ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಉದಯ್ ಶೆಟ್ಟಿಯವರ ಅಭಿಮಾನಿ ಬಳಗ ಜಂಟಿಯಾಗಿ ಸಮಾಜಸೇವಕ, ಉದ್ಯಮಿ ಉದಯ್ ಶೆಟ್ಟಿ ಮುನಿಯಾಲು ಇವರ ಹುಟ್ಟುಹಬ್ಬದ ಪ್ರಯುಕ್ತ ಜೂನ್ 08 ರಂದು ಕಾರ್ಕಳ ಬಂಡಿಮಠ ಶ್ರೀ ಮೂಡುಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತ್ತು.

ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾದನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಮುಸ್ಲಿಂ ಧರ್ಮಗುರುಗಳಾದ ಮೌಲಾನ ಹಪೀಜ್, ಅತ್ತೂರು ಚರ್ಚ್ ಸಹಾಯಕ ಧರ್ಮಗಳಾದ ರೆ.ಫಾ. ರಾಬಿನ್ ಸಾಂತ್ಮಯರ್ ಹಾಗೂ ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಪವರ್ ಟಿವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ, ಕಾರ್ಕಳ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶುಭದ್ ರಾವ್, ಗೋಪಿನಾಥ ಭಟ್, ಜಿಲ್ಲಾ ವಕ್ತಾರರಾದ ಬಿಪಿನ್ ಚಂದ್ರಪಾಲ್ ನಕ್ರೆ, ಸುರೇಂದ್ರ ಶೆಟ್ಟಿ ಸಹನಾ, ಅಜಿತ್ ಹೆಗ್ಡೆ ಮಾಳ, ಸುಧಾಕರ ಕೋಟ್ಯಾನ್, ಸುಭಿತ್ ಎನ್.ಆರ್, ನವೀನ್ ಅಡ್ಯಾಂತಾಯ, ಉದಯ ಶೆಟ್ಟಿ ಕುಕ್ಕುಂದೂರು, ರಮೇಶ್ ಕಾಂಚನ್ ಕುಕ್ಕುಂದೂರು, ಕೃಷ್ಣ ಶೆಟ್ಟಿ ಬಜಗೋಳಿ, ಜ್ಯೋತಿ ಹೆಬ್ಬಾರ್, ನಮಿತಾ ಶೆಟ್ಟಿ, ಭಾನು ಬಾಸ್ಕರ ಪೂಜಾರಿ, ಹರೀಶ್ ಶೆಟ್ಟಿ ಪಡುಕುಡೂರು, ರಾಘವ ದೇವಾಡಿಗ, ಸೂರಜ್ ಶೆಟ್ಟಿ ನಕ್ರೆ, ಯೋಗೀಶ್ ಆಚಾರ್ಯ ಇನ್ನಾ, ಸಂತೋಷ ದೇವಾಡಿಗ ಬೋಳ, ಮಂಜುನಾಥ ಜೋಗಿ, ಕುಶ ಮೂಲ್ಯ, ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್ ಹಾಗೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.