳಕೆಗೆ ಅವಕಾಶ ಇರಬೇಕು. ಸಾಹಿತ್ಯಕ್ಕೆ ಪ್ರೋತ್ಸಾಹ ಬೇಕು. ಡಿಜಿಟಲ್ ತಂತ್ರಜ್ಞಾನದಲ್ಲಿ ತುಳುವಿಗೆ ಸ್ಥಾನ ಬೇಕು. ಮುಂದಿನ ಪೀಳಿಗೆಗೆ ತುಳು ಕಲಿಯುವುದು ಹೆಮ್ಮೆಯ ಸಂಗತಿಯಾಗಬೇಕು. ತುಳುವನ್ನು ಉಳಿಸುವುದು ಎಂದರೆ ಕೇವಲ ಒಂದು ಭಾಷೆಯನ್ನು ಉಳಿಸುವುದಲ್ಲ. ಒಂದು ಜನಾಂಗದ ಸಾಂಸ್ಕೃತಿಕ ನೆನಪನ್ನು ಉಳಿಸುವುದು. ಅಭಿವೃದ್ಧಿಯ ಜೊತೆ ಪರಿಸರದ ಸಮತೋಲನ. ಕರಾವಳಿಯ ಬಹುಕಾಲದ ಸಮಸ್ಯೆಗಳಲ್ಲಿ ಮರಳು ಮತ್ತು ಲ್ಯಾಟರೈಟ್ ಗಣಿಗಾರಿಕೆಯೂ ಒಂದು. ಒಂದು ಕಡೆ ಮನೆ ಕಟ್ಟುವವರಿಗೆ ಮರಳು ಬೇಕು. ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಚ್ಚಾ ವಸ್ತು ಬೇಕು. ಮತ್ತೊಂದು ಕಡೆ ಅಕ್ರಮ ಗಣಿಗಾರಿಕೆ ಪರಿಸರಕ್ಕೆ ಹಾನಿ ಮಾಡಬಹುದು. ಹಾಗಾದರೆ ಪರಿಹಾರವೇನು. ಅಭಿವೃದ್ಧಿ ನಿಲ್ಲಿಸುವುದಲ್ಲ. ಅಕ್ರಮವನ್ನು ನಿಲ್ಲಿಸಿ, ಕಾನೂನುಬದ್ಧ ಅಗತ್ಯಕ್ಕೆ ಸರಳ ಮತ್ತು ಪಾರದರ್ಶಕ ವ್ಯವಸ್ಥೆ ನಿರ್ಮಿಸುವುದು. ಈ ಹಿನ್ನೆಲೆಯಲ್ಲಿ ಸಮಗ್ರ ಮರಳು ಮತ್ತು ಲ್ಯಾಟರೈಟ್ ಗಣಿಗಾರಿಕೆ ನೀತಿಯ ನಿರೀಕ್ಷೆಯೂ ಇದೆ. ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನೀತಿ ರೂಪಿಸಿದರೆ ಜನರಿಗೂ ಅನುಕೂಲ, ನಿರ್ಮಾಣ ಕ್ಷೇತ್ರಕ್ಕೂ ಅನುಕೂಲ, ಪರಿಸರಕ್ಕೂ ರಕ್ಷಣೆ.</p>
<p>ಮಂಗಳೂರು ವೇಗವಾಗಿ ಬೆಳೆಯುತ್ತಿದೆ. ಹೊಸ ಅಪಾರ್ಟ್‌ಮೆಂಟ್‌ಗಳು, ಹೊಸ ವಾಣಿಜ್ಯ ಕಟ್ಟಡಗಳು, ಹೊಸ ಆಸ್ಪತ್ರೆಗಳು, ಹೊಸ ಶಿಕ್ಷಣ ಸಂಸ್ಥೆಗಳು, ಹೊಸ ರಸ್ತೆಗಳು ಆದರೆ ನಗರ ಬೆಳೆದಂತೆ ಸಮಸ್ಯೆಗಳೂ ಬೆಳೆಯುತ್ತಿವೆ. ಟ್ರಾಫಿಕ್, ಪಾರ್ಕಿಂಗ್, ಮಳೆ ನೀರು, ಕಸದ ನಿರ್ವಹಣೆ, ಒತ್ತುವರಿ, ಕುಡಿಯುವ ನೀರು, ನಗರದ ಒಳಚರಂಡಿ ಇವುಗಳಿಗೆ ದೀರ್ಘಕಾಲೀನ ಪರಿಹಾರ ಬೇಕಾಗಿದೆ. ಇತ್ತೀಚೆಗೆ ಮಂಗಳೂರು ಕೇಂದ್ರ ಮಾರುಕಟ್ಟೆಯ ಕಾಮಗಾರಿಯನ್ನೂ ಪರಿಶೀಲಿಸಿ, ಕಾಮಗಾರಿ ಗುಣಮಟ್ಟ ಮತ್ತು ಸಮಯಪಾಲನೆಗೆ ಒತ್ತು ನೀಡಲಾಗಿದೆ. ಆದರೆ ಒಂದು ಮಾರುಕಟ್ಟೆ ನಿರ್ಮಿಸುವುದರಿಂದ ನಗರದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಂಗಳೂರಿಗೆ ಮುಂದಿನ 25–30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಗರ ಯೋಜನೆ ಬೇಕು. ಇಂದು ನಾವು ಹಾಕುವ ರಸ್ತೆ ನಾಳೆಯ ವಾಹನ ದಟ್ಟಣೆಯನ್ನು ತಡೆಯಬಲ್ಲದೇ? ಇಂದು ನಿರ್ಮಿಸುವ ಕಟ್ಟಡ ನಾಳೆಯ ನೀರು ಹರಿವಿಗೆ ಅಡ್ಡಿಯಾಗುವುದಿಲ್ಲವೇ? ಇಂದು ಕತ್ತರಿಸುವ ಮರ ನಾಳೆಯ ಬಿಸಿಲನ್ನು ಹೆಚ್ಚಿಸುವುದಿಲ್ಲವೇ? ಇವುಗಳನ್ನೆಲ್ಲ ಯೋಚಿಸಬೇಕು. ಅತಿ ದೊಡ್ಡ ಪ್ರಶ್ನೆ?!. ಕರಾವಳಿ ಕರ್ನಾಟಕದ ಯುವಕರು ಪ್ರತಿಭಾವಂತರು. ಅವರು ದೇಶದ ವಿವಿಧ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶಗಳಲ್ಲಿದ್ದಾರೆ. ವೈದ್ಯರು, ಎಂಜಿನಿಯರ್‌ಗಳು, ಉದ್ಯಮಿಗಳು, ಐಟಿ ತಜ್ಞರು, ಹೋಟೆಲ್ ಉದ್ಯಮಿಗಳು, ಬ್ಯಾಂಕರ್‌ಗಳು, ಶಿಕ್ಷಕರು. ಎಲ್ಲಾ ಕ್ಷೇತ್ರಗಳಲ್ಲೂ ಕರಾವಳಿಯ ಯುವಕರಿದ್ದಾರೆ. ಆದರೆ ಒಂದು ಪ್ರಶ್ನೆ: ಅವರ ಪ್ರತಿಭೆಯನ್ನು ಮಂಗಳೂರಿನಲ್ಲೇ ಬಳಸಿಕೊಳ್ಳಲು ನಾವು ಸಾಕಷ್ಟು ಅವಕಾಶ ಸೃಷ್ಟಿಸಿದ್ದೇವೆಯೇ? ಐಟಿ ಪಾರ್ಕ್‌ಗಳು ಬರಬೇಕು. ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣ ಬೇಕು. ಕೌಶಲ್ಯ ತರಬೇತಿ ಬೇಕು. ವಿಶೇಷವಾಗಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಮಂಗಳೂರು ಕೇವಲ ಶಿಕ್ಷಣ ಕೊಡುವ ನಗರವಾಗದೆ, ಉದ್ಯೋಗ ಕೊಡುವ ನಗರವೂ ಆಗಬೇಕು. ಈಗಾಗಲೇ ಬಲಿಷ್ಠ, ಇನ್ನಷ್ಟು ಬಲ ಪಡಿಸೋಣ. ಆರೋಗ್ಯ ಕ್ಷೇತ್ರದಲ್ಲಿ ಮಂಗಳೂರು ಈಗಾಗಲೇ ತನ್ನದೇ ಆದ ಹೆಸರು ಗಳಿಸಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೆ, ಉಡುಪಿ, ಉತ್ತರ ಕನ್ನಡ, ಕೊಡಗು, ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಜನರೂ ಚಿಕಿತ್ಸೆಗೆ ಮಂಗಳೂರನ್ನು ಅವಲಂಬಿಸುತ್ತಾರೆ. ಹಾಗಾದರೆ ಸರ್ಕಾರದ ಜವಾಬ್ದಾರಿ ಏನು? ಸರ್ಕಾರಿ ಆಸ್ಪತ್ರೆಗಳನ್ನು ಮತ್ತಷ್ಟು ಬಲಪಡಿಸಬೇಕು. ತಜ್ಞ ವೈದ್ಯರ ಲಭ್ಯತೆ ಹೆಚ್ಚಿಸಬೇಕು. ತುರ್ತು ಚಿಕಿತ್ಸಾ ವ್ಯವಸ್ಥೆ ಸುಧಾರಿಸಬೇಕು. ಕ್ಯಾನ್ಸರ್, ಹೃದಯ, ಮೂತ್ರಪಿಂಡ, ನರರೋಗ ಮುಂತಾದ ಗಂಭೀರ ಕಾಯಿಲೆಗಳಿಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಆರೋಗ್ಯ ಸೇವೆ ಮಾರುಕಟ್ಟೆಯ ವಸ್ತುವಾಗಬಾರದು; ಅದು ಜನರ ಹಕ್ಕಾಗಬೇಕು. ಅಭಿವೃದ್ಧಿಯಷ್ಟೇ ಮುಖ್ಯ ಕರಾವಳಿ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಶಾಂತಿ ಮತ್ತು ಸೌಹಾರ್ದ ಅತ್ಯಗತ್ಯ. ಹೂಡಿಕೆದಾರನಿಗೆ ಮೊದಲ ಪ್ರಶ್ನೆ ರಸ್ತೆ ಎಷ್ಟು ಚೆನ್ನಾಗಿದೆ ಎಂಬುದಲ್ಲ. ಇಲ್ಲಿ ವಾತಾವರಣ ಸುರಕ್ಷಿತವೇ? ಎಂಬುದು. ವ್ಯಾಪಾರಿಗೆ ಬೇಕಾಗಿರುವುದು ನೆಮ್ಮದಿ. ವಿದ್ಯಾರ್ಥಿಗೆ ಬೇಕಾಗಿರುವುದು ಭಯರಹಿತ ವಾತಾವರಣ. ಉದ್ಯಮಿಗೆ ಬೇಕಾಗಿರುವುದು ಸ್ಥಿರತೆ. ಸಾಮಾನ್ಯ ಕುಟುಂಬಕ್ಕೆ ಬೇಕಾಗಿರುವುದು ಸಾಮಾಜಿಕ ಸಾಮರಸ್ಯ. ಧರ್ಮ, ಜಾತಿ, ಭಾಷೆ, ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಅವು ಪ್ರಜಾಪ್ರಭುತ್ವದ ಸಹಜ ಭಾಗ. ಆದರೆ ಅವು ಮಾನವೀಯತೆಯನ್ನು ಮೀರಬಾರದು. ಕರಾವಳಿಯ ಅಭಿವೃದ್ಧಿಗೆ ಶಾಂತಿಯೇ ಮೊದಲ ಬಂಡವಾಳ.</p>
<p>ಈ ಸಭೆಯ ನಂತರ ಜನರು ಐದು ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು. ಒಂದು: ಎಷ್ಟು ಘೋಷಣೆಗಳಾದವು ಅದು ಮುಖ್ಯವಲ್ಲ. ಎಷ್ಟು ನಿರ್ಧಾರಗಳು ಜಾರಿಗೆ ಬಂದವು? ಅದು ಮುಖ್ಯ. ಎರಡು: ಎಷ್ಟು ಹಣ ಮಂಜೂರಾಯಿತು? ಅದು ಮಾತ್ರ ಮುಖ್ಯವಲ್ಲ. ಆ ಹಣ ಎಲ್ಲಿ ಖರ್ಚಾಯಿತು? ಅದು ಮುಖ್ಯ. ಮೂರು: ಎಷ್ಟು ಯೋಜನೆಗಳಿಗೆ ಶಂಕುಸ್ಥಾಪನೆ ಆಯಿತು? ಅದು ಮುಖ್ಯವಲ್ಲ. ಎಷ್ಟು ಯೋಜನೆಗಳು ಪೂರ್ಣಗೊಂಡವು? ಅದು ಮುಖ್ಯ. ನಾಲ್ಕು: ಎಷ್ಟು ಉದ್ಯೋಗ ಸೃಷ್ಟಿಯಾಯಿತು? ಇದು ಅತ್ಯಂತ ಮುಖ್ಯ. ಐದು: ಸಾಮಾನ್ಯ ಕರಾವಳಿಗರ ಬದುಕಿನಲ್ಲಿ ಏನು ಬದಲಾವಣೆ ಆಯಿತು? ಇದೇ ಅಂತಿಮ ಪ್ರಶ್ನೆ. ಘೋಷಣೆಗಳ ಕರಾವಳಿ ಬೇಡ. ಫಲಿತಾಂಶಗಳ ಕರಾವಳಿ ಬೇಕು. ನಮ್ಮಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಯಾವುದೇ ದೊಡ್ಡ ಸಭೆ ನಡೆದಾಗ ಕೋಟಿ ಕೋಟಿ ರೂಪಾಯಿಗಳ ಯೋಜನೆಗಳ ಘೋಷಣೆ. ಶಂಕು ಸ್ಥಾಪನೆ, ಉದ್ಘಾಟನೆ, ಫೋಟೋ, ಪತ್ರಿಕಾ ಪ್ರಕಟಣೆ ನಂತರ? ಕೆಲವೊಮ್ಮೆ ಕಡತ, ಕೆಲವೊಮ್ಮೆ ಟೆಂಡರ್, ಕೆಲವೊಮ್ಮೆ ಭೂಸ್ವಾಧೀನ, ಕೆಲವೊಮ್ಮೆ ಪರಿಸರ ಅನುಮತಿ ಹೀಗೆ ವರ್ಷಗಳು ಕಳೆಯುತ್ತವೆ.</p>
<p>ಆದ್ದರಿಂದ ಈ ಬಾರಿ ಕರಾವಳಿ ಜನರು ಘೋಷಣೆಗಳ ಮೇಲೆ ಚಪ್ಪಾಳೆ ತಟ್ಟುವುದಕ್ಕಿಂತ, ಅನುಷ್ಠಾನದ ಮೇಲೆ ಕಣ್ಣಿಡಬೇಕು. ಜನಪ್ರತಿನಿಧಿಗಳೂ ಕೂಡ ಸಭೆಯ ದಿನ ಮಾತ್ರ ಮಾತನಾಡದೆ, ನಿರ್ಧಾರಗಳ ಅನುಷ್ಠಾನದವರೆಗೆ ಜನರ ಜೊತೆ ನಿಲ್ಲಬೇಕು. ಮಂಗಳೂರಿನಿಂದ ಹೊರಡುವ ಸಂದೇಶ ಏನು? ಸೆಪ್ಟೆಂಬರ್ 18ರಂದು ಸಚಿವ ಸಂಪುಟ ಮಂಗಳೂರಿನಲ್ಲಿ ಸಭೆ ಸೇರುವಾಗ ಅದು ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು. ಆ ಸಭೆಯಿಂದ ಹೊರಬರುವ ಪ್ರತಿಯೊಂದು ನಿರ್ಧಾರವೂ ಮುಂದಿನ ಹತ್ತು, ಇಪ್ಪತ್ತು ವರ್ಷಗಳ ಕರಾವಳಿಯ ಭವಿಷ್ಯವನ್ನು ರೂಪಿಸುವಂತಿರಬೇಕು. ಮಂಗಳೂರು ಕೇವಲ ರಾಜ್ಯದ ಒಂದು ನಗರವಲ್ಲ. ಇದು ಕರಾವಳಿಯ ಆರ್ಥಿಕ ಹೃದಯ. ಶಿಕ್ಷಣದ ಕೇಂದ್ರ. ಆರೋಗ್ಯದ ಕೇಂದ್ರ, ವ್ಯಾಪಾರದ ಕೇಂದ್ರ, ಬಂದರಿನ ನಗರ, ವಿದೇಶದೊಂದಿಗೆ ಸಂಪರ್ಕ ಹೊಂದಿರುವ ನಗರ, ಬಹುಸಂಸ್ಕೃತಿಯ ನಗರ, ತುಳು ಸಂಸ್ಕೃತಿಯ ಹೆಮ್ಮೆಯ ನಗರ. ಹೀಗಾಗಿ ಮಂಗಳೂರಿನ ಅಭಿವೃದ್ಧಿ ಎಂದರೆ ಕೇವಲ ಮಂಗಳೂರಿನ ಅಭಿವೃದ್ಧಿಯಲ್ಲ. ಇಡೀ ಕರಾವಳಿಯ ಅಭಿವೃದ್ಧಿ. ಕರಾವಳಿಗರು ಸರ್ಕಾರದಿಂದ ದಾನ ಕೇಳುತ್ತಿಲ್ಲ. ಭಿಕ್ಷೆ ಕೇಳುತ್ತಿಲ್ಲ. ಯಾರದ್ದೋ ಉಪಕಾರ ಕೇಳುತ್ತಿಲ್ಲ. ತಮ್ಮ ಪಾಲಿನ ಅಭಿವೃದ್ಧಿಯನ್ನು ಕೇಳುತ್ತಿದ್ದಾರೆ. ನಾವು ತೆರಿಗೆ ಕೊಡುತ್ತೇವೆ. ನಾವು ದುಡಿಯುತ್ತೇವೆ. ನಮ್ಮ ಯುವಕರು ದೇಶ ವಿದೇಶಗಳಲ್ಲಿ ಕೆಲಸ ಮಾಡಿ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ. ನಮ್ಮ ಉದ್ಯಮಿಗಳು ಹೂಡಿಕೆ ಮಾಡುತ್ತಾರೆ. ನಮ್ಮ ರೈತರು ಆಹಾರ ಬೆಳೆಸುತ್ತಾರೆ. ನಮ್ಮ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಾರೆ. ನಮ್ಮ ಕಾರ್ಮಿಕರು ನಗರ ಕಟ್ಟುತ್ತಾರೆ. ಹಾಗಾದರೆ ಸರ್ಕಾರದ ಜವಾಬ್ದಾರಿಯೂ ಇದೆ. ಕರಾವಳಿಯ ಜನರ ಪರಿಶ್ರಮಕ್ಕೆ ತಕ್ಕ ಅಭಿವೃದ್ಧಿಯನ್ನು ನೀಡುವುದು. ಸೆಪ್ಟೆಂಬರ್ 18ರಂದು ಸಚಿವ ಸಂಪುಟ ಮಂಗಳೂರಿಗೆ ಬರುತ್ತಿದೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಆದರೆ ಅದರ ನಂತರ ಚೆಂಡು ಜನರ ಅಂಗಳಕ್ಕೂ ಬರಬೇಕು. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಜನರು ಅದರ ಫಲಿತಾಂಶವನ್ನು ಅಳೆಯುತ್ತಾರೆ. ಹೀಗಾಗಿ ಇಂದಿನ ಕರಾವಳಿಯ ಪ್ರಶ್ನೆ ಒಂದೇ &#8216;ಸಚಿವ ಸಂಪುಟ ಮಂಗಳೂರಿಗೆ ಬರುತ್ತಿದೆ. ಕರಾವಳಿಗೆ ಏನು ಕೊಡಲಿದೆ?&#8217; ಮತ್ತು ನಾಳೆಯ ಪ್ರಶ್ನೆ ಇನ್ನೂ ದೊಡ್ಡದು ಕೊಟ್ಟ ಮಾತುಗಳಲ್ಲಿ ಎಷ್ಟು ನೆರವೇರಿತು? ಅದೇ ಈ ಸಚಿವ ಸಂಪುಟ ಸಭೆಯ ನಿಜವಾದ ಯಶಸ್ಸಿನ ಮಾನದಂಡ. ಘೋಷಣೆಗಳ ಕರಾವಳಿ ಬೇಡ… ಫಲಿತಾಂಶಗಳ ಕರಾವಳಿ ಬೇಕು.</p>
<p>ಬರಹ : ಶರತ್ ಶೆಟ್ಟಿ ಪಡುಪಳ್ಳಿ</p>
<p>The post <a href="https://buntsnow.com/archives/38420">ಸಚಿವ ಸಂಪುಟ ಮಂಗಳೂರಿಗೆ ಬರುತ್ತಿದೆ… ಕರಾವಳಿಗೆ ಏನು ಕೊಡಲಿದೆ?</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಲೇಡಿ ಗೋಶನ್ ಆಸ್ಪತ್ರೆ ರಾಜ್ಯದಲ್ಲೇ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ -ಸಿಎ ಶಾಂತಾರಾಮ ಶೆಟ್ಟಿ</title>
		<link>https://buntsnow.com/archives/38419</link>
		
		<dc:creator><![CDATA[Bunts Now]]></dc:creator>
		<pubDate>Wed, 09 Sep 2026 12:58:34 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38419</guid>

					<description><![CDATA[<p>ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮೂರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೊಡುಗೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ಮಾತನಾಡಿ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಈ ಕೊಡುಗೆ ಉನ್ನತ ದೃಷ್ಟಿಕೋನದ ಸೇವೆಯಾಗಿದೆ. ಆಸ್ಪತ್ರೆಯ ರೋಗಿಗಳು, ವೈದ್ಯರು ಹಾಗೂ ಶುಶ್ರುಷಕಿಯರಿಗೆ ಸಂಬಂಧಿಸಿದ ಯಾವುದೇ ಸರ್ಜಿಕಲ್ ಬಟ್ಟೆಗಳಲ್ಲಿ ನ್ಯೂನತೆಯಾದ ಸಂದರ್ಭ ಅದನ್ನು ಹೊಲಿದು ಸುಸ್ಥಿತಿಯಲ್ಲಿ [...]</p>
<p>The post <a href="https://buntsnow.com/archives/38419">ಲೇಡಿ ಗೋಶನ್ ಆಸ್ಪತ್ರೆ ರಾಜ್ಯದಲ್ಲೇ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ -ಸಿಎ ಶಾಂತಾರಾಮ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮೂರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೊಡುಗೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ಮಾತನಾಡಿ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಈ ಕೊಡುಗೆ ಉನ್ನತ ದೃಷ್ಟಿಕೋನದ ಸೇವೆಯಾಗಿದೆ. ಆಸ್ಪತ್ರೆಯ ರೋಗಿಗಳು, ವೈದ್ಯರು ಹಾಗೂ ಶುಶ್ರುಷಕಿಯರಿಗೆ ಸಂಬಂಧಿಸಿದ ಯಾವುದೇ ಸರ್ಜಿಕಲ್ ಬಟ್ಟೆಗಳಲ್ಲಿ ನ್ಯೂನತೆಯಾದ ಸಂದರ್ಭ ಅದನ್ನು ಹೊಲಿದು ಸುಸ್ಥಿತಿಯಲ್ಲಿ ಉಪಯೋಗ ಮಾಡಲು ಈ ಹೊಲಿಗೆ ಯಂತ್ರಗಳು ಬಹಳಷ್ಟು ಉಪಕಾರಿಯಾಗುತ್ತದೆ ಎಂದರು. ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಿದ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಶಾಂತರಾಮ ಶೆಟ್ಟಿ ಅವರು, ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆ ರಾಜ್ಯದಲ್ಲೇ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಲು ರೆಡ್ ಕ್ರಾಸ್ ಸಂಸ್ಥೆ ಬದ್ಧವಾಗಿದೆ ಎಂದರು.</p>
<p><img loading="lazy" decoding="async" class="alignnone size-full wp-image-38428" src="https://buntsnow.com/wp-content/uploads/2026/09/ladygoushan_1.jpeg" alt="" width="1110" height="590" srcset="https://buntsnow.com/wp-content/uploads/2026/09/ladygoushan_1.jpeg 1110w, https://buntsnow.com/wp-content/uploads/2026/09/ladygoushan_1-300x159.jpeg 300w, https://buntsnow.com/wp-content/uploads/2026/09/ladygoushan_1-1024x544.jpeg 1024w, https://buntsnow.com/wp-content/uploads/2026/09/ladygoushan_1-768x408.jpeg 768w, https://buntsnow.com/wp-content/uploads/2026/09/ladygoushan_1-150x80.jpeg 150w, https://buntsnow.com/wp-content/uploads/2026/09/ladygoushan_1-450x239.jpeg 450w" sizes="(max-width: 1110px) 100vw, 1110px" /> <img loading="lazy" decoding="async" class="alignnone size-full wp-image-38429" src="https://buntsnow.com/wp-content/uploads/2026/09/ladygoushan_2.jpeg" alt="" width="1280" height="591" srcset="https://buntsnow.com/wp-content/uploads/2026/09/ladygoushan_2.jpeg 1280w, https://buntsnow.com/wp-content/uploads/2026/09/ladygoushan_2-300x139.jpeg 300w, https://buntsnow.com/wp-content/uploads/2026/09/ladygoushan_2-1024x473.jpeg 1024w, https://buntsnow.com/wp-content/uploads/2026/09/ladygoushan_2-768x355.jpeg 768w, https://buntsnow.com/wp-content/uploads/2026/09/ladygoushan_2-150x69.jpeg 150w, https://buntsnow.com/wp-content/uploads/2026/09/ladygoushan_2-450x208.jpeg 450w, https://buntsnow.com/wp-content/uploads/2026/09/ladygoushan_2-1200x554.jpeg 1200w" sizes="(max-width: 1280px) 100vw, 1280px" /></p>
<p>ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಖಜಾಂಜಿ ಗುರುದತ್ ಎಂ ನಾಯಕ್, ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಸಂಯೋಜಕ ಗಿರೀಶ್, ಲೇಡಿ ಗೋಷನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಹಿರಿಯ ತಜ್ಞ ಡಾ. ದಯಾನಂದ್, ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಗೀತಾ ಮತ್ತು ಮಲ್ಲಿಕಾ ಇದ್ದರು. ಜ್ಯೋತಿ ಪ್ರಭಾ ಸ್ವಾಗತಿಸಿದರು. ಶುಶ್ರುಷಾಧಿಕಾರಿಗಳಾದ ಅಂಬಿಕಾ ಮತ್ತು ಜಯಲಕ್ಷ್ಮಿ ನಿರೂಪಿಸಿದರು.</p>
<p>The post <a href="https://buntsnow.com/archives/38419">ಲೇಡಿ ಗೋಶನ್ ಆಸ್ಪತ್ರೆ ರಾಜ್ಯದಲ್ಲೇ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ -ಸಿಎ ಶಾಂತಾರಾಮ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸೆಪ್ಟೆಂಬರ್ 14ರಿಂದ ಬಂಟ್ಸ್ ಹಾಸ್ಟೆಲ್ ಸಾರ್ವಜನಿಕ ಗಣೇಶೋತ್ಸವ</title>
		<link>https://buntsnow.com/archives/38409</link>
		
		<dc:creator><![CDATA[Bunts Now]]></dc:creator>
		<pubDate>Tue, 08 Sep 2026 12:44:39 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38409</guid>

					<description><![CDATA[<p>ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ, ಮಹಾಗಣಯಾಗ ಸೆಪ್ಟೆಂಬರ್ 14ರಿಂದ 16ರ ವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಜರಗಲಿದೆ. ಸೆಪ್ಟೆಂಬರ್ 13ರಂದು ಸಂಜೆ 5 ಗಂಟೆಗೆ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ [...]</p>
<p>The post <a href="https://buntsnow.com/archives/38409">ಸೆಪ್ಟೆಂಬರ್ 14ರಿಂದ ಬಂಟ್ಸ್ ಹಾಸ್ಟೆಲ್ ಸಾರ್ವಜನಿಕ ಗಣೇಶೋತ್ಸವ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ, ಮಹಾಗಣಯಾಗ ಸೆಪ್ಟೆಂಬರ್ 14ರಿಂದ 16ರ ವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಜರಗಲಿದೆ. ಸೆಪ್ಟೆಂಬರ್ 13ರಂದು ಸಂಜೆ 5 ಗಂಟೆಗೆ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ರಾಮದಾಸ್ ಆಚಾರ‍್ಯ ಅವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೆಲಿನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಗುವುದು. ಸೆಪ್ಟೆಂಬರ್ 14 ರಂದು ಬೆಳಿಗ್ಗೆ 8 ಗಂಟೆಗೆ ಮೂರ್ತಿ ಪ್ರತಿಷ್ಠೆ ನಡೆದು, 9 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣಾ ಕಾರ್ಯಕ್ರಮ ನಡೆಯಲಿದೆ.</p>
<p><img loading="lazy" decoding="async" class="alignnone size-full wp-image-38410" src="https://buntsnow.com/wp-content/uploads/2026/09/septembar_14_bunts-scaled.jpeg" alt="" width="2560" height="1358" srcset="https://buntsnow.com/wp-content/uploads/2026/09/septembar_14_bunts-scaled.jpeg 2560w, https://buntsnow.com/wp-content/uploads/2026/09/septembar_14_bunts-300x159.jpeg 300w, https://buntsnow.com/wp-content/uploads/2026/09/septembar_14_bunts-1024x543.jpeg 1024w, https://buntsnow.com/wp-content/uploads/2026/09/septembar_14_bunts-768x407.jpeg 768w, https://buntsnow.com/wp-content/uploads/2026/09/septembar_14_bunts-1536x815.jpeg 1536w, https://buntsnow.com/wp-content/uploads/2026/09/septembar_14_bunts-2048x1086.jpeg 2048w, https://buntsnow.com/wp-content/uploads/2026/09/septembar_14_bunts-150x80.jpeg 150w, https://buntsnow.com/wp-content/uploads/2026/09/septembar_14_bunts-450x239.jpeg 450w, https://buntsnow.com/wp-content/uploads/2026/09/septembar_14_bunts-1200x636.jpeg 1200w" sizes="(max-width: 2560px) 100vw, 2560px" /></p>
<p>ಮಧ್ಯಾಹ್ನ 3 ರಿಂದ ಪಾಂಚಜನ್ಯ ಪ್ರತಿಷ್ಠಾನ ಕುಡ್ಲ ಕಲಾವಿದರಿಂದ ‘ಶ್ರೀ ಮಂಗಳಾಪುರದ ಮಂಗಳಾಂಬಿಕೆ’ ಪೌರಾಣಿಕ ನೃತ್ಯ ನಾಟಕ ನಡೆಯಲಿದೆ. ಸಂಜೆ 5 ರಿಂದ 7 ಗಂಟೆಯವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 7.30 ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8ರಿಂದ ‘ಬಂಟಕಲಾ ಸಂಗಮ-2026’ ವಿವಿಧ ಬಂಟರ ಸಂಘಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರಗಲಿರುವುದು ಎಂದು ಶ್ರೀ  ಸಿದ್ದಿವಿನಾಯಕ ಪ್ರತಿಷ್ಠಾನದ ಮೇನೆಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>
<p>ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಆಶಾಜ್ಯೋತಿ ರೈ ಬಂಬ್ರಾಣ ಮಾತನಾಡಿ, ಸೆಪ್ಟೆಂಬರ್ 15ರಂದು ಬೆಳಿಗ್ಗೆ 11.30ರಿಂದ ಮೂಡಪ್ಪ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 8ರಿಂದ ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಯಾಗದ ಋತ್ವಿಜರಿಂದ ಯಾಗ ಶಾಲಾ ಪ್ರವೇಶ, ಗಣಪತಿ ಪೂಜೆ, ಮಹಾಗಣಯಾಗದ ಸೇವಾರ್ಥಿಗಳಿಂದ ಸಂಕಲ್ಪ ನಡೆಯಲಿದೆ. ಸಂಜೆ 5 ರಿಂದ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 7.30 ರಿಂದ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯುವುದು. ರಾತ್ರಿ 8ರಿಂದ ಸ್ವರಲಯ ಸಿಂಪೋನಿ ಕಲಾ ಶಾಲೆಯ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಸೆಪ್ಟೆಂಬರ್ 16 ರಂದು ಬೆಳಿಗ್ಗೆ 8.30 ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭಗೊಂಡು 11 ಗಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನಡೆದು ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಾಯಾತ್ರೆಯು ಓಂಕಾರನಗರದಿಂದ ಜಿಲ್ಲೆಯ ವಿವಿಧ ಭಜನಾ ತಂಡಗಳ ಸೇವೆಯೊಂದಿಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್, ಪಿ.ವಿ.ಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ವಿವರಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಕೋಶಾಧಿಕಾರಿ ರಾಮ್‌ಮೋಹನ್ ರೈ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಉಪಸ್ಥಿತರಿದ್ದರು.</p>
<p>The post <a href="https://buntsnow.com/archives/38409">ಸೆಪ್ಟೆಂಬರ್ 14ರಿಂದ ಬಂಟ್ಸ್ ಹಾಸ್ಟೆಲ್ ಸಾರ್ವಜನಿಕ ಗಣೇಶೋತ್ಸವ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಬೆಳ್ತಂಗಡಿ ಬಂಟರ ಸಂಘದಿಂದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ</title>
		<link>https://buntsnow.com/archives/38397</link>
		
		<dc:creator><![CDATA[Bunts Now]]></dc:creator>
		<pubDate>Tue, 08 Sep 2026 12:44:26 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=38397</guid>

					<description><![CDATA[<p>ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಸುವ ಕೇಂದ್ರವಾಗದೆ ವಿದ್ಯಾರ್ಥಿಗಳಿಗೆ ಉತ್ತಮ ನಡತೆಯನ್ನು ಕಲಿಸುವ ಪ್ರಮುಖ ಸಂಸ್ಥೆಯಾಗಬೇಕು ಎಂದು ಉದ್ಯಮಿ, ಬೆಳ್ತಂಗಡಿ ಬಂಟರ ಸಂಘದ ಮಾರ್ಗದರ್ಶಕ ಶಶಿಧರ್ ಶೆಟ್ಟಿ ಬರೋಡ ಹೇಳಿದರು. ಅವರು ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಶ್ರೀಮತಿ ಕಾಶಿ ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳು ಗುರುವಾಯನಕೆರೆ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರು ಬಂಟರ [...]</p>
<p>The post <a href="https://buntsnow.com/archives/38397">ಬೆಳ್ತಂಗಡಿ ಬಂಟರ ಸಂಘದಿಂದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಸುವ ಕೇಂದ್ರವಾಗದೆ ವಿದ್ಯಾರ್ಥಿಗಳಿಗೆ ಉತ್ತಮ ನಡತೆಯನ್ನು ಕಲಿಸುವ ಪ್ರಮುಖ ಸಂಸ್ಥೆಯಾಗಬೇಕು ಎಂದು ಉದ್ಯಮಿ, ಬೆಳ್ತಂಗಡಿ ಬಂಟರ ಸಂಘದ ಮಾರ್ಗದರ್ಶಕ ಶಶಿಧರ್ ಶೆಟ್ಟಿ ಬರೋಡ ಹೇಳಿದರು. ಅವರು ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಶ್ರೀಮತಿ ಕಾಶಿ ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳು ಗುರುವಾಯನಕೆರೆ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರು ಬಂಟರ ಸಂಘ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳ ಅಜೆಕಾರಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಜತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಜ್ಞಾನಸುಧಾ ಸಂಸ್ಥೆ ಮಾದರಿಯಾಗಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ವಿದ್ಯಾರ್ಥಿಗಳಿಗೆ ಸೌಭಾಗ್ಯ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಜ್ಞಾನಸುಧಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅವರ ಶೈಕ್ಷಣಿಕ ಸೇವೆ ಅಭಿನಂದನೀಯ ಎಂದರು. ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿ ತಮ್ಮ ತಂದೆ ತಾಯಿಗೆ ಆದರ್ಶಪ್ರಾಯರಾಗಬೇಕು. ವಿದ್ಯೆಯ ಜೊತೆಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.</p>
<p><img loading="lazy" decoding="async" class="alignnone size-full wp-image-38401" src="https://buntsnow.com/wp-content/uploads/2026/09/belthangadi_bantara_sanga-1.jpeg" alt="" width="1132" height="754" srcset="https://buntsnow.com/wp-content/uploads/2026/09/belthangadi_bantara_sanga-1.jpeg 1132w, https://buntsnow.com/wp-content/uploads/2026/09/belthangadi_bantara_sanga-1-300x200.jpeg 300w, https://buntsnow.com/wp-content/uploads/2026/09/belthangadi_bantara_sanga-1-1024x682.jpeg 1024w, https://buntsnow.com/wp-content/uploads/2026/09/belthangadi_bantara_sanga-1-768x512.jpeg 768w, https://buntsnow.com/wp-content/uploads/2026/09/belthangadi_bantara_sanga-1-150x100.jpeg 150w, https://buntsnow.com/wp-content/uploads/2026/09/belthangadi_bantara_sanga-1-450x300.jpeg 450w" sizes="(max-width: 1132px) 100vw, 1132px" />ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ| ಸುಧಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿನಯವಿಲ್ಲದ ವಿದ್ಯೆಗೆ ಮೌಲ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ದಾರಿ ತಪ್ಪದೆ ಉತ್ತಮವಾಗಿ ಅಭ್ಯಾಸ ನಡೆಸಿ, ಉದ್ಯೋಗ ಪಡೆದು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ನಿಂತು ಪೋಷಕರಿಗೆ ಆಶಾಕಿರಣವಾಗಬೇಕು ಎಂದು ಹೇಳಿದರು. ತಂದೆ ತಾಯಿಯ ತ್ಯಾಗ ಹಾಗೂ ಕಷ್ಟಗಳನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಅವರ ಹುಟ್ಟು ಹಬ್ಬದಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವುದರಿಂದ ಮಾತ್ರ ಕರ್ತವ್ಯ ಮುಗಿಯುವುದಿಲ್ಲ. ಬದಲಾಗಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಮತ್ತು ಅವರಿಗೆ ನೆಮ್ಮದಿಯ ಜೀವನ ನೀಡುವುದು ಮಕ್ಕಳ ನಿಜವಾದ ಕರ್ತವ್ಯ ಎಂದರು. ಸಮಾಜದ ಎಲ್ಲಾ ಜಾತಿ ವರ್ಗಗಳು ನಮ್ಮ ದೇಹದ ವಿವಿಧ ಅಂಗಗಳಿದ್ದಂತೆ, ಪರಸ್ವರ ಸಾಮರಸ್ಯದಿಂದ ಬದುಕುವುದರ ಮೂಲಕ ಸಮಾಜವನ್ನು ಸದೃಢಗೊಳಿಸಬೇಕು. ವಿದ್ಯಾರ್ಥಿಗಳು ಡ್ರಗ್ಸ್ ಸೇರಿದಂತೆ ದುಶ್ಚಟಗಳಿಗೆ ಹಾಗೂ ಕ್ಷಣಿಕ ಪ್ರೀತಿ ವ್ಯಾಮೋಹಕ್ಕೆ ಬಲಿಯಾಗಬಾರದು. ಇಂತಹ ಬೆಳವಣಿಗೆಗಳಿಂದ ವಿದ್ಯಾರ್ಥಿಗಳ ಭವಿಷ್ಯ ಮಾತ್ರವಲ್ಲದೆ ಪೋಷಕರು ಮಾನಸಿಕವಾಗಿ ನೋವು ಅನುಭವಿಸುವಂತಾಗುತ್ತದೆ. ಪೋಷಕರನ್ನು ನೋಯಿಸದೆ ಅವರ ನಿರೀಕ್ಷೆಗಳಿಗೆ ತಕ್ಕಂತೆ ಯಶಸ್ಸು ಸಾಧಿಸುವ ಮಕ್ಕಳು ಜೀವನದಲ್ಲಿ ಉತ್ತಮ ಸ್ಥಾನ ಪಡೆಯುತ್ತಾರೆ ಎಂದರು. ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಬಾರಿ 225 ಎಂಬಿಬಿಎಸ್ ಸೀಟುಗಳು ಲಭಿಸಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು.</p>
<p><img loading="lazy" decoding="async" class="alignnone size-full wp-image-38402" src="https://buntsnow.com/wp-content/uploads/2026/09/belthangadi_bantara-sanga-2.jpeg" alt="" width="1132" height="754" srcset="https://buntsnow.com/wp-content/uploads/2026/09/belthangadi_bantara-sanga-2.jpeg 1132w, https://buntsnow.com/wp-content/uploads/2026/09/belthangadi_bantara-sanga-2-300x200.jpeg 300w, https://buntsnow.com/wp-content/uploads/2026/09/belthangadi_bantara-sanga-2-1024x682.jpeg 1024w, https://buntsnow.com/wp-content/uploads/2026/09/belthangadi_bantara-sanga-2-768x512.jpeg 768w, https://buntsnow.com/wp-content/uploads/2026/09/belthangadi_bantara-sanga-2-150x100.jpeg 150w, https://buntsnow.com/wp-content/uploads/2026/09/belthangadi_bantara-sanga-2-450x300.jpeg 450w" sizes="(max-width: 1132px) 100vw, 1132px" /></p>
<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪಿ.ಎಚ್ ಪ್ರಕಾಶ್ ಶೆಟ್ಟಿ ನೊಚ್ಚ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಘವು ನಿರಂತರವಾಗಿ ಬೆಂಬಲ ನೀಡುತ್ತಿದೆ. ಶಶಿಯಣ್ಣನ ಭರವಸೆಯಿಂದಾಗಿ ಬೆಳ್ತಂಗಡಿ ಬಂಟರ ಸಂಘದ ಅಭಿವೃದ್ಧಿಯಾಗಿದೆ. ಅವರ ಆಶಯದಂತೆ ಮುಂದಿನ ವರ್ಷದಿಂದ ಬಂಟರ ಸಮಾಜದ ವಿದ್ಯಾರ್ಥಿಗಳ ಜತೆಗೆ ಇತರ ಸಮಾಜದ ವಿದ್ಯಾರ್ಥಿಗಳಿಗೂ ಶೇ. 10ರಷ್ಟು ಪ್ರೋತ್ಸಾಹ ಧನ ನೀಡಿ ಪ್ರೋತ್ಸಾಹಿಸಲಾಗುವುದು. ಶಿಕ್ಷಣದ ಮೂಲಕ ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಸಂಘದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.</p>
<p>ವಿದ್ಯಾರ್ಥಿನಿಧಿ ಸಂಚಾಲಕ ಅಜಿತ್ ಜಿ ಶೆಟ್ಟಿ ವಾಸ್ತವಿಕವಾಗಿ ಮಾತನಾಡಿ, ಕಳೆದ 46 ವರ್ಷಗಳಿಂದ ದಾನಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಪ್ರೋತ್ಸಾಹ ನೀಡಲಾಗುತ್ತಿದೆ ಈ ಬಾರಿ ಒಟ್ಟು 326 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಮಾಜದೊಂದಿಗೆ ಹಾಗೂ ತಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದರ ಜತೆಗೆ ಅವರ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುವುದು ವಿದ್ಯಾರ್ಥಿನಿಧಿಯ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿ ನಿಧಿಯಿಂದ ನೆರವು ಪಡೆದು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿದ ಬಳಿಕ ಅನೇಕ ವಿದ್ಯಾರ್ಥಿಗಳು ಮರಳಿ ವಿದ್ಯಾರ್ಥಿನಿಧಿಗೆ ಸಹಕಾರ ನೀಡುತ್ತಿರುವುದು ಗಮನಾರ್ಹ ಮತ್ತು ಸಂತಸದ ಸಂಗತಿಯಾಗಿದೆ ಎಂದರು.</p>
<p>ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಕಳ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ನಿಕಟಪೂರ್ವ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ. ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಪಾಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ಯುವ ವಿಭಾಗದ ಅಧ್ಯಕ್ಷ ಅಜಯ್ ಜೆ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಸುಧ ಪಿ ಶೆಟ್ಟಿ ಉಪಸ್ಥಿತರಿದ್ದರು. ಶ್ರೇಯಾ ಪಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಧನ್ಯವಾದವಿತ್ತರು.</p>
<p>The post <a href="https://buntsnow.com/archives/38397">ಬೆಳ್ತಂಗಡಿ ಬಂಟರ ಸಂಘದಿಂದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
	</channel>
</rss>
