ಮೂಡುಬಿದಿರೆ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮವು ಜುಲೈ 02 ರಂದು ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ ನಲ್ಲಿ ನೆರವೇರಿತು. ಪದಗ್ರಹಣ ಅಧಿಕಾರಿಯಾಗಿ ಪೂರ್ವ ರಾಜ್ಯಪಾಲರಾದ ಲಯನ್ ವಸಂತ್ ಕುಮಾರ್ ಶೆಟ್ಟಿಯವರು ಭಾಗವಹಿಸಿದ್ದರು. 2025 – 26 ರ ಸುವರ್ಣ ಮಹೋತ್ಸವದ ಅವಧಿಗೆ ಅಧ್ಯಕ್ಷರಾಗಿ ಶಿವಪ್ರಸಾದ್ ಹೆಗ್ಡೆ ಕಣಂಜಾರು ಅಧಿಕಾರವನ್ನು ಸ್ವೀಕರಿಸಿದರು. ಕಾರ್ಯದರ್ಶಿಗಳಾಗಿ ಲಯನ್ ಓಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿಗಳಾಗಿ ಲಯನ್ ಹರೀಶ್ ತಂತ್ರಿ, ಲಿಯೋ ಕ್ಲಬ್ಬಿನ ಅಧ್ಯಕ್ಷರಾಗಿ ಪ್ರಖ್ಯಾತ್ ಹೆಗ್ಡೆ, ಕಾರ್ಯದರ್ಶಿಗಳಾಗಿ ಸ್ವಯಂ ಎಸ್ ಪೂಜಾರಿ, ಕೋಶಾಧಿಕಾರಿಗಳಾಗಿ ಶಶಾಂಕ್ ಅಧಿಕಾರವನ್ನು ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ಬೋನವೆಂಚರ್ ಮೆನೇಜಸ್, ಪ್ರಾಂತ್ಯಾಧ್ಯಕ್ಷರಾದ ಲಯನ್ ಜಗದೀಶ್ಚಂದ್ರ ಡಿ.ಕೆ, ವಲಯಾಧ್ಯಕ್ಷರಾದ ಲಯನ್ ಜೋಸ್ಸಿ ಮೆನೇಜಸ್, ಲಯನ್ ಮೇಲ್ವಿನ್ ಸಲ್ದಾನ್ಹ, ಮಾಜಿ ಕಾರ್ಯದರ್ಶಿಗಳಾದ ವಿನೋದ್ ಡೇಸಾ ಕೋಶಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಪ್ರಾಂತ್ಯದ ಎಲ್ಲಾ ಎಂಟು ಕ್ಲಬ್ ಗಳ ಅಧ್ಯಕ್ಷರುಗಳು ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.