<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಅಂಕಣ Archives - www.buntsnow.com | web-based media For Bunts Community</title>
	<atom:link href="https://buntsnow.com/archives/category/%e0%b2%85%e0%b2%82%e0%b2%95%e0%b2%a3/feed" rel="self" type="application/rss+xml" />
	<link>https://buntsnow.com/archives/category/ಅಂಕಣ</link>
	<description>Chief Editor Ranjith Kumar Shetty Mangalore  - Bunts Portal - Website</description>
	<lastBuildDate>Sun, 16 Aug 2026 13:42:31 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://buntsnow.com/wp-content/uploads/2025/09/BUNTS-NOW-1.png</url>
	<title>ಅಂಕಣ Archives - www.buntsnow.com | web-based media For Bunts Community</title>
	<link>https://buntsnow.com/archives/category/ಅಂಕಣ</link>
	<width>32</width>
	<height>32</height>
</image> 
	<item>
		<title>ನಾಗೆ-ನೀರ್-ಬನೊ; ಒಂಜಿ ಪಿರಾಕ್‌ದ ಪಸಂದ್ರ ಗೇನೊ</title>
		<link>https://buntsnow.com/archives/37813</link>
		
		<dc:creator><![CDATA[Bunts Now]]></dc:creator>
		<pubDate>Sun, 16 Aug 2026 13:41:02 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37813</guid>

					<description><![CDATA[<p>ತುಳುನಾಡ ತುಳುಜನೊ ಬದ್ಕ್‌ಡ್ ನಾಗೆ ವಿಶೇಷವಾದ್ ತಾನೊ ಪಡೆಯಿನೆಟ್ ಮುಲ್ಪ ನಾಗಾರಾಧನೆಗ್ ಮಾಮಲ್ಲ ತಾನೊ. ದೈವೊ ದೇವೆರೆಡ್ದ್ ದುಂಬು ನಾಗನ್ ಸುಗಿತ್, ತನು ತಂಬಿಲೊ, ಪನಿಯಾರೊ ಬಲಸ್‌ದ್ ದುಂಬು ಪೋಪಿನಕ್ಲ್ ತುಳುವೆರ್. ಪುಡೆಮಿಯಪ್ಪೆನ ಮಟ್ಟೆಲ್‌ಡ್ ಕಣ್ಣ್‌ಗ್ ತೋಜುನ, ಪರಪುನ ನಾಗೆನೇ ಜೂವೊದ ದೇವೆರ್ ಪನ್ಪಿ ನಂಬೊಲಿಗೆ ಆನಿಡ್ದ್ ಇನಿಮುಟ್ಟಲಾ ಒರಿದ್ ಬೈದಿನೊಟ್ಟು ಬನೊ, ಕಲ್ಲ್, ಕಾಡ್, ನೀರ್‌ಲೆಡ್ ನಾಗನ ನಿಲೆ ತೂದು ನಾಗನ ಆರಾಧನೆ ನಡಪಾವೊಂದು ಬೈದೆರ್. ನಾಗನ್ ಬಜೀ ಉಚ್ಚುದ ಒರುಟು ತೂವಂದೆ ಬೂಮಿ, ಬರ್ಸೊ, [...]</p>
<p>The post <a href="https://buntsnow.com/archives/37813">ನಾಗೆ-ನೀರ್-ಬನೊ; ಒಂಜಿ ಪಿರಾಕ್‌ದ ಪಸಂದ್ರ ಗೇನೊ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ತುಳುನಾಡ ತುಳುಜನೊ ಬದ್ಕ್‌ಡ್ ನಾಗೆ ವಿಶೇಷವಾದ್ ತಾನೊ ಪಡೆಯಿನೆಟ್ ಮುಲ್ಪ ನಾಗಾರಾಧನೆಗ್ ಮಾಮಲ್ಲ ತಾನೊ. ದೈವೊ ದೇವೆರೆಡ್ದ್ ದುಂಬು ನಾಗನ್ ಸುಗಿತ್, ತನು ತಂಬಿಲೊ, ಪನಿಯಾರೊ ಬಲಸ್‌ದ್ ದುಂಬು ಪೋಪಿನಕ್ಲ್ ತುಳುವೆರ್. ಪುಡೆಮಿಯಪ್ಪೆನ ಮಟ್ಟೆಲ್‌ಡ್ ಕಣ್ಣ್‌ಗ್ ತೋಜುನ, ಪರಪುನ ನಾಗೆನೇ ಜೂವೊದ ದೇವೆರ್ ಪನ್ಪಿ ನಂಬೊಲಿಗೆ ಆನಿಡ್ದ್ ಇನಿಮುಟ್ಟಲಾ ಒರಿದ್ ಬೈದಿನೊಟ್ಟು ಬನೊ, ಕಲ್ಲ್, ಕಾಡ್, ನೀರ್‌ಲೆಡ್ ನಾಗನ ನಿಲೆ ತೂದು ನಾಗನ ಆರಾಧನೆ ನಡಪಾವೊಂದು ಬೈದೆರ್. ನಾಗನ್ ಬಜೀ ಉಚ್ಚುದ ಒರುಟು ತೂವಂದೆ ಬೂಮಿ, ಬರ್ಸೊ, ಫಲವಂತಿಕೆ, ಬೆನ್ನಿ ಬದ್ಕ್‌ದ ಒಂಬುಗೆ ಬೊಕ್ಕ ಪ್ರಕೃತಿದ ರಚ್ಚನೆದ ಸಂಕೇತವಾದ್ ತೂಪುನ ಪರಂಪರೆ ನಮ್ಮವು. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚೆಮಿಗ್ ಅತಂಡ ಆಟಿದ ಅಮಾಸೆ ಕರಿದ್ ಐನನೇ ದಿನ ಆಚರಿಪುನ ಪರ್ಬನೇ ನಾಗರ ಪಂಚಮಿ. ಉಂದು ಬಜೀ ನಾಗಗ್ ಪೂಜೆ ಮಲ್ಪುನ ಪರ್ಬೊ ಆವಂದೆ ತುಳುವೆರೆ ಪಾಲ್‌ಗ್ ಫಲವಂತಿಕೆಗ್, ಜೋಕುಲೆ ಆರೋಗ್ಯಗ್, ಕುಟುಮೊದ ಒಂಬುಗೆದ ಎಡ್ಡೆಪುಗು, ಸಂತಾನೊದ ಒರಿಪುಗು ನಾಗನ್ ಪ್ರಾರ್ಥಿಪುನ, ಸುಗಿತ್ ಆರಾಧಿಪುನ ಪರಂಪರೆ ಆದುಂಡು. ನಾಗರ ಪಂಚೆಮಿದ ಇಸೇಸ ಬೊಕ್ಕ ಬಾರೀ ಪೊರ್ಲುದ ಅಂಶ ಪಂಡ ಮರಿತ್ತ ಬೆನ್ನಿ ಬದ್ಕ್ ಬೊಕ್ಕ ಪಸಂದ್ರದೊಟ್ಟುದ ಸಮ್ಮಂದೊ. ಉಚ್ಚು, ಕೇರಿಲ್ ಕಂಡೊ, ಬೈಲ್‌ಡ್ ಇಪ್ಪುನ ಎಲಿ ಪೆರ್ಗುಡೆಲೆನ್ ನಿಯಂತ್ರಿಪುನ ಒರುಟು ಬೆನ್ನಿಗ್ ಪರೋಕ್ಷವಾದ್ ಬೆರಿಬಲೊ ಆದ್ ಸಕಾಯೊ ಮಲ್ಪುವೊ. ಅಂಚನೆ ಬೆನ್ನಿದಾಯಗ್ ಪ್ರಕೃತಿದ ಸಮತೋಲನದ ಒಂಜಿ ಭಾಗ ಆದ್ ನೆಗಪುನ ಜೂವೊರಾಸಿನ್ ಗೌರವಿಪುನ ಬಾಮೊ ಮುಲ್ಪ ನೆಗಪುಂಡು. ಮಣ್ಣ್‌ದೊಟ್ಟಿಗೆ ಒಂಬುಗೆದ ಬದ್ಕ್ ನಡಪಾವೊಂದು ಇಪ್ಪುನ ಉಚ್ಚು ಬಜೀ ಪೋಡಿಗೆದ ಒರುವಾದ್ ಮಾತ್ರ ತೋಜುನ ಜೀವಿ ಅತ್ತ್, ಅವು ಜೂವೊ ವೈವಿದ್ಯತೆದ ಒಂಜಿ ಪಾಲ್ ಪನ್ಪಿನವು ಈ ಆಚರಿಪುದ ಪಿರವುದ ನಂಬುಗೆದೊಂಬಗೆ.</p>
<p><img fetchpriority="high" decoding="async" class="alignnone size-full wp-image-37815" src="https://buntsnow.com/wp-content/uploads/2026/08/WhatsApp-Image-2026-08-16-at-7.05.05-PM.jpeg" alt="" width="1200" height="854" srcset="https://buntsnow.com/wp-content/uploads/2026/08/WhatsApp-Image-2026-08-16-at-7.05.05-PM.jpeg 1200w, https://buntsnow.com/wp-content/uploads/2026/08/WhatsApp-Image-2026-08-16-at-7.05.05-PM-300x214.jpeg 300w, https://buntsnow.com/wp-content/uploads/2026/08/WhatsApp-Image-2026-08-16-at-7.05.05-PM-1024x729.jpeg 1024w, https://buntsnow.com/wp-content/uploads/2026/08/WhatsApp-Image-2026-08-16-at-7.05.05-PM-768x547.jpeg 768w, https://buntsnow.com/wp-content/uploads/2026/08/WhatsApp-Image-2026-08-16-at-7.05.05-PM-150x107.jpeg 150w, https://buntsnow.com/wp-content/uploads/2026/08/WhatsApp-Image-2026-08-16-at-7.05.05-PM-450x320.jpeg 450w" sizes="(max-width: 1200px) 100vw, 1200px" /></p>
<p>ಪುರಾಣೊದ ಒರುಟು ತೂಪುನಾಂಡ ನಾಗನ್ ವಿಶೇಷ ತಾಣಮಾನ ಕೊರ್‌ದ್ ದೇವೆರಾದ್ ತೂವೊಂದು ಬೈದೆರ್. ಆದಿಶೇಸೆ, ಅನಂತೆ, ವಾಸುಕಿ, ತಕ್ಷಕೆ, ಕಾರ್ಕೋಟಕೆ ದುಂಬಾಯಿ ನಾಗೆರೆ ಉಲ್ಲೇಕೊ ಪುರಾಣೊಲೆಡ್ ಉಂಡು. ನಾರಾಯಿನ ದೇವೆರೆ ಶೇಷಮಂಚ, ಈಸರನ ಮೆಯಿತ ನಾಗೆರ್, ಸಮುದ್ರಮಥನಡ್ ವಾಸುಕಿನ ಪಾಲ್ ಉಂದು ಮಾತ ನಾಗಗ್ ಭಾರತೀಯ ಧಾರ್ಮಿಕ ಪರಂಪರೆಡ್ ತಿಕಿನ ಮಲ್ಲ ಪಾಲ್‌ನ್ ನೆಗಪಾವುನ ಒಟ್ಟುಡು ತುಳುನಾಡ್ದ ಉದಿಪುದ ಒಟ್ಟುಡುಲಾ ನಾಗನ ಪುದರ್ ನೆಗಪುಂಡು. ಕೆಲವೊಂಜಿ ವಿದ್ವಾಂಸೆರೆನ ಅಧ್ಯಯನದ ಪಿರ್ಕಾರ ನಾಗೆ ಪನ್ಪಿನ ಪದೊ ನೀರ್, ನೀರ್‌ದ ಮೂಲ, ನೀರ್‌ದ ಒಸರ್, ನೀರ ಪರಿಪು, ನೀರ ಸೆಳೆ ಪನ್ಪಿನ ಸಮ್ಮಂದ ಕೋಪುಂಡು. ಅಂಚಾದ್ ನಾಗಗ್ಲಾ ನೀರ್‌ಗ್ಲಾ ಇಪ್ಪುನ ಸಮ್ಮಂದೊ ಎಚ್ಚಾದ್ ಪೌರಾಣಿಕ, ಸಾಂಸ್ಕೃತಿಕ, ಜಾನಪದೀಯ ಬೊಕ್ಕ ಸಂಕೇತಾತ್ಮಕ ಪರಂಪರೆದ ಒರುಟು ನೆಗಪುಂಡು. ಭಾರತೀಯ ಪರಂಪರೆಡ್ ನಾಗನ್ ಸಾಮಾನ್ಯವಾದ್ ಭೂಗರ್ಬೊಡಿಪ್ಪುನ ನೀರ್‌ದ ಸೆಳೆತ ಕಾಪಡೆರ್ ಪನ್ಪಿನೊಟ್ಟುಡು ನೀರ ನಿಧಿ ಇಪ್ಪುನ ಜಾಗೆಲೆಡ್ ಒಂದೊಂದಿ ನಾಗರಾಧನೆಗ್ ಎಚ್ಚ ಮಹತ್ವ ಉಂಡು. ನೆಕ್ಕ್ ಕಾರಣ ಉಚ್ಚುಲು ಎಚ್ಚ ನಸೆ ಇಪ್ಪುನಲ್ಪ, ಪಸೆ ದಿಂಜಿ ಪುಂಚೊಡು, ಕಾಡ್ ಬಲ್ಲೆಲ್ ಇಪ್ಪುನಲ್ಪ, ಮರತ್ತ ಬೇರ್‌ದ ಅಡಿ, ಮಾಟೆ, ಬಾಂಡಿಲ್ ಪಂದ್ ನೀರ್‌ದ ಬರಿಟ್ ಇಪ್ಪುನವು. ನಾಗೆ ಬೂಮಿದುಲಾಯಿ ಸಂಚರಿಪುನ ಜೀವಿ. ಅಯಿಕ್ಕ್ ಇಂಬು ಕೊರ್ಪಿಲೆಕೊ ಪುರಾಣೊದ ಪಿರ್ಕಾರ ನಾಗಲೋಕೊ ನೀರ ಅಡಿಮೆಯಿಟ್ ಉಂಡು ಪನ್ಪಿನೊಟ್ಟು ಪೇರ ಕಡಲ ನಡುಟು ಆದಿಶೇಷೆ, ಯಮುನಾ ಸುದೆ ಮಡುಟು ಕಾಳಿಂಗೆ ಇತ್ತಿನ ನೆಕ್ಕ್ ಬಲೊ ಕೊರ್ಪುಂಡು.</p>
<p><img decoding="async" class="aligncenter wp-image-37806 size-full" src="https://buntsnow.com/wp-content/uploads/2026/08/bunts-new1.jpeg" alt="" width="396" height="359" srcset="https://buntsnow.com/wp-content/uploads/2026/08/bunts-new1.jpeg 396w, https://buntsnow.com/wp-content/uploads/2026/08/bunts-new1-300x272.jpeg 300w, https://buntsnow.com/wp-content/uploads/2026/08/bunts-new1-150x136.jpeg 150w" sizes="(max-width: 396px) 100vw, 396px" /></p>
<p>ತುಳುಟ್ಟು ನಾಗನ್ &#8216;ಮರಿ&#8217; ಪಂದ್ ಪನ್ಪೆರ್, ಬರ್ಸೊದ ಕಾಲೊನು &#8216;ಮರಿಯಾಲೊ&#8217; ಪಂದ್ ಪನ್ಪೆರ್. ಕೆಲವು ಅಧ್ಯಯನಕಾರೆರೆ ಪಿರ್ಕಾರ &#8216;ಮರಿ&#8217; ಬೊಕ್ಕ &#8216;ಮರಿಯಾಲೊ&#8217; ಪದೊ ಪರಂಪರೆಡ್ ನೀರ್, ಪಸೆ ಕಲ್ಪನೆದೊಟ್ಟುಡು ಸಮ್ಮಂದೊ ಉಂಡು ಪಂದ್ ಪನ್ಪುಂಡು. ನೆಕ್ಕ್ ಕಾರಣ ಮರಿ ಸಂಪು ಮೆಯಿತ ಸೀತೊ ನೆತ್ತೆರ ಜೀವಿ ಪಂದ್, ಅಂಚನೆ ಮರಿಯಾಲೊ ಪುಡೆಮಿನ್ ನಾಗನ ಮೆಯಿತಂಚ ಸಂಪು ಮಲ್ಪುಂಡು ಪನ್ಪಿ ಅರ್ತೊಡು ಗೋಡಿಪುವೆರ್. ಅವೆಕ್ ಇಂಬು ಕೊರ್ಪಿಲೆಕ ಕಾಡ ಜನೊಕುಲು ನಾಗಗ್ ಮೂರಿಲೆಡ್ ನೀರ್ ದೀದ್ ಪೂಜಿಪುವೆರ್. ತುಳುವೆರೆ ನಾಗಬೀದಿ, ನಾಗನಿಧಿ, ನಾಗನಿಲೆ, ನಾಗಬನೊ, ನಾಗನಡೆ ಮಾತಲಾ ಉಚ್ಚು ಅತಂಡ ಮರಿಕ್ ಸಮ್ಮಂದಪಟ್ಟಿನ ಒರುಟು ತೋಜಂಡಲಾ ಉಂದು ಪುಡೆಮಿದ ಉಲಮರ್ಗಿಲ ನೀರ ಪರಿಪು ಒರಿಪುದ ಚಿಂತನೆಲ್ ಆದ್ ಹಿರಿಯೆರೆ ಗೇನೊಡು ಮೂಡ್ದ್ ನಮ್ಮಾಡೆಮುಟ್ಟ ಪರತೊಂದು, ಪರಿತೊಂದು ಬತ್ತ್‌ನೆಡೇ ಇನಿ ತುಳುನಾಡೊರ್ಮೆ ಅಲ್ಪಲ್ಪ ತೋಡು, ತಾರ್, ಸುದೆಕ್ಲೆನಂಚಿ ನೀರ ಪರಿಪುಲು ಒರಿದುಲ್ಲ ಪಂಡಲಾ ತಪ್ಪಾವಂದ್. ಅಂಚಾದ್ ನಾಗೆ, ಬೂಮಿ, ನೀರ್, ಬರ್ಸ, ಫಲವಂತಿಕೆ ಪನ್ಪಿನ ಒಂಜಿ ಸಾಂಸ್ಕೃತಿಕ ಸರಪ್ಪೊಲಿ ಉಟಾರ್ನೆ ಆತ್ಂಡ್ ಪಂದ್ ಪನೊಲಿ..!</p>
<p>ಪರಿಸರ ಸಂರಕ್ಷಣೆದ ಪಾಟೊನು ನಮ್ಮ ಹಿರಿಯೆರ್ ಬಾಯಿಡ್ ಪನೊಂದು ಕುಲ್ಲಂದೆ ಆಚರಿಪುಡು ತೋಜಯೆರ್. ನಾಗ ಪೂಜನೆದ ಒರುಟು ನಾಗನ್ ಒರಿತೆರ್, ನಾಗ ಬನೊನು ಉಂಡು ಮಲ್ತೆರ್, ಮರ ಬುಲೆಪ್ಪಾಯೆರ್, ಮಣ್ಣ ಪಸೆ ಕಾತೆರ್, ನೀರ ಒಸರ್ ಸೆಳೆ ಒರಿತ್ ಪಸಂದ್ರದ ಕಾಪುದಂಚಿ ಪಜ್ಜೆ ಪಾಡಿಯೆರ್. ಇತ್ತೆದ ಕಾಲೊದ ನಾಗಾರಾಧನೆ ಕಲ್ಲ ನಾಗಗ್ ಪೇರ್ ಮೈತ್ ಪೂಜಿಪುವೆರ್, ನಿಜೊತ ಮರಿನ್ ತೂಂಡ ಕಡ್ಪು, ಹಾಕ್, ನೋಪು ಕೆರ್ ಪನ್ಪೆರ್ ಪನ್ಪಿ ಕಬಿನುಡಿತಂಚನೇ ಆತ್ಂಡ್. ಕಲ್ಲ ನಾಗಗ್ ಪೂಜಿಪುನ ಸಂಸ್ಕೃತಿ ತುಳುವ ಬನೊ, ಕಾಡ ನಾಗಾರಾಧನೆನ್ ನಿಂಗ್‌ದ್ ನೀರ್ ಪರ್ತ್ಂಡ್ ಪಂಡಲಾ ತಪ್ಪಾವಂದ್. ನಾಗನ್ ಪೂಜಿಪೆರೆ ದುಂಬು ನಾಗ ಸಂತತಿನ್ ಒರಿಪುನ ಮಾಮಲ್ಲ ಜಬದರಿ ನಮ್ಮವು. ಉಚ್ಚು ತೋಜಿನ್ನೇ ಕೆರ್ಪುನ ಬದಲ್ ಅಯಿನ್ನ್ ಕಾತ್‌ದ್, ಜೋಕೆಡ್ ಬದ್ಕುನ ಜಾಗೆಡ್ ಬುಡೊಡು. ನಾಗಬನ ಒರಿತ್, ಕಾಡ್‌ದಂಚಿ ನೈಸರ್ಗಿಕ ನಾಗನಿಲೆನ್ ಒರಿಪೊಡು. ಉಂದುವೇ ನಾಗರಾಧನೆದ ಆಶಯೊದ ನಿಜವಾಯಿನ ಪಜ್ಜೆ. ಪಂಡ ನಾಗರ ಪಂಚಮಿ ನಮಕ್ ಪ್ರಕೃತಿನ್ ಪೂಜಿಪುನ ಸಂಸ್ಕೃತಿಡ್ದ್ ಪಸಂದ್ರೊನು ಒರಿಪುನ ಪರತಿರಿತಂಚಿ ಪಜ್ಜೆ ಪಾಡುನ ಒಸಗೆ ಕೊರ್ಪುಂಡು. ನಮ್ಮ ಪೆರಿಯಕ್ಲ್ ನಮಕ್ಕ್ ನಾಗನ್ ಪೂಜಿಪು ಪಂದ್ ಮಾತ್ರ ಪನ್ತ್‌ಜೆರ್. ನಾಗ ಬನೊ ಒರಿಪು, ನಾಗೆ ಇಪ್ಪಿ ನೆಲನ್ ಒರಿಪು, ನೀರ ಒಸರ್ ಒರಿಪು, ಅಪಗನೇ ನಿನ್ನ ಬದ್ಕ್‌ದ ಪರಿಪು ಒರಿಯುಂಡು ಪಂದ್ ಒಂಜೇ ಆಚರಿಪುಡು ತೋಜದ್ ಕೊರಿಯೆರ್. ಪರಿಸರ ರಚ್ಚನೆದ ಪಾತೆರೊಡು ಪೊರ್ತು ಕಳೆವಂದೆ ಇಂಚಿನ ಆಚರಿಪುಡು ಬದ್ಕ್ ಕರಿತ್, ಪೊರ್ಲುದ ಪಸಂದ್ರನ್ ಒರಿತಿ ನಮ್ಮ ಪೆರಿಯ ತರೆಕ್ಲೆಗ್ ಸೊಲ್ಮೆ ಸಂದಾವು ನಿಲೆಟಾಂಡಲಾ ನಮ ಬನೊ ಒರಿಂಡ ಮರ ಒರಿಯುಂಡು, ಮರ ಒರಿಂಡ ಮಣ್ಣ್ ಒರಿಯುಂಡು, ಮಣ್ಣ್ ಒರಿಂಡ ನೀರ್ ಒರಿಯುಂಡು, ನೀರ್ ಒರಿಂಡ ಜೂವೊರಾಸಿಲ್ ಒರಿಯುಂಡು, ಜೂವೊರಾಸಿಲ್ ಒರಿಂಡ ಪಸಂದ್ರದ ಸಮತೂಕೊ ಒರಿಯುಂಡು, ಪಸಂದ್ರದ ಸಮತೂಕೊ ಒರಿಂಡ ನಮ್ಮ ಬದ್ಕ್ ಒರಿಯುಂಡು, ಬಲ್ಕಟ್ಟ್ ಪೊರ್ಲುಡು ಕರಿಯುಂಡು ಪಂದ್ ತೆರಿದ್ ನಡತ್‌ನಾಡೆ ನಾಗಾರಾಧನೆದ, ನಾಗರ ಪಂಚೆಮಿದ ಆಚರಿಪುಗು ನಿಜ ಅರ್ತೊದ ತಿರಿ ಗೋಡಿದ್ ಬದ್ಕ್ ಬಂಗಾರಾಪುನ ಒಟ್ಟುಡು ನಾಡ್ ಪೊರ್ಲುಡು ಬೆಳಗು. ತುಳುನಾಡ ಐಸಿರೊ ಒರಿಯು.</p>
<p>ಬರವು : ಶ್ರೀಶಾವಾಸವಿ ತುಳುನಾಡ್</p>
<p>The post <a href="https://buntsnow.com/archives/37813">ನಾಗೆ-ನೀರ್-ಬನೊ; ಒಂಜಿ ಪಿರಾಕ್‌ದ ಪಸಂದ್ರ ಗೇನೊ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಮಳೆಗಾಲದಲ್ಲಿ ಮಂಗಳೂರು</title>
		<link>https://buntsnow.com/archives/37785</link>
		
		<dc:creator><![CDATA[Bunts Now]]></dc:creator>
		<pubDate>Fri, 14 Aug 2026 12:36:55 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37785</guid>

					<description><![CDATA[<p>ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕಿಂಗ್, ಬ್ಲಾಕ್ ಸಮಸ್ಯೆಗಳು ಇದು ಮಂಗಳೂರಿನ ಹಲವು ವರ್ಷಗಳ ನಿತ್ಯದ ಸಮಸ್ಯೆಯೇ!. ಅದರಲ್ಲೂ ಮಳೆಗಾಲ ಬಂತು ಎಂದರೆ ಈ ಸಮಸ್ಯೆ ತಾರಕಕ್ಕೆ ಏರುತ್ತದೆ ಮತ್ತು ಇದೊಂದು ನರಕ ಯಾತನೆ ಮತ್ತು ಅಭಿವೃದ್ಧಿಯ ನಿಜವಾದ ಪರೀಕ್ಷೆಯೇ!. ಮಂಗಳೂರು ಎಂದರೆ ದೇವಸ್ಥಾನ, ದೈವಸ್ಥಾನ, ಹಾಗೆಯೇ ಎಜುಕೇಶನ್ ಹಬ್, ಪ್ರಕೃತಿ ಸೌಂದರ್ಯ, ಹಸಿರು ಪರಿಸರ, ಸಮುದ್ರ ತೀರ ಮತ್ತು ಉತ್ತಮ ವಿಚಾರಗಳ ಆಸಕ್ತಿದಾಯಕ ಲವಲವಿಕೆಯಿಂದ ಕೂಡಿದ ಸಾಂಪ್ರದಾಯಿಕ ಮತ್ತು ಸಂಪತ್ಭರಿತ ನಗರ. ಇದೆಲ್ಲವೂ ಸತ್ಯ. ಆದರೆ ಈಗ [...]</p>
<p>The post <a href="https://buntsnow.com/archives/37785">ಮಳೆಗಾಲದಲ್ಲಿ ಮಂಗಳೂರು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕಿಂಗ್, ಬ್ಲಾಕ್ ಸಮಸ್ಯೆಗಳು ಇದು ಮಂಗಳೂರಿನ ಹಲವು ವರ್ಷಗಳ ನಿತ್ಯದ ಸಮಸ್ಯೆಯೇ!. ಅದರಲ್ಲೂ ಮಳೆಗಾಲ ಬಂತು ಎಂದರೆ ಈ ಸಮಸ್ಯೆ ತಾರಕಕ್ಕೆ ಏರುತ್ತದೆ ಮತ್ತು ಇದೊಂದು ನರಕ ಯಾತನೆ ಮತ್ತು ಅಭಿವೃದ್ಧಿಯ ನಿಜವಾದ ಪರೀಕ್ಷೆಯೇ!. ಮಂಗಳೂರು ಎಂದರೆ ದೇವಸ್ಥಾನ, ದೈವಸ್ಥಾನ, ಹಾಗೆಯೇ ಎಜುಕೇಶನ್ ಹಬ್, ಪ್ರಕೃತಿ ಸೌಂದರ್ಯ, ಹಸಿರು ಪರಿಸರ, ಸಮುದ್ರ ತೀರ ಮತ್ತು ಉತ್ತಮ ವಿಚಾರಗಳ ಆಸಕ್ತಿದಾಯಕ ಲವಲವಿಕೆಯಿಂದ ಕೂಡಿದ ಸಾಂಪ್ರದಾಯಿಕ ಮತ್ತು ಸಂಪತ್ಭರಿತ ನಗರ. ಇದೆಲ್ಲವೂ ಸತ್ಯ. ಆದರೆ ಈಗ ಮಳೆಗಾಲ ನಗರದ ಜನರಿಗೆ ಆಶೀರ್ವಾದಕ್ಕಿಂತ ಆತಂಕದ ವಿಷಯವಾಗುತ್ತಿದೆ. ಪ್ರತಿವರ್ಷ ಮಳೆಗಾಲ ಆರಂಭವಾದ ತಕ್ಷಣ ರಸ್ತೆಗಳು ಕೆರೆಗಳಾಗುತ್ತವೆ, ಚರಂಡಿಗಳು ತುಂಬಿ ಹರಿಯುತ್ತವೆ, ಮನೆಗಳಿಗೆ, ಅಂಗಡಿಗಳಿಗೆ ಕೃತಕ ನೆರೆ ನೀರು ನುಗ್ಗುತ್ತದೆ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಈ ದೃಶ್ಯಗಳು ಹೊಸದೇನಲ್ಲ. ವರ್ಷದಿಂದ ವರ್ಷಕ್ಕೆ ಇದೇ ಸಮಸ್ಯೆಗಳು ಮರುಕಳಿಸುತ್ತಿವೆ. ಮತ್ತೆ ಹೆಚ್ಚಾಗುತ್ತಿದೆ. ಕೆಲವರ ಗೋಳು ಹೇಳತೀರದು.ಇದು ವಿಷಾದನೀಯ ಮತ್ತು ವಿವೇಚನೀಯ!. ನಗರ ಅಭಿವೃದ್ಧಿಯ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತಿದ್ದರೂ, ಮಳೆಗಾಲದ ಮೊದಲ ಮಳೆಯಲ್ಲೇ ಅಭಿವೃದ್ಧಿಯ ನೈಜ ಚಿತ್ರಣ ಜನರ ಕಣ್ಣಿಗೆ ಬೀಳುತ್ತದೆ. ಉತ್ತಮ ರಸ್ತೆ, ಸುಸಜ್ಜಿತ ಚರಂಡಿ ವ್ಯವಸ್ಥೆ ಹಾಗೂ ವೈಜ್ಞಾನಿಕ ನಗರ ಯೋಜನೆ ಇಲ್ಲದಿದ್ದರೆ ಎಷ್ಟೇ ಅಭಿವೃದ್ಧಿ ಹೇಳಿಕೊಂಡರೂ ಅದು ಅಪೂರ್ಣವೇ ಸರಿ. ಆದರೆ ಮಂಗಳೂರಿನ ಹೆಚ್ಚಿನ ಈ ಅಭಿವೃದ್ಧಿ &#8216;ಎಲ್ಲಾ ಬಣ್ಣ ಮಸಿ ನುಂಗಿತು&#8217; ಎಂಬ ಮಾತಿನಂತೆ ಆಗಿದೆ. ಮಳೆಗಾಲದ ಮೊದಲು ಚಂದ ಕಾಣುವ ರಸ್ತೆಗಳು ದೂರದೃಷ್ಟಿಯ ಕೊರತೆಯಿಂದ ಮತ್ತು ನಮ್ಮ ಸೋಕಾಲ್ಡ್ ಸರಕಾರಿ ಇಂಜಿನಿಯರ್ಗಳ ವಿಚಿತ್ರ ತಲೆ ಖರ್ಚು ಮತ್ತು ಕಂಟ್ರಾಕ್ಟರ್ ಗಳ ಕಡಿಮೆ ಖರ್ಚು ಕಾಮಗಾರಿ ಒಟ್ಟು ಸೇರಿ ಜನಗಳಿಗೆ ಹುಚ್ಚು ಹಿಡಿಸಿದೆ. ಹೆಚ್ಚಿನವುಗಳೆಲ್ಲವೂ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿಗಳೇ.</p>
<p><img decoding="async" class="alignnone size-full wp-image-37794" src="https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-1.jpeg" alt="" width="800" height="448" srcset="https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-1.jpeg 800w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-1-300x168.jpeg 300w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-1-768x430.jpeg 768w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-1-150x84.jpeg 150w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-1-450x252.jpeg 450w" sizes="(max-width: 800px) 100vw, 800px" /> ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಎಂಬ ಗಾದೆಯಂತೆ ಈ ಮಳೆಗಾಲವು ಈ ಕಾಮಗಾರಿಗಳ ನೈಜ ಬಣ್ಣವನ್ನು ಬಯಲಿಗೆಳೆಯುತ್ತಿದೆ. ಮಂಗಳೂರಿನ ಹಲವಾರು ಪ್ರಮುಖ ರಸ್ತೆಗಳಲ್ಲಿ ಮಳೆ ಬಂದಾಗ ಗುಂಡಿಗಳು ನಿರ್ಮಾಣವಾಗುತ್ತವೆ. ಕೆಲವು ಕಡೆ ಡಾಂಬರು ಕಿತ್ತುಹೋಗಿ ವಾಹನ ಸವಾರರು ಜೀವದ ಹಂಗು ತೆರೆದು ಚಲಾಯಿಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಶಾಲಾ ಮಕ್ಕಳು, ವೃದ್ಧರು ಮತ್ತು ಪಾದಚಾರಿಗಳು ಪ್ರತಿದಿನವೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಸಮಸ್ಯೆ ಚರಂಡಿ ವ್ಯವಸ್ಥೆ. ಅನೇಕ ಕಡೆ ಚರಂಡಿಗಳು ಹೂಳು, ಪ್ಲಾಸ್ಟಿಕ್ ಹಾಗೂ ಕಸದಿಂದ ಮುಚ್ಚಿ ಹೋಗಿರುವುದರಿಂದ ಮಳೆನೀರು ಸರಾಗವಾಗಿ ಹರಿಯುವುದಿಲ್ಲ. ಪರಿಣಾಮವಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ. ಕೆಲವೇ ಗಂಟೆಗಳ ಭಾರಿ ಮಳೆಯಿಂದ ಮನೆ, ಅಂಗಡಿ ಮತ್ತು ಕಚೇರಿಗಳಿಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಪ್ರತೀ ವರ್ಷದ ಪರಿಹಾರವೇ ಇರದ ಸಮಸ್ಯೆ. ಇನ್ನು ಡ್ರೈನೇಜ್ ಗೂ ನೀರು ನುಗ್ಗಿ ಎಲ್ಲೆಂದರಲ್ಲಿ ನರಕ ದರ್ಶನ ಮಾಡಿಸುತ್ತಿದೆ. ಪ್ರವಾಹದ ಸಮಸ್ಯೆಗೆ ಕೇವಲ ಅಧಿಕ ಮಳೆಯೇ ಕಾರಣವಲ್ಲ. ನಗರ ಯೋಜನೆಯಲ್ಲಿನ ಲೋಪಗಳು, ನೈಸರ್ಗಿಕ ನೀರು ಹರಿಯುವ ಮಾರ್ಗಗಳ ಒತ್ತುವರಿ, ಕೆರೆಗಳ ನಾಶ ಮಾಡಿ ಕಟ್ಟಿದ ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟೋಣಗಳು, ಅತಿಯಾದ ಕಾಂಕ್ರೀಟೀಕರಣ ಮತ್ತು ಕಸದ ಅಸಮರ್ಪಕ ನಿರ್ವಹಣೆಯೇ ಪ್ರಮುಖ ಕಾರಣಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಹರಿವನ್ನು ತಡೆಯುವ ಕೆಲಸ ನಡೆದರೆ ಅದರ ಪರಿಣಾಮವನ್ನು ಜನರೇ ಅನುಭವಿಸಬೇಕಾಗುತ್ತದೆ. ನಮ್ಮಲ್ಲಿ ಕಾನೂನಿನ ರೀತಿಯಲ್ಲಿ ಇದ್ದ ಹಾಗೇ ಕೆಲಸ, ಕಾಮಗಾರಿ ನಡೆಯುವುದಲ್ಲ. ಆ ಫೈಲ್ ತೆಗೆದುಕೊಂಡ ಅಧಿಕಾರಿಗೆ ಫೈಲ್ ಜೊತೆಗೆ ಸಿಗುವ ಕವರ್ ಆಧಾರದಲ್ಲೇ ಕೆಲಸ ನಡೆಯುವುದು ಇದು ಓಪನ್ ಸೀಕ್ರೆಟ್!.</p>
<p><img loading="lazy" decoding="async" class="alignnone size-full wp-image-37795" src="https://buntsnow.com/wp-content/uploads/2026/08/WhatsApp-Image-2026-08-14-at-5.46.25-PM.jpeg" alt="" width="600" height="300" srcset="https://buntsnow.com/wp-content/uploads/2026/08/WhatsApp-Image-2026-08-14-at-5.46.25-PM.jpeg 600w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-300x150.jpeg 300w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-150x75.jpeg 150w, https://buntsnow.com/wp-content/uploads/2026/08/WhatsApp-Image-2026-08-14-at-5.46.25-PM-450x225.jpeg 450w" sizes="(max-width: 600px) 100vw, 600px" /></p>
<p><img loading="lazy" decoding="async" class="alignnone size-full wp-image-37796" src="https://buntsnow.com/wp-content/uploads/2026/08/WhatsApp-Image-2026-08-14-at-5.46.26-PM.jpeg" alt="" width="666" height="500" srcset="https://buntsnow.com/wp-content/uploads/2026/08/WhatsApp-Image-2026-08-14-at-5.46.26-PM.jpeg 666w, https://buntsnow.com/wp-content/uploads/2026/08/WhatsApp-Image-2026-08-14-at-5.46.26-PM-300x225.jpeg 300w, https://buntsnow.com/wp-content/uploads/2026/08/WhatsApp-Image-2026-08-14-at-5.46.26-PM-150x113.jpeg 150w, https://buntsnow.com/wp-content/uploads/2026/08/WhatsApp-Image-2026-08-14-at-5.46.26-PM-450x338.jpeg 450w" sizes="(max-width: 666px) 100vw, 666px" /><br />
ಹಾಗೆಂದು ಮಳೆಗಾಲದಲ್ಲಿ ಸಾರ್ವಜನಿಕರಿಗೂ ಜವಾಬ್ದಾರಿ ಇದೆ. ಚರಂಡಿಗೆ ಪ್ಲಾಸ್ಟಿಕ್, ಕಸ ಕಡ್ಡಿ ಮತ್ತು ಕಟ್ಟಡ ತ್ಯಾಜ್ಯ ಎಸೆಯುವುದು ಸಾಮಾನ್ಯವಾಗಿದೆ. ನಂತರ ಅದೇ ಚರಂಡಿ ಮುಚ್ಚಿ ನೀರು ರಸ್ತೆಗಳಿಗೆ ಹರಿದಾಗ ಸರ್ಕಾರವನ್ನು ಮಾತ್ರ ದೂರುವುದು ಅದೂ ನ್ಯಾಯವಲ್ಲ. ನಾಗರಿಕರ ಜಾಗೃತಿಯೂ ಅಷ್ಟೇ ಮುಖ್ಯ. ಮಂಗಳೂರು ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಮಳೆಗಾಲ ಆರಂಭವಾಗುವ ಮೊದಲೇ ಚರಂಡಿಗಳ ಸ್ವಚ್ಛತೆ, ಗುಂಡಿಗಳ ದುರಸ್ತಿ ಮತ್ತು ನೀರು ಹರಿಯುವ ಮಾರ್ಗಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ತಾತ್ಕಾಲಿಕ ದುರಸ್ತಿಗಳ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಬೇಕು. ಪ್ರತಿಯೊಂದು ಕಾಮಗಾರಿಯ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು, ಶಾಸಕರು ಸ್ಥಳೀಯರ ಅಭಿಪ್ರಾಯ ಪಡೆದು ಪರಿಶೀಲಿಸಬೇಕು. ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ರಸ್ತೆಗಳು ಕೆಲವು ತಿಂಗಳಲ್ಲೇ ಹಾಳಾಗುವುದು ಒಪ್ಪಲಾಗದ ಸಂಗತಿ.ಇದು ತೆರಿಗೆ ಹಣದ ಪೋಲು ಅಷ್ಟೇ. ನಗರದ ಅಭಿವೃದ್ಧಿ ಎಂದರೆ ಕೇವಲ ಎತ್ತರದ ಕಟ್ಟಡಗಳು, ಅಗಲವಾದ ರಸ್ತೆಗಳು ಅಥವಾ ಹೊಸ ಯೋಜನೆಗಳಲ್ಲ. ಮಳೆ ಬಂದಾಗ ಜನರು ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗಬೇಕು, ಮನೆಗಳಿಗೆ ನೀರು ನುಗ್ಗಬಾರದು ಮತ್ತು ದೈನಂದಿನ ಜೀವನ ಅಸ್ತವ್ಯಸ್ತವಾಗಬಾರದು. ಇದೇ ನಿಜವಾದ ಅಭಿವೃದ್ಧಿಯ ಮಾನದಂಡ. ಮಂಗಳೂರು ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಇಂತಹ ನಗರವು ಮಳೆಗಾಲದಲ್ಲಿ ಸಮಸ್ಯೆಗಳ ಆಗರವಾಗಬಾರದು. ಆಡಳಿತ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು, ಶಾಸಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಸಾಧ್ಯವೇನಲ್ಲ. ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಳೆಗಾಲವೇ ಬೇರೆ. ಆ ಮಳೆ ಈಗ ಬರುವುದೇ ಇಲ್ಲ. ಆಗಿನ ಆ ಬಿಡದೇ ಬರುವ ಜಡಿಮಳೆ ಈಗ ಬರುತ್ತಿದ್ದರೆ ಸಿಟಿಯೇ ಮುಳಗಬಹುದೋ ಏನೋ? ಮಳೆ ನಮ್ಮ ಶತ್ರುವಲ್ಲ; ಅದು ಪ್ರಕೃತಿಯ ಅಮೂಲ್ಯ ಕೊಡುಗೆ. ಆದರೆ ನಮ್ಮ ಯೋಜನಾ ವೈಫಲ್ಯ ಮತ್ತು ನಿರ್ಲಕ್ಷ್ಯದಿಂದ ಮಳೆಯೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕ ನಗರ ಯೋಜನೆ, ಉತ್ತಮ ರಸ್ತೆ ನಿರ್ಮಾಣ, ಸುಸಜ್ಜಿತ ಚರಂಡಿ ವ್ಯವಸ್ಥೆ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಮಂಗಳೂರನ್ನು ಮಳೆಗಾಲದಲ್ಲೂ ಸುರಕ್ಷಿತ ಮತ್ತು ಸುಂದರ ನಗರವನ್ನಾಗಿ ರೂಪಿಸಬೇಕಾಗಿದೆ. ಅಭಿವೃದ್ಧಿಯ ನಿಜವಾದ ಪರೀಕ್ಷೆ ಬೇಸಿಗೆಯಲ್ಲಲ್ಲ, ಮಳೆಗಾಲದಲ್ಲೇ ನಡೆಯುತ್ತದೆ.</p>
<p>ಬರಹ : ಶರತ್ ಶೆಟ್ಟಿ ಪಡುಪಳ್ಳಿ</p>
<p>The post <a href="https://buntsnow.com/archives/37785">ಮಳೆಗಾಲದಲ್ಲಿ ಮಂಗಳೂರು</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಪುಂಚದ ಬಾಲೆ ವಾಲ್ಮೀಕಿ</title>
		<link>https://buntsnow.com/archives/37716</link>
		
		<dc:creator><![CDATA[Bunts Now]]></dc:creator>
		<pubDate>Wed, 12 Aug 2026 12:38:17 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37716</guid>

					<description><![CDATA[<p>ತುಳುನಾಡಿನ ಜನಪದ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಮನುಷ್ಯನ ಬದುಕಿನ ಸಂಬಂಧ ಅತ್ಯಂತ ಆಳವಾಗಿದೆ. ಬನ, ನಾಗ, ಹುತ್ತ, ಮಣ್ಣು, ಮರ, ನೀರು, ಸಸ್ಯ ಮತ್ತು ಜೀವಜಾಲಗಳು ತುಳುವರ ಜೀವನಾನುಭವ, ಆಚರಣೆ ಮತ್ತು ಜನಪದ ಸ್ಮೃತಿಯೊಂದಿಗೆ ಬೆಸೆದುಕೊಂಡಿವೆ. ಈ ಪರಂಪರೆಯನ್ನು ಗಮನಿಸಿದಾಗ ಸಾಮಾನ್ಯವಾಗಿ ಕಾಣುವ ಒಂದು ಹುತ್ತವೂ ಕೇವಲ ಮಣ್ಣಿನ ಗುಡ್ಡೆಯಾಗಿ ಉಳಿಯುವುದಿಲ್ಲ. ಅದರ ಸುತ್ತ ಬೆಳೆದಿರುವ ಪದಗಳು, ನಂಬಿಕೆಗಳು ಮತ್ತು ಕಥನಗಳು ಪ್ರಕೃತಿಯೊಂದಿಗೆ ಜನಪದ ಸಮಾಜ ಹೊಂದಿದ್ದ ಸಂಬಂಧವನ್ನು ಅರ್ಥಮಾಡಿಕೊಳ್ಳಲು ದಾರಿ ಮಾಡಿಕೊಡುತ್ತವೆ. ತುಳು ಜನಪದ ಬಳಕೆಯಲ್ಲಿ [...]</p>
<p>The post <a href="https://buntsnow.com/archives/37716">ಪುಂಚದ ಬಾಲೆ ವಾಲ್ಮೀಕಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ತುಳುನಾಡಿನ ಜನಪದ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಮನುಷ್ಯನ ಬದುಕಿನ ಸಂಬಂಧ ಅತ್ಯಂತ ಆಳವಾಗಿದೆ. ಬನ, ನಾಗ, ಹುತ್ತ, ಮಣ್ಣು, ಮರ, ನೀರು, ಸಸ್ಯ ಮತ್ತು ಜೀವಜಾಲಗಳು ತುಳುವರ ಜೀವನಾನುಭವ, ಆಚರಣೆ ಮತ್ತು ಜನಪದ ಸ್ಮೃತಿಯೊಂದಿಗೆ ಬೆಸೆದುಕೊಂಡಿವೆ. ಈ ಪರಂಪರೆಯನ್ನು ಗಮನಿಸಿದಾಗ ಸಾಮಾನ್ಯವಾಗಿ ಕಾಣುವ ಒಂದು ಹುತ್ತವೂ ಕೇವಲ ಮಣ್ಣಿನ ಗುಡ್ಡೆಯಾಗಿ ಉಳಿಯುವುದಿಲ್ಲ. ಅದರ ಸುತ್ತ ಬೆಳೆದಿರುವ ಪದಗಳು, ನಂಬಿಕೆಗಳು ಮತ್ತು ಕಥನಗಳು ಪ್ರಕೃತಿಯೊಂದಿಗೆ ಜನಪದ ಸಮಾಜ ಹೊಂದಿದ್ದ ಸಂಬಂಧವನ್ನು ಅರ್ಥಮಾಡಿಕೊಳ್ಳಲು ದಾರಿ ಮಾಡಿಕೊಡುತ್ತವೆ. ತುಳು ಜನಪದ ಬಳಕೆಯಲ್ಲಿ ಹುತ್ತಕ್ಕೆ &#8216;ಪುಂಚ&#8217; ಎಂಬ ಪದ ಬಳಕೆಯಿರುವುದು ಗಮನಾರ್ಹ. ಪ್ರಕೃತಿಯಲ್ಲಿರುವ ಒಂದು ಸಣ್ಣ ರಚನೆಗೂ ತನ್ನದೇ ಆದ ಸ್ಥಳೀಯ ಪದವನ್ನು ಬಳಸಿರುವುದು ತುಳುವರ ಪರಿಸರದ ನೇರ ಅನುಭವವನ್ನು ತೋರಿಸುತ್ತದೆ. ಇಂತಹ ಪದಗಳು ಕೇವಲ ವಸ್ತುವಿನ ಹೆಸರನ್ನು ಸೂಚಿಸುವುದಲ್ಲ; ಅವು ಒಂದು ಸಮುದಾಯದ ಜೀವನಾನುಭವ ಮತ್ತು ಪ್ರಕೃತಿಯೊಂದಿಗಿನ ಅದರ ಸಂಬಂಧವನ್ನೂ ದಾಖಲಿಸುತ್ತವೆ. ಹುತ್ತವು ಮುಖ್ಯವಾಗಿ ಗೆದ್ದಲುಗಳು ನಿರ್ಮಿಸುವ ಮಣ್ಣಿನ ರಚನೆ. ಅದರೊಳಗೆ ಗೆದ್ದಲುಗಳ ವಸತಿ ಮತ್ತು ಅವುಗಳೊಂದಿಗೆ ಸಂಬಂಧ ಹೊಂದಿರುವ ಸೂಕ್ಷ್ಮಜೀವಿಗಳ ಪರಿಸರವಿದೆ. ಗೆದ್ದಲುಗಳು ಸಾವಯವ ಪದಾರ್ಥಗಳ ಪರಿವರ್ತನೆ ಹಾಗೂ ಮಣ್ಣಿನ ಪರಿಸರ ವ್ಯವಸ್ಥೆಯಲ್ಲಿ ಪಾತ್ರವಹಿಸುತ್ತವೆ. ಹೀಗಾಗಿ ಹುತ್ತವನ್ನು ಕೇವಲ ಮಣ್ಣಿನ ಗುಡ್ಡೆಯೆಂದು ನೋಡುವುದಕ್ಕಿಂತ, ಮಣ್ಣಿನ ಜೀವ ವ್ಯವಸ್ಥೆಯ ಒಂದು ಭಾಗವಾಗಿ ನೋಡುವುದು ಸಮಂಜಸವಾಗಿದೆ. ತುಳುನಾಡಿನ ಬನಗಳು ಮತ್ತು ನಾಗಬನಗಳ ಸಂದರ್ಭದಲ್ಲಿ ಹುತ್ತಕ್ಕೆ ವಿಶೇಷ ಸಾಂಸ್ಕೃತಿಕ ಸ್ಥಾನ ದೊರೆಯುತ್ತದೆ. ಬನಗಳಲ್ಲಿ ಮಾನವನ ಹಸ್ತಕ್ಷೇಪ ಕಡಿಮೆಯಿರುವುದರಿಂದ ಮರಗಳು, ಸಾವಯವ ಪದಾರ್ಥಗಳು, ತೇವಾಂಶ, ಕೀಟಗಳು ಮತ್ತು ವಿವಿಧ ಮಣ್ಣಿನ ಜೀವಿಗಳು ಉಳಿಯುತ್ತವೆ. ಇಂತಹ ಪರಿಸರದಲ್ಲಿ ಹುತ್ತಗಳೂ ಕಾಣಿಸಿಕೊಳ್ಳುತ್ತವೆ. ನಾಗಾರಾಧನೆಯೊಂದಿಗೆ ಹುತ್ತದ ಸಂಬಂಧವೂ ಇದೇ ಸಾಂಸ್ಕೃತಿಕ ಪರಿಸರದಲ್ಲಿ ಅರ್ಥಪೂರ್ಣವಾಗುತ್ತದೆ. ನಾಗರಹಾವು ಹುತ್ತವನ್ನು ನಿರ್ಮಿಸುವುದಿಲ್ಲ. ಆದರೆ ಹುತ್ತ ಅಥವಾ ಬಿಲದಂತಹ ಸ್ಥಳಗಳನ್ನು ಆಶ್ರಯವಾಗಿ ಬಳಸಬಹುದು. ಹೀಗಾಗಿ ಹುತ್ತ ಮತ್ತು ನಾಗನ ನಡುವೆ ಬೆಳೆದಿರುವ ಜನಪದ ಸಂಬಂಧವು ತುಳುನಾಡಿನ ಪ್ರಕೃತಿ ಆರಾಧನೆಯ ಒಂದು ಪ್ರಮುಖ ಅಂಶವಾಗಿದೆ.</p>
<p><img loading="lazy" decoding="async" class="alignnone size-full wp-image-37724" src="https://buntsnow.com/wp-content/uploads/2026/08/WhatsApp-Image-2026-08-12-at-5.05.44-PM.jpeg" alt="" width="1131" height="1119" srcset="https://buntsnow.com/wp-content/uploads/2026/08/WhatsApp-Image-2026-08-12-at-5.05.44-PM.jpeg 1131w, https://buntsnow.com/wp-content/uploads/2026/08/WhatsApp-Image-2026-08-12-at-5.05.44-PM-300x297.jpeg 300w, https://buntsnow.com/wp-content/uploads/2026/08/WhatsApp-Image-2026-08-12-at-5.05.44-PM-1024x1013.jpeg 1024w, https://buntsnow.com/wp-content/uploads/2026/08/WhatsApp-Image-2026-08-12-at-5.05.44-PM-768x760.jpeg 768w, https://buntsnow.com/wp-content/uploads/2026/08/WhatsApp-Image-2026-08-12-at-5.05.44-PM-150x148.jpeg 150w, https://buntsnow.com/wp-content/uploads/2026/08/WhatsApp-Image-2026-08-12-at-5.05.44-PM-450x445.jpeg 450w" sizes="(max-width: 1131px) 100vw, 1131px" /></p>
<p>ಜನಪದದಲ್ಲಿ &#8216;ಹುತ್ತದಲ್ಲಿ ನಿಧಿ ಇದೆ&#8217; ಎಂಬ ಕಲ್ಪನೆಯೂ ಕಂಡುಬರುತ್ತದೆ. ಸಾಮಾನ್ಯವಾಗಿ ನಿಧಿ ಎಂದರೆ ಚಿನ್ನ, ಬೆಳ್ಳಿ ಅಥವಾ ರತ್ನಗಳಂತಹ ಅಮೂಲ್ಯ ವಸ್ತು. ಆದರೆ ಹುತ್ತದ ನೈಜ ಪರಿಸರೀಯ ಸ್ವರೂಪವನ್ನು ಗಮನಿಸಿದಾಗ, ಅದರೊಳಗಿನ ಜೀವ ಸಂಕುಲ ಮತ್ತು ಮಣ್ಣಿನ ಜೈವಿಕ ಚಟುವಟಿಕೆಗಳನ್ನು ಒಂದು ರೀತಿಯ ಜೀವ ಸಂಪತ್ತಾಗಿ ಪರಿಗಣಿಸಬಹುದು. ಈ ಹಿನ್ನೆಲೆಯಲ್ಲಿ &#8216;ನಿಧಿ&#8217; ಎಂಬ ಜನಪದ ಕಲ್ಪನೆಯನ್ನು ಆಧುನಿಕ ಪರಿಸರ ದೃಷ್ಟಿಯಿಂದ ಮಣ್ಣಿನ ಜೀವ ಸಂಪತ್ತಿನ ಸಂಕೇತವಾಗಿ ಓದಬಹುದು. ಹುತ್ತವನ್ನು ಒಡೆದು ಅದರೊಳಗೆ ಭೌತಿಕ ನಿಧಿ ಹುಡುಕುವುದಕ್ಕಿಂತ, ಹುತ್ತವನ್ನು ಒಂದು ಜೀವಪರಿಸರವಾಗಿ ಸಂರಕ್ಷಿಸುವುದು ಹೆಚ್ಚು ಅರ್ಥಪೂರ್ಣ. ಮಣ್ಣಿನ ಜೀವ ವ್ಯವಸ್ಥೆಯನ್ನು ಉಳಿಸುವ ದೃಷ್ಟಿಯಿಂದ ಹುತ್ತಕ್ಕೂ ಒಂದು ಪರಿಸರೀಯ ಮೌಲ್ಯವಿದೆ. ಇಲ್ಲಿಂದ &#8216;ಹುತ್ತ&#8217; ಮತ್ತು &#8216;ಹುಟ್ಟು&#8217; ಎಂಬ ಎರಡು ಪದಗಳು ಗಮನ ಸೆಳೆಯುತ್ತವೆ. ಧ್ವನಿಯಲ್ಲಿ ಇವೆರಡೂ ಹತ್ತಿರವಾಗಿವೆ. ಹುತ್ತವು ಜೀವಿಗಳ ವಾಸ ಸ್ಥಳವಾಗಿದ್ದರೆ, ಹುಟ್ಟು ಜೀವದ ಉದ್ಭವವನ್ನು ಸೂಚಿಸುತ್ತದೆ. ಈ ಎರಡು ಪದಗಳು ಒಂದೇ ಮೂಲದಿಂದ ಬಂದವು ಎಂದು ಹೇಳಲು ಸಾಕಷ್ಟು ಭಾಷಾ ಶಾಸ್ತ್ರೀಯ ಸಾಕ್ಷ್ಯವಿಲ್ಲ. ಆದರೆ ಜನಪದ ಚಿಂತನೆಯ ದೃಷ್ಟಿಯಿಂದ ಹುತ್ತವನ್ನು ಜೀವದ ಆಶ್ರಯ ಮತ್ತು ಹುಟ್ಟನ್ನು ಜೀವದ ಉದ್ಭವವಾಗಿ ಪರಿಗಣಿಸುವ ಅರ್ಥಸಾಮ್ಯವನ್ನು ಗಮನಿಸಬಹುದು. ಈ ಧ್ವನಿಸಾಮ್ಯವು ತುಳು ಜನಪದ ಭಾಷೆಯ ಅಧ್ಯಯನಕ್ಕೆ ಒಂದು ಆಸಕ್ತಿದಾಯಕ ಪ್ರಶ್ನೆಯನ್ನು ಮುಂದಿಡುತ್ತದೆ.</p>
<p>ದ್ರಾವಿಡ ಭಾಷೆಗಳಲ್ಲಿಯೂ ಹುತ್ತಕ್ಕೆ ಸಂಬಂಧಿಸಿದ ಹಲವು ಪದರೂಪಗಳಿವೆ. ತಮಿಳಿನ புற்று (puṟṟu) ಮತ್ತು ತೆಲುಗಿನ పుట్ట (puṭṭa) ಮುಂತಾದ ರೂಪಗಳು ಹುತ್ತ ಅಥವಾ ಮಣ್ಣಿನ ಗುಡ್ಡೆಯ ಅರ್ಥದಲ್ಲಿ ಬಳಕೆಯಾಗುತ್ತವೆ. ತುಳುವಿನ &#8216;ಪುಂಚ&#8217; ಎಂಬ ಬಳಕೆಯೂ ಈ ವಿಶಾಲ ದ್ರಾವಿಡ ಭಾಷಾ ಹಿನ್ನೆಲೆಯೊಳಗೆ ಅಧ್ಯಯನಕ್ಕೆ ಅರ್ಹವಾಗಿದೆ. ಆದರೆ ಈ ಎಲ್ಲಾ ರೂಪಗಳು ಒಂದೇ ಮೂಲದಿಂದ ಬಂದಿವೆ ಎಂದು ನಿರ್ಣಯಿಸಲು ಇನ್ನಷ್ಟು ತುಲನಾತ್ಮಕ ಭಾಷಾಶಾಸ್ತ್ರೀಯ ಸಾಕ್ಷ್ಯ ಅಗತ್ಯ. ತುಳುವಿನ &#8216;ಪುತ್ತು&#8217; ಎಂಬ ಪದವು ಮತ್ತೊಂದು ಜನಪದ ಭಾಷಾ ಅಂಶವನ್ನು ಪರಿಚಯಿಸುತ್ತದೆ. ತುಳು ತಾಯಿಯ ಮುದ್ದಿನ ಭಾಷೆಯಲ್ಲಿ ಮಗುವನ್ನು &#8216;ಪುತ್ತು&#8217; ಎಂದು ಕರೆಯುವ ಬಳಕೆ ಇದೆ. &#8216;ಪುತ್ತೂಲಿ&#8217; ಎಂಬ ರೂಪವೂ ಮುದ್ದಿನ ಸಂಬೋಧನೆಯಾಗಿ ಬಳಕೆಯಲ್ಲಿದೆ. ಇಲ್ಲಿ &#8216;ಪುತ್ತು&#8217; ಎಂಬುದು ಮಗುವಿನ ಮೇಲಿನ ಪ್ರೀತಿ, ಮುದ್ದು ಮತ್ತು ಅಮೂಲ್ಯತೆಯ ಭಾವವನ್ನು ವ್ಯಕ್ತಪಡಿಸುವ ಜೀವಂತ ಮಾತೃಭಾಷಾ ಬಳಕೆಯಾಗಿದೆ.</p>
<p>ಇದೇ ಸಂದರ್ಭದಲ್ಲಿ &#8216;ಮುತ್ತು&#8217; ಎಂಬ ಪದದೊಂದಿಗೆ ಒಂದು ಆಸಕ್ತಿದಾಯಕ ಅರ್ಥಸಾಮ್ಯ ಕಂಡುಬರುತ್ತದೆ. ಮುತ್ತು ಅಮೂಲ್ಯ ರತ್ನ; ಅದೇ ಪದವನ್ನು ಪ್ರೀತಿಯ ಸಂಬೋಧನೆಯಾಗಿ ಮಗುವಿಗೂ ಬಳಸಲಾಗುತ್ತದೆ. ತುಳುವಿನ &#8216;ಪುತ್ತು&#8217; ಕೂಡಾ ಮಗುವಿನ ಮುದ್ದಿನ ಸಂಬೋಧನೆಯಾಗಿದ್ದರೆ, &#8216;ಪುತ್ತು–ಮುತ್ತು&#8217; ಎಂಬ ಅರ್ಥಸಾಮ್ಯವು ತುಳು ಜನಪದ ಭಾಷೆಯಲ್ಲಿನ ಅಮೂಲ್ಯತೆ ಮತ್ತು ಪ್ರೀತಿಯ ಸಂಬಂಧವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಷಯವಾಗಿದೆ. ಆದರೆ ಇದರಿಂದ ಎರಡೂ ಪದಗಳು ಒಂದೇ ಮೂಲದಿಂದ ಬಂದವು ಎಂದು ಹೇಳಲು ಸಾಧ್ಯವಿಲ್ಲ. ಈಗ &#8216;ರತ್ನಾಕರ&#8217; ಎಂಬ ಪದದ ಕಡೆಗೆ ಗಮನ ಹರಿಸಿದರೆ ಸ್ಪಷ್ಟವಾದ ಸಂಸ್ಕೃತ ಪದರಚನೆ ದೊರೆಯುತ್ತದೆ. ಸಂಸ್ಕೃತದ ರತ್ನ ಎಂದರೆ ಅಮೂಲ್ಯ ಮಣಿ ಅಥವಾ ರತ್ನ; ಆಕರ ಎಂದರೆ ಮೂಲ, ನಿಧಿ ಅಥವಾ ಉತ್ಪತ್ತಿಸ್ಥಾನ. ಆದ್ದರಿಂದ ರತ್ನಾಕರ ಎಂದರೆ ರತ್ನಗಳ ಆಕರ ಅಥವಾ ರತ್ನಗಳ ನಿಧಿ. ಸಮುದ್ರಕ್ಕೂ ರತ್ನಾಕರ ಎಂಬ ಹೆಸರು ಬಳಕೆಯಾಗುತ್ತದೆ. ವಾಲ್ಮೀಕಿಯ ಕುರಿತ ಪ್ರಸಿದ್ಧ ಪರಂಪರೆಯಲ್ಲಿ ಅವರ ಹಿಂದಿನ ಹೆಸರು ರತ್ನಾಕರ ಎಂದು ಹೇಳಲಾಗುತ್ತದೆ. ತಪಸ್ಸಿನಲ್ಲಿ ಕುಳಿತ ರತ್ನಾಕರನ ಸುತ್ತ ಹುತ್ತ ನಿರ್ಮಾಣವಾಯಿತು ಮತ್ತು ನಂತರ ಅವನು ವಾಲ್ಮೀಕಿ ಎಂಬ ಹೆಸರಿನಿಂದ ಪ್ರಸಿದ್ಧನಾದನು ಎಂಬ ಕಥೆ ವ್ಯಾಪಕವಾಗಿ ಪರಿಚಿತವಾಗಿದೆ. ಸಂಸ್ಕೃತದ &#8216;ವಲ್ಮೀಕ&#8217; (वल्मीक) ಎಂಬ ಪದಕ್ಕೆ ಹುತ್ತ ಎಂಬ ಅರ್ಥವಿದೆ. &#8216;ವಾಲ್ಮೀಕಿ&#8217; ಎಂಬ ಹೆಸರು ವಲ್ಮೀಕ ಪದದೊಂದಿಗೆ ಸಂಬಂಧಿಸಿರುವುದು ಸಾಂಪ್ರದಾಯಿಕವಾಗಿ ವಿವರಿಸಲಾಗಿದೆ. ಹೀಗಾಗಿ ವಾಲ್ಮೀಕಿಯ ಹೆಸರಿನಲ್ಲಿಯೇ ಹುತ್ತದ ಸಂಕೇತ ಅಡಕವಾಗಿದೆ.</p>
<p>ರತ್ನಾಕರನ ಪರಿವರ್ತನೆಯೊಂದಿಗೆ ಸಂಬಂಧಿಸಿದ ಮತ್ತೊಂದು ಪ್ರಸಿದ್ಧ ಕಥನ &#8216;ಮರಾ–ರಾಮ&#8217;. ರತ್ನಾಕರನಿಗೆ &#8216;ರಾಮ&#8217; ಎಂಬ ಪದವನ್ನು ಉಚ್ಚರಿಸಲು ಸಾಧ್ಯವಾಗದಾಗ &#8216;ಮರಾ, ಮರಾ&#8217; ಎಂದು ಜಪಿಸಲು ಸೂಚಿಸಲಾಯಿತು. ನಿರಂತರ ಜಪದಲ್ಲಿ &#8216;ಮರಾ&#8217; ಎಂಬ ಧ್ವನಿ &#8216;ರಾಮ&#8217; ಎಂಬಂತೆ ರೂಪುಗೊಂಡಿತು ಎಂಬ ಕಥನ ಪ್ರಸಿದ್ಧವಾಗಿದೆ. &#8216;ಮರ&#8217; ಎಂಬ ಪದ ಕನ್ನಡ ಮತ್ತು ಇತರ ದ್ರಾವಿಡ ಭಾಷೆಗಳಲ್ಲಿ ಮರವನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಮರಕ್ಕೆ ವೃಕ್ಷ, ತರು, ದ್ರುಮ ಮುಂತಾದ ಪದಗಳಿವೆ. ಆದ್ದರಿಂದ &#8216;ಮರಾ–ರಾಮ&#8217; ಕಥನವು ಪದಗಳ ಧ್ವನಿರೂಪದೊಂದಿಗೆ ಸಂಬಂಧಿಸಿದ ವಿಶಿಷ್ಟ ಕಥನವಾಗಿದೆ. ವಾಲ್ಮೀಕಿ ರಾಮಾಯಣದ ನಮಗೆ ದೊರಕಿರುವ ಪಠ್ಯದಲ್ಲಿ ವಾಲ್ಮೀಕಿ ಮತ್ತು ನಾರದರ ಸಂಭಾಷಣೆ ಸಂಸ್ಕೃತದಲ್ಲಿದೆ. ಇದರಿಂದ ನಮಗೆ ದೊರಕಿರುವ ಮಹಾಕಾವ್ಯದ ಭಾಷೆ ಸಂಸ್ಕೃತ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಐತಿಹಾಸಿಕವಾಗಿ ಅವರು ದೈನಂದಿನ ಮಾತುಕತೆಯಲ್ಲಿ ಯಾವ ಭಾಷೆಯನ್ನು ಬಳಸಿದರು ಎಂಬುದನ್ನು ಈ ಪಠ್ಯದಿಂದ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ.</p>
<p>ರಾಮಕಥೆಯ ಮೌಖಿಕ ಪರಂಪರೆಯ ವಿಚಾರದಲ್ಲಿ ತುಳುನಾಡು ಮತ್ತು ದಕ್ಷಿಣ ಭಾರತದ ಇತರ ಪ್ರದೇಶಗಳ ಅಧ್ಯಯನ ಬಹಳ ಮಹತ್ವದ್ದಾಗಿದೆ. ತುಳು ಪಾಡ್ದನಗಳು ಸಮುದಾಯದ ಸ್ಮೃತಿ, ಆಚರಣೆ, ದೇವತೆಗಳು, ವೀರರು ಮತ್ತು ಸ್ಥಳೀಯ ಇತಿಹಾಸವನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿದ ಮೌಖಿಕ ಪರಂಪರೆ. ಕನ್ನಡದಲ್ಲಿಯೂ ರಾಮಕಥೆಯ ವಿವಿಧ ಜನಪದ ರೂಪಗಳು ಬೆಳೆದಿವೆ. ಕೇರಳದ ವಿವಿಧ ಸಮುದಾಯಗಳಲ್ಲಿಯೂ ರಾಮಕಥೆಯ ಸ್ಥಳೀಯ ಮೌಖಿಕ ರೂಪಗಳು ಕಂಡು ಬರುತ್ತವೆ. ಇದರಿಂದ ರಾಮಕಥೆ ಅನೇಕ ಭಾಷೆ, ಸಮುದಾಯ ಮತ್ತು ಜನಪದ ಪರಂಪರೆಗಳಲ್ಲಿ ವಿಭಿನ್ನ ರೂಪಗಳನ್ನು ಪಡೆದಿರುವ ವಿಶಾಲ ಕಥಾಪರಂಪರೆ ಎಂಬುದು ಗೋಚರಿಸುತ್ತದೆ. ವಾಲ್ಮೀಕಿ ರಾಮಾಯಣವು ರಾಮಕಥೆಗೆ ಮಹತ್ವದ ಮಹಾಕಾವ್ಯ ರೂಪ ನೀಡಿದರೂ, ಪ್ರತಿಯೊಂದು ಪ್ರಾದೇಶಿಕ ರಾಮಕಥೆಯೂ ಅದರಿಂದಲೇ ನೇರವಾಗಿ ಹುಟ್ಟಿದೆ ಎಂದು ಹೇಳುವುದು ಅಗತ್ಯವಿಲ್ಲ. ಈ ಚರ್ಚೆಯ ಮುಖ್ಯ ಅಂಶವೆಂದರೆ ತುಳು ಭಾಷೆ ಮತ್ತು ತುಳುವರ ಜನಪದ ಜ್ಞಾನವನ್ನು ಅದರ ಜೀವಂತ ಬಳಕೆ ಮತ್ತು ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದು. &#8216;ಹುತ್ತ–ಹುಟ್ಟು&#8217;, &#8216;ಪುತ್ತು–ಮುತ್ತು&#8217; ಮುಂತಾದ ಧ್ವನಿಸಾಮ್ಯಗಳು ಸಂಶೋಧನೆಗೆ ಕುತೂಹಲಕಾರಿ ಸುಳಿವುಗಳನ್ನು ನೀಡಬಹುದು. ಆದರೆ ಧ್ವನಿಸಾಮ್ಯ ಮಾತ್ರ ಪದೋತ್ಪತ್ತಿಯ ಸಾಕ್ಷ್ಯವಾಗುವುದಿಲ್ಲ. ಅದಕ್ಕಾಗಿ ಹಳೆಯ ಪಠ್ಯಗಳು, ನಿಘಂಟುಗಳು, ಪಾಡ್ದನಗಳು, ಪ್ರಾದೇಶಿಕ ಬಳಕೆಗಳು ಮತ್ತು ತುಲನಾತ್ಮಕ ಭಾಷಾಶಾಸ್ತ್ರೀಯ ಸಾಕ್ಷ್ಯ ಅಗತ್ಯ. ಆದರೆ ಜನಪದ ಬಳಕೆಯ ಮಹತ್ವವನ್ನು ಕಡಿಮೆ ಮಾಡಲಾಗುವುದಿಲ್ಲ.</p>
<p>ಹುತ್ತಕ್ಕೆ &#8216;ಪುಂಚ&#8217; ಎಂಬ ಸ್ಥಳೀಯ ಹೆಸರು, ತಾಯಿ ಮಗುವನ್ನು &#8216;ಪುತ್ತು&#8217; ಎಂದು ಮುದ್ದಿನಿಂದ ಕರೆಯುವ ಬಳಕೆ, ಹುತ್ತ ಮತ್ತು ನಾಗದ ಸಾಂಸ್ಕೃತಿಕ ಸಂಬಂಧ, ಬನಗಳ ಸಂರಕ್ಷಣಾ ಪರಂಪರೆ ಇವೆಲ್ಲವೂ ತುಳುವರ ಪ್ರಕೃತಿಯೊಂದಿಗಿನ ನಿಕಟ ಸಂಬಂಧವನ್ನು ದಾಖಲಿಸುವ ಸಾಂಸ್ಕೃತಿಕ ಸಾಕ್ಷ್ಯಗಳಾಗಿವೆ. ಈ ದೃಷ್ಟಿಯಿಂದ &#8216;ಪುಂಚದ ಬಾಲೆ ವಾಲ್ಮೀಕಿ&#8217; ಎಂಬ ಶೀರ್ಷಿಕೆ ಒಂದು ವಿಶಿಷ್ಟ ಜನಪದ ಸಂಕೇತವನ್ನು ನಮ್ಮ ಮುಂದೆ ತರುತ್ತದೆ. ತುಳುವಿನ &#8216;ಪುಂಚ&#8217; ಎಂಬ ಹುತ್ತದ ಪದದಿಂದ ಆರಂಭವಾಗುವ ಚಿಂತನೆ, ಸಂಸ್ಕೃತದ &#8216;ವಲ್ಮೀಕ&#8217; ಎಂಬ ಹುತ್ತದ ಅರ್ಥ ಮತ್ತು ವಾಲ್ಮೀಕಿಯ ಹೆಸರಿನೊಂದಿಗೆ ಅದರ ಸಂಬಂಧದವರೆಗೆ ಸಾಗುತ್ತದೆ. ಇದರ ಮಧ್ಯೆ ತುಳುವಿನ &#8216;ಪುತ್ತು&#8217; ಎಂಬ ಮುದ್ದಿನ ಸಂಬೋಧನೆ, &#8216;ರತ್ನಾಕರ&#8217; ಎಂಬ ರತ್ನಗಳ ಆಕರದ ಹೆಸರು ಮತ್ತು ರಾಮಕಥೆಯ ವಿವಿಧ ಮೌಖಿಕ ರೂಪಗಳು ಭಾಷೆ, ಪ್ರಕೃತಿ ಮತ್ತು ಜನಪದ ಸ್ಮೃತಿಯ ವೈವಿಧ್ಯವನ್ನು ಪರಿಚಯಿಸುತ್ತವೆ. ಈ ಅಧ್ಯಯನದ ಮಹತ್ವ ಯಾವುದಾದರೂ ಒಂದು ಪದಕ್ಕೆ ಹೊಸ ವ್ಯುತ್ಪತ್ತಿ ನೀಡುವುದರಲ್ಲಿ ಇಲ್ಲ. ತುಳು ಭಾಷೆಯ ಜೀವಂತ ಬಳಕೆ, ತುಳುವರ ಪ್ರಕೃತಿ ಸಂಬಂಧ ಮತ್ತು ಜನಪದ ಸ್ಮೃತಿಯಲ್ಲಿರುವ ಜ್ಞಾನವನ್ನು ದಾಖಲಿಸಿ, ಅದನ್ನು ಭಾಷಾಶಾಸ್ತ್ರ, ಪರಿಸರಶಾಸ್ತ್ರ ಮತ್ತು ಸಾಂಸ್ಕೃತಿಕ ಅಧ್ಯಯನಗಳ ಮೂಲಕ ಅರ್ಥ ಮಾಡಿಕೊಳ್ಳುವುದರಲ್ಲಿ ಇದೆ. ಹುತ್ತವು ಮಣ್ಣಿನ ಜೀವ ವ್ಯವಸ್ಥೆಯ ಒಂದು ಭಾಗ. ಪುಂಚವು ತುಳುವರ ಹುತ್ತಕ್ಕೆ ಸಂಬಂಧಿಸಿದ ಸ್ಥಳೀಯ ಪದ. ಪುತ್ತು ತುಳು ತಾಯಿಯ ಮುದ್ದಿನ ಭಾಷೆಯ ಜೀವಂತ ಸಂಬೋಧನೆ. ರತ್ನಾಕರ ಸಂಸ್ಕೃತದಲ್ಲಿ ರತ್ನಗಳ ಆಕರ. ವಲ್ಮೀಕ ಸಂಸ್ಕೃತದಲ್ಲಿ ಹುತ್ತ. ವಾಲ್ಮೀಕಿ ಎಂಬ ಹೆಸರು ವಲ್ಮೀಕದೊಂದಿಗೆ ಸಂಬಂಧಿಸಿದ ಸಾಂಪ್ರದಾಯಿಕ ಹೆಸರು. ಈ ದೃಢವಾದ ಅಂಶಗಳ ಆಧಾರದ ಮೇಲೆ ಮುಂದಿನ ಸಂಶೋಧನೆ ಸಾಗಬೇಕು. ಜನಪದದ ಮಾತನ್ನು ದಾಖಲಿಸಿ, ಭಾಷೆಯ ಸಾಕ್ಷ್ಯವನ್ನು ಪರಿಶೀಲಿಸಿ, ವೈಜ್ಞಾನಿಕ ಸಂಗತಿಯನ್ನು ಪ್ರತ್ಯೇಕವಾಗಿ ಗುರುತಿಸಿ, ಇನ್ನೂ ಸಾಬೀತಾಗದ ಸಂಬಂಧಗಳನ್ನು ಸಂಶೋಧನೆಯ ವಿಷಯವಾಗಿ ಉಳಿಸುವುದೇ ಸೂಕ್ತ ಮಾರ್ಗ. ಅದೇ ದೃಷ್ಟಿಯಿಂದ &#8216;ಪುಂಚದ ಬಾಲೆ ವಾಲ್ಮೀಕಿ&#8217; ಎಂಬುದು ಕೇವಲ ಒಂದು ಶೀರ್ಷಿಕೆಯಲ್ಲ. ತುಳು ಜನಪದ ಭಾಷೆ, ಪ್ರಕೃತಿ ಮತ್ತು ಭಾರತೀಯ ರಾಮಕಥೆಯ ನಡುವಿನ ಸಂಬಂಧವನ್ನು ಹೊಸ ದೃಷ್ಟಿಯಿಂದ ನೋಡುವ ಒಂದು ಸಂಶೋಧನಾ ಆಹ್ವಾನವಾಗಿದೆ.</p>
<p>The post <a href="https://buntsnow.com/archives/37716">ಪುಂಚದ ಬಾಲೆ ವಾಲ್ಮೀಕಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ದೇವರು ಹಣ ತಿನ್ನುವುದಿಲ್ಲ ; ದೇವರ ಹೆಸರಿನಲ್ಲಿ ಯಾರು ತಿನ್ನುತ್ತಾರೆ?</title>
		<link>https://buntsnow.com/archives/37551</link>
		
		<dc:creator><![CDATA[Bunts Now]]></dc:creator>
		<pubDate>Sat, 08 Aug 2026 11:08:57 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37551</guid>

					<description><![CDATA[<p>ಭಾರತವು ದೇವಾಲಯಗಳ ದೇಶ. ಕೋಟ್ಯಾಂತರ ಭಕ್ತರು ತಮ್ಮ ನಂಬಿಕೆ, ಭಕ್ತಿ ಮತ್ತು ಹರಕೆಯ ರೂಪದಲ್ಲಿ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ದೇವಾಲಯಗಳಿಗೆ ಸಮರ್ಪಿಸುತ್ತಾರೆ. ದೇವರಿಗೆ ಸಲ್ಲಿಸುವ ಕಾಣಿಕೆ ಭಕ್ತಿಯ ಸಂಕೇತ. ಆದರೆ ಈ ಭಕ್ತಿಯೊಂದಿಗೆ ಒಂದು ಪ್ರಮುಖ ಪ್ರಶ್ನೆಯೂ ಸಮಾಜದ ಮುಂದೆ ನಿಂತಿದೆ. ದೇವರು ಹಣ ತಿನ್ನುವುದಿಲ್ಲ; ಹಾಗಾದರೆ ದೇವರ ಹೆಸರಿನಲ್ಲಿ ಸಂಗ್ರಹವಾಗುವ ಹಣವನ್ನು ಯಾರು ನಿರ್ವಹಿಸುತ್ತಿದ್ದಾರೆ? ಅದು ಹೇಗೆ ಬಳಸಲಾಗುತ್ತಿದೆ? ಅದರ ಬಗ್ಗೆ ಪಾರದರ್ಶಕ ಮಾಹಿತಿ ಸಮಾಜಕ್ಕೆ ಲಭ್ಯವಿದೆಯೇ? ಇತ್ತೀಚೆಗೆ ಒಬ್ಬರು ಮಂಗಳೂರಿನ‌ ಉದ್ಯಮಿ [...]</p>
<p>The post <a href="https://buntsnow.com/archives/37551">ದೇವರು ಹಣ ತಿನ್ನುವುದಿಲ್ಲ ; ದೇವರ ಹೆಸರಿನಲ್ಲಿ ಯಾರು ತಿನ್ನುತ್ತಾರೆ?</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಭಾರತವು ದೇವಾಲಯಗಳ ದೇಶ. ಕೋಟ್ಯಾಂತರ ಭಕ್ತರು ತಮ್ಮ ನಂಬಿಕೆ, ಭಕ್ತಿ ಮತ್ತು ಹರಕೆಯ ರೂಪದಲ್ಲಿ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ದೇವಾಲಯಗಳಿಗೆ ಸಮರ್ಪಿಸುತ್ತಾರೆ. ದೇವರಿಗೆ ಸಲ್ಲಿಸುವ ಕಾಣಿಕೆ ಭಕ್ತಿಯ ಸಂಕೇತ. ಆದರೆ ಈ ಭಕ್ತಿಯೊಂದಿಗೆ ಒಂದು ಪ್ರಮುಖ ಪ್ರಶ್ನೆಯೂ ಸಮಾಜದ ಮುಂದೆ ನಿಂತಿದೆ. ದೇವರು ಹಣ ತಿನ್ನುವುದಿಲ್ಲ; ಹಾಗಾದರೆ ದೇವರ ಹೆಸರಿನಲ್ಲಿ ಸಂಗ್ರಹವಾಗುವ ಹಣವನ್ನು ಯಾರು ನಿರ್ವಹಿಸುತ್ತಿದ್ದಾರೆ? ಅದು ಹೇಗೆ ಬಳಸಲಾಗುತ್ತಿದೆ? ಅದರ ಬಗ್ಗೆ ಪಾರದರ್ಶಕ ಮಾಹಿತಿ ಸಮಾಜಕ್ಕೆ ಲಭ್ಯವಿದೆಯೇ? ಇತ್ತೀಚೆಗೆ ಒಬ್ಬರು ಮಂಗಳೂರಿನ‌ ಉದ್ಯಮಿ ಹಾಗೂ ಧಾರ್ಮಿಕ ಭಕ್ತರು ತಮ್ಮ ಸ್ನೇಹಿತರೊಂದಿಗೆ ತಿರುಪತಿ ಯಾತ್ರೆ ಮುಗಿಸಿ ಮಂತ್ರಾಲಯದತ್ತ ತೆರಳುತ್ತಿದ್ದ ವೇಳೆ ಮಂತ್ರಾಲಯದ ಒಂದು ಕಿ.ಮೀಟರ್ ಹತ್ತಿರ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟರು. ಅವರ ಜೊತೆಗಾರ ಒಬ್ಬರ ಎರಡೂ ಕಾಲುಗಳು ಕತ್ತರಿಸಲ್ಪಟ್ಟರೆ, ಉಳಿದಿಬ್ಬರಿಗೆ ಭೀಕರ ಗಾಯಗಳಾದವು. ಇವರೊಂದಿಗೆ ಯಾತ್ರೆಗೆ ತೆರಳಿದ ಇನ್ನೊಂದು ವಾಹನದಲ್ಲಿ ಇದ್ದವರು ಇವರನ್ನು ಕೂಡಲೇ ಅಪಘಾತ ನಡೆದ ಸ್ಥಳದ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಇದ್ದಿದ್ದು ಕೇವಲ ಇಬ್ಬರು ನರ್ಸ್ ಗಳು ಮಾತ್ರ. ಅವರೂ ಕೂಡ ಈ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಇರಲಿಲ್ಲ. ತುರ್ತು ಚಿಕಿತ್ಸೆ ನೀಡುವ ಬದಲಾಗಿ ನಿಮ್ಮ ಹೆಸರೇನು? ಯಾವ ಊರು? ತಿರುಪತಿಗೆ ಯಾಕೆ ಹೋಗಿದ್ದೀರಿ? ಅಲ್ಲಿಂದ ಇಲ್ಲಿಗೆ ಯಾಕೆ ಬಂದಿರಿ? ಎಂಬುದರ ಬಗ್ಗೆ ಫಾರಂ ಫಿಲ್ ಮಾಡುವುದರಲ್ಲಿಯೇ ತಲ್ಲೀನರಾಗಿದ್ದರು. ಬಹಳ ಸಮಯದ ಮೇಲೆ ಓರ್ವ ವೈದ್ಯರು ಅಲ್ಲಿಗೆ ಆಗಮಿಸಿ ಓರ್ವರು ಮೃತರಾಗಿದ್ದಾರೆ ಎಂದು ಘೋಷಿಸಿ, ಇನ್ನುಳಿದವರಿಗೆ ಚಿಕಿತ್ಸೆ ಕೊಡಲು ತಮ್ಮಲ್ಲಿ ಯಾವುದೇ ಉನ್ನತ ತಂತ್ರಜ್ಞಾನ, ಯಂತ್ರೋಪಕರಣಗಳು ಇಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದರು ಹಾಗೂ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ/ ಬೆಂಗಳೂರು ಅಥವಾ ಬೇರೆ ಕಡೆ ಕೊಂಡೊಯ್ಯಲು ತಿಳಿಸಿದರು.</p>
<p>ಕಾಲು‌ ಕತ್ತರಿಸಲ್ಪಟ್ಟ ವ್ಯಕ್ತಿ ಮತ್ತು ಅಪಘಾತದಲ್ಲಿ ತೀವ್ರ ತರವಾಗಿ ಗಾಯಗೊಂಡ ವ್ಯಕ್ತಿಗಳಲ್ಲಿ ಅಪಾರ ಪ್ರಮಾಣದ ರಕ್ತಸ್ರಾವವಾಗಿ ಜೀವ ಹಾನಿ ಆಗುವ ಪರಿಸ್ಥಿತಿಯಲ್ಲಿದ್ದರೂ ಕೂಡಾ ಆ ಸಂದರ್ಭದಲ್ಲಿ ಮಂತ್ರಾಲಯದಂತಹ ಅತೀ ದೊಡ್ಡ ಧಾರ್ಮಿಕ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡುವ ಉತ್ತಮ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಸುತ್ತಲಿನ 80 ಕಿಲೋಮೀಟರ್ ಅಂತರದಲ್ಲಿ ಇಲ್ಲದಿರುವುದು<br />
ವಿಷಾದನೀಯ. ತುರ್ತು ಚಿಕಿತ್ಸೆಗೆ ಅಗತ್ಯ ತಜ್ಞ ವೈದ್ಯರು ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ತಕ್ಷಣದ ಉನ್ನತ ಚಿಕಿತ್ಸೆ ದೊರೆಯದೇ ಈ ಘಟನೆ ನಮ್ಮ ಆರೋಗ್ಯ ವ್ಯವಸ್ಥೆಯ ಸವಾಲುಗಳನ್ನು ಮತ್ತೊಮ್ಮೆ ನೆನಪಿಸುತ್ತದೆ. ಚಿನ್ನ ಬೆಳ್ಳಿಯ ಆಭರಣಗಳು, ದೇವಸ್ಥಾನದ ಶಿಖರಕ್ಕೆ ಮುಚ್ಚುವ ಚಿನ್ನದ ತಗಡು, ಚಿನ್ನ ಬೆಳ್ಳಿಯ ರಥ ಇವೆಲ್ಲವುಗಳನ್ನು ಮಾಡುವುದಕ್ಕಿಂತ ಮೊದಲು ಅತೀ ಹೆಚ್ಚು ಭಕ್ತಾದಿಗಳು ಬರುವ ಧಾರ್ಮಿಕ ಕ್ಷೇತ್ರಗಳ ಬಳಿ ಉತ್ತಮ ಆಸ್ಪತ್ರೆ, ವಸತಿ ಗೃಹ, ಕುಡಿಯುವ ನೀರು, ಶೌಚಾಲಯ, ಕಸ ವಿಲೇವಾರಿ ಘಟಕ, ಉಚಿತ ಮತ್ತು ಉನ್ನತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ರಚನೆ ಮತ್ತು ನಿರ್ಮಾಣ ಮೊದಲು ಆಗಬೇಕಾಗಿದೆ.</p>
<p><img loading="lazy" decoding="async" class="size-full wp-image-37558 aligncenter" src="https://buntsnow.com/wp-content/uploads/2026/08/WhatsApp-Image-2026-08-08-at-10.46.39-AM.jpeg" alt="" width="1124" height="675" srcset="https://buntsnow.com/wp-content/uploads/2026/08/WhatsApp-Image-2026-08-08-at-10.46.39-AM.jpeg 1124w, https://buntsnow.com/wp-content/uploads/2026/08/WhatsApp-Image-2026-08-08-at-10.46.39-AM-300x180.jpeg 300w, https://buntsnow.com/wp-content/uploads/2026/08/WhatsApp-Image-2026-08-08-at-10.46.39-AM-1024x615.jpeg 1024w, https://buntsnow.com/wp-content/uploads/2026/08/WhatsApp-Image-2026-08-08-at-10.46.39-AM-768x461.jpeg 768w, https://buntsnow.com/wp-content/uploads/2026/08/WhatsApp-Image-2026-08-08-at-10.46.39-AM-150x90.jpeg 150w, https://buntsnow.com/wp-content/uploads/2026/08/WhatsApp-Image-2026-08-08-at-10.46.39-AM-450x270.jpeg 450w" sizes="(max-width: 1124px) 100vw, 1124px" /></p>
<p>ಧರ್ಮ ಮತ್ತು ಧಾರ್ಮಿಕತೆಯೆಂದರೆ ಕೇವಲ ಆಡಂಬರ ಮತ್ತು ಪ್ರಚಾರದ ವಸ್ತು ಅಲ್ಲ. ಹೃದಯದ, ಮನಸ್ಸಿನ ಅಂತರಾಳದ ನಂಬಿಕೆಗೆ ಪೂರಕವಾಗಿ ನಂಬಿಕೆಗಳ ಆಚರಣೆಗೆ ಬರುವ ಭಕ್ತರು ದೇವರು ಅಲ್ಲಿ ಇದ್ದಾನೆ ಇರಬಹುದು ಎನ್ನುವ ನಂಬಿಕೆ. ಅದಕ್ಕೆ ಪೂರಕವಾಗಿ ಭಕ್ತರು ಈ ತರ ರಸ್ತೆಯಲ್ಲಿ ಚಿಕಿತ್ಸೆ ಸಿಗದೆ ಮೃತ ಹೊಂದಿದರೆ ದೇವರ ಇರುವಿಕೆಯ ಮೇಲೂ ಅಪನಂಬಿಕೆ ಬರುವುದು ಖಂಡಿತ‌. ದೇವರನ್ನು ಹುಡುಕಿ ಬರುವ ಭಕ್ತರಿಗೆ ಅನುಕೂಲವಾಗುವ ಧಾರ್ಮಿಕ ಕೇಂದ್ರಗಳಿಗೆ ದೇವರ ಹಣ ಅಂದರೆ ಎಲ್ಲರ ಹಣವನ್ನು ಜೀವ ಉಳಿಸಲು ಅದರ ವೈದ್ಯಕೀಯ ವೈಜ್ಞಾನಿಕ ಸೌಕರ್ಯಗಳ ರಚನೆ ಕೂಡಾ ಧರ್ಮ ಕ್ಷೇತ್ರಗಳ ಜವಾಬ್ದಾರಿಯಾಗಿದೆ ಹಾಗೂ ಇಂದಿಗೂ ಅನೇಕ ದೇವರ ಭಕ್ತ ಬಡ ಕುಟುಂಬಗಳು ಮಕ್ಕಳ ಶಿಕ್ಷಣಕ್ಕಾಗಿ, ಚಿಕಿತ್ಸೆಗಾಗಿ, ಶಸ್ತ್ರಚಿಕಿತ್ಸೆಗಾಗಿ ಸಾರ್ವಜನಿಕರಿಂದ ಸಹಾಯ ಕೇಳುವ ಪರಿಸ್ಥಿತಿ ಎದುರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೆರವಿನ ಮನವಿಗಳು ಹೆಚ್ಚಾಗುತ್ತಿರುವುದು ನಮ್ಮ ಸಮಾಜ ಮತ್ತು ಕಲ್ಯಾಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ರಾಜ್ಯಸಭೆಯ ಹಣಕಾಸು ಸಮಿತಿಯು 2023 -24ರ ಅವಧಿಯಲ್ಲಿ ಕೆಲವು ಪ್ರಮುಖ ದೇವಾಲಯಗಳ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆಯ ಕೊರತೆಯನ್ನು ಪ್ರಶ್ನಿಸಿತ್ತು. ಆ ಸಂದರ್ಭದಲ್ಲಿ ದೇಶದ ದೇವಾಲಯಗಳಲ್ಲಿ ವಾರ್ಷಿಕವಾಗಿ ರೂಪಾಯಿ 25,000 ದಿಂದ 35,000 ಕೋಟಿ ಕಾಣಿಕೆ ಸಂಗ್ರಹವಾಗುತ್ತದೆ ಎಂಬ ಅಂದಾಜು ವ್ಯಾಪಕವಾಗಿ ಉಲ್ಲೇಖಿಸಲಾಯಿತು. ಉದ್ಯಮ ವಿಶ್ಲೇಷಕರ ಅಭಿಪ್ರಾಯದಂತೆ, ಉತ್ತರ ಭಾರತದ ಅಸಂಘಟಿತ ಸಣ್ಣ ದೇವಾಲಯಗಳ ಕಾಣಿಕೆಗಳನ್ನೂ ಸೇರಿಸಿದರೆ, ಈ ಮೊತ್ತ ರೂಪಾಯಿ 50,000 ಕೋಟಿ ದಾಟುವ ಸಾಧ್ಯತೆಯೂ ಇದೆ. ಇವು ಅಂದಾಜು ಸಂಖ್ಯೆಗಳಾಗಿದ್ದು, ದೇಶದ ಎಲಲ್ಲಾ ದೇವಾಲಯಗಳ ನಿಖರ ಹಾಗೂ ಏಕೀಕೃತ ಸಾರ್ವಜನಿಕ ಲೆಕ್ಕಪತ್ರಗಳು ಲಭ್ಯವಿಲ್ಲ. ಆದ್ದರಿಂದ ಈ ಅಂಕಿ ಅಂಶಗಳನ್ನು ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದ ಅಗತ್ಯವನ್ನು ಒತ್ತಿ ಹೇಳುವ ಹಿನ್ನೆಲೆಯಲ್ಲಿ ನೋಡಬೇಕು. ಗಮನಿಸಬೇಕಾದ ಸಂಗತಿ ಏನೆಂದರೆ, ಇದು ಕೇವಲ ಒಂದು ವರ್ಷದ ಅಂದಾಜು ಮೊತ್ತ ಮಾತ್ರ. ಹಲವು ದಶಕಗಳ ಒಟ್ಟು ಕಾಣಿಕೆಗಳ ಮೌಲ್ಯ ಎಷ್ಟಿರಬಹುದು ಎಂಬ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ. ಈ ಅಪಾರ ಸಂಪತ್ತಿನ ಒಂದು ಭಾಗವನ್ನಾದರೂ ಕಾನೂನುಬದ್ಧ ಮತ್ತು ಪಾರದರ್ಶಕ ವ್ಯವಸ್ಥೆಯ ಮೂಲಕ ಬಡ ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆ, ವಿದ್ಯಾರ್ಥಿವೇತನ, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟರೆ ಸಾವಿರಾರು ಕುಟುಂಬಗಳ ಜೀವನದಲ್ಲಿ ಆಶಾಕಿರಣ ಮೂಡಬಹುದು.</p>
<p>ಇದು ಯಾವುದೇ ಧರ್ಮ ಅಥವಾ ದೇವಾಲಯದ ವಿರುದ್ಧದ ಪ್ರಶ್ನೆಯಲ್ಲ. ಭಕ್ತರು ಸಮರ್ಪಿಸಿದ ಕಾಣಿಕೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಉತ್ತಮ ಆಡಳಿತ ಇರಬೇಕೆಂಬ ಪ್ರಶ್ನೆ. ದೊಡ್ಡ ಧಾರ್ಮಿಕ ಸಂಸ್ಥೆಗಳು ನಿಯಮಿತ ವಾರ್ಷಿಕ ವರದಿಗಳು, ಸ್ವತಂತ್ರ ಲೆಕ್ಕಪರಿಶೋಧನೆ ಮತ್ತು ಸಾರ್ವಜನಿಕ ಲೆಕ್ಕಪತ್ರಗಳನ್ನು ಪ್ರಕಟಿಸಿದರೆ ಭಕ್ತರ ವಿಶ್ವಾಸ ಇನ್ನಷ್ಟು ಬಲವಾಗುತ್ತದೆ. ಭಕ್ತಿ ಮತ್ತು ಜವಾಬ್ದಾರಿ ಒಂದಕ್ಕೊಂದು ವಿರುದ್ಧವಲ್ಲ. ಭಕ್ತಿ ದೇವರ ಮೇಲಿನ ನಂಬಿಕೆಯನ್ನು ತೋರಿಸಿದರೆ, ಪಾರದರ್ಶಕತೆ ಸಮಾಜದ ಮೇಲಿನ ಹೊಣೆಗಾರಿಕೆಯನ್ನು ತೋರಿಸುತ್ತದೆ. ಭಕ್ತಿ ಇರಲಿ, ಆದರೆ ಪ್ರಶ್ನಿಸುವ ಜವಾಬ್ದಾರಿಯೂ ಇರಲಿ. ದೇವರಿಗೆ ಸಲ್ಲಿಸಿದ ಕಾಣಿಕೆ, ದೇವರ ಮಕ್ಕಳಾದ ಬಡವರ ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಗೆ ಬೆಳಕಾಗಲಿ. ಇದೇ ನಿಜವಾದ ಧರ್ಮ, ಇದೇ ನಿಜವಾದ ಸೇವೆ.</p>
<p><strong>ಬರಹ : ಶಶಿಧರ ಶೆಟ್ಟಿ</strong></p>
<p>The post <a href="https://buntsnow.com/archives/37551">ದೇವರು ಹಣ ತಿನ್ನುವುದಿಲ್ಲ ; ದೇವರ ಹೆಸರಿನಲ್ಲಿ ಯಾರು ತಿನ್ನುತ್ತಾರೆ?</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸಂವಿಧಾನ ಅರಿವು ಇಲ್ಲದ &#8216;ಪತ್ರಿಕೋದ್ಯಮ&#8217; ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ!!</title>
		<link>https://buntsnow.com/archives/37520</link>
		
		<dc:creator><![CDATA[Bunts Now]]></dc:creator>
		<pubDate>Fri, 07 Aug 2026 05:34:43 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37520</guid>

					<description><![CDATA[<p>ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮದ ಶಕ್ತಿ ಕೇವಲ ಮೈಕ್, ಕ್ಯಾಮೆರಾ ಅಥವಾ ಪ್ರೆಸ್ ಕಾರ್ಡ್‌ನಲ್ಲಿಲ್ಲ. ಅದರ ನಿಜವಾದ ಶಕ್ತಿ ಸಂವಿಧಾನದ ಅರಿವು, ಕಾನೂನಿನ ಜ್ಞಾನ ಮತ್ತು ಸತ್ಯದ ಬದ್ಧತೆಯಲ್ಲಿದೆ. ಸುದ್ದಿ ಬರೆಯುವ, ಕ್ಯಾಮೆರಾ ಹಿಡಿಯುವ, ಜನರ ಮುಂದೆ ಪ್ರಶ್ನೆ ಕೇಳುವ ಪ್ರತಿಯೊಬ್ಬ ವ್ಯಕ್ತಿಗೂ ಭಾರತದ ಸಂವಿಧಾನದ ಮೂಲಭೂತ ತತ್ವಗಳ ಅರಿವು ಇರಲೇಬೇಕು. ಇಲ್ಲದಿದ್ದರೆ ಆತ ಸುದ್ದಿಯನ್ನು ದಾಖಲಿಸುವವನಲ್ಲ. ತಿಳಿಯದೆ ತಪ್ಪು ಮಾಹಿತಿಯನ್ನು ಹರಡುವವನಾಗುವ ಅಪಾಯವಿದೆ. ಸಂವಿಧಾನದ ಪರಿಚ್ಛೇದ 14 ರಿಂದ 32ರವರೆಗೆ ಇರುವ ಮೂಲಭೂತ ಹಕ್ಕುಗಳ [...]</p>
<p>The post <a href="https://buntsnow.com/archives/37520">ಸಂವಿಧಾನ ಅರಿವು ಇಲ್ಲದ &#8216;ಪತ್ರಿಕೋದ್ಯಮ&#8217; ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ!!</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮದ ಶಕ್ತಿ ಕೇವಲ ಮೈಕ್, ಕ್ಯಾಮೆರಾ ಅಥವಾ ಪ್ರೆಸ್ ಕಾರ್ಡ್‌ನಲ್ಲಿಲ್ಲ. ಅದರ ನಿಜವಾದ ಶಕ್ತಿ ಸಂವಿಧಾನದ ಅರಿವು, ಕಾನೂನಿನ ಜ್ಞಾನ ಮತ್ತು ಸತ್ಯದ ಬದ್ಧತೆಯಲ್ಲಿದೆ. ಸುದ್ದಿ ಬರೆಯುವ, ಕ್ಯಾಮೆರಾ ಹಿಡಿಯುವ, ಜನರ ಮುಂದೆ ಪ್ರಶ್ನೆ ಕೇಳುವ ಪ್ರತಿಯೊಬ್ಬ ವ್ಯಕ್ತಿಗೂ ಭಾರತದ ಸಂವಿಧಾನದ ಮೂಲಭೂತ ತತ್ವಗಳ ಅರಿವು ಇರಲೇಬೇಕು. ಇಲ್ಲದಿದ್ದರೆ ಆತ ಸುದ್ದಿಯನ್ನು ದಾಖಲಿಸುವವನಲ್ಲ. ತಿಳಿಯದೆ ತಪ್ಪು ಮಾಹಿತಿಯನ್ನು ಹರಡುವವನಾಗುವ ಅಪಾಯವಿದೆ. ಸಂವಿಧಾನದ ಪರಿಚ್ಛೇದ 14 ರಿಂದ 32ರವರೆಗೆ ಇರುವ ಮೂಲಭೂತ ಹಕ್ಕುಗಳ ಅರಿವಿಲ್ಲದೆ ಮಾನವ ಹಕ್ಕುಗಳ ಬಗ್ಗೆ ವರದಿ ಮಾಡುವುದು ಹೇಗೆ ಸಾಧ್ಯ? ಪರಿಚ್ಛೇದ 19ರ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿ ಮತ್ತು ಹೊಣೆಗಾರಿಕೆ ತಿಳಿಯದೆ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ಪರಿಚ್ಛೇದ 20 ಮತ್ತು 21 ನೀಡುವ ಕಾನೂನು ರಕ್ಷಣೆ ಹಾಗೂ ಜೀವಿಸುವ ಹಕ್ಕಿನ ಮಹತ್ವ ತಿಳಿಯದಿದ್ದರೆ ಅಪರಾಧ, ಬಂಧನ ಅಥವಾ ಪೊಲೀಸ್ ಪ್ರಕರಣಗಳ ವರದಿಯಲ್ಲಿ ನ್ಯಾಯಸಮ್ಮತ ದೃಷ್ಟಿಕೋನ ಹೇಗೆ ಮೂಡುತ್ತದೆ?</p>
<p><img loading="lazy" decoding="async" class="alignnone size-full wp-image-37523" src="https://buntsnow.com/wp-content/uploads/2026/08/samvidana_arivu_1.jpeg" alt="" width="640" height="640" srcset="https://buntsnow.com/wp-content/uploads/2026/08/samvidana_arivu_1.jpeg 640w, https://buntsnow.com/wp-content/uploads/2026/08/samvidana_arivu_1-300x300.jpeg 300w, https://buntsnow.com/wp-content/uploads/2026/08/samvidana_arivu_1-150x150.jpeg 150w, https://buntsnow.com/wp-content/uploads/2026/08/samvidana_arivu_1-450x450.jpeg 450w" sizes="(max-width: 640px) 100vw, 640px" /></p>
<p>ಇದಷ್ಟೇ ಅಲ್ಲ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಂವಿಧಾನದ ವಿಧಿ 48A, ನಾಗರಿಕರ ಕರ್ತವ್ಯವನ್ನು ತಿಳಿಸುವ ವಿಧಿ 51A(g), ಮಾಹಿತಿ ಹಕ್ಕು ಕಾಯ್ದೆ, ಮಾನಹಾನಿ ಕಾನೂನು, ಮಾಧ್ಯಮ ನೈತಿಕತೆ, ಸತ್ಯ ಪರಿಶೀಲನೆ (Fact Checking) ಮತ್ತು ಭಾಷಾ ಕೌಶಲ್ಯ ಇವೆಲ್ಲವೂ ಪತ್ರಕರ್ತನ ಮೂಲಭೂತ ಜ್ಞಾನವಾಗಬೇಕು. ಇವುಗಳ ಅರಿವಿಲ್ಲದೆ ಪತ್ರಿಕೋದ್ಯಮ ನಡೆಸುವುದು ಸಮಾಜದ ವಿಶ್ವಾಸದೊಂದಿಗೆ ಆಟವಾಡಿದಂತೆಯೇ. ದುರದೃಷ್ಟವಶಾತ್, ಇಂದು ಕೆಲವರಿಗೆ ಪ್ರೆಸ್ ಕಾರ್ಡ್ ಸಿಕ್ಕರೆ ಸಾಕು, ಪತ್ರಿಕೋದ್ಯಮದ ಎಲ್ಲಾ ಅರ್ಹತೆಗಳು ಬಂದಂತಾಗಿದೆ ಎಂಬ ಭ್ರಮೆ ಇದೆ. ಆದರೆ ಪ್ರೆಸ್ ಕಾರ್ಡ್ ಪತ್ರಕರ್ತನ ಅರ್ಹತೆಯಲ್ಲ; ಅದು ಕೇವಲ ಗುರುತಿನ ಚೀಟಿ. ನಿಜವಾದ ಅರ್ಹತೆ ಜ್ಞಾನ, ಅಧ್ಯಯನ, ಕಾನೂನಿನ ಅರಿವು, ಭಾಷೆಯ ಮೇಲೆ ಹಿಡಿತ ಮತ್ತು ಸತ್ಯದ ಮೇಲಿನ ಬದ್ಧತೆ.</p>
<p>ಮಾಧ್ಯಮವು ಸಮಾಜಕ್ಕೆ ದಾರಿ ತೋರಿಸುವ ಸಂಸ್ಥೆಯಾಗಬೇಕಾದರೆ, ಮೊದಲು ಪತ್ರಕರ್ತರು ಸಂವಿಧಾನವನ್ನು ಓದಬೇಕು, ಕಾನೂನನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನೈತಿಕ ಪತ್ರಿಕೋದ್ಯಮದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಂವಿಧಾನದ ಅರಿವಿಲ್ಲದ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಬಲಪಡಿಸುವುದಿಲ್ಲ. ಅದು ಗೊಂದಲ, ತಪ್ಪು ಮಾಹಿತಿ ಮತ್ತು ಅನ್ಯಾಯಕ್ಕೆ ದಾರಿಯನ್ನೇ ತೆರೆಯುತ್ತದೆ. ಸಂವಿಧಾನದ ಅರಿವು, ಕಾನೂನಿನ ಜ್ಞಾನ ಮತ್ತು ಸತ್ಯದ ಬದ್ಧತೆ ಇರುವವರೇ ನಿಜವಾದ ಪತ್ರಕರ್ತರು.</p>
<p>The post <a href="https://buntsnow.com/archives/37520">ಸಂವಿಧಾನ ಅರಿವು ಇಲ್ಲದ &#8216;ಪತ್ರಿಕೋದ್ಯಮ&#8217; ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ!!</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ತುಳುವೆರೆ ಕುಲಾಚಾರ ಪದ್ಧತಿ : ಪೂರ್ವಜರು, ಕುಲದೇವತೆ ಮತ್ತು ಮಾತೃಮೂಲದ ಆರಾಧನೆ</title>
		<link>https://buntsnow.com/archives/37418</link>
		
		<dc:creator><![CDATA[Bunts Now]]></dc:creator>
		<pubDate>Mon, 03 Aug 2026 05:29:41 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37418</guid>

					<description><![CDATA[<p>ತುಳುವರ ಮೂಲ ಸಂಸ್ಕೃತಿಯಲ್ಲಿ ಕುಲಾಚಾರವು ಕೇವಲ ಒಂದು ಪೂಜಾ ವಿಧಾನವಲ್ಲ; ಅದು ಕುಲ, ಪೂರ್ವಜರು, ಮಾತೃಶಕ್ತಿ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಉಳಿಸುವ ಪ್ರಾಚೀನ ಜೀವನದರ್ಶನವಾಗಿದೆ. ಇಂದಿನ ಜಾತಿ ವ್ಯವಸ್ಥೆ, ಬರಿ ಬಂದ್ರಗಳ ಸಾಮಾಜಿಕ ವಿನ್ಯಾಸ ಮತ್ತು ನಂತರ ರೂಪುಗೊಂಡ ಧಾರ್ಮಿಕ ಆಚರಣೆಗಳಿಗಿಂತಲೂ ಪೂರ್ವದಲ್ಲಿ ತುಳುವರಲ್ಲಿ ಕುಲಕೇಂದ್ರಿತ ಆರಾಧನಾ ಸಂಪ್ರದಾಯ ಅಸ್ತಿತ್ವದಲ್ಲಿತ್ತು ಎಂಬುದನ್ನು ಜನಪದ ಆಚರಣೆಗಳು, ದೈವಾರಾಧನೆ ಮತ್ತು ಕುಟುಂಬ ಸಂಪ್ರದಾಯಗಳು ಸೂಚಿಸುತ್ತವೆ. ತುಳುವರ ಈ ಕುಲಾಚಾರವನ್ನು ಕೆಲವು ತಾಂತ್ರಿಕ ಸಂಪ್ರದಾಯಗಳಲ್ಲಿ ಕೌಲಾಚಾರ ಅಥವಾ ಕೌಲ ಪದ್ಧತಿ [...]</p>
<p>The post <a href="https://buntsnow.com/archives/37418">ತುಳುವೆರೆ ಕುಲಾಚಾರ ಪದ್ಧತಿ : ಪೂರ್ವಜರು, ಕುಲದೇವತೆ ಮತ್ತು ಮಾತೃಮೂಲದ ಆರಾಧನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ತುಳುವರ ಮೂಲ ಸಂಸ್ಕೃತಿಯಲ್ಲಿ ಕುಲಾಚಾರವು ಕೇವಲ ಒಂದು ಪೂಜಾ ವಿಧಾನವಲ್ಲ; ಅದು ಕುಲ, ಪೂರ್ವಜರು, ಮಾತೃಶಕ್ತಿ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಉಳಿಸುವ ಪ್ರಾಚೀನ ಜೀವನದರ್ಶನವಾಗಿದೆ. ಇಂದಿನ ಜಾತಿ ವ್ಯವಸ್ಥೆ, ಬರಿ ಬಂದ್ರಗಳ ಸಾಮಾಜಿಕ ವಿನ್ಯಾಸ ಮತ್ತು ನಂತರ ರೂಪುಗೊಂಡ ಧಾರ್ಮಿಕ ಆಚರಣೆಗಳಿಗಿಂತಲೂ ಪೂರ್ವದಲ್ಲಿ ತುಳುವರಲ್ಲಿ ಕುಲಕೇಂದ್ರಿತ ಆರಾಧನಾ ಸಂಪ್ರದಾಯ ಅಸ್ತಿತ್ವದಲ್ಲಿತ್ತು ಎಂಬುದನ್ನು ಜನಪದ ಆಚರಣೆಗಳು, ದೈವಾರಾಧನೆ ಮತ್ತು ಕುಟುಂಬ ಸಂಪ್ರದಾಯಗಳು ಸೂಚಿಸುತ್ತವೆ. ತುಳುವರ ಈ ಕುಲಾಚಾರವನ್ನು ಕೆಲವು ತಾಂತ್ರಿಕ ಸಂಪ್ರದಾಯಗಳಲ್ಲಿ ಕೌಲಾಚಾರ ಅಥವಾ ಕೌಲ ಪದ್ಧತಿ ಎಂದು ಕರೆಯಲಾಗುತ್ತದೆ. ಇಲ್ಲಿ &#8220;ಕುಲ&#8221; ಎಂಬ ಪದವು ಕೇವಲ ಕುಟುಂಬ ಅಥವಾ ವಂಶವನ್ನು ಸೂಚಿಸುವುದಲ್ಲ; ಅದು ಆದಿಮಾತೆ, ಮೂಲಶಕ್ತಿ ಮತ್ತು ವಂಶಪಾರಂಪರ್ಯದ ಚೈತನ್ಯವನ್ನು ಸೂಚಿಸುತ್ತದೆ. ಆದಿಕಾಲದ ತುಳುವರು ಕಾಡು, ನದಿ ಮತ್ತು ಪ್ರಕೃತಿಯೊಂದಿಗೆ ಬೆರೆತು ಬದುಕುತ್ತಿದ್ದರು. ತಾವು ಸೇವಿಸುವ ಆಹಾರದ ಒಂದು ಭಾಗವನ್ನು ಮೊದಲು ತಮ್ಮ ಕುಲದೇವತೆಗೆ ಸಮರ್ಪಿಸುವ ಪದ್ಧತಿ ಅವರಲ್ಲಿ ಇತ್ತು. ಕಾಡಿನ ಸೊಪ್ಪುಗಳು, ಕಂದಮೂಲಗಳು, ಕಾಡು ಹಣ್ಣುಗಳು, ಮೀನು, ಮಾಂಸ ಮತ್ತು ಕಲಿ (ತಾಳೆ ಅಥವಾ ಇತರ ಮರಗಳಿಂದ ಪಡೆಯುವ ಹುದುಗಿಸಿದ ಸ್ಥಳೀಯ ಪಾನೀಯ) ಇವುಗಳಲ್ಲಿ ಸೇರಿದ್ದವು. ಇದು ದೇವರಿಗೆ ಆಹಾರ ನೀಡುವ ಆಚರಣೆಯಲ್ಲ; ಪ್ರಕೃತಿಯಿಂದ ಪಡೆದ ಜೀವನವನ್ನು ಅದರ ಮೂಲಶಕ್ತಿಗೆ ಕೃತಜ್ಞತೆಯಿಂದ ಅರ್ಪಿಸುವ ಸಂಸ್ಕಾರವಾಗಿತ್ತು.</p>
<p>ಕುಲದೇವತೆಯ ಪರಿಕಲ್ಪನೆಯು ತುಳುವರಲ್ಲಿ ಮಾತೃಮೂಲದ ಆರಾಧನೆಯೊಂದಿಗೆ ಸಂಬಂಧ ಹೊಂದಿದೆ. ಕುಲದೇವತೆ ಎಂಬುದು ಕುಲದ ಆದಿಶಕ್ತಿ, ಆದಿಮಾತೆ ಅಥವಾ ಜಗನ್ಮಾತೆಯ ಸ್ಥಳೀಯ ರೂಪವೆಂದು ಭಾವಿಸಲಾಗುತ್ತದೆ. ತಾಂತ್ರಿಕ ಪರಂಪರೆಯಲ್ಲಿ ಉಲ್ಲೇಖವಾಗುವ ಕುಲಕುಂಡಲಿನಿ ಅಥವಾ ಮೂಲಶಕ್ತಿಯ ಪರಿಕಲ್ಪನೆಯೊಂದಿಗೆ ಇದನ್ನು ಸಂಬಂಧಿಸಿ ನೋಡಲಾಗುತ್ತದೆ. ಮಾನವನ ಮೂಲಾಧಾರದಲ್ಲಿ ನೆಲೆಸಿರುವ ಜೀವಶಕ್ತಿಯು ಹೊರಜಗತ್ತಿನಲ್ಲಿ ಕುಲದೇವತೆಯಾಗಿ ಆರಾಧನೆ ಪಡೆಯುತ್ತದೆ ಎಂಬ ತಾತ್ವಿಕ ವಿವರಣೆಯೂ ದೊರೆಯುತ್ತದೆ. ಆದ್ದರಿಂದ ತಾನು ಸೇವಿಸುವ ಆಹಾರದ ಒಂದು ಭಾಗವನ್ನು ತನ್ನ ಆದಿಮಾತೆಗೆ ಸಮರ್ಪಿಸುವುದು ಕುಲಾಚಾರದ ಅವಿಭಾಜ್ಯ ಅಂಗವಾಗಿದೆ. ತುಳುವರ ಕುಲಾಚಾರದಲ್ಲಿ ನಾಗವು ಅತ್ಯಂತ ಮಹತ್ವದ ಸಂಕೇತವಾಗಿದೆ. ನಾಗವು ಕೇವಲ ಹಾವಲ್ಲ; ಅದು ಕುಲದ ಲಾಂಛನ, ಜೀವಶಕ್ತಿ, ಫಲವತ್ತತೆ ಮತ್ತು ವಂಶದ ನಿರಂತರತೆಯ ಸಂಕೇತವಾಗಿದೆ. ಪ್ರತಿಯೊಂದು ಕುಲಕ್ಕೂ ತನ್ನದೇ ಆದ ಗುರುತು ಇತ್ತು. ಕೆಲವು ಕುಲಗಳಿಗೆ ನಿರ್ದಿಷ್ಟ ಮರಗಳು, ಕೆಲವು ಕುಲಗಳಿಗೆ ನಿರ್ದಿಷ್ಟ ಪ್ರಾಣಿಗಳು, ಪಕ್ಷಿಗಳು ಅಥವಾ ಇತರ ಪ್ರಕೃತಿ ಸಂಕೇತಗಳು ಸಂಬಂಧಿಸಿದ್ದವು. ಈ ಗುರುತುಗಳ ಆಧಾರದ ಮೇಲೆ ನಂತರ ಬರಿ, ಬಂತ್ರು ಮತ್ತು ಇತರ ಸಾಮಾಜಿಕ ವಿನ್ಯಾಸಗಳು ರೂಪುಗೊಂಡವು. ಕುಲಾಚಾರದ ಅತ್ಯಂತ ವಿಶಿಷ್ಟ ಅಂಶವೆಂದರೆ ಪೂರ್ವಜರ ಆರಾಧನೆ. ಕುಲದೇವಿಯ ಪೂಜೆ ಆರಂಭಿಸುವ ಮೊದಲು ಕುಲದ ಹಿರಿಯರು, ಪೂರ್ವಜರು ಮತ್ತು ವಂಶದ ಚೈತನ್ಯವನ್ನು ಆಹ್ವಾನಿಸುವ ಪದ್ಧತಿ ಇತ್ತು. ಪೂರ್ವಜರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಿದ ನಂತರವೇ ಕುಲದೇವಿಯ ಆರಾಧನೆ ಸಂಪೂರ್ಣವಾಗುತ್ತದೆ ಎಂಬ ನಂಬಿಕೆ ತುಳುವರಲ್ಲಿ ಬೆಳೆದಿದೆ. ಹೀಗಾಗಿ ಕುಲದೇವಿಯು ಮತ್ತು ಕುಲಪುರುಷರು ಒಂದೇ ಆಧ್ಯಾತ್ಮಿಕ ಪರಂಪರೆಯ ಎರಡು ಆಯಾಮಗಳಾಗಿ ಪರಿಗಣಿಸಲ್ಪಟ್ಟಿದ್ದಾರೆ.</p>
<p>ಈ ಕಾರಣದಿಂದಲೇ ಕುಲದೇವಿಯ ಆರಾಧನೆ ಸಾಮಾನ್ಯ ದೇವಾಲಯದ ಪೂಜೆಯಂತಲ್ಲ. ಇದು ನಿರ್ದಿಷ್ಟ ಕುಲದ ಪೂರ್ವಜರ ಸ್ಮರಣೆ, ಅವರ ಆಶೀರ್ವಾದ ಮತ್ತು ಕುಲ ಸಂಬಂಧದ ಪುನರುಜ್ಜೀವನವನ್ನು ಒಳಗೊಂಡಿರುವ ವಿಶೇಷ ಸಂಸ್ಕಾರವಾಗಿದೆ. ಆದ್ದರಿಂದ ಕುಲಾಚಾರವು ಆ ಕುಲದ ಸದಸ್ಯರ ಮೂಲಕವೇ ನಡೆಯಬೇಕು ಎಂಬ ಸಂಪ್ರದಾಯ ರೂಪುಗೊಂಡಿದೆ. ತುಳುವರ ಜನಪದದಲ್ಲಿ ಮೃತರನ್ನು &#8220;ಕುಲೆ&#8221; ಎಂದು ಕರೆಯುವ ಪದ ಪ್ರಯೋಗವೂ ಗಮನಾರ್ಹವಾಗಿದೆ. ಈ ಪದವನ್ನು ಸಾಂಸ್ಕೃತಿಕ ಅರ್ಥದಲ್ಲಿ ನೋಡಿದರೆ, ಮರಣ ಹೊಂದಿದ ವ್ಯಕ್ತಿಯು ಕುಲದಿಂದ ದೂರವಾಗುವುದಿಲ್ಲ; ಆತ ಪೂರ್ವಜರ ರೂಪದಲ್ಲಿ ಕುಲದ ಚೈತನ್ಯದಲ್ಲಿ ಲೀನನಾಗುತ್ತಾನೆ ಎಂಬ ಭಾವನೆಯನ್ನು ಇದು ವ್ಯಕ್ತಪಡಿಸುತ್ತದೆ. ಹೀಗಾಗಿ ಮರಣವು ಸಂಬಂಧದ ಅಂತ್ಯವಲ್ಲ; ಅದು ಕುಲಪರಂಪರೆಯ ಆಧ್ಯಾತ್ಮಿಕ ನಿರಂತರತೆಯ ಒಂದು ಹಂತವಾಗಿದೆ. ಆದ್ದರಿಂದಲೇ ಕುಲಾಚಾರದಲ್ಲಿ ಪೂರ್ವಜರನ್ನು ಮೊದಲು ಆಹ್ವಾನಿಸಿ, ನಂತರ ಕುಲದೇವಿಯನ್ನು ಆರಾಧಿಸಲಾಗುತ್ತದೆ.</p>
<p>ಈ ಹಿನ್ನೆಲೆಯಲ್ಲೇ ಕುಲಾಚಾರ ಮತ್ತು ನಂತರ ರೂಪುಗೊಂಡ ಸಂಘಟಿತ ಧಾರ್ಮಿಕ ಪೂಜಾವಿಧಾನಗಳ ನಡುವೆ ಮೂಲಭೂತ ವ್ಯತ್ಯಾಸವಿದೆ. ಅನೇಕ ಧಾರ್ಮಿಕ ಸಂಪ್ರದಾಯಗಳು ತಮ್ಮ ಗುರುಪರಂಪರೆ, ಆಗಮ ಅಥವಾ ಶಾಸ್ತ್ರಾಧಾರಿತ ವಿಧಿವಿಧಾನಗಳನ್ನು ಅನುಸರಿಸುತ್ತವೆ. ಪೂಜೆಯನ್ನು ನಡೆಸುವವರು ತಮ್ಮ ಗುರುಗಳನ್ನು ಸ್ಮರಿಸಿ, ತಮ್ಮ ಧಾರ್ಮಿಕ ಸಂಪ್ರದಾಯದ ಪ್ರಕಾರ ದೇವತೆಯನ್ನು ಆರಾಧಿಸುತ್ತಾರೆ. ಆದರೆ ತುಳುವರ ಕುಲಾಚಾರದಲ್ಲಿ ಪೂಜೆಯ ಕೇಂದ್ರಬಿಂದು ಗುರುಪರಂಪರೆಯಲ್ಲ; ಅದು ಕುಲಪರಂಪರೆ, ಪೂರ್ವಜರು ಮತ್ತು ಕುಲದೇವತೆ. ಈ ಕಾರಣದಿಂದ ಕುಲಾಚಾರದ ಸಂಪೂರ್ಣ ವಿಧಿಯು ಆ ಕುಲದ ವಂಶಸ್ಮೃತಿ ಮತ್ತು ಪೂರ್ವಜರ ಅನುಸಂಧಾನದೊಂದಿಗೆ ಮಾತ್ರ ಪೂರ್ಣವಾಗುತ್ತದೆ ಎಂಬ ನಂಬಿಕೆ ತುಳುವರ ಸಂಪ್ರದಾಯದಲ್ಲಿದೆ. ಕುಲದೇವಿಯನ್ನು ಬೇರೆ ಹೆಸರಿನಲ್ಲಿ ಅಥವಾ ಬೇರೆ ಧಾರ್ಮಿಕ ಸಂಪ್ರದಾಯದ ವಿಧಾನದ ಮೂಲಕ ಆರಾಧಿಸಿದರೆ ಅದು ಆ ಸಂಪ್ರದಾಯದ ದೃಷ್ಟಿಯಿಂದ ಪೂಜೆಯಾಗಬಹುದು; ಆದರೆ ತುಳುವರ ಕುಲಾಚಾರದ ಮೂಲ ವಿಧಿಯು ತನ್ನ ಸ್ವರೂಪದಲ್ಲಿ ನೆರವೇರುತ್ತದೆ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಕುಲಾಚಾರದ ತತ್ವವು ದೇವರ ಹೆಸರಿನಲ್ಲಷ್ಟೇ ಅಲ್ಲ, ಕುಲಸಂಬಂಧ, ಪೂರ್ವಜರ ಸ್ಮರಣೆ ಮತ್ತು ವಂಶಪಾರಂಪರ್ಯದ ನಿರಂತರತೆಯಲ್ಲಿ ಅಡಕವಾಗಿದೆ.</p>
<p>ಕುಲಾಚಾರದ ಮತ್ತೊಂದು ವೈಶಿಷ್ಟ್ಯವೆಂದರೆ ಆಹಾರ ಸಮರ್ಪಣೆ. ತಾವು ಸೇವಿಸುವ ಆಹಾರದಲ್ಲಿ ಅಲ್ಪಭಾಗವನ್ನು ಮೊದಲು ಕುಲದೇವತೆಗೆ ಅರ್ಪಿಸಿ, ನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸುವ ಪದ್ಧತಿ ಇತ್ತು. ಮೀನು, ಮಾಂಸ, ಕಲಿ ಅಥವಾ ಆ ಕುಲದ ಸಾಂಪ್ರದಾಯಿಕ ಆಹಾರ ಯಾವುದು ಆಗಿದ್ದರೂ ಅದನ್ನು ಮೊದಲು ಕುಲದೇವತೆಗೆ ಸಮರ್ಪಿಸಲಾಗುತ್ತಿತ್ತು. ಈ ಸಮರ್ಪಣೆಯ ಉದ್ದೇಶ ಭೋಗವಲ್ಲ; ಕೃತಜ್ಞತೆ. ಪ್ರಕೃತಿಯಿಂದ ಪಡೆದ ಜೀವನವನ್ನು ಅದರ ಮೂಲಶಕ್ತಿಗೆ ಅರ್ಪಿಸುವುದೇ ಇದರ ತಾತ್ಪರ್ಯ. ಹೀಗಾಗಿ ತುಳುವರ ಕುಲಾಚಾರವು ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಪೂರ್ವಜರ ಸ್ಮರಣೆ, ಮಾತೃಶಕ್ತಿಯ ಆರಾಧನೆ, ಪ್ರಕೃತಿಗೆ ಕೃತಜ್ಞತೆ, ವಂಶಪಾರಂಪರ್ಯದ ಸಂರಕ್ಷಣೆ ಮತ್ತು ಕುಲಚೈತನ್ಯದ ನಿರಂತರತೆಯನ್ನು ಉಳಿಸುವ ಸಮಗ್ರ ಜೀವನಪದ್ಧತಿಯಾಗಿದೆ. ಈ ಪರಂಪರೆಯನ್ನು ಅರಿಯುವುದು ತುಳುವರ ಆದಿಮೂಲ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಪ್ರಮುಖ ಹೆಜ್ಜೆಯಾಗಿದೆ.</p>
<p>The post <a href="https://buntsnow.com/archives/37418">ತುಳುವೆರೆ ಕುಲಾಚಾರ ಪದ್ಧತಿ : ಪೂರ್ವಜರು, ಕುಲದೇವತೆ ಮತ್ತು ಮಾತೃಮೂಲದ ಆರಾಧನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>&#8216;ಆಟಿಡೊಂಜಿ ದಿನ&#8217;ದ ಔಚಿತ್ಯ</title>
		<link>https://buntsnow.com/archives/37205</link>
		
		<dc:creator><![CDATA[Bunts Now]]></dc:creator>
		<pubDate>Thu, 23 Jul 2026 12:37:20 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=37205</guid>

					<description><![CDATA[<p>ಆಟಿಡೊಂಜಿ ದಿನ, ಆಟಿದ ಕೂಟ, ಆಟಿದ ನೆಂಪು ಹೀಗೆ ಬೇರೆ ಬೇರೆ ಹೆಸರುಗಳಿಂದ ಆಟಿ ತಿಂಗಳನ್ನು ಆಚರಿಸುವ ಕ್ರಮ ಈಗ ಅರ್ಭುದ ರೋಗದ ಹಾಗೆ ಎಲ್ಲಾ ಸಂಘ ಸಂಸ್ಥೆಗಳಿಗೂ ಹಬ್ಬಿದೆ. ಮಹಿಳಾ ವಿಭಾಗಗಳಂತೂ ಆಟಿಡೊಂಜಿ ದಿನವನ್ನು ಆಚರಿಸುವುದನ್ನು ತಮ್ಮ ವರ್ಷದ ಕಾರ್ಯಕ್ರಮದ ಮಹತ್ತರ ದಿನ ಅಂತ ಭಾವಿಸುತ್ತವೆ. ನಂಬಿಕೆಯೊಂದು ಹೇಗೆ ನಗೆ ಪಾಟಲಿಗೆ ಗುರಿಯಾಗುತ್ತದೆ ಅನ್ನೋದಕ್ಕೆ ಈ ಆಟಿಡೊಂಜಿ ದಿನ ಜ್ವಲಂತ ಸಾಕ್ಷಿ. ಆಟಿ ತಿಂಗಳು ಅಂದರೆ ಏನು? ಆ ತಿಂಗಳಿನ ಕಷ್ಟಗಳೇನು? ಅಂತಹ ಸ್ವತಃ ಕಣ್ಣಾರೆ [...]</p>
<p>The post <a href="https://buntsnow.com/archives/37205">&#8216;ಆಟಿಡೊಂಜಿ ದಿನ&#8217;ದ ಔಚಿತ್ಯ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಆಟಿಡೊಂಜಿ ದಿನ, ಆಟಿದ ಕೂಟ, ಆಟಿದ ನೆಂಪು ಹೀಗೆ ಬೇರೆ ಬೇರೆ ಹೆಸರುಗಳಿಂದ ಆಟಿ ತಿಂಗಳನ್ನು ಆಚರಿಸುವ ಕ್ರಮ ಈಗ ಅರ್ಭುದ ರೋಗದ ಹಾಗೆ ಎಲ್ಲಾ ಸಂಘ ಸಂಸ್ಥೆಗಳಿಗೂ ಹಬ್ಬಿದೆ. ಮಹಿಳಾ ವಿಭಾಗಗಳಂತೂ ಆಟಿಡೊಂಜಿ ದಿನವನ್ನು ಆಚರಿಸುವುದನ್ನು ತಮ್ಮ ವರ್ಷದ ಕಾರ್ಯಕ್ರಮದ ಮಹತ್ತರ ದಿನ ಅಂತ ಭಾವಿಸುತ್ತವೆ. ನಂಬಿಕೆಯೊಂದು ಹೇಗೆ ನಗೆ ಪಾಟಲಿಗೆ ಗುರಿಯಾಗುತ್ತದೆ ಅನ್ನೋದಕ್ಕೆ ಈ ಆಟಿಡೊಂಜಿ ದಿನ ಜ್ವಲಂತ ಸಾಕ್ಷಿ. ಆಟಿ ತಿಂಗಳು ಅಂದರೆ ಏನು? ಆ ತಿಂಗಳಿನ ಕಷ್ಟಗಳೇನು? ಅಂತಹ ಸ್ವತಃ ಕಣ್ಣಾರೆ ಕಂಡ ನನ್ನಂತವರಿಗೆ ಆಟಿಡೊಂಜಿ ದಿನವನ್ನು ಆಚರಿಸುವ ಔಚಿತ್ಯ ಏನು ಅಂತ ಇನ್ನೂ ಅರ್ಥ ಆಗಿಲ್ಲ. ಈಗ ಆಟಿಡೊಂಜಿ ದಿನವನ್ನು ಆಚರಿಸಿ ಸಂಭ್ರಮಿಸುವ ಹೆಚ್ಚಿನವರಿಗೆ ಆಟಿ ತಿಂಗಳ ಕಷ್ಟ ಏನು ಅನ್ನುವ ಕಲ್ಪನೆಯೇ ಇಲ್ಲ. ಸುಮಾರು 50- 60 ವರ್ಷಗಳ ಹಿಂದೆ ನಮ್ಮ ತುಳುನಾಡಿನಲ್ಲಿ ಪ್ರಧಾನ ಕಸುಬು ಕೃಷಿ. ಇಡೀ ವರ್ಷ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಿದ್ದ ನಮ್ಮವರು ಆಟಿ ತಿಂಗಳಲ್ಲಿ ಅಕ್ಷರಶಃ ನಿರುದ್ಯೋಗಿಗಳಾಗುತ್ತಿದ್ದರು. ಕೃಷಿಯ ಕೆಲಸಗಳೆಲ್ಲಾ ಅಷ್ಟರಲ್ಲಿ ಮುಗಿದಿರುತ್ತಿದ್ದವು. ಹಗಲು ರಾತ್ರಿ ಎನ್ನದೆ ಧೋ ಎಂದು ಸುರಿಯುತ್ತಿರುವ ಮಳೆ ಒಂದೆಡೆಯಿಂದ ಇನ್ನೊಂದೆಡೆ ಸಂಚಾರಕ್ಕೂ ಸಮಸ್ಯೆ ಆಗುತ್ತಿತ್ತು. ಬಡತನ ಆ ಕಾಲದಲ್ಲಿ ಎಲ್ಲರ ಮನೆಯ ಶಾಶ್ವತ ಸಂಗಾತಿ. ಹೆಚ್ಚಿನ ಮನೆಗಳಲ್ಲಿ ಮೂರು ಹೊತ್ತು ಬಿಡಿ, ಎರಡು ಹೊತ್ತಿನ ಊಟಕ್ಕೂ ತತ್ವಾರ. ಬಡ ಕೂಲಿ ಕಾರ್ಮಿಕರು ಜಮೀನ್ದಾರರ ಮನೆಗಳಿಗೆ ಬಂದು, ಹಟ್ಟಿಗೆ ಒಂದು ಹೊರೆ ಸೊಪ್ಪು ಹಾಕುತ್ತೇನೆ ಒಂದು ಸೇರು ಅಕ್ಕಿ ಕೊಡಿ ಅಂತ ಗೋಗರೆಯುವ ದೃಶ್ಯ ಸಾಮಾನ್ಯವಾಗಿತ್ತು. ಮಕ್ಕಳು ಮರಿಗಳು ಇದ್ದ ಮನೆಯಲ್ಲಿ ಅರ್ಧ ಸೇರು ಅಕ್ಕಿಗೆ ತೆಳಿ ಹೆಚ್ಚು ಬರುವಂತೆ ನೀರು ಸೇರಿಸಿ ಅನ್ನ ಮಾಡುತ್ತಿದ್ದರು. ಮನೆಯವರು ಬಟ್ಟಲಿನಲ್ಲಿ ತೆಳಿಯ ಮಧ್ಯೆ ಇಲ್ಲದ ಅನ್ನದ ಅಗುಳನ್ನು ಹುಡುಕುತ್ತಿದ್ದರು. (ಅದಕ್ಕೆ ತುಳುವಿನಲ್ಲಿ ತಮಾಷೆಗೆ &#8216;ಮೊರಂಟೆ ಪತ್ತುನಿ&#8217; ಅನ್ನುತ್ತಿದ್ದರು) ಹಸಿವು ಹೆಚ್ಚಾದಾಗ ನೀರುಪ್ಪಡ್, ಅಟ್ಟದಲ್ಲಿ ಸಂಗ್ರಹಿಸಿಟ್ಟ ಸಾಂತಣಿ ತಿನ್ನುತ್ತಿದ್ದದ್ದು ಇದೆ. ಹಸಿವು ಇಲ್ಲದೇ ಇರುತ್ತಿದ್ದರೆ ಸಾಂತಣಿಯನ್ನು ಯಾರೂ ನೋಡುತ್ತಲೂ ಇರಲಿಲ್ಲ, ಅಷ್ಟು ಟೇಸ್ಟ್ ಲೆಸ್ ವಸ್ತು ಅದು.</p>
<p><img loading="lazy" decoding="async" class="alignnone wp-image-37207 size-full" src="https://buntsnow.com/wp-content/uploads/2026/07/aatid_onji_dina.jpeg" alt="" width="640" height="360" srcset="https://buntsnow.com/wp-content/uploads/2026/07/aatid_onji_dina.jpeg 640w, https://buntsnow.com/wp-content/uploads/2026/07/aatid_onji_dina-300x169.jpeg 300w, https://buntsnow.com/wp-content/uploads/2026/07/aatid_onji_dina-150x84.jpeg 150w, https://buntsnow.com/wp-content/uploads/2026/07/aatid_onji_dina-450x253.jpeg 450w" sizes="(max-width: 640px) 100vw, 640px" /></p>
<p>ಇದು ಯಾವುದೂ ನಾನು ಕೇಳಿದ ಕಥೆಯಲ್ಲ. ಅನುಭವಿಸಿದ ವ್ಯಥೆ. ಇಂತಿಪ್ಪ ಆಟಿ ತಿಂಗಳನ್ನು ಆಚರಿಸುವ ಪದ್ಧತಿ ಯಾರಿಂದ ಯಾವಾಗ ಪ್ರಾರಂಭವಾಯಿತೋ ಗೊತ್ತಿಲ್ಲ. ಈಗ ಆಟಿ ತಿಂಗಳನ್ನು ಆಚರಿಸುವ ಹೆಚ್ಚಿನ ಮಹಿಳೆಯರು 25 ರಿಂದ 50 ವಯಸ್ಸಿನವರು. ಅವರಿಗೆ ಆ ಕಷ್ಟದ ದಿನಗಳ ಕಲ್ಪನೆಯೇ ಇಲ್ಲ. ವಿವಿಧ ರೀತಿಯ ತರಕಾರಿ ವ್ಯಂಜನಗಳು, ಪಾಯಸ, ಚಿಕನ್ ಮಟನ್ ಗಳು ತಿನ್ನೋದು ಬಿಡಿ, ಆ ಕಾಲದ ನಮ್ಮ ಹಿರಿಯರು ಕನಸಿನಲ್ಲಿಯೂ ಕಲ್ಪಿಸಲು ಸಾಧ್ಯವಿಲ್ಲದ ಕಷ್ಟದ ದಿನಗಳು ಅವು. ಇಂತಹ ಕಷ್ಟದ ಆಟಿ ತಿಂಗಳಲ್ಲಿ ಆಚರಿಸುವಂತದ್ದು ಏನಿದೆ? ಆ ಕಾಲದಲ್ಲಿ ತುಳುವರ ಮುಖದಲ್ಲಿ ಸ್ವಲ್ಪವಾದರೂ ನಗು ಮೂಡುತ್ತಿದ್ದದ್ದು &#8216;ಕನ್ಯ ಬೊಂತೇಲ್&#8217; ತಿಂಗಳಲ್ಲಿ. ಆಗ ಪೈರು ಕಟಾವಿಗೆ ಬರುತ್ತಿತ್ತು. ಸಾಕಷ್ಟು ಕೃಷಿಯ ಕೆಲಸವೂ ಇರುತ್ತಿತ್ತು. ಆಚರಿಸುವುದೇ ಆದರೆ &#8216;ಕನ್ಯ ಬೊಂತೇಲ್&#8217; ನಲ್ಲಿ ಒಂದು ದಿನ ಆಚರಿಸುವುದು ಹೆಚ್ಚು ಔಚಿತ್ಯಪೂರ್ಣ ಅಂತ ಅನಿಸುತ್ತದೆ. ತಮ್ಮ ಹೊಸ ಸೀರೆ, ಚಿನ್ನದ ಆಭರಣ, ಪಾಕಶಾಸ್ತ್ರದಲ್ಲಿ ತಮಗಿರುವ ನೈಪುಣ್ಯ ಇವುಗಳನ್ನೆಲ್ಲ ಪ್ರದರ್ಶಿಸಲಿಕ್ಕೆ ಒಂದು ವೇದಿಕೆ ಬೇಕಾದರೆ &#8216;ಆಟಿಡೊಂಜಿ ದಿನ&#8217; &#8216;ಸೋಣೊಡೊಂಜಿ ದಿನ&#8217; ಯಾವುದನ್ನು ಬೇಕಾದರೂ ಆಚರಿಸಬಹುದು.</p>
<p>ಬರಹ : ದಾಮೋದರ ಶೆಟ್ಟಿ ಇರುವೈಲು</p>
<p>The post <a href="https://buntsnow.com/archives/37205">&#8216;ಆಟಿಡೊಂಜಿ ದಿನ&#8217;ದ ಔಚಿತ್ಯ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>90ರ ಹರೆಯದಲ್ಲೂ ಬಿತ್ತನೆ ಮಾಡುವ ಕಾಯಕಯೋಗಿ ಶಿವಣ್ಣ ಶೆಟ್ಟಿ</title>
		<link>https://buntsnow.com/archives/36969</link>
		
		<dc:creator><![CDATA[Bunts Now]]></dc:creator>
		<pubDate>Wed, 15 Jul 2026 12:39:45 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=36969</guid>

					<description><![CDATA[<p>ಅವರದ್ದು ಬರೋಬ್ಬರಿ 90ರ ವಯಸ್ಸು. ಇಂದಿಗೂ ಬತ್ತದ ಕೃಷಿಕ ತನ್ನಲ್ಲಿದ್ದ ಭೂಮಿಯಲ್ಲಿ ಜೀವಿತ ಅವಧಿಯುವುದಕ್ಕೂ ಇಳುವರಿ ಪಡೆಯಬೇಕೆಂಬ ಛಲ ಅವರದ್ದು. ಸಾಣೂರು ಗ್ರಾಮದ ಕುಂಟಲ್ಪಾಡಿ ಮಹಾಲಿಂಗಬೆಟ್ಟು ನಿವಾಸಿ ಶಿವಣ್ಣ ಶೆಟ್ಟಿ ಅವರಲ್ಲಿರುವ ಕೃಷಿ ಆಸಕ್ತಿ ಇನ್ನೂ ಕುಗ್ಗಲಿಲ್ಲ. ಬಾಲ್ಯದಿಂದಲೂ ಬತ್ತದ ಕೃಷಿಯನ್ನೇ ಅವಲಂಬಿಸಿರುವ ಅವರು ಗದ್ದೆ ಹಡಿಲು ಬೀಳಬಾರದೆಂಬ ಕಾರಣಕ್ಕೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿಗೂ ಅವರೇ ಗದ್ದೆಗೆ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ. ಕೂಡು ಕುಟುಂಬದಲ್ಲಿ ಅವರೇ ಹಿರಿಯವರಾಗಿದ್ದು, ತಮ್ಮ ಮಕ್ಕಳು ಮೊಮ್ಮಕ್ಕಳ ನೆರವಿನಿಂದ ಬತ್ತದ ಕೃಷಿಯನ್ನು [...]</p>
<p>The post <a href="https://buntsnow.com/archives/36969">90ರ ಹರೆಯದಲ್ಲೂ ಬಿತ್ತನೆ ಮಾಡುವ ಕಾಯಕಯೋಗಿ ಶಿವಣ್ಣ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಅವರದ್ದು ಬರೋಬ್ಬರಿ 90ರ ವಯಸ್ಸು. ಇಂದಿಗೂ ಬತ್ತದ ಕೃಷಿಕ ತನ್ನಲ್ಲಿದ್ದ ಭೂಮಿಯಲ್ಲಿ ಜೀವಿತ ಅವಧಿಯುವುದಕ್ಕೂ ಇಳುವರಿ ಪಡೆಯಬೇಕೆಂಬ ಛಲ ಅವರದ್ದು. ಸಾಣೂರು ಗ್ರಾಮದ ಕುಂಟಲ್ಪಾಡಿ ಮಹಾಲಿಂಗಬೆಟ್ಟು ನಿವಾಸಿ ಶಿವಣ್ಣ ಶೆಟ್ಟಿ ಅವರಲ್ಲಿರುವ ಕೃಷಿ ಆಸಕ್ತಿ ಇನ್ನೂ ಕುಗ್ಗಲಿಲ್ಲ. ಬಾಲ್ಯದಿಂದಲೂ ಬತ್ತದ ಕೃಷಿಯನ್ನೇ ಅವಲಂಬಿಸಿರುವ ಅವರು ಗದ್ದೆ ಹಡಿಲು ಬೀಳಬಾರದೆಂಬ ಕಾರಣಕ್ಕೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿಗೂ ಅವರೇ ಗದ್ದೆಗೆ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ.</p>
<p>ಕೂಡು ಕುಟುಂಬದಲ್ಲಿ ಅವರೇ ಹಿರಿಯವರಾಗಿದ್ದು, ತಮ್ಮ ಮಕ್ಕಳು ಮೊಮ್ಮಕ್ಕಳ ನೆರವಿನಿಂದ ಬತ್ತದ ಕೃಷಿಯನ್ನು ಮುಂದುವರಿಸುತ್ತಿದ್ದಾರೆ. ಪ್ರಸ್ತುತ ದಿನಗಳಿಗೆ ಹೋಲಿಸಿದರೆ ಬತ್ತದ ಕೃಷಿ ಲಾಭದಾಯಕವಲ್ಲ. ಕೂಲಿ ಆಳುಗಳ ಸಮಸ್ಯೆಯ ನಡುವೆ ವರ್ಷದಿಂದ ವರ್ಷಕ್ಕೆ ಯಾಂತ್ರೀಕರಣದ ಬಾಡಿಗೆಯೂ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ ಈ ಕೃಷಿ ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲಾಗಿತ್ತು. ಆದರೆ ಇಂದು ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಕೃಷಿಯನ್ನು ನಿರ್ಲಕ್ಷಿಸಲು ಸಾಧ್ಯವಾಗದು ಎನ್ನುತ್ತಾರೆ ಶಿವಣ್ಣ ಶೆಟ್ಟಿ.</p>
<p>The post <a href="https://buntsnow.com/archives/36969">90ರ ಹರೆಯದಲ್ಲೂ ಬಿತ್ತನೆ ಮಾಡುವ ಕಾಯಕಯೋಗಿ ಶಿವಣ್ಣ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ತುಳುವರ ಕಾಲಜ್ಞಾನದ ಜೈವ ವಿಜ್ಞಾನ : ಆಟಿ ಮತ್ತು ಸೋಣ</title>
		<link>https://buntsnow.com/archives/36745</link>
		
		<dc:creator><![CDATA[Bunts Now]]></dc:creator>
		<pubDate>Mon, 06 Jul 2026 07:45:45 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=36745</guid>

					<description><![CDATA[<p>ತುಳುನಾಡಿನ ಕಾಲಜ್ಞಾನವು ಕೇವಲ ತಿಂಗಳುಗಳ ಲೆಕ್ಕಾಚಾರವಲ್ಲ. ಅದು ಪ್ರಕೃತಿ, ಕೃಷಿ, ಆಹಾರ, ಆರೋಗ್ಯ ಮತ್ತು ಮಾನವ ಜೀವನಶೈಲಿಯನ್ನು ಒಂದೇ ವ್ಯವಸ್ಥೆಯಾಗಿ ನೋಡುವ ಜೀವನದರ್ಶನವಾಗಿದೆ. ಈ ವ್ಯವಸ್ಥೆಯಲ್ಲಿ ಆಟಿ ಮತ್ತು ಸೋಣ ಎರಡು ಪ್ರಮುಖ ಅಧ್ಯಾಯಗಳಾಗಿವೆ. ಒಂದು ದೇಹವನ್ನು ಪ್ರಕೃತಿಯೊಂದಿಗೆ ಹೊಂದಿಸಿಕೊಳ್ಳುವ ಕಾಲವಾದರೆ, ಇನ್ನೊಂದು ದೇಹಕ್ಕೆ ಹೊಸ ಶಕ್ತಿ ಮತ್ತು ಸಮೃದ್ಧಿಯನ್ನು ತುಂಬುವ ಕಾಲವಾಗಿದೆ. ಮಲಯಾಳದಲ್ಲಿ ಇದೇ ತಿಂಗಳನ್ನು ಕರ್ಕಟಕಂ ಮತ್ತು ಚಿಂಗಂ ಎಂದು ಕರೆಯುತ್ತಾರೆ. ತುಳುನಾಡಿನ ಆಟಿ ಮತ್ತು ಕೇರಳದ ಕರ್ಕಟಕಂ ಒಂದೇ ಸೌರ ಮಾಸವಾಗಿದ್ದು, ಎರಡೂ [...]</p>
<p>The post <a href="https://buntsnow.com/archives/36745">ತುಳುವರ ಕಾಲಜ್ಞಾನದ ಜೈವ ವಿಜ್ಞಾನ : ಆಟಿ ಮತ್ತು ಸೋಣ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ತುಳುನಾಡಿನ ಕಾಲಜ್ಞಾನವು ಕೇವಲ ತಿಂಗಳುಗಳ ಲೆಕ್ಕಾಚಾರವಲ್ಲ. ಅದು ಪ್ರಕೃತಿ, ಕೃಷಿ, ಆಹಾರ, ಆರೋಗ್ಯ ಮತ್ತು ಮಾನವ ಜೀವನಶೈಲಿಯನ್ನು ಒಂದೇ ವ್ಯವಸ್ಥೆಯಾಗಿ ನೋಡುವ ಜೀವನದರ್ಶನವಾಗಿದೆ. ಈ ವ್ಯವಸ್ಥೆಯಲ್ಲಿ ಆಟಿ ಮತ್ತು ಸೋಣ ಎರಡು ಪ್ರಮುಖ ಅಧ್ಯಾಯಗಳಾಗಿವೆ. ಒಂದು ದೇಹವನ್ನು ಪ್ರಕೃತಿಯೊಂದಿಗೆ ಹೊಂದಿಸಿಕೊಳ್ಳುವ ಕಾಲವಾದರೆ, ಇನ್ನೊಂದು ದೇಹಕ್ಕೆ ಹೊಸ ಶಕ್ತಿ ಮತ್ತು ಸಮೃದ್ಧಿಯನ್ನು ತುಂಬುವ ಕಾಲವಾಗಿದೆ. ಮಲಯಾಳದಲ್ಲಿ ಇದೇ ತಿಂಗಳನ್ನು ಕರ್ಕಟಕಂ ಮತ್ತು ಚಿಂಗಂ ಎಂದು ಕರೆಯುತ್ತಾರೆ. ತುಳುನಾಡಿನ ಆಟಿ ಮತ್ತು ಕೇರಳದ ಕರ್ಕಟಕಂ ಒಂದೇ ಸೌರ ಮಾಸವಾಗಿದ್ದು, ಎರಡೂ ಪ್ರದೇಶಗಳಲ್ಲಿ ಇದನ್ನು ಋತುಬದಲಾವಣೆಗೆ ಹೊಂದಿಕೊಳ್ಳುವ ಅವಧಿಯಾಗಿ ಪರಿಗಣಿಸಲಾಗಿದೆ. ತುಳುನಾಡಿನಲ್ಲಿ ಆಟಿ ಗಂಜಿ, ಆಟಿ ಕಷಾಯ ಮತ್ತು ಋತುಸಹಜ ಸೊಪ್ಪುಗಳಿಗೆ ಮಹತ್ವವಿದ್ದರೆ, ಕೇರಳದಲ್ಲಿ ಕರ್ಕಟಕ ಗಂಜಿ ಮತ್ತು ಆಯುರ್ವೇದದ ಋತುಚರ್ಯೆ ಬೆಳವಣಿಗೆಯಾಯಿತು. ದಕ್ಷಿಣ ಪಶ್ಚಿಮ ಮಾರುತ ಮಳೆಯ ಸಮಯದಲ್ಲಿ ಪ್ರಕೃತಿಯಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತವೆ. ಇದೇ ಅವಧಿಯಲ್ಲಿ ಖಗೋಳಶಾಸ್ತ್ರದ ಪ್ರಕಾರ ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನಿಂದ ಅತ್ಯಂತ ದೂರದ ಸ್ಥಾನವಾದ ಅಪ್ಹೀಲಿಯನ್ (Aphelion) ಸಮೀಪದಲ್ಲಿರುತ್ತದೆ. ಆದಾಗ್ಯೂ, ಮಳೆ, ಹೆಚ್ಚಿದ ಆರ್ದ್ರತೆ, ತೇವಾಂಶ ಮತ್ತು ಋತುಬದಲಾವಣೆಯ ಪರಿಣಾಮವಾಗಿ ಪ್ರಕೃತಿಯಲ್ಲೂ ಹಾಗೂ ಮಾನವ ದೇಹದಲ್ಲೂ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ಬೀಜಗಳು ಮೊಳಕೆಯೊಡೆಯುತ್ತವೆ, ಕಾಡು ಸೊಪ್ಪುಗಳು ಬೆಳೆಯುತ್ತವೆ, ಹೊಲಗಳಲ್ಲಿ ಭತ್ತ ಬೇರುಬಿಡುತ್ತದೆ. ಆದ್ದರಿಂದ ಆಟಿಯನ್ನು ಜೀವ ಮರುಸೃಷ್ಟಿಯ ಕಾಲವೆಂದು ಕರೆಯಬಹುದು. ಪ್ರಕೃತಿಯಲ್ಲಿ ನಡೆಯುವ ಈ ಬದಲಾವಣೆಗಳು ಮಾನವನ ಆರೋಗ್ಯದಲ್ಲಿಯೂ ಪರಿಣಾಮ ಬೀರುತ್ತವೆ ಎಂಬುದನ್ನು ತುಳುವರು ತಮ್ಮ ಅನುಭವದಿಂದ ಅರಿತಿದ್ದರು. ತುಳುವರ ತತ್ವಚಿಂತನೆಯ ಪ್ರಕಾರ, ಪ್ರಕೃತಿಯೇ ಈ ಸಮಯದಲ್ಲಿ ದೇಹವನ್ನು ಶುದ್ಧೀಕರಿಸಿ ಹೊಸ ಚೈತನ್ಯವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಆಯಾಸ, ನೋವು, ಜೀರ್ಣಕ್ರಿಯೆಯ ಏರುಪೇರು ಹಾಗೂ ಆರೋಗ್ಯದಲ್ಲಿ ಬದಲಾವಣೆಗಳು ಕಂಡುಬರಬಹುದು ಎಂಬುದು ಜನಪದ ಅನುಭವವಾಗಿತ್ತು. ಆದ್ದರಿಂದಲೇ ಅವರು ತಮ್ಮ ಆಹಾರ ಮತ್ತು ಜೀವನಕ್ರಮವನ್ನು ಋತುಮಾನಕ್ಕೆ ಅನುಗುಣವಾಗಿ ಬದಲಾಯಿಸುತ್ತಿದ್ದರು.</p>
<p>ಆಟಿ ತಿಂಗಳಲ್ಲಿ ಸಾಮಾನ್ಯ ದಿನಗಳಂತೆ ಆಹಾರ ಸೇವಿಸಿದರೆ ದೇಹ ಮತ್ತಷ್ಟು ಅಸಮತೋಲನಗೊಳ್ಳುತ್ತದೆ ಎಂಬ ನಂಬಿಕೆ ಇತ್ತು. ಆಯುರ್ವೇದದ ಪ್ರಕಾರ ವರ್ಷಾ ಋತುವಿನಲ್ಲಿ ಜೀರ್ಣಾಗ್ನಿ ಕ್ಷೀಣಿಸಬಹುದು ಮತ್ತು ವಾತ, ಪಿತ್ತ, ಕಫಗಳ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಬಹುದು ಎಂದು ವಿವರಿಸಲಾಗಿದೆ. ಆದ್ದರಿಂದ ದೇಹದ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಆಟಿ ತಿಂಗಳಲ್ಲಿ ಆಹಾರದಲ್ಲಿ ಸಂಯಮ ಪಾಲಿಸಲಾಗುತ್ತಿತ್ತು. ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ ಸೊಪ್ಪುಗಳು, ತರಕಾರಿಗಳು, ಆಟಿ ಗಂಜಿ, ಆಟಿ ಕಷಾಯ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವ ಮೂಲಕ ದೇಹವನ್ನು ಮುಂದಿನ ಋತುಗಳಿಗೆ ಸಜ್ಜುಗೊಳಿಸುವ ಪದ್ಧತಿ ರೂಪುಗೊಂಡಿತ್ತು. ತುಳುನಾಡಿನ ತತ್ವಚಿಂತನೆಯ ಪ್ರಕಾರ ಆಟಿ ತಿಂಗಳು ದೇಹವನ್ನು ಶುದ್ಧೀಕರಿಸುವ ಅವಧಿಯಾಗಿದೆ. ಇದನ್ನು ಆಧುನಿಕ ವೈದ್ಯಕೀಯದ &#8220;ಡಿಟಾಕ್ಸ್&#8221; ಎಂಬ ಪದದೊಂದಿಗೆ ನೇರವಾಗಿ ಸಮೀಕರಿಸ ಬಹುದು. ಋತುಸಹಜ ಜೀವನಶೈಲಿಯ ಮೂಲಕ ದೇಹವನ್ನು ಹೊಸ ಪರಿಸರಕ್ಕೆ ಹೊಂದಿಸುವ ಜನಪದ ಆರೋಗ್ಯ ಜ್ಞಾನವೆಂದು ಅರ್ಥೈಸಬಹುದು. ಇಂದಿನ ಪೌಷ್ಟಿಕ ವಿಜ್ಞಾನವೂ ಸ್ಥಳೀಯ, ಋತುಸಹಜ ಮತ್ತು ವೈವಿಧ್ಯಮಯ ಆಹಾರ ಆರೋಗ್ಯಕ್ಕೆ ಅನುಕೂಲಕರವೆಂದು ಒಪ್ಪಿಕೊಳ್ಳುತ್ತದೆ. ಆದ್ದರಿಂದ ಆಟಿಯ ಆಹಾರ ಪದ್ಧತಿಯನ್ನು ಅನುಭವದ ಆಧಾರದ ಮೇಲೆ ರೂಪುಗೊಂಡ ಜನಪದ ಆರೋಗ್ಯ ವಿಜ್ಞಾನವಾಗಿ ಅಧ್ಯಯನ ಮಾಡುವ ಅಗತ್ಯವಿದೆ.</p>
<p>ತುಳುವರು ಆಟಿಯನ್ನು &#8220;ಬಂಞದ ತಿಂಗಳು&#8221; ಎಂದು ಕರೆಯುತ್ತಾರೆ. ಆದರೆ ಇದರ ಅರ್ಥ ಆಹಾರದ ಕೊರತೆ ಎಂಬುದಲ್ಲ. ದೇಹವನ್ನು ಆರೋಗ್ಯಪೂರ್ಣವಾಗಿಡಲು ಹೆಚ್ಚು ಜಾಗ್ರತೆ, ಸಂಯಮ ಮತ್ತು ಶಿಸ್ತು ಪಾಲಿಸಬೇಕಾದ ದಿನಗಳು ಎಂಬುದೇ ಅದರ ಅರ್ಥ. ಹೀಗಾಗಿ ಆಟಿ ಕಷ್ಟದ ತಿಂಗಳಲ್ಲ; ಅದು ಹನ್ನೊಂದು ತಿಂಗಳ ಜೀವನಶೈಲಿಯ ನಂತರ ದೇಹವನ್ನು ಮರುಸಜ್ಜುಗೊಳಿಸಿ ಇನ್ನೊಂದು ವರ್ಷ ಆರೋಗ್ಯದಿಂದ ಬದುಕಲು ಸಿದ್ಧಗೊಳಿಸುವ ಬದುಕುಳಿಯುವ (Survival) ತಿಂಗಳು. ಈ ಸಂದರ್ಭದಲ್ಲಿ ಪಾಲೆ ಕಷಾಯ ಸೇರಿದಂತೆ ವಿವಿಧ ಔಷಧೀಯ ಕಷಾಯಗಳನ್ನು ಸೇವಿಸುವ ಸಂಪ್ರದಾಯವಿತ್ತು. ಜನಪದ ನಂಬಿಕೆಯ ಪ್ರಕಾರ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಈ ನಂಬಿಕೆಯನ್ನು ಆಧುನಿಕ ವೈದ್ಯಕೀಯದಲ್ಲಿ ಕೂಡ ಸಾಬೀತು ಆಗಿದ್ದು ಇನ್ನಷ್ಟು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ.</p>
<p>ಆಟಿ ತಿಂಗಳಲ್ಲಿ ಆಟಿಕಳಂಜ ಮನೆಮನೆಗೆ ಬಂದು ಮಾರಿಯನ್ನು ಕಳೆಯುವ ಆಚರಣೆ ನಡೆಯುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ; ಜನರಲ್ಲಿ ಆತ್ಮಸ್ಥೈರ್ಯ, ಧೈರ್ಯ, ಆಶಾಭಾವನೆ ಮತ್ತು ಹೊಸ ಬದುಕಿನ ವಿಶ್ವಾಸವನ್ನು ಮೂಡಿಸುವ ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆಯಾಗಿದೆ. ಆಟಿ ತಿಂಗಳ ನಂತರ ಬರುವ ಸೋಣ ತುಳುವರ ಕಾಲಜ್ಞಾನದಲ್ಲಿ ಸಮೃದ್ಧಿಯ ಸಂಕೇತವಾಗಿದೆ. ಆಟಿಯಲ್ಲಿ ದೇಹ ಸಂಯಮ ಮತ್ತು ಶುದ್ಧೀಕರಣದ ಹಂತವನ್ನು ದಾಟಿದ ನಂತರ, ಸೋಣದಲ್ಲಿ ಮತ್ತೆ ದೇಹಕ್ಕೆ ಶಕ್ತಿ, ಉಲ್ಲಾಸ ಮತ್ತು ಪೌಷ್ಟಿಕಾಂಶಗಳನ್ನು ನೀಡುವ ಜೀವನಚಕ್ರ ಆರಂಭವಾಗುತ್ತದೆ. ಇಂದಿಗೂ ತುಳುನಾಡಿನ ಕೆಲವು ಕಡೆಗಳಲ್ಲಿ ಸೋಣ ಶನಿವಾರ ಉಣ್ಪುನೆ, ಸೋಣ ಸೋಮವಾರ ಉಣ್ಪುನೆ ಮತ್ತು ಸೋಣ ಶುಕ್ರವಾರ ಉಣ್ಪುನೆ ಎಂಬ ವಿಶೇಷ ಭೋಜನದ ಸಂಪ್ರದಾಯ ಜೀವಂತವಾಗಿದೆ. ಈ ವಿಶೇಷ ಊಟಗಳು ಆಟಿಯ ನಂತರ ದೇಹಕ್ಕೆ ವೈವಿಧ್ಯಮಯ ಪೌಷ್ಟಿಕಾಂಶಗಳನ್ನು ಒದಗಿಸುವ ಜನಪದ ಆರೋಗ್ಯ ಪದ್ಧತಿಯ ಭಾಗವೆಂದು ಅರ್ಥೈಸಬಹುದು.</p>
<p>ಕೇರಳದಲ್ಲಿ ಇದೇ ಅವಧಿಯನ್ನು ಓಣಂ ಹಬ್ಬದ ಮೂಲಕ ಆಚರಿಸಲಾಗುತ್ತದೆ. ಓಣಸದ್ಯೆ ಮತ್ತು ತುಳುನಾಡಿನ ಸೋಣದ ವಿಶೇಷ ಭೋಜನ ಎರಡೂ ಮಳೆಗಾಲದ ನಂತರ ಪ್ರಕೃತಿಯ ಸಮೃದ್ಧಿಗೆ ಸಲ್ಲಿಸುವ ಕೃತಜ್ಞತೆಯ ಅಭಿವ್ಯಕ್ತಿಗಳಾಗಿವೆ. ಆಟಿಯಲ್ಲಿ ಆಟಿಕಳಂಜ ಬಂದರೆ, ಸೋಣದಲ್ಲಿ ಜೋಗಿ ಮನೆಮನೆಗೆ ಬರುತ್ತಾನೆ. ಜೋಗಿಯು ಹೊಸ ಚೈತನ್ಯ, ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಜನರಲ್ಲಿ ತುಂಬುತ್ತಾನೆ ಎಂಬ ನಂಬಿಕೆ ಇದೆ. ಆಟಿಕಳಂಜನನ್ನು ಬೆರ್ಮೆರನ ಮಗ ಎಂದು, ಜೋಗಿಯನ್ನು ಬಲಿ ಚಕ್ರವರ್ತಿಯ ಆಗಮನ ಎಂದು ನಂಬುವ ಸಂಪ್ರದಾಯವಿದೆ. ಕೇರಳದಲ್ಲಿ ಇದೇ ಪರಂಪರೆಯನ್ನು ಮಾವೇಲಿ ಆಗಮನವೆಂದು ಆಚರಿಸಲಾಗುತ್ತದೆ. ತುಳು ಪಾಡ್ದನಗಳಲ್ಲಿಯೂ ಬಲಿ ಚಕ್ರವರ್ತಿಯ ಆಗಮನದ ಉಲ್ಲೇಖಗಳು ಕಂಡುಬರುತ್ತವೆ. ಜನಪದ ನಂಬಿಕೆಯ ಪ್ರಕಾರ ಬಲಿ ಚಕ್ರವರ್ತಿಯು ಆಟಿದ ಅಮಾಸೆಗ್, ಸೋಣದ ಸಂಕ್ರಾಂತಿಗ್ ಮತ್ತು ಬೊಂತೆಲ್‌ದ ಕೊಡಿ ಪರ್ಬೊಗ್ ಮೂರು ಸಂದರ್ಭಗಳಲ್ಲಿ ಬರುತ್ತಾನೆ ಎಂಬ ನಂಬಿಕೆಯೂ ಪ್ರಚಲಿತವಾಗಿದೆ. &#8220;ಬಿತ್ತಿಲ್ ಮಾರ್ದಾಂಡಲ, ಸೋಣ ಉಣೊಡು&#8221; ಎಂಬ ತುಳು ಗಾದೆಯ ಅರ್ಥ ಮನೆ ಮಾರಿಯಾದರೂ ಸೋನದಲ್ಲಿ ಊಟ ಮಾಡಬೇಕು ಎಂದು. ಅಂದರೆ ಇದರ ಅರ್ಥ ಮನೆ ಮಾರುವುದಲ್ಲ; ಆರೋಗ್ಯವನ್ನು ಮೊದಲ ಆದ್ಯತೆಯಾಗಿ ಕಾಪಾಡಿ, ಸಮೃದ್ಧಿ ಬಂದಾಗ ಅದನ್ನು ಕುಟುಂಬ ಮತ್ತು ಸಮಾಜದೊಂದಿಗೆ ಹಂಚಿಕೊಳ್ಳಬೇಕು ಎಂಬುದು.</p>
<p>ಇಂದು ಆಧುನಿಕ ವಿಜ್ಞಾನ ಋತುಸಹಜ ಆಹಾರ, ಸ್ಥಳೀಯ ಆಹಾರ, ಸುಸ್ಥಿರ ಜೀವನ, ಪರಿಸರ ಹೊಂದಾಣಿಕೆ ಮತ್ತು ಸಮುದಾಯದ ಆರೋಗ್ಯದ ಮಹತ್ವವನ್ನು ಒತ್ತಿ ಹೇಳುತ್ತಿದೆ. ತುಳುವರ ಆಟಿ–ಸೋಣ ಜೀವನಪದ್ಧತಿಯಲ್ಲಿ ಈ ಎಲ್ಲ ತತ್ವಗಳ ಅನುಭವಜನ್ಯ ರೂಪವನ್ನು ಕಾಣಬಹುದು. ಆಟಿ ಗಂಜಿ, ಕಾಡು ಸೊಪ್ಪುಗಳು, ಪಾಲೆ ಕಷಾಯ ಹಾಗೂ ಇತರ ಜನಪದ ಆಚರಣೆಗಳ ಆರೋಗ್ಯ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯ ಇನ್ನೂ ಇದೆ. ಹೀಗಾಗಿ ಆಟಿ ಮತ್ತು ಸೋಣ ಕೇವಲ ಎರಡು ತಿಂಗಳುಗಳಲ್ಲ. ಅವು ಪ್ರಕೃತಿ, ಆರೋಗ್ಯ, ಆಹಾರ, ಕೃಷಿ ಮತ್ತು ಮಾನವ ಜೀವನವನ್ನು ಸಮತೋಲನದಿಂದ ನಡೆಸುವ ತುಳುವರ ಕಾಲಜ್ಞಾನದ ಜೀವಂತ ಜೈವ ವಿಜ್ಞಾನವಾಗಿದೆ. ಸಂಯಮದಿಂದ ಆರಂಭವಾಗಿ ಸಮೃದ್ಧಿಯಲ್ಲಿ ಪೂರ್ಣಗೊಳ್ಳುವ ಈ ಜೀವನಚಕ್ರವು ಇಂದಿನ ಸುಸ್ಥಿರ ಬದುಕಿನ ಚಿಂತನೆಗೂ ಮಹತ್ವದ ಪ್ರೇರಣೆಯಾಗಿದೆ.</p>
<p>The post <a href="https://buntsnow.com/archives/36745">ತುಳುವರ ಕಾಲಜ್ಞಾನದ ಜೈವ ವಿಜ್ಞಾನ : ಆಟಿ ಮತ್ತು ಸೋಣ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಅಪಸ್ಮಾರ ಕಾಯಿಲೆಗೆ ಕುರ್ನಾಡು ಗುತ್ತಿನ ಗಿರಾವು ದೈವದ ಅಂಗಣದಲ್ಲಿದೆ ಮದ್ದು!</title>
		<link>https://buntsnow.com/archives/36664</link>
		
		<dc:creator><![CDATA[Bunts Now]]></dc:creator>
		<pubDate>Wed, 01 Jul 2026 11:02:22 +0000</pubDate>
				<category><![CDATA[ಅಂಕಣ]]></category>
		<guid isPermaLink="false">https://buntsnow.com/?p=36664</guid>

					<description><![CDATA[<p>ಹುಟ್ಟಿದ ಪ್ರತಿಯೊಂದು ಜೀವಿಗೂ ದೈಹಿಕ ಸ್ವಾಸ್ಥ್ಯ ಎಂಬುದು ಅತ್ಯಗತ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನ ಒಬ್ಬ ಮನುಷ್ಯನ ಅವಿಭಾಜ್ಯ ಅಂಗ. ಅಂತಹ ಮಾನಸಿಕ ರೋಗಕ್ಕೆ ಸಂಬಂಧಪಟ್ಟ ಒಂದು ಅಪರೂಪದ ರೋಗದ ಬಗ್ಗೆ ಮತ್ತು ಅದನ್ನು ಹೇಗೆ ಗುಣಪಡಿಸಲು ಸಾಧ್ಯ ಎಂಬುದರ ಬಗ್ಗೆ ನಾನು ಇಲ್ಲಿ ಬರೆಯುತ್ತಿದ್ದೇನೆ. ಪಿಡ್ಸ್ / ಮೂರ್ಛೆ ರೋಗ ಅಥವಾ ಅಪಸ್ಮಾರ ಕಾಯಿಲೆಯ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಮೀಕ್ಷೆಯ ಪ್ರಕಾರ [...]</p>
<p>The post <a href="https://buntsnow.com/archives/36664">ಅಪಸ್ಮಾರ ಕಾಯಿಲೆಗೆ ಕುರ್ನಾಡು ಗುತ್ತಿನ ಗಿರಾವು ದೈವದ ಅಂಗಣದಲ್ಲಿದೆ ಮದ್ದು!</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[
<figure class="wp-block-image size-large"><img loading="lazy" decoding="async" width="1024" height="819" src="https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-1024x819.jpeg" class="wp-image-36663" srcset="https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-1024x819.jpeg 1024w, https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-300x240.jpeg 300w, https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-768x615.jpeg 768w, https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-150x120.jpeg 150w, https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-450x360.jpeg 450w, https://buntsnow.com/wp-content/uploads/2026/07/dde802b3-efd7-4d3a-a89a-05e0dfd58211-1200x960.jpeg 1200w, https://buntsnow.com/wp-content/uploads/2026/07/dde802b3-efd7-4d3a-a89a-05e0dfd58211.jpeg 1402w" sizes="(max-width: 1024px) 100vw, 1024px" /></figure>



<p class="wp-block-paragraph">ಹುಟ್ಟಿದ ಪ್ರತಿಯೊಂದು ಜೀವಿಗೂ ದೈಹಿಕ ಸ್ವಾಸ್ಥ್ಯ ಎಂಬುದು ಅತ್ಯಗತ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನ ಒಬ್ಬ ಮನುಷ್ಯನ ಅವಿಭಾಜ್ಯ ಅಂಗ. ಅಂತಹ ಮಾನಸಿಕ ರೋಗಕ್ಕೆ ಸಂಬಂಧಪಟ್ಟ ಒಂದು ಅಪರೂಪದ ರೋಗದ ಬಗ್ಗೆ ಮತ್ತು ಅದನ್ನು ಹೇಗೆ ಗುಣಪಡಿಸಲು ಸಾಧ್ಯ ಎಂಬುದರ ಬಗ್ಗೆ ನಾನು ಇಲ್ಲಿ ಬರೆಯುತ್ತಿದ್ದೇನೆ. ಪಿಡ್ಸ್ / ಮೂರ್ಛೆ ರೋಗ ಅಥವಾ ಅಪಸ್ಮಾರ ಕಾಯಿಲೆಯ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಸುಮಾರು 50 ಮಿಲಿಯನ್ (5 ಕೋಟಿ) ಜನರು ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ‌. ಅದೇ ನಮ್ಮ ಭಾರತ ದೇಶದಲ್ಲಿ ನೋಡುವುದಾದರೆ, ಪ್ರತೀ 1000 ಜನರಲ್ಲಿ 5 ರಿಂದ 10 ಜನ ಎಂದರೆ, ಸರಿ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಪಸ್ಮಾರ ಎಂಬ ಕಾಯಿಲೆಯು ಮೆದುಳಿನ ನರಕೋಶಗಳು ಅಸಹಜವಾಗಿ ಮತ್ತು ಅತಿಯಾಗಿ ವಿದ್ಯುತ್ ಸಂಕೇತಗಳನ್ನು ಉತ್ಪಾದಿಸಿದಾಗ ಉಂಟಾಗುತ್ತದೆ. ತಲೆಗೆ ತೀವ್ರ ಗಾಯವಾದ್ದರಿಂದ, ಮೆದುಳಿನ ಸೋಂಕುಗಳು (ಉದಾಹರಣೆಗೆ ಮೆನಿಂಜೈಟಿಸ್), ಜನ್ಮಜಾತ ಮೆದುಳಿನ ಬೆಳವಣಿಗೆಯ ಸಮಸ್ಯೆಗಳು, ಪಾರ್ಶ್ವವಾಯು, ಮೆದುಳಿನ ಗಡ್ಡೆ, ಆನುವಂಶಿಕ ಕಾರಣಗಳಿಂದ, ಜನನದ ಸಮಯದಲ್ಲಿ ಮೆದುಳಿಗೆ ಆಮ್ಲಜನಕದ ಕೊರತೆ, ಭಯ, ನೋವು, ಮಾನಸಿಕ ಒತ್ತಡಗಳ ಕಾರಣ ದೇಹದ ಪ್ರತಿಕ್ರಿಯೆಯಲ್ಲಿ ರಕ್ತದೊತ್ತಡ ಹಠಾತ್ ಕುಸಿಯಬಹುದು. ಇದರಿಂದ ಮೆದುಳಿಗೆ ಸಾಕಷ್ಟು ರಕ್ತ ತಲುಪದ ಕಾರಣ ಕೆಲವೊಮ್ಮೆ ಮೂರ್ಛೆ ಉಂಟಾಗುತ್ತದೆ. ಇದನ್ನೇ ಅಪಸ್ಮಾರ / ಪಿಡ್ಸ್ / ಎಪಿಲೆಪ್ಸಿ ಎಂದು ಕರೆಯಲಾಗುತ್ತದೆ. ವೈದ್ಯಕೀಯ ಸಹಾಯದಿಂದ ಸುಮಾರು 60 ರಿಂದ 70% ಜನರಲ್ಲಿ ಈ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಅದರ ಮೂಲ ಕಾರಣದ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸಂಪೂರ್ಣ ಗುಣಮುಖವಾಗದಿದ್ದರೂ ನಿಯಂತ್ರಣದಲ್ಲಿಡಬಹುದಾದ ಕಾಯಿಲೆಗೆ ಪರಿಪೂರ್ಣವಾಗಿ ಗುಣಮುಖಗೊಳಿಸಬಲ್ಲ ಸರಳ ಮದ್ದಿನ ಕ್ರಮ ನಮ್ಮ ದೈವಾರಾಧನೆಯಲ್ಲಿ ಇದೆ. ಹೌದು. ಇದು ಆಶ್ಚರ್ಯವಾದರೂ ನಿಜ. ತುಳುನಾಡು ಎಂಬ ನಂಬಿಕೆಯ ಪುಟ್ಟ ಜಗತ್ತಿನೊಳಗೆ ಇರುವ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಂಬಳ ಮಾಗಣೆಗೆ ಸೇರಿದ ಕುರ್ನಾಡು ಗ್ರಾಮದಲ್ಲಿ ಆರಾಧಿಸಲ್ಪಡುವ ಒಂದು ಅಪರೂಪದ ದೈವದ ಅಂಗನದಲ್ಲಿ ಈ ರೋಗಕ್ಕೆ ಇದೆ ಶಾಶ್ವತ ಪರಿಹಾರ. ಈ ದೈವದ ಹೆಸರು &#8216;ಗಿರಾವು&#8217;. ಕುರ್ನಾಡು ಗುತ್ತಿನ ಪ್ರಧಾನ ದೈವವಾಗಿ, ನಾಲ್ಕು ಗ್ರಾಮ ಒಂದು ಮಾಗಣೆಯ ಅಧಿಪತಿ ಸೋಮನಾಥ ದೇವರ ಬಂಟನಾಗಿ ಆರಾಧನೆ ಪಡೆಯುವ ಈ ದೈವ ಕುರ್ನಾಡು ಮತ್ತು ಚೇಳೂರು ಪರಿಸರದಲ್ಲಿ ಆರಾಧನೆ ಪಡೆದುಕೊಂಡು ಬಂದಿದೆ. ಕುರ್ನಾಡು ಗುತ್ತು ಈ ದೈವದ ಮೂಲಸ್ಥಾನವಾಗಿದ್ದು, ಪಿಡ್ಸ್ ರೋಗಕ್ಕೆ ಸಂಬಂಧಿಸಿ ಅನೇಕ ಮಂದಿ ಬಂದು ದೈವದ ಪ್ರಸಾದವನ್ನು ಸ್ವೀಕರಿಸಿ ಗುಣಮುಖರಾಗಿರುತ್ತಾರೆ. ಈ ದೈವಕ್ಕೆ ಬಹಳ ವಿಶೇಷವಾಗಿ ಮನೆಯಲ್ಲೇ ಸಾಕಿದ ಪರಿಪೂರ್ಣ ಬಿಳಿ ಹುಂಜವನ್ನು (ಶಾಸ್ತ್ರ ಬೊಲ್ಲೆ ಕೋರಿ) ಒಪ್ಪಿಸುವ ಕ್ರಮ. ಈ ಕೋಳಿಯಲ್ಲಿ ಯಾವುದೇ ಇತರ ಬಣ್ಣದ ಮಿಶ್ರಣವಿರಬಾರದು. ಹೆಚ್ಚಿನ ದೈವಗಳ ಸಂಧಿ ಪಾಡ್ದನಗಳಲ್ಲಿ ದೈವಗಳು ಶಾಸ್ತ್ರ ಬೊಲ್ಲೆ ಕೋಳಿಯಾಗಿ ಕೂಗಿದ ಕಥಾನಕಗಳಿವೆ. ಆದ್ದರಿಂದ ಬಿಳಿ‌ ಹುಂಜವನ್ನು ತುಳುನಾಡಿನಲ್ಲಿ ಇತರ ಯಾವುದೇ ದೈವಗಳಿಗೆ ಒಪ್ಪಿಸುವ ಕ್ರಮವಿಲ್ಲ. ಆದರೇ ಗಿರಾವು ದೈವದ ಆರಾಧನೆಯಲ್ಲಿ ಬಿಳಿ ಹುಂಜವೇ ಪ್ರಧಾನ. ದೈವದ ಮೂಲಸ್ಥಳ ಕುರ್ನಾಡು ಮತ್ತು ಚೇಳೂರು ಎರಡೂ ಕಡೆಯಲ್ಲೂ ಈ ಅಪಸ್ಮಾರ ಕಾಯಿಲೆಯನ್ನು ಪರಿಹರಿಸಿಕೊಳ್ಳಬಹುದು. ಈ ಕಾಯಿಲೆಯನ್ನು ಪರಿಹರಿಸಿಕೊಳ್ಳಲು ಬೇಕಾದ ಸಾಹಿತ್ಯಗಳು ಮತ್ತು ಮದ್ದಿನ ಕ್ರಮವನ್ನು ಕೆಳಗೆ ವಿವರಿಸಿದ್ದೇನೆ.</p>



<p class="wp-block-paragraph">ಕುರ್ನಾಡಿನಲ್ಲಿ ಮದ್ದಿನ ಕ್ರಮ : ಕೆಲವರು ಗಿರಾವು ದೈವದ ನೇಮದ ಸಂದರ್ಭದಲ್ಲೇ ಬಂದು ದೈವದ ಬಳಿ ಈ ರೋಗದ ಬಗ್ಗೆ ಮೊದಲು ಅರಿಕೆ ಮಾಡುತ್ತಾರೆ. ನೇಮದ ಸಂದರ್ಭವನ್ನು ಹೊರತುಪಡಿಸಿ ಬರುವುದಾದರೇ ಕುರ್ನಾಡು ಶ್ರೀ ಸೋಮನಾಥ ದೇವಾಲಯದಲ್ಲಿ ತಂತ್ರಿಯವರು ಕುರ್ನಾಡು ಗುತ್ತಿನವರ ಸಮ್ಮುಖದಲ್ಲಿ ಮೊದಲು ಪ್ರಾರ್ಥನೆ ಮಾಡಬೇಕು. ತದನಂತರ, ಒಂದು ಪರಿಪೂರ್ಣ ಊರಿನ ಬಿಳಿ ಹುಂಜವನ್ನು ತಯಾರು ಮಾಡಬೇಕು (ಫಾರ್ಮ್ ನಲ್ಲಿ ಸಿಗುವ ಕೋಳಿ ಅಥವಾ ಬಿಳಿ ಬ್ರಾಯಿಲರ್ ಕೋಳಿ ಆಗುವುದಿಲ್ಲ). ರೋಗಿಯು ಬೆಳಿಗ್ಗೆ ಎದ್ದು, ತಲೆಗೆ ಸ್ನಾನ ಮಾಡಿ ಈ ಬಿಳಿ ಹುಂಜಕ್ಕೆ ಅಕ್ಕಿಯನ್ನು ತನ್ನ ಕೈಯಲ್ಲಿ ಮುಷ್ಟಿ ಹಿಡಿದು ತಲೆಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿ, 48 ದಿವಸ (ಒಂದು ಮಂಡಲ) ಆಹಾರ ಹಾಕಬೇಕು. ನಂತರ ಈ ಕೋಳಿಯನ್ನು ಕುರ್ನಾಡು ಗುತ್ತಿಗೆ ತಂದು ಒಪ್ಪಿಸಬೇಕು. ಅಲ್ಲಿ ಕುರ್ನಾಡು ಗುತ್ತಿನ ಪ್ರತಿನಿಧಿ ಗಿರಾವು ದೈವವನ್ನು ನೆನೆದು ಕೊಡುವ ಭಸ್ಮವನ್ನು ಸ್ವೀಕರಿಸಬೇಕು. ಅಂದು ರೋಗದ ಪರಿಮಿತಿಯನ್ನು ಗಮನಿಸಲಾಗುತ್ತದೆ. ಒಂದು ವೇಳೆ ರೋಗ ಕಡಿಮೆಯಾಗದಿದ್ದಲ್ಲಿ ಪುನಃ ದೈವದ ಬಳಿ ಪ್ರಾರ್ಥಿಸಿ ಎಣ್ಣೆ ಮತ್ತು ತುಪ್ಪವನ್ನು ಸಂದೈತ ಮಾಡಬೇಕು. ಒಪ್ಪಿಸಿದ ಎಣ್ಣೆ ತುಪ್ಪವನ್ನು ಮರಳಿ ಪಡೆದು, ಮುಂದಿನ 48 ದಿವಸಗಳ ಕಾಲ ರೋಗಿಯು ಈ ಎಣ್ಣೆ ಮತ್ತು ತುಪ್ಪವನ್ನು ಸ್ವೀಕರಿಸಬೇಕು. ಎಣ್ಣೆಯನ್ನು ನಿತ್ಯ ತಲೆಗೆ ಹಾಕಬೇಕು. ತುಪ್ಪವನ್ನು ಬಾಯಿಯಲ್ಲಿ ನೆಕ್ಕಿ ಸೇವಿಸಬೇಕು. ಒಂದು ವೇಳೆ ಮೊದಲ‌ 48 ದಿವಸದ ನಂತರ ಕುರ್ನಾಡು ಗುತ್ತಿಗೆ ಈ ಕೋಳಿಯನ್ನು ಒಪ್ಪಿಸಲು ಸಾಧ್ಯವಾಗದಿದ್ದಲ್ಲಿ ಬರುವ ನೇಮದ ಸಂದರ್ಭದಲ್ಲಿಯೂ ದೈವಕ್ಕೆ ಒಪ್ಪಿಸಬಹುದು. ಕುರ್ನಾಡಿನಲ್ಲಿ ಗಿರಾವು ದೈವಕ್ಕೆ ಮೂರು ನೇಮ ನಡೆಯುತ್ತದೆ. ಮೊದಲು ದೊಂಪದಬಲಿ, ಎರಡನೆಯದಾಗಿ ಸೋಮನಾಥ ದೇವರ ಜಾತ್ರೆಯ ಧ್ವಜ ಅವರೋಹಣವಾದ ಬಳಿಕ ಗೋಪುರದ ಬಾಗಿಲಿನಲ್ಲಿ ನಡೆಯುವ ನೇಮ ಹಾಗೂ ಏಪ್ರಿಲ್ ತಿಂಗಳಿನ 28 ಅಥವಾ 29 ತಾರೀಕಿನಂದು ನಡೆಯುವ ಕೊನೆಯ ಸಾನದಾಯನ. ಈ ಮೂರು ನೇಮದಲ್ಲಿ ಯಾವುದಾದರೂ ಒಂದು ನೇಮದ ಸಂದರ್ಭದಲ್ಲಿ ಬಂದು ಈ ಕೋಳಿಯನ್ನು ಒಪ್ಪಿಸಬಹುದು. ಅದರೆ, ಈ ಕೋಳಿಯನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಈ ಕೋಳಿಯನ್ನು ನೇಮದ ದಿನದವರೆಗೆ ಬೇರೆ ಯಾವುದೇ ಪ್ರಾಣಿಗಳು (ನಾಯಿ, ಕಾಡು ಬೆಕ್ಕು ಇತ್ಯಾದಿ) ಮುಟ್ಟದಂತೆ ಬಹಳ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ಹಾಗಾಗಿ ನೇಮದ ಸಂದರ್ಭದಲ್ಲಿ ಕೋಳಿಯನ್ನು ಒಪ್ಪಿಸುವವರು ನೇಮಕ್ಕೆ ನಿಗದಿಯಾದ ದಿನದಿಂದ 48 ದಿವಸದ ಮೊದಲು ಈ ಕ್ರಮವನ್ನು ಶುರು ಮಾಡಿದರೆ ಉತ್ತಮ. ರೋಗ ಪರಿಪೂರ್ಣವಾಗಿ ಗುಣವಾದ ಬಳಿಕ ಸೋಮನಾಥ ದೇವರಿಗೆ ಒಂದು ಸೇವೆ (ರುದ್ರಾಭಿಷೇಕ, ಕಾಣಿಕೆ ಅಥವಾ ಇತರ ಯಾವುದಾದರು ಸಣ್ಣ ಸೇವೆ) ಮತ್ತು ಗಿರಾವು ದೈವದ ಕೈಯಿಂದ ನೇಮದ ಸಂದರ್ಭದಲ್ಲಿ &#8216;ನಿಮೂರ್ತಿದ ಬೂಳ್ಯ&#8217; ಹಿಡಿಯುವ ಸಂಪ್ರದಾಯ.</p>



<p class="wp-block-paragraph">ಚೇಳೂರಿನಲ್ಲಿ ಮದ್ದಿನ ಕ್ರಮ : ಮೊದಲು ಈ ಪಿಡ್ಸ್ ಕಾಯಿಲೆಗೆ ಒಳಪಟ್ಟಂತಹ ವ್ಯಕ್ತಿ ಮತ್ತು ಕುಟುಂಬಿಕರು ಚೇಳೂರು ಗಿರಾವು ದೈವದ ಭಂಡಾರದ ಮನೆಯಲ್ಲಿ ಅರಿಕೆ ಮಾಡಬೇಕು. ನಂತರ ಅವರ ಮಾರ್ಗದರ್ಶನದ ಮೇರೆಗೆ ಒಂದು ಪರಿಪೂರ್ಣ ಊರಿನ ಬಿಳಿ ಹುಂಜವನ್ನು ತಯಾರು ಮಾಡಬೇಕು. ನಂತರ 48 ದಿವಸ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಬೆಳಿಗ್ಗೆ ಎದ್ದು, ಸ್ನಾನ ಮಾಡಿ ಗಿರಾವು ದೈವವನ್ನು ನೆನೆದು, ಒಂದು ಮುಷ್ಟಿ ಅಕ್ಕಿಯನ್ನು ತನ್ನ ತಲೆಗೆ ಮೂರು ಬಾರಿ ಸುತ್ತಿಸಿ, ಈ ಬಿಳಿ ಹುಂಜಕ್ಕೆ ಆಹಾರವಾಗಿ ಹಾಕಬೇಕು. 48 ದಿವಸದ ನಂತರ ಬರುವ ಮೊದಲ ಮಂಗಳವಾರದ ದಿನ ಮತ್ತೊಮ್ಮೆ ಭಂಡಾರದ ಮನೆಗೆ ಹೋಗಬೇಕು. ಅಲ್ಲಿ ಹಿರಿಯರು ರೋಗದ ಪರಿಮಿತಿಯನ್ನು ಗಮನಿಸಿ, ರೋಗಿಗೆ 48 ದಿವಸಕ್ಕೆ ಬೇಕಾಗುವಷ್ಟು ಎಣ್ಣೆ ಮತ್ತು ತುಪ್ಪವನ್ನು (ಎಣ್ಣೆ-ನೈ) ಕೊಡುತ್ತಾರೆ. ಅಕ್ಕಿ ಹಾಕಿ ಸಾಕಿದ ಕೋಳಿಯನ್ನು ಅಂದೇ ಭಂಡಾರದ ಮನೆಯಲ್ಲಿ ಒಪ್ಪಿಸಬಹುದು ಅಥವಾ ಚೇಳೂರು ಗ್ರಾಮದಲ್ಲಿ ಗಿರಾವು ದೈವಕ್ಕೆ ನಡೆಯುವ ನೇಮದ ಸಂದರ್ಭದಲ್ಲಿಯೂ ತಂದು ಒಪ್ಪಿಸಬಹುದು. ರೋಗಿಗೆ ಕೊಟ್ಟಂತಹ ಎಣ್ಣೆಯನ್ನು ಸ್ವಲ್ಪ ತಲೆಗೆ ಹಾಕಬೇಕು. ತುಪ್ಪವನ್ನು ಬಾಯಿಯಲ್ಲಿ ಸೇವಿಸಬೇಕು. ಈ ಕ್ರಮವನ್ನು 48 ದಿವಸ ನಿರಂತರ ಮಾಡಬೇಕು. ಒಂದು ವೇಳೆ ರೋಗಿಯು ಆಯುರ್ವೇದ / ಅಲೋಪತಿಗೆ ಸಂಬಂಧಿಸಿ ವೈದ್ಯರಿಂದ ಈ ಮೊದಲೇ ಔಷಧಿಯನ್ನು ಪಡೆಯುತ್ತಿದ್ದರೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಬಾರದು. ಈ ಕ್ರಮದ ಜೊತೆಗೆ ಅದನ್ನೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ (ಡೋಸೇಜ್) ತೆಗೆದುಕೊಳ್ಳುತ್ತಾ ಬರಬೇಕು. ಉದಾಹರಣೆಗೆ ಬಹಳ ತೀವ್ರ ಸ್ಥಿತಿಯಲ್ಲಿ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ವೈದ್ಯರ ಸಲಹೆಯಂತೆ ದಿವಸಕ್ಕೆ 5 ಮಾತ್ರೆಗಳನ್ನು ಸೇವಿಸುತ್ತಿದ್ದರೆ ಈ ಕ್ರಮವನ್ನು ಪಾಲಿಸಲು ಪ್ರಾರಂಭಿಸಿದ ಬಳಿಕ ಮೊದಲ 10 ದಿವಸ 4 ಮಾತ್ರೆಗಳು, ನಂತರದ 10 ದಿವಸ ಮೂರು, ನಂತರ ಎರಡು ಹೀಗೆ ನಿಧಾನ ಗತಿಯಲ್ಲಿ ಕಡಿಮೆ ಮಾಡಿಕೊಂಡು ಬರಬೇಕು. ಒಂದು ವೇಳೆ ಮೇಲೆ ತಿಳಿಸಿದ ಎರಡೂ ಕ್ರಮಗಳಲ್ಲಿ ಅಂದರೆ 48 ದಿವಸ ಕೋಳಿಗೆ ಆಹಾರ ಮತ್ತು 48 ದಿವಸ ಎಣ್ಣೆ ತುಪ್ಪ ಸೇವಿಸಿದ ನಂತರವೂ ರೋಗ ಕಡಿಮೆಯಾಗದಿದ್ದಲ್ಲಿ, ಮಂಗಳವಾರದ ದಿನ ಭಂಡಾರದ ಮನೆಗೆ ಭೇಟಿ ನೀಡಿದರೆ ಅಲ್ಲಿ ಗಿರಾವು ದೈವವನ್ನು ನೆನೆದು ನೂಲು (ಉರ್ಕು) ಕೊಡುತ್ತಾರೆ. ಇದನ್ನು ರೋಗಿಯು ಕಟ್ಟಿಕೊಂಡರೆ ರೋಗ ನಿಧಾನವಾಗಿ ಗುಣವಾಗುತ್ತದೆ. ಈ ರೋಗ ಕಡಿಮೆಯಾದ ಬಳಿಕ ವ್ಯಕ್ತಿ ಹಾಗೂ ಕುಟುಂಬಿಕರು ಸೇರಿ ಗಿರಾವು ದೈವದ ನೇಮದಲ್ಲಿ ದೈವದ ಕೈಯಿಂದ &#8216;ನಿಮೂರ್ತಿದ ಬೂಳ್ಯ&#8217; ಹಿಡಿಯಬೇಕು. ಚೇಳೂರಿನಲ್ಲಿ &#8216;ಕೆದ್ರಕಟ್ಟೆ&#8217; ಎಂಬ ಜಾಗದಲ್ಲಿ ಏಪ್ರಿಲ್ 7 ತಾರೀಕಿಗೆ ದೈವಕ್ಕೆ ದೊಂಪದಬಲಿ ನಡೆಯುತ್ತದೆ. ನಂತರ ಮೇ 11 ತಾರೀಕಿಗೆ ಸಾನದಾಯನ ನೆರವೇರುತ್ತದೆ.</p>



<p class="wp-block-paragraph">ಗಿರಾವು ದೈವದ ನೇಮ ಬಹಳ ವಿಶೇಷ ಮತ್ತು ವಿಶಿಷ್ಟ. ಹಾಳೆಯ ಮೊಗವನ್ನು ಕಟ್ಟಿ ನೇಮ ನಡೆಯುವ ಸಂಪ್ರದಾಯ. ದೈವದ ಎರಡೂ ಕೈಗೆ ತೆಂಗಿನ ಗರಿಯ ಸೂಟೆಯನ್ನು ಕೊಟ್ಟು ದೈವ ಅಡ್ಡ ಬಿದ್ದು ವಸಯ ಆಗುವ ಕ್ರಮ. ನೇಮದ ನಡುವೆ ದೈವ ಒಮ್ಮೆ ಶಾಂತ ಸ್ವಭಾವದಲ್ಲಿ ವರ್ತಿಸುತ್ತದೆ. ಗುತ್ತಿನ ಪ್ರತಿನಿಧಿ ಹೂ ಹಾಕಿ, ದೈವವನ್ನು ಶೃಂಗಾರಗೊಳಿಸಿದ ಬಳಿಕ ಪುನಃ ಸ್ವಲ್ಪ ಉಗ್ರದಲ್ಲಿ ಕತ್ತೇರಿ ಕಾಲಿನ ನಲಿಕೆಯಲ್ಲಿ ತಲೆಗೆ ಗಡಿ ಹಾಕಿ ದೈವದ ನೇಮ ಮುಂದುವರಿಯುತ್ತದೆ. ಕುರ್ನಾಡು ಮಾಗಣೆಯಲ್ಲಿ ಪ್ರಧಾನ ದೈವವಾಗಿ ಗಿರಾವು ದೈವ ಸ್ಥಾನಮಾನ ಪಡೆದಿದೆ. ಚೇಳೂರು ಗ್ರಾಮದಲ್ಲಿ ಅಂಗರಕೃಷ್ಣ ಎಂಬ ದೈವ ಪ್ರಧಾನವಾಗಿ ಆರಾಧನೆ ಪಡೆದುಕೊಂಡು ಬಂದಿದ್ದು, ಜನಪದ ಐತಿಹ್ಯದ ಪ್ರಕಾರ ಅಂಗಾರಕೃಷ್ಣ ದೈವವು ಕುರ್ನಾಡಿನ ಗಿರಾವು ದೈವವನ್ನು ಚೇಳೂರಿಗೆ ಕರೆ ತಂದು ನಿನಗೆ ನಾನು ಚೇಳೂರಿನಲ್ಲಿ ನೋಂಬ್ರತದ ಸೇವೆಯನ್ನು ಕೊಡುತ್ತೇನೆ ಎಂಬ ಮಾತು ಕೊಟ್ಟಿತು ಎಂಬ ಮಾಹಿತಿ ನಮಗೆ ಸಿಗುತ್ತದೆ. ತುಳುನಾಡಿನ ದೈವಾರಾಧನೆ ಎಂಬ ನಂಬಿಕೆಯ ಜಗತ್ತಿನೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಂದು ಪುಟ್ಟ ಊರಿನಲ್ಲಿ ಪಿಡ್ಸ್ ಕಾಯಿಲೆಗೆ ಮದ್ದಿದೆ ಎಂಬ ಮಾಹಿತಿಯನ್ನು ನಾನು ಓದುಗರ ಮುಂದಿಟ್ಟಿದೇನೆ. ಹಲವು ವರುಷಗಳ ಕಾಲ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಿನ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿರುವ ಜನರಿಗೆ ದೈವಾರಾಧನೆಯಲ್ಲಿರುವ ಒಂದು ಸರಳ ಮದ್ದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕೊಟ್ಟರೆ ಅವರಿಗೆ ಉಪಯೋಗವಾಗಬಹುದು ಎಂಬ ಉದ್ದೇಶದಿಂದ ಈ ಬರಹವನ್ನು ನಾನು ಬರೆದಿದ್ದೇನೆ. ಈ ಮದ್ದಿನ ಕ್ರಮ ಮತ್ತು ಗಿರಾವು ದೈವದ ಆರಾಧನೆಯ ಬಗ್ಗೆ ನನಗೆ ಮಾಹಿತಿಯನ್ನು ಒದಗಿಸಿದ ಚೇಳೂರಿನಲ್ಲಿ ಗಿರಾವು ದೈವದ ಸೇವೆಯನ್ನು ಮಾಡುವ ದೈವನರ್ತಕರಾದ ಸಜಿಪ ಶೇಖರ ಪಂಬದರಿಗೂ ಹಾಗೂ ಕುರ್ನಾಡಿನಲ್ಲಿ ಗಿರಾವು ದೈವದ ಸೇವೆಯನ್ನು ಮಾಡುವ ಸೂರಜ್ ಬಂಗೇರ ಇವರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಧನ್ಯವಾದಗಳು.</p>



<p class="wp-block-paragraph">ಬರಹ : ಶರಣ್ ಶೆಟ್ಟಿ ಕೂರಿಯಾಳ ಪಡು</p>
<p>The post <a href="https://buntsnow.com/archives/36664">ಅಪಸ್ಮಾರ ಕಾಯಿಲೆಗೆ ಕುರ್ನಾಡು ಗುತ್ತಿನ ಗಿರಾವು ದೈವದ ಅಂಗಣದಲ್ಲಿದೆ ಮದ್ದು!</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
	</channel>
</rss>
