
ಮಿಸ್ ಯೂನಿವರ್ಸ್ ಕರ್ನಾಟಕದ (Ms Universe Karnataka 2026) ಪ್ರಾದೇಶಿಕ ವ್ಯಾಪ್ತಿಯ ಸೌಂದರ್ಯ ಸ್ಪರ್ಧೆಯು ಏಪ್ರಿಲ್ 3ರಂದು ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ ನಡೆದಿದ್ದು, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ, ಉದ್ಯಮಿ, ಸಮಾಜಸೇವಕಿ, ಮಹಿಳಾರತ್ನ ಶ್ರೀಮತಿ ಕಾಂತಿ ಶೆಟ್ಟಿಯವರ ಸುಪುತ್ರಿ ಲೇಖನ ಹೆಗ್ಡೆಯವರು ‘ಮಿಸ್ ಯೂನಿವರ್ಸ್ ಕರ್ನಾಟಕ – 2026’ ಆಗಿ ಹೊರಹೊಮ್ಮಿದ್ದಾರೆ.



























































































































