
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಹಕರಿಸಿದ ಸಮಾಜ ಸೇವಕ, ಆಸ್ಪೆನ್ ಕಂಪನಿ ಮುಖ್ಯಸ್ಥ ಹಾಗೂ ಉಡುಪಿ ಕುಂತಳನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿಯವರನ್ನು ಶ್ರೀ ಕ್ಷೇತ್ರ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಕೆ ಪ್ರಕಾಶ್ ಶೆಟ್ಟಿಯವರು ಮತ್ತಿತರ ಗಣ್ಯರ ಸಮಕ್ಷಮ ಸನ್ಮಾನಿಸಿ ಅಭಿನಂದಿಸಿದರು. ಅಶೋಕ್ ಕುಮಾರ್ ಶೆಟ್ಟಿಯವರು ತಮ್ಮ ಆಸ್ಪೆನ್ ಸಂಸ್ಥೆಯಿಂದ 25 ಲಕ್ಷ ರೂ ದೇಣಿಗೆ ನೀಡಿದ್ದಲ್ಲದೇ, ಎಸ್.ಇ.ಝಡ್ ನ ವಿವಿಧ ಕಂಪನಿಗಳಿಂದ ಹಾಗೂ ಸ್ಟೀಲ್ ಸ್ಟ್ರಾಂಗ್ ಕಂಪನಿಯ ಸಿಎಂಡಿ ರಮೇಶ್ ಶೆಟ್ಟಿಯವರಿಂದ ರೂ. 5 ಲಕ್ಷ, ಜೈ ಹಿಂದ್ ಕಂಪನಿಯ ಎಂಡಿ ದಿವ್ಯ ಜೈನ್ ರವರಿಂದ ರೂ. 5 ಲಕ್ಷ, ಎಂ11 ಕಂಪನಿಯ ಅನಿಲ್ ಅವರಿಂದ ರೂ. 2 ಲಕ್ಷ ದೇಣಿಗೆ ಸಂಗ್ರಹಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.



























































































































